<p><strong>ಕೊಟ್ಟೂರು:</strong> ನಮ್ಮ ರಾಜ್ಯದವರೇ ಆದ ಹೈ.ಕ.ಭಾಗದ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಖಾತೆ ಸಚಿವರಾಗುತ್ತಿದ್ದಂತೆ ಹೊಸಪೇಟೆ- ಕೊಟ್ಟೂರು- ಹರಿಹರ ಭಾಗದ ಜನರ ಮನಸ್ಸಿನಲ್ಲಿ ಆಶಾಭಾವನೆ ಚಿಗುರುತ್ತಿದೆ.<br /> <br /> ಹೊಸಪೇಟೆ-ಕೊಟ್ಟೂರು ರೈಲು ಮಾರ್ಗ 1904ರಲ್ಲಿ ಆರಂಭವಾಗಿತ್ತು.1990ರ ಅವಧಿಯಲ್ಲಿ ಈ ಮಾರ್ಗ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಇಲಾಖೆ ರೈಲು ಸಂಚಾರ ಸ್ಧಗಿತಗೊಳಿಸಿತ್ತು. ಅಂದಿನ ಶಾಸಕರು ಹಾಗೂ ಸಂಘ ಸಂಸ್ಧೆಗಳು ತೀವ್ರ ಪ್ರತಿಭಟನೆಗಿಳಿದಾಗ ಅಂದು ನಮ್ಮ ರಾಜ್ಯದವರೇ ಆದ ರೈಲ್ವೆ ಸಚಿವ ಜಾಫರ ಶರೀಫ್ ನಿರ್ಧಾರ ಬದಲಿಸಿ ಹೊಸಪೇಟೆ-ಕೊಟ್ಟೂರು ಮಾರ್ಗ ಗೇಜ್ ಪರಿವರ್ತನೆ ಹಾಗೂ ಕೊಟ್ಟೂರು-ಹರಿಹರ ನೂತನ ಮಾರ್ಗಕ್ಕೆ ಅಡಿಗಲ್ಲು ಹಾಕಿ ಈ ಭಾಗದ ಜನರ ಕನಸಿಗೆ ನೀರೆರೆದರು.<br /> <br /> ನೂತನ ಮಾರ್ಗದ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಕೊಟ್ಟೂರು-ಹಗರಿಬೊಮ್ಮನಹಳ್ಳಿ-ಹೊಸಪೇಟೆ ಭಾಗದ ಹೋರಾಟ ಸಮಿತಿಗಳು ಪುನಃ ಹೋರಾಟಕ್ಕೆ ಚಾಲನೆ ನೀಡಿದವು. ಇದರ ಪರಿಣಾಮ ಹೊಸಪೇಟೆಯಿಂದ ಹರಿಹರಕ್ಕೆ 135 ಕಿ.ಮೀ. ಉದ್ದದ ಕಾಮಗಾರಿ ಅನುಷ್ಠಾನಕ್ಕೆ ್ಙ100 ಕೋಟಿ ವೆಚ್ಚದ ಕ್ರಿಯಾ-ಯೋಜನೆ ರೂಪಿಸಿ ಭೂಸ್ವಾಧೀನಕ್ಕೆ ಇಲಾಖೆ ಮುಂದಾಯಿತು. ಅಂದಿನಿಂದ ಆಮೆ ವೇಗದಲ್ಲಿ ಸಾಗಿದ ಪರಿಣಾಮ ಇಂದು ್ಙ 800 ಕೋಟಿಗೂ ಅಧಿಕ ವೆಚ್ಚ ಮೀರಿದೆ.<br /> <br /> ಕೊಟ್ಟೂರು ಪಟ್ಟಣವು ವಾಣಿಜ್ಯ ಬೆಳೆಗಳಿಗೆ ಪ್ರಸಿದ್ಧಿಯಾಗಿದೆ. ಸಾಕಷ್ಟು ಹತ್ತಿ ಗಿರಣಿಗಳಿವೆ. ಹೊಸಪೇಟೆ-ಕೊಟ್ಟೂರು-ಹರಿಹರ ಮಾರ್ಗ ಸುಮಾರು ಆರೆಂಟು ಜಿಲ್ಲೆಗಳ ಸಂಪರ್ಕ ಕಲ್ಪಿಸುವುದಲ್ಲದೇ ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರ ಮಂಗಳೂರಿಗೆ ಸಂಪರ್ಕ ದೊರೆಯುತ್ತದೆ.<br /> ಜಿಲ್ಲೆಯಲ್ಲಿರುವ ಗಣಿ ಮತ್ತು ಕೈಗಾರಿಕೆಗಳಲ್ಲಿ ವಿವಿಧ ರಾಜ್ಯಗಳಿಂದ ಉದ್ಯೋಗವನ್ನರಿಸಿ ಬಂದಿರುವ ಜನರಿಗೆ ಹಾಗೂ ಸರಕು ಸಾಮಗ್ರಿಗಳ ಸಾಗಾಣಿಕೆಗೂ ಅನುಕೂಲವಾಗುತ್ತದೆ. ಸಾಗಾಣಿಕೆ ವೆಚ್ಚವೂ ಕಡಿಮೆಯಾಗಲಿದ್ದು ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ದೊರೆಯುತ್ತದೆ ಮತ್ತು ರಸ್ತೆಗಳು ಕೂಡ ಅದಿರು, ಉಕ್ಕು, ಸರಕು- ಸಾಮಗ್ರಿಗಳ ಲಾರಿಗಳ ಹಾವಳಿಯಿಂದ ಮುಕ್ತಿ ಪಡೆದು ರಸ್ತೆಗಳು ಸುಸ್ಥಿತಿಯಲ್ಲಿರುತ್ತವೆ.<br /> <br /> ಇಲಾಖೆಯ ವಿಳಂಬ ನೀತಿಯಿಂದ ಹೊಸಪೇಟೆಯಿಂದ ಹರಿಹರದವರೆಗಿನ ಮಾರ್ಗದ ಉದ್ದಕ್ಕೂ ಇರುವ ರೈಲ್ವೆ ನಿಲ್ದಾಣಗಳು, ವಸತಿಗೃಹಗಳು, ಅಳವಡಿಸಿರುವ ಮೈಕ್ರೋವೇವ್ ಸಿಸ್ಟಮ್ಗಳು, ಜನರೇಟರ್ಗಳು ಉಪಯೋಗಕ್ಕೆ ಬಾರದ ಸ್ಧಿತಿ ತಲುಪಿವೆ. ಕೋಟ್ಯಂತರ ರೂಪಾಯಿ ವ್ಯಯ ಮಾಡಿ ನಿರ್ಮಿಸಿದ ರೈಲ್ವೆ ಪ್ಲಾಟ್ಫಾರ್ಮ್ಗಳು ಬಿಡಾಡಿ ದನ-ಕರುಗಳ, ಹಂದಿ-ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿವೆ.<br /> <br /> ಸಾರ್ವಜನಿಕರು, ಸಂಘ-ಸಂಸ್ಧೆಗಳು, ಮಠಾಧೀಶರು, ಜನಪ್ರತಿನಿಧಿಗಳು ಹೋರಾಟಕ್ಕೆ ಮುಂದಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರೈಲ್ವೆ ಸಚಿವರ ಗಮನ ಸೆಳೆಯುವುದರ ಮುಖಾಂತರ ಈ ಭಾಗದ ಜನರ ಬಹುದಿನದ ಬಯಕೆ ಈಡೇರಿಕೆಗೆ ಶ್ರಮಿಸಬೇಕಾಗಿದೆ.<br /> ಬ್ರಿಟಿಷರ ಕಾಲದಿಂದಲೂ ಸಂಚರಿಸುತ್ತಿದ್ದ ರೈಲಿಗೆ ಹೊಸ ರೈಲ್ವೆ ಸಚಿವರು ಚಾಲನೆ ನೀಡಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟೂರು:</strong> ನಮ್ಮ ರಾಜ್ಯದವರೇ ಆದ ಹೈ.ಕ.ಭಾಗದ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಖಾತೆ ಸಚಿವರಾಗುತ್ತಿದ್ದಂತೆ ಹೊಸಪೇಟೆ- ಕೊಟ್ಟೂರು- ಹರಿಹರ ಭಾಗದ ಜನರ ಮನಸ್ಸಿನಲ್ಲಿ ಆಶಾಭಾವನೆ ಚಿಗುರುತ್ತಿದೆ.<br /> <br /> ಹೊಸಪೇಟೆ-ಕೊಟ್ಟೂರು ರೈಲು ಮಾರ್ಗ 1904ರಲ್ಲಿ ಆರಂಭವಾಗಿತ್ತು.1990ರ ಅವಧಿಯಲ್ಲಿ ಈ ಮಾರ್ಗ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಇಲಾಖೆ ರೈಲು ಸಂಚಾರ ಸ್ಧಗಿತಗೊಳಿಸಿತ್ತು. ಅಂದಿನ ಶಾಸಕರು ಹಾಗೂ ಸಂಘ ಸಂಸ್ಧೆಗಳು ತೀವ್ರ ಪ್ರತಿಭಟನೆಗಿಳಿದಾಗ ಅಂದು ನಮ್ಮ ರಾಜ್ಯದವರೇ ಆದ ರೈಲ್ವೆ ಸಚಿವ ಜಾಫರ ಶರೀಫ್ ನಿರ್ಧಾರ ಬದಲಿಸಿ ಹೊಸಪೇಟೆ-ಕೊಟ್ಟೂರು ಮಾರ್ಗ ಗೇಜ್ ಪರಿವರ್ತನೆ ಹಾಗೂ ಕೊಟ್ಟೂರು-ಹರಿಹರ ನೂತನ ಮಾರ್ಗಕ್ಕೆ ಅಡಿಗಲ್ಲು ಹಾಕಿ ಈ ಭಾಗದ ಜನರ ಕನಸಿಗೆ ನೀರೆರೆದರು.<br /> <br /> ನೂತನ ಮಾರ್ಗದ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಕೊಟ್ಟೂರು-ಹಗರಿಬೊಮ್ಮನಹಳ್ಳಿ-ಹೊಸಪೇಟೆ ಭಾಗದ ಹೋರಾಟ ಸಮಿತಿಗಳು ಪುನಃ ಹೋರಾಟಕ್ಕೆ ಚಾಲನೆ ನೀಡಿದವು. ಇದರ ಪರಿಣಾಮ ಹೊಸಪೇಟೆಯಿಂದ ಹರಿಹರಕ್ಕೆ 135 ಕಿ.ಮೀ. ಉದ್ದದ ಕಾಮಗಾರಿ ಅನುಷ್ಠಾನಕ್ಕೆ ್ಙ100 ಕೋಟಿ ವೆಚ್ಚದ ಕ್ರಿಯಾ-ಯೋಜನೆ ರೂಪಿಸಿ ಭೂಸ್ವಾಧೀನಕ್ಕೆ ಇಲಾಖೆ ಮುಂದಾಯಿತು. ಅಂದಿನಿಂದ ಆಮೆ ವೇಗದಲ್ಲಿ ಸಾಗಿದ ಪರಿಣಾಮ ಇಂದು ್ಙ 800 ಕೋಟಿಗೂ ಅಧಿಕ ವೆಚ್ಚ ಮೀರಿದೆ.<br /> <br /> ಕೊಟ್ಟೂರು ಪಟ್ಟಣವು ವಾಣಿಜ್ಯ ಬೆಳೆಗಳಿಗೆ ಪ್ರಸಿದ್ಧಿಯಾಗಿದೆ. ಸಾಕಷ್ಟು ಹತ್ತಿ ಗಿರಣಿಗಳಿವೆ. ಹೊಸಪೇಟೆ-ಕೊಟ್ಟೂರು-ಹರಿಹರ ಮಾರ್ಗ ಸುಮಾರು ಆರೆಂಟು ಜಿಲ್ಲೆಗಳ ಸಂಪರ್ಕ ಕಲ್ಪಿಸುವುದಲ್ಲದೇ ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರ ಮಂಗಳೂರಿಗೆ ಸಂಪರ್ಕ ದೊರೆಯುತ್ತದೆ.<br /> ಜಿಲ್ಲೆಯಲ್ಲಿರುವ ಗಣಿ ಮತ್ತು ಕೈಗಾರಿಕೆಗಳಲ್ಲಿ ವಿವಿಧ ರಾಜ್ಯಗಳಿಂದ ಉದ್ಯೋಗವನ್ನರಿಸಿ ಬಂದಿರುವ ಜನರಿಗೆ ಹಾಗೂ ಸರಕು ಸಾಮಗ್ರಿಗಳ ಸಾಗಾಣಿಕೆಗೂ ಅನುಕೂಲವಾಗುತ್ತದೆ. ಸಾಗಾಣಿಕೆ ವೆಚ್ಚವೂ ಕಡಿಮೆಯಾಗಲಿದ್ದು ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ದೊರೆಯುತ್ತದೆ ಮತ್ತು ರಸ್ತೆಗಳು ಕೂಡ ಅದಿರು, ಉಕ್ಕು, ಸರಕು- ಸಾಮಗ್ರಿಗಳ ಲಾರಿಗಳ ಹಾವಳಿಯಿಂದ ಮುಕ್ತಿ ಪಡೆದು ರಸ್ತೆಗಳು ಸುಸ್ಥಿತಿಯಲ್ಲಿರುತ್ತವೆ.<br /> <br /> ಇಲಾಖೆಯ ವಿಳಂಬ ನೀತಿಯಿಂದ ಹೊಸಪೇಟೆಯಿಂದ ಹರಿಹರದವರೆಗಿನ ಮಾರ್ಗದ ಉದ್ದಕ್ಕೂ ಇರುವ ರೈಲ್ವೆ ನಿಲ್ದಾಣಗಳು, ವಸತಿಗೃಹಗಳು, ಅಳವಡಿಸಿರುವ ಮೈಕ್ರೋವೇವ್ ಸಿಸ್ಟಮ್ಗಳು, ಜನರೇಟರ್ಗಳು ಉಪಯೋಗಕ್ಕೆ ಬಾರದ ಸ್ಧಿತಿ ತಲುಪಿವೆ. ಕೋಟ್ಯಂತರ ರೂಪಾಯಿ ವ್ಯಯ ಮಾಡಿ ನಿರ್ಮಿಸಿದ ರೈಲ್ವೆ ಪ್ಲಾಟ್ಫಾರ್ಮ್ಗಳು ಬಿಡಾಡಿ ದನ-ಕರುಗಳ, ಹಂದಿ-ನಾಯಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿವೆ.<br /> <br /> ಸಾರ್ವಜನಿಕರು, ಸಂಘ-ಸಂಸ್ಧೆಗಳು, ಮಠಾಧೀಶರು, ಜನಪ್ರತಿನಿಧಿಗಳು ಹೋರಾಟಕ್ಕೆ ಮುಂದಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರೈಲ್ವೆ ಸಚಿವರ ಗಮನ ಸೆಳೆಯುವುದರ ಮುಖಾಂತರ ಈ ಭಾಗದ ಜನರ ಬಹುದಿನದ ಬಯಕೆ ಈಡೇರಿಕೆಗೆ ಶ್ರಮಿಸಬೇಕಾಗಿದೆ.<br /> ಬ್ರಿಟಿಷರ ಕಾಲದಿಂದಲೂ ಸಂಚರಿಸುತ್ತಿದ್ದ ರೈಲಿಗೆ ಹೊಸ ರೈಲ್ವೆ ಸಚಿವರು ಚಾಲನೆ ನೀಡಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>