<p><strong>ಕ್ರಿಕೆಟ್ಪ್ರಿಯರನ್ನು ಮೋಡಿ ಮಾಡುವ ಚುಟುಕು ಆಟದ ಮೋಜು ಆರಂಭಕ್ಕೆ ಇನ್ನು ಒಂದೇ ಒಂದು ದಿನ ಬಾಕಿ. 16 ದಿನ ನಡೆಯುವ ಈ ಹಬ್ಬಕ್ಕೆ ಶುಕ್ರವಾರ ಮುನ್ನುಡಿ. <br /> ಉದ್ಯಾನ ನಗರಿಯ ಕ್ರೀಡಾ ಪ್ರೇಮಿಗಳ ಕಣ್ಣುಗಳಲ್ಲಿ ಸಾವಿರ ಸಾವಿರ ಕನಸು. <br /> <br /> ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡುವ ಹುರುಪು. ನಿನ್ನ ಆರ್ಭಟದಲ್ಲಿ ನಮ್ಮ ಅಭಿಮಾನ ಕೊಚ್ಚಿ ಹೋಗದಿರಲಿ ಎಂದು ಮಳೆರಾಯನಲ್ಲಿ ವಿನಮ್ರವಾಗಿ ಬೇಡಿಕೊಳ್ಳುವ ತವಕ. ಇದಕ್ಕೆಲ್ಲಾ ಕಾರಣ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ. <br /> <br /> ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದ ಸಂಭ್ರಮ ಒಂದೆಡೆಯಾದರೆ, ಅಕ್ಟೋಬರ್ ಮೊದಲ ವಾರದಲ್ಲಿನ ದಸರಾ ಹಬ್ಬ ನಿತ್ಯದ ಉತ್ಸಾಹ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ. <br /> <br /> ಇದಕ್ಕೆಲ್ಲಾ ಪೂರಕ ಎನ್ನುವಂತೆ ಈ ಹಬ್ಬಗಳ ಅಬ್ಬರದಲ್ಲಿ ಚುಟುಕು ಕ್ರಿಕೆಟ್ನ ಹಬ್ಬವೂ ಅಭಿಮಾನಿಗಳ ಕ್ರೇಜು ಹಾಗೂ ಮೋಜು ಹೆಚ್ಚಿಸಿದೆ. ಈ ಎಲ್ಲಾ ಕಾರಣದಿಂದಲೇ `ಕಾಡಬೇಡ ವರುಣ ರಾಯ~ ಎಂದು ಮೊರೆಯಿಡುತ್ತಿದ್ದಾರೆ, ಮಣ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.<br /> <br /> ಚಾಂಪಿಯನ್ಸ್ ಟೂರ್ನಿಯ ಪ್ರಧಾನ ಹಂತದ ಪಂದ್ಯಗಳು ಶುಕ್ರವಾರ ಆರಂಭಗೊಳ್ಳಲಿವೆ. ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ವಾರಿಯರ್ಸ್ ತಂಡಗಳ ನಡುವೆ ರಾತ್ರಿ 8 ಗಂಟೆಗೆ ಶುರು. <br /> <br /> ಕೋಲ್ಕತ್ತದಲ್ಲಿ ಭಾರಿ ಮಳೆ ಸುರಿದ ಕಾರಣ ಅಲ್ಲಿ ನಡೆಯಬೇಕಿದ್ದ ಒಂದು ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವರ್ಗವಾಗಿದೆ. ಇದು ಇಲ್ಲಿನ ಅಭಿಮಾನಿಗಳಿಗೆ ಸಂತಸ ಹೆಚ್ಚಾಗಲು ಕಾರಣ.<br /> <br /> ಮಂಗಳವಾರ ಜನ್ಮದಿನ ಆಚರಿಸಿಕೊಂಡ ಆರ್ಸಿಬಿ ತಂಡದ ಆಟಗಾರ `ಬರ್ತ್ ಡೇ ಬಾಯ್~ ಕ್ರೀಸ್ ಗೇಲ್ ಈ ಪಂದ್ಯವನ್ನು ಅತ್ಯಂತ ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ. <br /> <br /> `ನಾನು ಜನಿಸಿದ ನನ್ನ ದೇಶಕ್ಕಿಂತ ಬೆಂಗಳೂರಿನಲ್ಲಿಯೇ ನನಗೆ ಹೆಚ್ಚು ಅಭಿಮಾನಿಗಳಿದ್ದಾರೆ~ ಎಂದು ಈ ಆಟಗಾರ ಹೇಳಿರುವುದರಿಂದ ಇಲ್ಲಿನ ಕ್ರೀಡಾ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟಿದೆ. <br /> <br /> ಚಾಂಪಿಯನ್ಸ್ ಲೀಗ್ನ ಚೊಚ್ಚಲ ಪಂದ್ಯವಾದ ಕಾರಣ ಟಿಕೆಟ್ ಖರೀದಿಸಲು ಜನ ಮುಗಿ ಬಿದ್ದಿದ್ದಾರೆ. ಅದರಲ್ಲೂ ಈ ಸಲದ ಐಪಿಎಲ್ನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ ಗೇಲ್ ಬ್ಯಾಟಿಂಗ್ ಮೋಡಿಯನ್ನು ಎದುರು ನೋಡುತ್ತಿದ್ದಾರೆ. <br /> <br /> ಪುಟ್ಟ ಪುಟ್ಟ ಬಾಲಕರು ತಮ್ಮ ನೆಚ್ಚಿನ ತಂಡದ ಆಟಗಾರರ ಭಾವಚಿತ್ರ ಹಿಡಿದು ಆಟಗಾರರಿಗೆ ಹುರುಪು ತುಂಬಲು ಸಜ್ಜುಗೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಟೀ ಶರ್ಟ್ ಖರೀದಿಯಲ್ಲಿ ತಲ್ಲೆನರಾಗಿದ್ದಾರೆ. <br /> <br /> ಹಾಗೆಯೇ ಅಕ್ಟೋಬರ್ ಮೊದಲ ವಾರದಿಂದ ಶಾಲೆಗಳಿಗೆ ರಜೆ. ಇದು ಚುಟುಕು ಆಟಕ್ಕೆ ಹೆಚ್ಚು ಹುಮ್ಮಸ್ಸು, ವೀಕ್ಷಕರನ್ನು ತಂದು ಕೊಡಲಿದೆ. <br /> <br /> ಆದರೆ ನಗರದಲ್ಲಿ ಹೇಳದೇ ಕೇಳದೆ ಬರುತ್ತಿರುವ, ಸುರಿಯತ್ತಿರುವ ಮಳೆ ಅಲ್ಪ ಕಾಲ ವಿಶ್ರಾಂತಿ ನೀಡುವುದರ ಮೇಲೆ ಎಲ್ಲ ಸಂಭ್ರಮ ಅವಲಂಬಿಸಿದೆ. ವರುಣ ಕೃಪೆದೋರಿದರೆ ಚುಟುಕು ಆಟದ ಬ್ಯಾಟಿಂಗ್ ಅಬ್ಬರ, ಬೌಲಿಂಗ್ ದರ್ಬಾರ್ಗೆ ಎಣೆಯೇ ಇರುವುದಿಲ್ಲ.<br /> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕ್ರಿಕೆಟ್ಪ್ರಿಯರನ್ನು ಮೋಡಿ ಮಾಡುವ ಚುಟುಕು ಆಟದ ಮೋಜು ಆರಂಭಕ್ಕೆ ಇನ್ನು ಒಂದೇ ಒಂದು ದಿನ ಬಾಕಿ. 16 ದಿನ ನಡೆಯುವ ಈ ಹಬ್ಬಕ್ಕೆ ಶುಕ್ರವಾರ ಮುನ್ನುಡಿ. <br /> ಉದ್ಯಾನ ನಗರಿಯ ಕ್ರೀಡಾ ಪ್ರೇಮಿಗಳ ಕಣ್ಣುಗಳಲ್ಲಿ ಸಾವಿರ ಸಾವಿರ ಕನಸು. <br /> <br /> ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡುವ ಹುರುಪು. ನಿನ್ನ ಆರ್ಭಟದಲ್ಲಿ ನಮ್ಮ ಅಭಿಮಾನ ಕೊಚ್ಚಿ ಹೋಗದಿರಲಿ ಎಂದು ಮಳೆರಾಯನಲ್ಲಿ ವಿನಮ್ರವಾಗಿ ಬೇಡಿಕೊಳ್ಳುವ ತವಕ. ಇದಕ್ಕೆಲ್ಲಾ ಕಾರಣ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ. <br /> <br /> ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದ ಸಂಭ್ರಮ ಒಂದೆಡೆಯಾದರೆ, ಅಕ್ಟೋಬರ್ ಮೊದಲ ವಾರದಲ್ಲಿನ ದಸರಾ ಹಬ್ಬ ನಿತ್ಯದ ಉತ್ಸಾಹ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ. <br /> <br /> ಇದಕ್ಕೆಲ್ಲಾ ಪೂರಕ ಎನ್ನುವಂತೆ ಈ ಹಬ್ಬಗಳ ಅಬ್ಬರದಲ್ಲಿ ಚುಟುಕು ಕ್ರಿಕೆಟ್ನ ಹಬ್ಬವೂ ಅಭಿಮಾನಿಗಳ ಕ್ರೇಜು ಹಾಗೂ ಮೋಜು ಹೆಚ್ಚಿಸಿದೆ. ಈ ಎಲ್ಲಾ ಕಾರಣದಿಂದಲೇ `ಕಾಡಬೇಡ ವರುಣ ರಾಯ~ ಎಂದು ಮೊರೆಯಿಡುತ್ತಿದ್ದಾರೆ, ಮಣ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.<br /> <br /> ಚಾಂಪಿಯನ್ಸ್ ಟೂರ್ನಿಯ ಪ್ರಧಾನ ಹಂತದ ಪಂದ್ಯಗಳು ಶುಕ್ರವಾರ ಆರಂಭಗೊಳ್ಳಲಿವೆ. ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ವಾರಿಯರ್ಸ್ ತಂಡಗಳ ನಡುವೆ ರಾತ್ರಿ 8 ಗಂಟೆಗೆ ಶುರು. <br /> <br /> ಕೋಲ್ಕತ್ತದಲ್ಲಿ ಭಾರಿ ಮಳೆ ಸುರಿದ ಕಾರಣ ಅಲ್ಲಿ ನಡೆಯಬೇಕಿದ್ದ ಒಂದು ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವರ್ಗವಾಗಿದೆ. ಇದು ಇಲ್ಲಿನ ಅಭಿಮಾನಿಗಳಿಗೆ ಸಂತಸ ಹೆಚ್ಚಾಗಲು ಕಾರಣ.<br /> <br /> ಮಂಗಳವಾರ ಜನ್ಮದಿನ ಆಚರಿಸಿಕೊಂಡ ಆರ್ಸಿಬಿ ತಂಡದ ಆಟಗಾರ `ಬರ್ತ್ ಡೇ ಬಾಯ್~ ಕ್ರೀಸ್ ಗೇಲ್ ಈ ಪಂದ್ಯವನ್ನು ಅತ್ಯಂತ ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ. <br /> <br /> `ನಾನು ಜನಿಸಿದ ನನ್ನ ದೇಶಕ್ಕಿಂತ ಬೆಂಗಳೂರಿನಲ್ಲಿಯೇ ನನಗೆ ಹೆಚ್ಚು ಅಭಿಮಾನಿಗಳಿದ್ದಾರೆ~ ಎಂದು ಈ ಆಟಗಾರ ಹೇಳಿರುವುದರಿಂದ ಇಲ್ಲಿನ ಕ್ರೀಡಾ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟಿದೆ. <br /> <br /> ಚಾಂಪಿಯನ್ಸ್ ಲೀಗ್ನ ಚೊಚ್ಚಲ ಪಂದ್ಯವಾದ ಕಾರಣ ಟಿಕೆಟ್ ಖರೀದಿಸಲು ಜನ ಮುಗಿ ಬಿದ್ದಿದ್ದಾರೆ. ಅದರಲ್ಲೂ ಈ ಸಲದ ಐಪಿಎಲ್ನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ ಗೇಲ್ ಬ್ಯಾಟಿಂಗ್ ಮೋಡಿಯನ್ನು ಎದುರು ನೋಡುತ್ತಿದ್ದಾರೆ. <br /> <br /> ಪುಟ್ಟ ಪುಟ್ಟ ಬಾಲಕರು ತಮ್ಮ ನೆಚ್ಚಿನ ತಂಡದ ಆಟಗಾರರ ಭಾವಚಿತ್ರ ಹಿಡಿದು ಆಟಗಾರರಿಗೆ ಹುರುಪು ತುಂಬಲು ಸಜ್ಜುಗೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಟೀ ಶರ್ಟ್ ಖರೀದಿಯಲ್ಲಿ ತಲ್ಲೆನರಾಗಿದ್ದಾರೆ. <br /> <br /> ಹಾಗೆಯೇ ಅಕ್ಟೋಬರ್ ಮೊದಲ ವಾರದಿಂದ ಶಾಲೆಗಳಿಗೆ ರಜೆ. ಇದು ಚುಟುಕು ಆಟಕ್ಕೆ ಹೆಚ್ಚು ಹುಮ್ಮಸ್ಸು, ವೀಕ್ಷಕರನ್ನು ತಂದು ಕೊಡಲಿದೆ. <br /> <br /> ಆದರೆ ನಗರದಲ್ಲಿ ಹೇಳದೇ ಕೇಳದೆ ಬರುತ್ತಿರುವ, ಸುರಿಯತ್ತಿರುವ ಮಳೆ ಅಲ್ಪ ಕಾಲ ವಿಶ್ರಾಂತಿ ನೀಡುವುದರ ಮೇಲೆ ಎಲ್ಲ ಸಂಭ್ರಮ ಅವಲಂಬಿಸಿದೆ. ವರುಣ ಕೃಪೆದೋರಿದರೆ ಚುಟುಕು ಆಟದ ಬ್ಯಾಟಿಂಗ್ ಅಬ್ಬರ, ಬೌಲಿಂಗ್ ದರ್ಬಾರ್ಗೆ ಎಣೆಯೇ ಇರುವುದಿಲ್ಲ.<br /> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>