<p>ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಆರ್ಎಸ್ನ ಬೃಂದಾವನಕ್ಕೆ ಬರುವ ಹೊರ ರಾಜ್ಯಗಳ ಪ್ರವಾಸಿಗರಿಗೆ ನಕಲಿ ಟಿಕೆಟ್ ನೀಡಿ ವಂಚಿ ಸುತ್ತಿದ್ದ ಪ್ರಕರಣವನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬುಧವಾರ ರಾತ್ರಿ ಪತ್ತೆ ಹಚ್ಚಿದ್ದಾರೆ.<br /> <br /> ರೂ.15 ಮುಖ ಬೆಲೆಯ 44 ಎಲೆಕ್ಟ್ರಾನಿಕ್ ಟಿಕೆಟ್ಗಳನ್ನು ತಮಿಳು ನಾಡು, ಪಂಜಾಬ್ ಇತರ ರಾಜ್ಯಗಳ ಪ್ರವಾಸಿಗರಿಂದ ವಶಪಡಿಸಿಕೊಳ್ಳ ಲಾಗಿದೆ. ಖಾಸಗಿ ಬಸ್ ಏಜೆಂಟ್ ರಂಗನಾಥಕುಮಾರ್ ಎಂಬಾತ ಪ್ರವಾಸಿಗರಿಗೆ ಈ ಟಿಕೆಟ್ ಹಂಚಿರು ವುದು ಗೊತ್ತಾಗಿದೆ. ಕೆಆರ್ಎಸ್ನ ದಿನಗೂಲಿ ನೌಕರ ಅಶೋಕ್ಕುಮಾರ್ ಎಂಬಾತ ಟಿಕೆಟ್ಗಳನ್ನು ಕಳೆದ ಒಂದು ವಾರದಿಂದ ನನಗೆ ಕೊಡುತ್ತಿದ್ದಾನೆ ಎಂದು ರಂಗನಾಥಕುಮಾರ್ ಪೊಲೀಸರ ಎದುರು ಹೇಳಿದ್ದಾನೆ. ರಂಗನಾಥಕುಮಾರ್ ಸೇರಿ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. <br /> <br /> ಕಾವೇರಿ ನೀರಾವರಿ ನಿಗಮದ ಸುಪರ್ದಿಯಲ್ಲಿರುವ ಬೃಂದಾವನ ಪ್ರವೇಶದ ಟಿಕೆಟ್ಗಳನ್ನು ನಿಗಮದ ಸಿಬ್ಬಂದಿ ನೀಡುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ಟಿಕೆಟ್ ಕೊಡುವ ಈ-1 ಕೋಡ್ನ ಯಂತ್ರ ಕೆಟ್ಟಿದೆ.<br /> <br /> ಆದರೂ ಇದೇ ಯಂತ್ರದ ಕೋಡ್ನ ಟಿಕೆಟ್ಗಳನ್ನು ಬುಧವಾರ ರಾತ್ರಿ ವರೆಗೂ ಪ್ರವಾಸಿಗರಿಗೆ ವಿತರಿಸಲಾಗಿದೆ. ಮೈಸೂರಿನಿಂದ ಕೆಆರ್ಎಸ್ಗೆ ಬರುವ ಮಾರ್ಗದಲ್ಲಿ, ಹೊರ ರಾಜ್ಯದ ಪ್ರವಾಸಿಗರಿಗೆ ಬಸ್ ಏಜೆಂಟ್ ಮೂಲಕ ಟಿಕೆಟ್ಗಳನ್ನು ಕೊಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ನಿಗಮದ ಸಿಬ್ಬಂದಿಯ ಸಹಕಾರದಲ್ಲಿ ಬಹಳ ದಿನಗಳಿಂದಲೂ ಈ ದಂಧೆ ನಡೆಯು ತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.<br /> <br /> ನಿಗಮದ ಎಇಇ ನಟೇಶ್ ಮತ್ತು ಸಿಬ್ಬಂದಿ ನಕಲಿ ಟಿಕೆಟ್ ಜಾಲ ಪತ್ತೆ ಹಚ್ಚಿದ್ದಾರೆ. ಪ್ರವಾಸಿಗರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ಕುರಿತು ಕೆಆರ್ಎಸ್ ಪೊಲೀಸರಿಗೆ ದೂರು ನೀಡಿದ್ದಾರೆ. ನಿಗಮದ ನೌಕರ ಶಿವಣ್ಣ ಎಂಬವರ ಮಗ, ದಿನಗೂಲಿ ನೌಕರ ಅಶೋಕ್ಕುಮಾರ್ ಎಂಬಾತ ಈ ದಂಧೆಯ ಪ್ರಮುಖ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಜಾಲ ಬಿಸಲಾಗಿದೆ ಎಂದು ಪಿಎಸ್ಐ ಪ್ರೀತಂ ಶ್ರೇಯಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಆರ್ಎಸ್ನ ಬೃಂದಾವನಕ್ಕೆ ಬರುವ ಹೊರ ರಾಜ್ಯಗಳ ಪ್ರವಾಸಿಗರಿಗೆ ನಕಲಿ ಟಿಕೆಟ್ ನೀಡಿ ವಂಚಿ ಸುತ್ತಿದ್ದ ಪ್ರಕರಣವನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬುಧವಾರ ರಾತ್ರಿ ಪತ್ತೆ ಹಚ್ಚಿದ್ದಾರೆ.<br /> <br /> ರೂ.15 ಮುಖ ಬೆಲೆಯ 44 ಎಲೆಕ್ಟ್ರಾನಿಕ್ ಟಿಕೆಟ್ಗಳನ್ನು ತಮಿಳು ನಾಡು, ಪಂಜಾಬ್ ಇತರ ರಾಜ್ಯಗಳ ಪ್ರವಾಸಿಗರಿಂದ ವಶಪಡಿಸಿಕೊಳ್ಳ ಲಾಗಿದೆ. ಖಾಸಗಿ ಬಸ್ ಏಜೆಂಟ್ ರಂಗನಾಥಕುಮಾರ್ ಎಂಬಾತ ಪ್ರವಾಸಿಗರಿಗೆ ಈ ಟಿಕೆಟ್ ಹಂಚಿರು ವುದು ಗೊತ್ತಾಗಿದೆ. ಕೆಆರ್ಎಸ್ನ ದಿನಗೂಲಿ ನೌಕರ ಅಶೋಕ್ಕುಮಾರ್ ಎಂಬಾತ ಟಿಕೆಟ್ಗಳನ್ನು ಕಳೆದ ಒಂದು ವಾರದಿಂದ ನನಗೆ ಕೊಡುತ್ತಿದ್ದಾನೆ ಎಂದು ರಂಗನಾಥಕುಮಾರ್ ಪೊಲೀಸರ ಎದುರು ಹೇಳಿದ್ದಾನೆ. ರಂಗನಾಥಕುಮಾರ್ ಸೇರಿ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. <br /> <br /> ಕಾವೇರಿ ನೀರಾವರಿ ನಿಗಮದ ಸುಪರ್ದಿಯಲ್ಲಿರುವ ಬೃಂದಾವನ ಪ್ರವೇಶದ ಟಿಕೆಟ್ಗಳನ್ನು ನಿಗಮದ ಸಿಬ್ಬಂದಿ ನೀಡುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ಟಿಕೆಟ್ ಕೊಡುವ ಈ-1 ಕೋಡ್ನ ಯಂತ್ರ ಕೆಟ್ಟಿದೆ.<br /> <br /> ಆದರೂ ಇದೇ ಯಂತ್ರದ ಕೋಡ್ನ ಟಿಕೆಟ್ಗಳನ್ನು ಬುಧವಾರ ರಾತ್ರಿ ವರೆಗೂ ಪ್ರವಾಸಿಗರಿಗೆ ವಿತರಿಸಲಾಗಿದೆ. ಮೈಸೂರಿನಿಂದ ಕೆಆರ್ಎಸ್ಗೆ ಬರುವ ಮಾರ್ಗದಲ್ಲಿ, ಹೊರ ರಾಜ್ಯದ ಪ್ರವಾಸಿಗರಿಗೆ ಬಸ್ ಏಜೆಂಟ್ ಮೂಲಕ ಟಿಕೆಟ್ಗಳನ್ನು ಕೊಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ನಿಗಮದ ಸಿಬ್ಬಂದಿಯ ಸಹಕಾರದಲ್ಲಿ ಬಹಳ ದಿನಗಳಿಂದಲೂ ಈ ದಂಧೆ ನಡೆಯು ತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.<br /> <br /> ನಿಗಮದ ಎಇಇ ನಟೇಶ್ ಮತ್ತು ಸಿಬ್ಬಂದಿ ನಕಲಿ ಟಿಕೆಟ್ ಜಾಲ ಪತ್ತೆ ಹಚ್ಚಿದ್ದಾರೆ. ಪ್ರವಾಸಿಗರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ಕುರಿತು ಕೆಆರ್ಎಸ್ ಪೊಲೀಸರಿಗೆ ದೂರು ನೀಡಿದ್ದಾರೆ. ನಿಗಮದ ನೌಕರ ಶಿವಣ್ಣ ಎಂಬವರ ಮಗ, ದಿನಗೂಲಿ ನೌಕರ ಅಶೋಕ್ಕುಮಾರ್ ಎಂಬಾತ ಈ ದಂಧೆಯ ಪ್ರಮುಖ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಜಾಲ ಬಿಸಲಾಗಿದೆ ಎಂದು ಪಿಎಸ್ಐ ಪ್ರೀತಂ ಶ್ರೇಯಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>