<p>ಪಟ್ನಾ(ಐಎಎನ್ಎಸ್): ಮಹಿಳೆಯೊಬ್ಬರು 12ಗಂಟೆಗಳ ಕಾಲ ಸತತವಾಗಿ ಗಂಗೆಯೊಂದಿಗೆ ಹೋರಾಟ ನಡೆಸಿ ಸಾವಿನ ದವಡೆಯಿಂದ ಪಾರಾದ ಪ್ರಸಂಗ ಇದು.<br /> <br /> ಅಮೃತ ಕುಮಾರಿ ಎಂಬಾಕೆಯನ್ನು ಪತಿ ಆದರ್ಶ ಕುಮಾರ್ ಕಳೆದ ಬುಧವಾರ ಗಂಗಾನದಿಯ ಮಹಾತ್ಮ ಗಾಂಧಿ ಸೇತುವೆಯಿಂದ ಕೆಳಗಿ ತಳ್ಳಿ ಕೊಲೆಗೆ ಯತ್ನಿಸ್ದ್ದಿದ. ಆದರೆ ಅದೃಷ್ಟ ಚೆನ್ನಾಗಿತ್ತು. ಈಜು ಬುರುತ್ತಿದ್ದ ಈಕೆ ಸತತ 12 ಗಂಟೆಗಳ ಕಾಲ ಹೋರಾಟ ನಡೆಸಿ ದಡ ಸೇರಿದ್ದಾಳೆ. `ನನ್ನನ್ನು ಕೊಲೆ ಮಾಡಲು ನನ್ನ ಪತಿ ನದಿಗೆ ನೂಕಿದ್ದಾನೆ~ ಎಂದು ಅವರು ಹೇಳಿದ್ದಾರೆ. ಸಮಸ್ಟಿಪುರ ಜಿಲ್ಲೆಯ ರಾಸಲ್ಪುರದ ಬಳಿಯ ಗಂಗಾ ನದಿ ದಡದಲ್ಲಿ ಪ್ರಜ್ಞೆ ತಪ್ಪಿದ್ದ ಸ್ಥಿತಿಯಲ್ಲಿದ್ದ ಈಕೆಯನ್ನು ಸ್ಥಳೀಯರು ಮತ್ತು ಮೀನುಗಾರರು ರಕ್ಷಿಸಿ ಪೊಲೀಸರಿಗೆ ಸುದ್ದಿ ಮಟ್ಟಿಸಿದ್ದಾರೆ.<br /> <br /> ಅಂತರ್ಜಾತಿ ವಿವಾಹವೇ ಕೊಲೆ ಯತ್ನಕ್ಕೆ ಕಾರಣ ಎನ್ನಲಾಗಿದೆ. ಪೊಲೀಸರು ಆದರ್ಶಕುಮಾರ್ ಮತ್ತು ಆತನ ಮನೆಯವರ ಹುಡುಕಾಟ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಟ್ನಾ(ಐಎಎನ್ಎಸ್): ಮಹಿಳೆಯೊಬ್ಬರು 12ಗಂಟೆಗಳ ಕಾಲ ಸತತವಾಗಿ ಗಂಗೆಯೊಂದಿಗೆ ಹೋರಾಟ ನಡೆಸಿ ಸಾವಿನ ದವಡೆಯಿಂದ ಪಾರಾದ ಪ್ರಸಂಗ ಇದು.<br /> <br /> ಅಮೃತ ಕುಮಾರಿ ಎಂಬಾಕೆಯನ್ನು ಪತಿ ಆದರ್ಶ ಕುಮಾರ್ ಕಳೆದ ಬುಧವಾರ ಗಂಗಾನದಿಯ ಮಹಾತ್ಮ ಗಾಂಧಿ ಸೇತುವೆಯಿಂದ ಕೆಳಗಿ ತಳ್ಳಿ ಕೊಲೆಗೆ ಯತ್ನಿಸ್ದ್ದಿದ. ಆದರೆ ಅದೃಷ್ಟ ಚೆನ್ನಾಗಿತ್ತು. ಈಜು ಬುರುತ್ತಿದ್ದ ಈಕೆ ಸತತ 12 ಗಂಟೆಗಳ ಕಾಲ ಹೋರಾಟ ನಡೆಸಿ ದಡ ಸೇರಿದ್ದಾಳೆ. `ನನ್ನನ್ನು ಕೊಲೆ ಮಾಡಲು ನನ್ನ ಪತಿ ನದಿಗೆ ನೂಕಿದ್ದಾನೆ~ ಎಂದು ಅವರು ಹೇಳಿದ್ದಾರೆ. ಸಮಸ್ಟಿಪುರ ಜಿಲ್ಲೆಯ ರಾಸಲ್ಪುರದ ಬಳಿಯ ಗಂಗಾ ನದಿ ದಡದಲ್ಲಿ ಪ್ರಜ್ಞೆ ತಪ್ಪಿದ್ದ ಸ್ಥಿತಿಯಲ್ಲಿದ್ದ ಈಕೆಯನ್ನು ಸ್ಥಳೀಯರು ಮತ್ತು ಮೀನುಗಾರರು ರಕ್ಷಿಸಿ ಪೊಲೀಸರಿಗೆ ಸುದ್ದಿ ಮಟ್ಟಿಸಿದ್ದಾರೆ.<br /> <br /> ಅಂತರ್ಜಾತಿ ವಿವಾಹವೇ ಕೊಲೆ ಯತ್ನಕ್ಕೆ ಕಾರಣ ಎನ್ನಲಾಗಿದೆ. ಪೊಲೀಸರು ಆದರ್ಶಕುಮಾರ್ ಮತ್ತು ಆತನ ಮನೆಯವರ ಹುಡುಕಾಟ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>