<p><strong>ಹೊನ್ನಾವರ:</strong> ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋಆಪರೇಟಿವ್ ಬ್ಯಾಂಕಿನ ಕರ್ಕಿ ಶಾಖೆಯಲ್ಲಿ ಬುಧವಾರ ರಾತ್ರಿ ಬಾಗಿಲಿನ ಬೀಗ ಮತ್ತು ಕಿಟಕಿ ಸರಳು ಮುರಿದು ಒಳನುಗ್ಗಿದ ಕಳ್ಳರು 47 ಲಕ್ಷ ರೂಪಾಯಿ ನಗ ನಾಣ್ಯ ದೋಚಿಕೊಂಡು ಪರಾರಿಯಾಗಿದ್ದಾರೆ.</p>.<p>ಮೂರು ಕೆ.ಜಿ 508 ಗ್ರಾಂ ಬಂಗಾರದ ಆಭರಣಗಳು ಹಾಗೂ ರೂ 1.95 ಲಕ್ಷ ನಗದು ಕಳುವಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ ಗಜಾನನ ಹೆಗಡೆ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ಬ್ಯಾಂಕಿನ ಒಳಕೋಣೆಯಲ್ಲಿದ್ದ ಎರಡು ಕಬ್ಬಿಣದ ಪೆಟ್ಟಿಗೆಗಳ ಬಾಗಿಲನ್ನು ಯಂತ್ರದ ಮೂಲಕ ಕತ್ತರಿಸಿ, ಅದರಲ್ಲಿದ್ದ ಒಡವೆ ಹಾಗೂ ನಗದು ದೋಚಿದ್ದಾರೆ. ಜೊತೆಗೆ ಬ್ಯಾಂಕಿನ ಮುಂಬಾಗಿಲಿನ ಪಕ್ಕದಲ್ಲಿ ಅಳವಡಿಸಲಾಗಿದ್ದ ಸೈರನ್ ತಂತಿಯನ್ನು ಕತ್ತರಿಸಿದ್ದಾರೆ.</p>.<p>ಈ ಕೃತ್ಯವನ್ನು ನೋಡಿದರೆ ವೃತ್ತಿಪರ ಕಳ್ಳರ ಜೊತೆಗೆ ಪರಿಚಿತರು ಶಾಮೀಲಾಗಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಕಳ್ಳರ ಪತ್ತೆಗೆ ಶ್ವಾನದಳದ ಸೇವೆಯನ್ನು ಬಳಸಲಾಯಿತಾದರೂ ಯಾವುದೇ ಸುಳಿವು ಸಿಕ್ಕಿಲ್ಲ.</p>.<p>ಕೆಲ ವರ್ಷಗಳ ಹಿಂದೆ ತಾಲ್ಲೂಕಿನ ವಿಕಾಸ ಬ್ಯಾಂಕ್ನಿಂದ ಸುಮಾರು ಐದು ಕೆ.ಜಿ. ಚಿನ್ನ ಕಳುವಾಗಿತ್ತು. ಈ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾವರ:</strong> ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋಆಪರೇಟಿವ್ ಬ್ಯಾಂಕಿನ ಕರ್ಕಿ ಶಾಖೆಯಲ್ಲಿ ಬುಧವಾರ ರಾತ್ರಿ ಬಾಗಿಲಿನ ಬೀಗ ಮತ್ತು ಕಿಟಕಿ ಸರಳು ಮುರಿದು ಒಳನುಗ್ಗಿದ ಕಳ್ಳರು 47 ಲಕ್ಷ ರೂಪಾಯಿ ನಗ ನಾಣ್ಯ ದೋಚಿಕೊಂಡು ಪರಾರಿಯಾಗಿದ್ದಾರೆ.</p>.<p>ಮೂರು ಕೆ.ಜಿ 508 ಗ್ರಾಂ ಬಂಗಾರದ ಆಭರಣಗಳು ಹಾಗೂ ರೂ 1.95 ಲಕ್ಷ ನಗದು ಕಳುವಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ ಗಜಾನನ ಹೆಗಡೆ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ಬ್ಯಾಂಕಿನ ಒಳಕೋಣೆಯಲ್ಲಿದ್ದ ಎರಡು ಕಬ್ಬಿಣದ ಪೆಟ್ಟಿಗೆಗಳ ಬಾಗಿಲನ್ನು ಯಂತ್ರದ ಮೂಲಕ ಕತ್ತರಿಸಿ, ಅದರಲ್ಲಿದ್ದ ಒಡವೆ ಹಾಗೂ ನಗದು ದೋಚಿದ್ದಾರೆ. ಜೊತೆಗೆ ಬ್ಯಾಂಕಿನ ಮುಂಬಾಗಿಲಿನ ಪಕ್ಕದಲ್ಲಿ ಅಳವಡಿಸಲಾಗಿದ್ದ ಸೈರನ್ ತಂತಿಯನ್ನು ಕತ್ತರಿಸಿದ್ದಾರೆ.</p>.<p>ಈ ಕೃತ್ಯವನ್ನು ನೋಡಿದರೆ ವೃತ್ತಿಪರ ಕಳ್ಳರ ಜೊತೆಗೆ ಪರಿಚಿತರು ಶಾಮೀಲಾಗಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಕಳ್ಳರ ಪತ್ತೆಗೆ ಶ್ವಾನದಳದ ಸೇವೆಯನ್ನು ಬಳಸಲಾಯಿತಾದರೂ ಯಾವುದೇ ಸುಳಿವು ಸಿಕ್ಕಿಲ್ಲ.</p>.<p>ಕೆಲ ವರ್ಷಗಳ ಹಿಂದೆ ತಾಲ್ಲೂಕಿನ ವಿಕಾಸ ಬ್ಯಾಂಕ್ನಿಂದ ಸುಮಾರು ಐದು ಕೆ.ಜಿ. ಚಿನ್ನ ಕಳುವಾಗಿತ್ತು. ಈ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>