<p>ಆನೇಕಲ್: ಸೃಜನಶೀಲತೆಯಿಂದ ಹೊಸದನ್ನು ಸೃಷ್ಟಿಸುವ ಹಾಗೂ ಹೊಸ ಚಿಂತನೆ ಮಾಡುವ ಕೌಶಲವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಉಷಾ ಸುರೇಶ್ ನುಡಿದರು.<br /> <br /> ಅವರು ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಜೆಎಸ್ಎಸ್ ಜನಶಿಕ್ಷಣ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.<br /> <br /> ಹೊಲಿಗೆ ತರಬೇತಿ ಪಡೆದಿರುವ ಶಿಬಿರಾರ್ಥಿಗಳು ಹೊಲಿಗೆಯಲ್ಲಿ ಹೊಸಹೊಸ ಡಿಸೈನ್ಗಳನ್ನು ರೂಪಿಸುವತ್ತ ಚಿಂತನೆ ಮಾಡಿದರೆ ಹೆಚ್ಚಿನ ಆದಾಯ ಹಾಗೂ ಬೇಡಿಕೆ ಬರುತ್ತದೆ ಎಂದರು.<br /> <br /> ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೇಜಶ್ರೆ ನಟರಾಜ್ ಮಾತನಾಡಿ, ಬಿಡುವಿನ ವೇಳೆಯಲ್ಲಿ ವಿವಿಧ ಕೌಶಲಗಳಲ್ಲಿ ತರಬೇತಿ ಪಡೆದು ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಹಾಗೂ ಸ್ವಾವಲಂಬಿಗಳಾಗುವತ್ತ ಗಮನ ನೀಡಬೇಕು ಎಂದರು.<br /> <br /> ಜೆಎಸ್ಎಸ್ ಜನಶಿಕ್ಷಣ ಸಂಸ್ಥೆಯ ನಿರ್ದೇಶಕ ರಾಜಪ್ಪ ಅವರು ಮಾತನಾಡಿ, ಸಂಸ್ಥೆಯು ಜನರ ಆಸಕ್ತಿಗನುಗುಣವಾಗಿ ಹಲವಾರು ತರಬೇತಿಗಳನ್ನು ರೂಪಿಸಿದೆ ಸಾಮನ್ಯ ಶಿಕ್ಷಣ ಪಡೆದವರು ಈ ಮೂಲಕ ಸ್ವಂತ ಉದ್ಯೋಗ ಪಡೆಯಲು ತರಬೇತಿ ಭೂಮಿಕೆಯನ್ನು ರೂಪಿಸುತ್ತದೆ ಎಂದರು.<br /> <br /> ಶಾಹಿ ಗಾರ್ಮೆಂಟ್ಸ್ನ ವಿನಯ್, ಪ್ರವೀಣ್, ಜೆಎಸ್ಎಸ್ ಕಾರ್ಯಕ್ರಮಾಧಿಕಾರಿ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯೆ ಚೌಡಮ್ಮ, ವಾಣಿ ಪ್ರಸಾದ್, ಹೊಲಿಗೆ ತರಬೇತಿ ಶಿಕ್ಷಕಿ ಸಿ.ಪಾರ್ವತಿ ಮತ್ತಿತರರು ಹಾಜರಿದ್ದರು. ಧನಲಕ್ಷ್ಮೆ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆನೇಕಲ್: ಸೃಜನಶೀಲತೆಯಿಂದ ಹೊಸದನ್ನು ಸೃಷ್ಟಿಸುವ ಹಾಗೂ ಹೊಸ ಚಿಂತನೆ ಮಾಡುವ ಕೌಶಲವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಉಷಾ ಸುರೇಶ್ ನುಡಿದರು.<br /> <br /> ಅವರು ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಜೆಎಸ್ಎಸ್ ಜನಶಿಕ್ಷಣ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.<br /> <br /> ಹೊಲಿಗೆ ತರಬೇತಿ ಪಡೆದಿರುವ ಶಿಬಿರಾರ್ಥಿಗಳು ಹೊಲಿಗೆಯಲ್ಲಿ ಹೊಸಹೊಸ ಡಿಸೈನ್ಗಳನ್ನು ರೂಪಿಸುವತ್ತ ಚಿಂತನೆ ಮಾಡಿದರೆ ಹೆಚ್ಚಿನ ಆದಾಯ ಹಾಗೂ ಬೇಡಿಕೆ ಬರುತ್ತದೆ ಎಂದರು.<br /> <br /> ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೇಜಶ್ರೆ ನಟರಾಜ್ ಮಾತನಾಡಿ, ಬಿಡುವಿನ ವೇಳೆಯಲ್ಲಿ ವಿವಿಧ ಕೌಶಲಗಳಲ್ಲಿ ತರಬೇತಿ ಪಡೆದು ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಹಾಗೂ ಸ್ವಾವಲಂಬಿಗಳಾಗುವತ್ತ ಗಮನ ನೀಡಬೇಕು ಎಂದರು.<br /> <br /> ಜೆಎಸ್ಎಸ್ ಜನಶಿಕ್ಷಣ ಸಂಸ್ಥೆಯ ನಿರ್ದೇಶಕ ರಾಜಪ್ಪ ಅವರು ಮಾತನಾಡಿ, ಸಂಸ್ಥೆಯು ಜನರ ಆಸಕ್ತಿಗನುಗುಣವಾಗಿ ಹಲವಾರು ತರಬೇತಿಗಳನ್ನು ರೂಪಿಸಿದೆ ಸಾಮನ್ಯ ಶಿಕ್ಷಣ ಪಡೆದವರು ಈ ಮೂಲಕ ಸ್ವಂತ ಉದ್ಯೋಗ ಪಡೆಯಲು ತರಬೇತಿ ಭೂಮಿಕೆಯನ್ನು ರೂಪಿಸುತ್ತದೆ ಎಂದರು.<br /> <br /> ಶಾಹಿ ಗಾರ್ಮೆಂಟ್ಸ್ನ ವಿನಯ್, ಪ್ರವೀಣ್, ಜೆಎಸ್ಎಸ್ ಕಾರ್ಯಕ್ರಮಾಧಿಕಾರಿ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯೆ ಚೌಡಮ್ಮ, ವಾಣಿ ಪ್ರಸಾದ್, ಹೊಲಿಗೆ ತರಬೇತಿ ಶಿಕ್ಷಕಿ ಸಿ.ಪಾರ್ವತಿ ಮತ್ತಿತರರು ಹಾಜರಿದ್ದರು. ಧನಲಕ್ಷ್ಮೆ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>