<p>ನವದೆಹಲಿ (ಪಿಟಿಐ): ಕಪ್ಪುಹಣ ಮತ್ತು ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆಗಳನ್ನು ಗಡುವಿನೊಳಗೆ ಈಡೇರಿಸದೇ ಇದ್ದಲ್ಲಿ ರಾಷ್ಟ್ರಪತಿಗಳ ಬಾಗಿಲು ಬಡಿದು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಯೋಗ ಗುರು ರಾಮದೇವ್ ಅವರು ತಮ್ಮ ನಿರಶನದ ಮೂರನೇ ದಿನವಾದ ಶನಿವಾರ ಎಚ್ಚರಿಕೆ ನೀಡಿದರು.<br /> <br /> ಗುರುವಾರ ರಾಮಲೀಲಾ ಮೈದಾನದಲ್ಲಿ ಮೂರು ದಿನಗಳ ನಿರಶನ ಆರಂಭಿಸುವ ವೇಳೆಯಲ್ಲಿ ತಾವು ಪ್ರಸ್ತಾಪಿಸಿದ ವಿಷಯಗಳನ್ನು ಇತ್ಯರ್ಥ ಪಡಿಸಲು ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದರು.<br /> <br /> ~ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ನಿರ್ಧಾರಕ್ಕಾಗಿ ಈದಿನ ಸಂಜೆಯವರೆಗೆ ನಾವು ಕಾಯುತ್ತೇವೆ. ಸಂಜೆಯ ವೇಳೆಗೆ ನಾವು ನೀಡಿದ್ದ ಗಡುವು ಮುಗಿಯುತ್ತದೆ. ಈ ಅವಧಿ ಮುಗಿದ ಬಳಿಕ ಇದೇ ರಾಮಲೀಲಾ ಮೈದಾನದಿಂದ ಗರ್ಜನೆ ಮೊಳಗುತ್ತದೆ~ ಎಂದು ಯೋಗಗುರು ಹೇಳಿದರು.<br /> <br /> ~ಈವರೆಗೆ ನಾವು ಯಾರದ್ದೇ ಹೆಸರುಗಳನ್ನೂ ಹೇಳುತ್ತಿಲ್ಲ. ಆದರೆ ಗಡುವು ಮುಗಿದ ಬಳಿಕ ಈ ದೇಶದ ಸಂಪತ್ತು ಕೊಳ್ಳೆ ಹೊಡೆಯುವ ಕೆಲಸದಲ್ಲಿ ತಪ್ಪು ಎಸಗುತ್ತಿರುವವರ ಹೆಸರುಗಳನ್ನು ಹೇಳುತ್ತೇವೆ~ ಎಂದು ಈದಿನ ಬೆಳಗ್ಗೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು.<br /> <br /> ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ನಿಕಟವರ್ತಿಗಳ ಜೊತೆಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು ಸರ್ಕಾರದ ಮೇಲೆ ಒತ್ತಡ ತರಲು ಸಂಸತ್ ಸದಸ್ಯರು ಮತ್ತು ಗ್ರಾಮ ಸಭೆಗಳಿಂದ ಸಂಗ್ರಹಿಸಿದ ಬೆಂಬಲ ಪತ್ರಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದರು.<br /> <br /> ~ನಾವು 1,25 ಲಕ್ಷ ಗ್ರಾಮಸಭೆಗಳನ್ನು ಸಂಪರ್ಕಿಸಿದ್ದು ಅವುಗಳ ಬೆಂಬಲ ಪತ್ರ ಸಂಗ್ರಹಿಸಿದ್ದೇವೆ. 225 ಮಂದಿ ಸಂಸತ್ ಸದಸ್ಯರಿಂದಲೂ ಬೆಂಬಲ ಪತ್ರಗಳು ನಮಗೆ ತಲುಪಿವೆ. ಈ ಬೆಂಬಲ ಪತ್ರಗಳನ್ನು ನಾವು ರಾಷ್ಟಪತಿ ಬಳಿಗೆ ಒಯ್ಯುತ್ತೇವೆ. ಕೆಲಸ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಬೀರಲು ನಾವು ರಾಷ್ಟಪತಿಯವನ್ನು ಒತ್ತಾಯಿಸುತ್ತೇವೆ~ ಎಂದು ಅವರು ನುಡಿದರು.<br /> <br /> ~ಹಲವು ಮಂದಿ ಕಾಂಗ್ರೆಸ್ ಸಂಸತ್ ಸದಸ್ಯರ ಬೆಂಬಲವೂ ನಮಗಿದೆ. ಆದರೆ ಪಕ್ಷದಿಂದ ವಜಾ ಮಾಡಬಹುದೆಂಬ ಭೀತಿಯಿಂದ ಲಿಖಿತ ಬೆಂಬಲ ನೀಡಲು ಅವರು ಹಿಂಜರಿದಿದ್ದಾರೆ~ ಎಂದು ರಾಮದೇವ್ ಪ್ರತಿಪಾದಿಸಿದರು.<br /> <br /> ~ಕಪ್ಪು ಹಣವನ್ನು ಹಿಂದಕ್ಕೆ ತರುವುದು ಹಾಗೂ ಪ್ರಬಲ ಲೋಕಪಾಲ ಮಸೂದೆ ರಚನೆ ಕುರಿತು ಸರ್ಕಾರದಿಂದ ದೃಢ ಕ್ರಮದ ನಿರ್ಧಾರ ಹೊರಬೀಳುವವರೆಗೆ ನಾನು ರಾಮಲೀಲಾ ಮೈದಾನವನ್ನು ಬಿಡುವುದಿಲ್ಲ. ಸರ್ಕಾರ ಇಂತಹ ನಿರ್ಧಾರ ಕೈಗೊಂಡ ಬಳಿಕವೇ ರಾಮಲೀಲಾ ಮೈದಾನದಿಂದ ಹೊರಡುತ್ತೇನೆ~ ಎಂದು ರಾಮದೇವ್ ಘೋಷಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಕಪ್ಪುಹಣ ಮತ್ತು ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆಗಳನ್ನು ಗಡುವಿನೊಳಗೆ ಈಡೇರಿಸದೇ ಇದ್ದಲ್ಲಿ ರಾಷ್ಟ್ರಪತಿಗಳ ಬಾಗಿಲು ಬಡಿದು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಯೋಗ ಗುರು ರಾಮದೇವ್ ಅವರು ತಮ್ಮ ನಿರಶನದ ಮೂರನೇ ದಿನವಾದ ಶನಿವಾರ ಎಚ್ಚರಿಕೆ ನೀಡಿದರು.<br /> <br /> ಗುರುವಾರ ರಾಮಲೀಲಾ ಮೈದಾನದಲ್ಲಿ ಮೂರು ದಿನಗಳ ನಿರಶನ ಆರಂಭಿಸುವ ವೇಳೆಯಲ್ಲಿ ತಾವು ಪ್ರಸ್ತಾಪಿಸಿದ ವಿಷಯಗಳನ್ನು ಇತ್ಯರ್ಥ ಪಡಿಸಲು ಸರ್ಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದರು.<br /> <br /> ~ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ನಿರ್ಧಾರಕ್ಕಾಗಿ ಈದಿನ ಸಂಜೆಯವರೆಗೆ ನಾವು ಕಾಯುತ್ತೇವೆ. ಸಂಜೆಯ ವೇಳೆಗೆ ನಾವು ನೀಡಿದ್ದ ಗಡುವು ಮುಗಿಯುತ್ತದೆ. ಈ ಅವಧಿ ಮುಗಿದ ಬಳಿಕ ಇದೇ ರಾಮಲೀಲಾ ಮೈದಾನದಿಂದ ಗರ್ಜನೆ ಮೊಳಗುತ್ತದೆ~ ಎಂದು ಯೋಗಗುರು ಹೇಳಿದರು.<br /> <br /> ~ಈವರೆಗೆ ನಾವು ಯಾರದ್ದೇ ಹೆಸರುಗಳನ್ನೂ ಹೇಳುತ್ತಿಲ್ಲ. ಆದರೆ ಗಡುವು ಮುಗಿದ ಬಳಿಕ ಈ ದೇಶದ ಸಂಪತ್ತು ಕೊಳ್ಳೆ ಹೊಡೆಯುವ ಕೆಲಸದಲ್ಲಿ ತಪ್ಪು ಎಸಗುತ್ತಿರುವವರ ಹೆಸರುಗಳನ್ನು ಹೇಳುತ್ತೇವೆ~ ಎಂದು ಈದಿನ ಬೆಳಗ್ಗೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು.<br /> <br /> ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ನಿಕಟವರ್ತಿಗಳ ಜೊತೆಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು ಸರ್ಕಾರದ ಮೇಲೆ ಒತ್ತಡ ತರಲು ಸಂಸತ್ ಸದಸ್ಯರು ಮತ್ತು ಗ್ರಾಮ ಸಭೆಗಳಿಂದ ಸಂಗ್ರಹಿಸಿದ ಬೆಂಬಲ ಪತ್ರಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದರು.<br /> <br /> ~ನಾವು 1,25 ಲಕ್ಷ ಗ್ರಾಮಸಭೆಗಳನ್ನು ಸಂಪರ್ಕಿಸಿದ್ದು ಅವುಗಳ ಬೆಂಬಲ ಪತ್ರ ಸಂಗ್ರಹಿಸಿದ್ದೇವೆ. 225 ಮಂದಿ ಸಂಸತ್ ಸದಸ್ಯರಿಂದಲೂ ಬೆಂಬಲ ಪತ್ರಗಳು ನಮಗೆ ತಲುಪಿವೆ. ಈ ಬೆಂಬಲ ಪತ್ರಗಳನ್ನು ನಾವು ರಾಷ್ಟಪತಿ ಬಳಿಗೆ ಒಯ್ಯುತ್ತೇವೆ. ಕೆಲಸ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಬೀರಲು ನಾವು ರಾಷ್ಟಪತಿಯವನ್ನು ಒತ್ತಾಯಿಸುತ್ತೇವೆ~ ಎಂದು ಅವರು ನುಡಿದರು.<br /> <br /> ~ಹಲವು ಮಂದಿ ಕಾಂಗ್ರೆಸ್ ಸಂಸತ್ ಸದಸ್ಯರ ಬೆಂಬಲವೂ ನಮಗಿದೆ. ಆದರೆ ಪಕ್ಷದಿಂದ ವಜಾ ಮಾಡಬಹುದೆಂಬ ಭೀತಿಯಿಂದ ಲಿಖಿತ ಬೆಂಬಲ ನೀಡಲು ಅವರು ಹಿಂಜರಿದಿದ್ದಾರೆ~ ಎಂದು ರಾಮದೇವ್ ಪ್ರತಿಪಾದಿಸಿದರು.<br /> <br /> ~ಕಪ್ಪು ಹಣವನ್ನು ಹಿಂದಕ್ಕೆ ತರುವುದು ಹಾಗೂ ಪ್ರಬಲ ಲೋಕಪಾಲ ಮಸೂದೆ ರಚನೆ ಕುರಿತು ಸರ್ಕಾರದಿಂದ ದೃಢ ಕ್ರಮದ ನಿರ್ಧಾರ ಹೊರಬೀಳುವವರೆಗೆ ನಾನು ರಾಮಲೀಲಾ ಮೈದಾನವನ್ನು ಬಿಡುವುದಿಲ್ಲ. ಸರ್ಕಾರ ಇಂತಹ ನಿರ್ಧಾರ ಕೈಗೊಂಡ ಬಳಿಕವೇ ರಾಮಲೀಲಾ ಮೈದಾನದಿಂದ ಹೊರಡುತ್ತೇನೆ~ ಎಂದು ರಾಮದೇವ್ ಘೋಷಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>