<p><strong>ಕಾರವಾರ: </strong>ಮಕ್ಕಳ ಕಥೆಗಳು, ನಾಟಕ, ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಅನುಕೂಲ ಮಾಡಿಕೊಡುವ ವಿಜ್ಞಾನ ಮಾದರಿಯ ವಿವರಗಳುಳ್ಳ ಪುಸ್ತಕಗಳು, ಹೆಸರಾಂತ ಸಾಹಿತಿಗಳ ಕಾದಂಬರಿ, ಸಾಮಾನ್ಯ ಜ್ಞಾನ, ವೈಜ್ಞಾನಿಕ ಆವಿಷ್ಕಾರಗಳು, ಧರ್ಮ, ಸಂಗೀತಕ್ಕೆ ಸೇರಿದ ಸಾಹಿತ್ಯ ಪುಸ್ತಕಗಳು ಯೂನಿವರ್ಸಲ್ ಪುಸ್ತಕ ಮಳಿಗೆಯಲ್ಲಿವೆ. <br /> <br /> ಸಾಹಿತ್ಯಾಸಕ್ತರು ತಮಗಿಷ್ಟದ ಸಾಹಿತ್ಯ ಕೃತಿಗಳನ್ನು ಧಾರವಾಡದಿಂದಲೋ, ಬೆಂಗಳೂರಿನಿಂದಲೋ ತರಿಸಬೇಕಾಗಿಲ್ಲ. ನಗರದ ಮಿತ್ರ ಸಮಾಜ ಮೈದಾನದಲ್ಲಿರುವ ಯೂನಿವರ್ಸಲ್ ಪುಸ್ತಕ ಮಳಿಗೆಯಲ್ಲಿ ಮಕ್ಕಳ ಸಾಹಿತ್ಯದಿಂದ ಹಿಡಿದು ಎಲ್ಲ ವರ್ಗದವರು ಇಷ್ಟಪಡುವ ಕನ್ನಡ, ಇಂಗ್ಲಿಷ್ ಸಾಹಿತ್ಯ ಕೃತಿಗಳು ಲಭ್ಯವಿದೆ. ಮಕ್ಕಳ ಸಾಹಿತ್ಯದ ಕುರಿತ ಸಿಡಿಗಳೂ ಲಭ್ಯ.<br /> <br /> ಮಕ್ಕಳಲ್ಲಿ ಓದು ಹವ್ಯಾಸ ಬೆಳೆಸುವ ದೃಷ್ಟಿಯಿಂದ ಮಕ್ಕಳಿಗೇ ಸಂಬಂಧಿಸಿದ ಇಂಗ್ಲಿಷ್, ಕನ್ನಡ ಸಾಹಿತ್ಯ, ವ್ಯಾಕರಣ, ಪುಸ್ತಕಗಳು ಮಳಿಗೆಯಲ್ಲಿ ಸಿಂಹಪಾಲು ಪಡೆದುಕೊಂಡಿವೆ. `ಗ್ರೆಟ್ ಜೋಕ್ಸ್~, ಮಕ್ಕಳ ಬುದ್ಧಿಶಕ್ತಿ ಚುರುಕುಗೊಳಿಸುವ `ಕಟ್ ಅಂಡ್ ಪೆಸ್ಟ್~ ಪುಸ್ತಕ, ನೀತಿ ಕಥೆಗಳು, ಪಂಚತಂತ್ರ ಕಥೆಗಳು, ಅಕ್ಬರ್ ಬೀರಬಲ್ರ ಕಥೆಗಳು ಹೀಗೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹುಟ್ಟಿಸುವ ಪುಸ್ತಗಳು ಮಳಿಗೆಯಲ್ಲಿ ಮಾರಾಟಕ್ಕಿವೆ.<br /> <br /> ಮಕ್ಕಳು ಟಿ.ವಿ. ಮುಂದೆ ಕುಳಿತು ಸಮಯ ಹಾಳು ಮಾಡದೆ ಓದಿನಲ್ಲಿ ಆಸಕ್ತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಅವರಿಗೆ ಸಂಬಂಧಿಸಿದ ಹೆಚ್ಚು ಪುಸ್ತಕಗಳನ್ನು ಮಾರಾಟಕ್ಕಿಡಲಾಗಿದೆ.<br /> <br /> ಮನೆಯ ಮುಂದಿರುವ ತೋಟದಲ್ಲಿ, ಹಿತ್ತಲಲ್ಲಿ ಎಷ್ಟೋ ಔಷಧೀಯ ಸಸ್ಯಗಳು ಇರುತ್ತವೆ. ಅವುಗಳ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಅಂತಹ ಸಸ್ಯಗಳ ಕುರಿತು ಮಾಹಿತಿಯುಳ್ಳ `ಕರ್ನಾಟಕದ ಔಷಧೀಯ ಸಸ್ಯಗಳು~ ಮತ್ತು `ಮನೆಯಂಗಳದ ಔಷಧೀಯ ಸಸ್ಯ~ಗಳ ಕುರಿತ ಪುಸ್ತಕಗಳು, ಪರಮಹಂಸ ಯೋಗಾನಂದರ `ಯೋಗಿಯ ಆತ್ಮಕಥೆಗಳು~ ಹದಿನೈದಕ್ಕೂ ಹೆಚ್ಚು ಭಾಷೆಗಳಲ್ಲಿ ಮುದ್ರಣ ಕಂಡಿರುವ ಡಾ. ಸಾರಾ ಅಬುಬಕ್ಕರ್ ಅವರ `ಚಂದ್ರಗಿರಿಯ ತೀರದಲ್ಲಿ ಮತ್ತು ಮಹನೀಯರ ಜೀವಚರಿತ್ರೆಯ ಕುರಿತ ಕೃತಿಗಳು ಮಳಿಗೆಯಲ್ಲಿ ಲಭ್ಯವಿದೆ.<br /> <br /> ಕೊಂಕಣಿ ಭಾಷೆಯ ಪ್ರಾಬಲ್ಯವಿರುವ ಗಡಿಭಾಗದಲ್ಲಿ ಕನ್ನಡ ಸಾಹಿತ್ಯದ ರುಚಿಯೂಣಿಸಲು ಯೂನಿವರ್ಸಲ್ ಬುಕ್ಸೆಂಟ್ರ್ ಮುಂದೆ ಬಂದಿದ್ದು ನೂರು ರೂಪಾಯಿ ಮುಖ ಬೆಲೆಯ ಪುಸ್ತಕ ಖರೀದಿಯ ಮೇಲೆ ವಿಶೇಷ ರಿಯಾಯಿತಿಯನ್ನೂ ಪ್ರಕಟಿಸಿದೆ. <br /> <br /> ಡಾ. ಎಸ್.ಎಲ್.ಬೈರಪ್ಪ, ಕುವೆಂಪು. ಪೂರ್ಣಚಂದ್ರ ತೇಜಸ್ವಿ, ಡಾ. ಶಿವರಾಮ ಕಾರಂತ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಎಲ್ಲ ಕೃತಿಗಳನ್ನು ಸಾಹಿತ್ಯಾಸಕ್ತರು ಖರೀದಿಬಹುದಾಗಿದೆ. <br /> <br /> ಆಧ್ಯಾತ್ಮದ ಚಿಂತನೆಯ ಕುರಿತ ಪುಸ್ತಕಗಳೊಂದಿಗೆ ಭಜನೆ, ಕೀರ್ತನೆ, ದಾಸ ಸಾಹಿತ್ಯ, ವಚನ ಸಾಹಿತ್ಯ ಕೃತಿಗಳು ಮತ್ತು ತಾಯಿಯ ಎದೆಹಾಲಿನ ಮಹತ್ವ ಸಾರುವ ಡಾ. ಎಚ್. ನಾಗರಾಜ ಅವರ ` ಎದೆಹಾಲು~ ಪುಸಕ್ತವೂ ಮಹಿಳೆಗೆಯಲ್ಲಿ ಲಭ್ಯ.<br /> <br /> ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಛಾಯಾಚಿತ್ರ, ರಂಗಭೂಮಿ, ಸಂಗೀತ, ಚಲನಚಿತ್ರದ ಕುರಿತು ವಿವರಗಳನ್ನೊಳಗೊಂಡ `ಕಲಾದರ್ಶನ, ನೊಬೆಲ್ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನೊಳಗೊಂಡ `ನೊಬಲ್ ಪುರಸ್ಕೃತರು~ ಎಂಬ ಕೃತಿಯೂ ಇದ್ದು ಸಂಗ್ರಹ ಯೋಗ್ಯವಾಗಿವೆ.<br /> <br /> `ಗಡಿಭಾಗದಲ್ಲಿ ಸಾಹಿತ್ಯದ ರುಚಿ ತೋರಿಸಲು ಪುಸ್ತಕ ಮಳಿಗೆ ಹಾಕಿದ್ದೇವೆ. ಕೇವಲ ಲಾಭವೊಂದೇ ಮುಖ್ಯವಲ್ಲ. ಸಾಹಿತ್ಯದ ಅಭಿರುಚಿ ಮೂಡಿಸುವ ಉದ್ದೇಶವನ್ನೂ ನಾವು ಹೊಂದಿದೆ. ಸಾಹಿತ್ಯಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ಬಂದರೆ 3-4 ತಿಂಗಳ ಕಾಲ ಇಲ್ಲಿಯೇ ಇರುತ್ತೇವೆ~ ಎನ್ನುತ್ತಾರೆ ಯೂನಿವರ್ಸಲ್ ಬುಕ್ ಸೆಂಟರ್ನ ಭೂಪೇಶ ಪಾಲನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ಮಕ್ಕಳ ಕಥೆಗಳು, ನಾಟಕ, ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಅನುಕೂಲ ಮಾಡಿಕೊಡುವ ವಿಜ್ಞಾನ ಮಾದರಿಯ ವಿವರಗಳುಳ್ಳ ಪುಸ್ತಕಗಳು, ಹೆಸರಾಂತ ಸಾಹಿತಿಗಳ ಕಾದಂಬರಿ, ಸಾಮಾನ್ಯ ಜ್ಞಾನ, ವೈಜ್ಞಾನಿಕ ಆವಿಷ್ಕಾರಗಳು, ಧರ್ಮ, ಸಂಗೀತಕ್ಕೆ ಸೇರಿದ ಸಾಹಿತ್ಯ ಪುಸ್ತಕಗಳು ಯೂನಿವರ್ಸಲ್ ಪುಸ್ತಕ ಮಳಿಗೆಯಲ್ಲಿವೆ. <br /> <br /> ಸಾಹಿತ್ಯಾಸಕ್ತರು ತಮಗಿಷ್ಟದ ಸಾಹಿತ್ಯ ಕೃತಿಗಳನ್ನು ಧಾರವಾಡದಿಂದಲೋ, ಬೆಂಗಳೂರಿನಿಂದಲೋ ತರಿಸಬೇಕಾಗಿಲ್ಲ. ನಗರದ ಮಿತ್ರ ಸಮಾಜ ಮೈದಾನದಲ್ಲಿರುವ ಯೂನಿವರ್ಸಲ್ ಪುಸ್ತಕ ಮಳಿಗೆಯಲ್ಲಿ ಮಕ್ಕಳ ಸಾಹಿತ್ಯದಿಂದ ಹಿಡಿದು ಎಲ್ಲ ವರ್ಗದವರು ಇಷ್ಟಪಡುವ ಕನ್ನಡ, ಇಂಗ್ಲಿಷ್ ಸಾಹಿತ್ಯ ಕೃತಿಗಳು ಲಭ್ಯವಿದೆ. ಮಕ್ಕಳ ಸಾಹಿತ್ಯದ ಕುರಿತ ಸಿಡಿಗಳೂ ಲಭ್ಯ.<br /> <br /> ಮಕ್ಕಳಲ್ಲಿ ಓದು ಹವ್ಯಾಸ ಬೆಳೆಸುವ ದೃಷ್ಟಿಯಿಂದ ಮಕ್ಕಳಿಗೇ ಸಂಬಂಧಿಸಿದ ಇಂಗ್ಲಿಷ್, ಕನ್ನಡ ಸಾಹಿತ್ಯ, ವ್ಯಾಕರಣ, ಪುಸ್ತಕಗಳು ಮಳಿಗೆಯಲ್ಲಿ ಸಿಂಹಪಾಲು ಪಡೆದುಕೊಂಡಿವೆ. `ಗ್ರೆಟ್ ಜೋಕ್ಸ್~, ಮಕ್ಕಳ ಬುದ್ಧಿಶಕ್ತಿ ಚುರುಕುಗೊಳಿಸುವ `ಕಟ್ ಅಂಡ್ ಪೆಸ್ಟ್~ ಪುಸ್ತಕ, ನೀತಿ ಕಥೆಗಳು, ಪಂಚತಂತ್ರ ಕಥೆಗಳು, ಅಕ್ಬರ್ ಬೀರಬಲ್ರ ಕಥೆಗಳು ಹೀಗೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹುಟ್ಟಿಸುವ ಪುಸ್ತಗಳು ಮಳಿಗೆಯಲ್ಲಿ ಮಾರಾಟಕ್ಕಿವೆ.<br /> <br /> ಮಕ್ಕಳು ಟಿ.ವಿ. ಮುಂದೆ ಕುಳಿತು ಸಮಯ ಹಾಳು ಮಾಡದೆ ಓದಿನಲ್ಲಿ ಆಸಕ್ತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಅವರಿಗೆ ಸಂಬಂಧಿಸಿದ ಹೆಚ್ಚು ಪುಸ್ತಕಗಳನ್ನು ಮಾರಾಟಕ್ಕಿಡಲಾಗಿದೆ.<br /> <br /> ಮನೆಯ ಮುಂದಿರುವ ತೋಟದಲ್ಲಿ, ಹಿತ್ತಲಲ್ಲಿ ಎಷ್ಟೋ ಔಷಧೀಯ ಸಸ್ಯಗಳು ಇರುತ್ತವೆ. ಅವುಗಳ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಅಂತಹ ಸಸ್ಯಗಳ ಕುರಿತು ಮಾಹಿತಿಯುಳ್ಳ `ಕರ್ನಾಟಕದ ಔಷಧೀಯ ಸಸ್ಯಗಳು~ ಮತ್ತು `ಮನೆಯಂಗಳದ ಔಷಧೀಯ ಸಸ್ಯ~ಗಳ ಕುರಿತ ಪುಸ್ತಕಗಳು, ಪರಮಹಂಸ ಯೋಗಾನಂದರ `ಯೋಗಿಯ ಆತ್ಮಕಥೆಗಳು~ ಹದಿನೈದಕ್ಕೂ ಹೆಚ್ಚು ಭಾಷೆಗಳಲ್ಲಿ ಮುದ್ರಣ ಕಂಡಿರುವ ಡಾ. ಸಾರಾ ಅಬುಬಕ್ಕರ್ ಅವರ `ಚಂದ್ರಗಿರಿಯ ತೀರದಲ್ಲಿ ಮತ್ತು ಮಹನೀಯರ ಜೀವಚರಿತ್ರೆಯ ಕುರಿತ ಕೃತಿಗಳು ಮಳಿಗೆಯಲ್ಲಿ ಲಭ್ಯವಿದೆ.<br /> <br /> ಕೊಂಕಣಿ ಭಾಷೆಯ ಪ್ರಾಬಲ್ಯವಿರುವ ಗಡಿಭಾಗದಲ್ಲಿ ಕನ್ನಡ ಸಾಹಿತ್ಯದ ರುಚಿಯೂಣಿಸಲು ಯೂನಿವರ್ಸಲ್ ಬುಕ್ಸೆಂಟ್ರ್ ಮುಂದೆ ಬಂದಿದ್ದು ನೂರು ರೂಪಾಯಿ ಮುಖ ಬೆಲೆಯ ಪುಸ್ತಕ ಖರೀದಿಯ ಮೇಲೆ ವಿಶೇಷ ರಿಯಾಯಿತಿಯನ್ನೂ ಪ್ರಕಟಿಸಿದೆ. <br /> <br /> ಡಾ. ಎಸ್.ಎಲ್.ಬೈರಪ್ಪ, ಕುವೆಂಪು. ಪೂರ್ಣಚಂದ್ರ ತೇಜಸ್ವಿ, ಡಾ. ಶಿವರಾಮ ಕಾರಂತ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಎಲ್ಲ ಕೃತಿಗಳನ್ನು ಸಾಹಿತ್ಯಾಸಕ್ತರು ಖರೀದಿಬಹುದಾಗಿದೆ. <br /> <br /> ಆಧ್ಯಾತ್ಮದ ಚಿಂತನೆಯ ಕುರಿತ ಪುಸ್ತಕಗಳೊಂದಿಗೆ ಭಜನೆ, ಕೀರ್ತನೆ, ದಾಸ ಸಾಹಿತ್ಯ, ವಚನ ಸಾಹಿತ್ಯ ಕೃತಿಗಳು ಮತ್ತು ತಾಯಿಯ ಎದೆಹಾಲಿನ ಮಹತ್ವ ಸಾರುವ ಡಾ. ಎಚ್. ನಾಗರಾಜ ಅವರ ` ಎದೆಹಾಲು~ ಪುಸಕ್ತವೂ ಮಹಿಳೆಗೆಯಲ್ಲಿ ಲಭ್ಯ.<br /> <br /> ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಛಾಯಾಚಿತ್ರ, ರಂಗಭೂಮಿ, ಸಂಗೀತ, ಚಲನಚಿತ್ರದ ಕುರಿತು ವಿವರಗಳನ್ನೊಳಗೊಂಡ `ಕಲಾದರ್ಶನ, ನೊಬೆಲ್ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನೊಳಗೊಂಡ `ನೊಬಲ್ ಪುರಸ್ಕೃತರು~ ಎಂಬ ಕೃತಿಯೂ ಇದ್ದು ಸಂಗ್ರಹ ಯೋಗ್ಯವಾಗಿವೆ.<br /> <br /> `ಗಡಿಭಾಗದಲ್ಲಿ ಸಾಹಿತ್ಯದ ರುಚಿ ತೋರಿಸಲು ಪುಸ್ತಕ ಮಳಿಗೆ ಹಾಕಿದ್ದೇವೆ. ಕೇವಲ ಲಾಭವೊಂದೇ ಮುಖ್ಯವಲ್ಲ. ಸಾಹಿತ್ಯದ ಅಭಿರುಚಿ ಮೂಡಿಸುವ ಉದ್ದೇಶವನ್ನೂ ನಾವು ಹೊಂದಿದೆ. ಸಾಹಿತ್ಯಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ಬಂದರೆ 3-4 ತಿಂಗಳ ಕಾಲ ಇಲ್ಲಿಯೇ ಇರುತ್ತೇವೆ~ ಎನ್ನುತ್ತಾರೆ ಯೂನಿವರ್ಸಲ್ ಬುಕ್ ಸೆಂಟರ್ನ ಭೂಪೇಶ ಪಾಲನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>