<p><strong>ಚಂಡೀಗಡ(ಪಿಟಿಐ): </strong>ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಹಾಗೂ ಪ್ರಮುಖ ರಿಯಲ್ ಎಸ್ಟೇಟ್ ಡಿಎಲ್ಎಫ್ ಕಂಪೆನಿ ನಡುವಣ ಒಪ್ಪಂದವನ್ನು 2012ರಲ್ಲಿ ರದ್ದು ಪಡಿಸಿದಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ವಿರುದ್ಧ ಹರಿಯಾಣ ಸರ್ಕಾರ ದೋಷಾರೋಪ (ಚಾರ್ಜ್ಶೀಟ್) ಮಾಡಿದೆ.</p>.<p>ಖೇಮ್ಕಾ ಅನುಪಸ್ಥಿತಿಯಲ್ಲಿ ಬುಧವಾರ ಅವರ ನಿವಾಸಕ್ಕೆ ಚಾರ್ಜ್ಶೀಟ್ ಅನ್ನು ತಲುಪಿಸಲಾಗಿದೆ. ಈ ಸಂಬಂಧ ಉತ್ತರಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಗುರುವಾರ ಮೂಲಗಳು ಹೇಳಿವೆ.</p>.<p>‘ತಾನು ಬುಧವಾರ ದೆಹಲಿಗೆ ತೆರಳಿದ್ದು, ಆರೋಪಗಳಿಗೆ ಶೀಘ್ರವೇ ಪ್ರತಿಕ್ರಿಯಿಸುವುದಾಗಿ’ ಚಾರ್ಜ್ಶೀಟ್ ಸಂಬಂಧ ಖೇಮ್ಕಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ‘ಪಿಟಿಐ’ಗೆ ಹೇಳಿದ್ದಾರೆ.</p>.<p>ಖೇಮ್ಕಾ ಅವರು ಪ್ರಸಕ್ತ ಹರಿಯಾಣ ಬೀಜ ಅಭಿವೃದ್ಧಿ ಕಾರ್ಪೋರೇಷನ್ (ಎಚ್ಎಸ್ಡಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.</p>.<p>ಏಳು ಪುಟಗಳ ದೋಷಾರೋಪದಲ್ಲಿ ಆಡಳಿತಾತ್ಮಕ ದುರ್ನಡತೆ ಮತ್ತು ವಾದ್ರಾ ಹಾಗೂ ಡಿಎಲ್ಎಫ್ ಗೌರವಕ್ಕೆ ಚ್ಯುತಿ ತಂದಿರುವ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p>ಒಪ್ಪಂದ ರದ್ದುಗೊಳಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ, ಸರ್ಕಾರದ ನೀತಿ ಟೀಕಿಸಿದ ಹಾಗೂ ವರ್ಗಾವಣೆ ಮಾಡಲಾದ ಹೊರತಾಗಿಯೂ ತಾನು ಮಾಡುತ್ತಿದ್ದ ಆರೋಪಗಳನ್ನು ತಕ್ಷಣಕ್ಕೆ ಕೈಬಿಡದಿರುವ ವಿಷಯಗಳೂ ಚಾರ್ಜ್ಶೀಟ್ನಲ್ಲಿವೆ ಎಂದೂ ಮೂಲಗಳು ಹೇಳಿವೆ.</p>.<p><strong>ಹಿನ್ನೆಲೆ: </strong>1991ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಖೇಮ್ಕಾ, 2012ರ ಅಕ್ಟೋಬರ್ 15 ರಂದು ವಾದ್ರಾ ಹಾಗೂ ಡಿಎಲ್ಎಫ್ ನಡುವಣ ಭೂ ವ್ಯವಹಾರಕ್ಕೆ ಸಂಬಂಧಿಸಿದ ಒಪ್ಪಂದವೊಂದನ್ನು ರದ್ದುಗೊಳಿಸಿದ್ದರು. </p>.<p>ಖೇಮ್ಕಾ ಅವರ ಆ ನಡೆಯನ್ನು ಆಡಳಿತಾತ್ಮಕ ದುರ್ನಡತೆ ಎಂದು ಆರೋಪಿಸಿದ್ದ ಹರಿಯಾಣ ಸರ್ಕಾರ, ಅವರನ್ನು ತಕ್ಷಣವೇ ಎಚ್ಎಸ್ಡಿಸಿಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿತ್ತು.</p>.<p>ಈ ಸಂಬಂಧ ಖೇಮ್ಕಾ ವಿರುದ್ಧ ದೋಷಾರೋಪ ಮಾಡಲು ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹರಿಯಾಣ ಸರ್ಕಾರ ನಿರ್ಧರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಡ(ಪಿಟಿಐ): </strong>ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಹಾಗೂ ಪ್ರಮುಖ ರಿಯಲ್ ಎಸ್ಟೇಟ್ ಡಿಎಲ್ಎಫ್ ಕಂಪೆನಿ ನಡುವಣ ಒಪ್ಪಂದವನ್ನು 2012ರಲ್ಲಿ ರದ್ದು ಪಡಿಸಿದಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ವಿರುದ್ಧ ಹರಿಯಾಣ ಸರ್ಕಾರ ದೋಷಾರೋಪ (ಚಾರ್ಜ್ಶೀಟ್) ಮಾಡಿದೆ.</p>.<p>ಖೇಮ್ಕಾ ಅನುಪಸ್ಥಿತಿಯಲ್ಲಿ ಬುಧವಾರ ಅವರ ನಿವಾಸಕ್ಕೆ ಚಾರ್ಜ್ಶೀಟ್ ಅನ್ನು ತಲುಪಿಸಲಾಗಿದೆ. ಈ ಸಂಬಂಧ ಉತ್ತರಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಗುರುವಾರ ಮೂಲಗಳು ಹೇಳಿವೆ.</p>.<p>‘ತಾನು ಬುಧವಾರ ದೆಹಲಿಗೆ ತೆರಳಿದ್ದು, ಆರೋಪಗಳಿಗೆ ಶೀಘ್ರವೇ ಪ್ರತಿಕ್ರಿಯಿಸುವುದಾಗಿ’ ಚಾರ್ಜ್ಶೀಟ್ ಸಂಬಂಧ ಖೇಮ್ಕಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ‘ಪಿಟಿಐ’ಗೆ ಹೇಳಿದ್ದಾರೆ.</p>.<p>ಖೇಮ್ಕಾ ಅವರು ಪ್ರಸಕ್ತ ಹರಿಯಾಣ ಬೀಜ ಅಭಿವೃದ್ಧಿ ಕಾರ್ಪೋರೇಷನ್ (ಎಚ್ಎಸ್ಡಿಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.</p>.<p>ಏಳು ಪುಟಗಳ ದೋಷಾರೋಪದಲ್ಲಿ ಆಡಳಿತಾತ್ಮಕ ದುರ್ನಡತೆ ಮತ್ತು ವಾದ್ರಾ ಹಾಗೂ ಡಿಎಲ್ಎಫ್ ಗೌರವಕ್ಕೆ ಚ್ಯುತಿ ತಂದಿರುವ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p>ಒಪ್ಪಂದ ರದ್ದುಗೊಳಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ, ಸರ್ಕಾರದ ನೀತಿ ಟೀಕಿಸಿದ ಹಾಗೂ ವರ್ಗಾವಣೆ ಮಾಡಲಾದ ಹೊರತಾಗಿಯೂ ತಾನು ಮಾಡುತ್ತಿದ್ದ ಆರೋಪಗಳನ್ನು ತಕ್ಷಣಕ್ಕೆ ಕೈಬಿಡದಿರುವ ವಿಷಯಗಳೂ ಚಾರ್ಜ್ಶೀಟ್ನಲ್ಲಿವೆ ಎಂದೂ ಮೂಲಗಳು ಹೇಳಿವೆ.</p>.<p><strong>ಹಿನ್ನೆಲೆ: </strong>1991ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಖೇಮ್ಕಾ, 2012ರ ಅಕ್ಟೋಬರ್ 15 ರಂದು ವಾದ್ರಾ ಹಾಗೂ ಡಿಎಲ್ಎಫ್ ನಡುವಣ ಭೂ ವ್ಯವಹಾರಕ್ಕೆ ಸಂಬಂಧಿಸಿದ ಒಪ್ಪಂದವೊಂದನ್ನು ರದ್ದುಗೊಳಿಸಿದ್ದರು. </p>.<p>ಖೇಮ್ಕಾ ಅವರ ಆ ನಡೆಯನ್ನು ಆಡಳಿತಾತ್ಮಕ ದುರ್ನಡತೆ ಎಂದು ಆರೋಪಿಸಿದ್ದ ಹರಿಯಾಣ ಸರ್ಕಾರ, ಅವರನ್ನು ತಕ್ಷಣವೇ ಎಚ್ಎಸ್ಡಿಸಿಗೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿತ್ತು.</p>.<p>ಈ ಸಂಬಂಧ ಖೇಮ್ಕಾ ವಿರುದ್ಧ ದೋಷಾರೋಪ ಮಾಡಲು ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹರಿಯಾಣ ಸರ್ಕಾರ ನಿರ್ಧರಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>