<p><strong>ಬೆಂಗಳೂರು:</strong> `ವಿಶ್ವಕಪ್ ಗೆದ್ದ ಕ್ರಿಕೆಟ್ ಆಟಗಾರರಿಗೆ ಬಹುಮಾನ ರೂಪದಲ್ಲಿ ಹಲವು ಕೋಟಿ ರೂಪಾಯಿ ಲಭಿಸುವುದಾದರೆ, ಅಂತಹದೇ ಸಾಧನೆ ಮಾಡಿರುವ ಕಬಡ್ಡಿ ಆಟಗಾರ್ತಿಯರನ್ನು ಕಡೆಗಣಿಸುವುದು ಏಕೆ?~<br /> -ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ಮನದಲ್ಲಿ ಸುಳಿದಾಡಿದ ಪ್ರಶ್ನೆಯಿದು. <br /> <br /> ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಮತಾ ಈ ಪ್ರಶ್ನೆಯನ್ನು ಮಾಧ್ಯಮದವರ ಮುಂದಿಟ್ಟರು. <br /> <br /> `ಕ್ರೀಡೆ ಯಾವುದೇ ಇರಲಿ, ವಿಶ್ವಕಪ್ ಗೆಲ್ಲುವುದೆಂದರೆ ಮಹಾನ್ ಸಾಧನೆ. ಆದ್ದರಿಂದ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಸೂಕ್ತ ಗೌರವ ಲಭಿಸಲಿ. ಕ್ರೀಡಾಪಟುಗಳ ನಡುವೆ ತಾರತಮ್ಯ ಸಲ್ಲದು~ ಎಂದು ಮಮತಾ ನುಡಿದರು. ಪಟ್ನಾದಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. <br /> <br /> ಸಮಾರಂಭದಲ್ಲಿ ನ್ಯಾಯಮೂರ್ತಿ ರವಿ ಮಳೀಮಠ ಅವರು ಭಾರತ ತಂಡದ ನಾಯಕಿಯನ್ನು ಸನ್ಮಾನಿಸಿದರು. ಕೆಒಎ ರೂ. 25 ಸಾವಿರ ನಗದು ಬಹುಮಾನ ನೀಡಿತು. ಮಮತಾ ಅವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ ಬಹುಮಾನ ಪ್ರಕಟಿಸಿತ್ತು. <br /> <br /> `ಭಾರತ ತಂಡದಲ್ಲಿದ್ದ ಮಹಾರಾಷ್ಟ್ರದ ಮೂವರು ಆಟಗಾರ್ತಿಯರಿಗೆ ಅಲ್ಲಿನ ಸರ್ಕಾರ ತಲಾ ಒಂದು ಕೋಟಿ ರೂ. ನೀಡಿದೆ. ಇಂತಹ ಬೆಂಬಲ ನಮಗೆ ಅಗತ್ಯ. ಒಲಿಂಪಿಕ್ ಕ್ರೀಡೆಗಳಲ್ಲಿ ಕಬಡ್ಡಿಗೆ ಸ್ಥಾನ ದೊರೆತರೆ ಭಾರತಕ್ಕೆ ಪದಕ ಖಚಿತ~ ಎಂದು ಮಮತಾ ನುಡಿದರು.<br /> <br /> ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್, `ಪ್ರಜಾವಾಣಿ~ ಸಂಪಾದಕ ಕೆ.ಎನ್. ಶಾಂತಕುಮಾರ್, ರಾಜ್ಯ ಕಬಡ್ಡಿ ಸಂಸ್ಥೆ ಅಧ್ಯಕ್ಷ ಹನುಮಂತೇ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ವಿಶ್ವಕಪ್ ಗೆದ್ದ ಕ್ರಿಕೆಟ್ ಆಟಗಾರರಿಗೆ ಬಹುಮಾನ ರೂಪದಲ್ಲಿ ಹಲವು ಕೋಟಿ ರೂಪಾಯಿ ಲಭಿಸುವುದಾದರೆ, ಅಂತಹದೇ ಸಾಧನೆ ಮಾಡಿರುವ ಕಬಡ್ಡಿ ಆಟಗಾರ್ತಿಯರನ್ನು ಕಡೆಗಣಿಸುವುದು ಏಕೆ?~<br /> -ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ಮನದಲ್ಲಿ ಸುಳಿದಾಡಿದ ಪ್ರಶ್ನೆಯಿದು. <br /> <br /> ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಮತಾ ಈ ಪ್ರಶ್ನೆಯನ್ನು ಮಾಧ್ಯಮದವರ ಮುಂದಿಟ್ಟರು. <br /> <br /> `ಕ್ರೀಡೆ ಯಾವುದೇ ಇರಲಿ, ವಿಶ್ವಕಪ್ ಗೆಲ್ಲುವುದೆಂದರೆ ಮಹಾನ್ ಸಾಧನೆ. ಆದ್ದರಿಂದ ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಸೂಕ್ತ ಗೌರವ ಲಭಿಸಲಿ. ಕ್ರೀಡಾಪಟುಗಳ ನಡುವೆ ತಾರತಮ್ಯ ಸಲ್ಲದು~ ಎಂದು ಮಮತಾ ನುಡಿದರು. ಪಟ್ನಾದಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಕಬಡ್ಡಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. <br /> <br /> ಸಮಾರಂಭದಲ್ಲಿ ನ್ಯಾಯಮೂರ್ತಿ ರವಿ ಮಳೀಮಠ ಅವರು ಭಾರತ ತಂಡದ ನಾಯಕಿಯನ್ನು ಸನ್ಮಾನಿಸಿದರು. ಕೆಒಎ ರೂ. 25 ಸಾವಿರ ನಗದು ಬಹುಮಾನ ನೀಡಿತು. ಮಮತಾ ಅವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ ಬಹುಮಾನ ಪ್ರಕಟಿಸಿತ್ತು. <br /> <br /> `ಭಾರತ ತಂಡದಲ್ಲಿದ್ದ ಮಹಾರಾಷ್ಟ್ರದ ಮೂವರು ಆಟಗಾರ್ತಿಯರಿಗೆ ಅಲ್ಲಿನ ಸರ್ಕಾರ ತಲಾ ಒಂದು ಕೋಟಿ ರೂ. ನೀಡಿದೆ. ಇಂತಹ ಬೆಂಬಲ ನಮಗೆ ಅಗತ್ಯ. ಒಲಿಂಪಿಕ್ ಕ್ರೀಡೆಗಳಲ್ಲಿ ಕಬಡ್ಡಿಗೆ ಸ್ಥಾನ ದೊರೆತರೆ ಭಾರತಕ್ಕೆ ಪದಕ ಖಚಿತ~ ಎಂದು ಮಮತಾ ನುಡಿದರು.<br /> <br /> ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್, `ಪ್ರಜಾವಾಣಿ~ ಸಂಪಾದಕ ಕೆ.ಎನ್. ಶಾಂತಕುಮಾರ್, ರಾಜ್ಯ ಕಬಡ್ಡಿ ಸಂಸ್ಥೆ ಅಧ್ಯಕ್ಷ ಹನುಮಂತೇ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>