<p><strong>ಕಠ್ಮಂಡು (ಪಿಟಿಐ)</strong>: 67ನೇ ಗಣರಾಜ್ಯೋತ್ಸವದ ಅಂಗವಾಗಿ ಭಾರತವು ನೆರೆಯ ನೇಪಾಳಕ್ಕೆ 40 ಆಂಬುಲೆನ್ಸ್ಗಳು ಹಾಗೂ ಎಂಟು ಬಸ್ಗಳನ್ನು ಕೊಡುಗೆಯಾಗಿ ನೀಡಿದೆ.</p>.<p>ಇಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಈ ವಾಹನಗಳನ್ನು ಹಸ್ತಾಂತರಿಸಿದರು.</p>.<p>ಭಾರತದ ರಾಯಭಾರಿ ರಂಜಿತ್ ರೇ, ಅವರು 33 ಅಂಬುಲೆನ್ಸ್ಗಳು ಹಾಗೂ ಆರು ಬಸ್ಗಳ ಕೀಲಿಕೈಗಳನ್ನು ವಿವಿಧ ದತ್ತಿ ಸಂಸ್ಥೆಗಳು ಹಾಗೂ ಶಾಲೆಗಳಿಗೆ ಹಸ್ತಾಂತರ ಮಾಡಿದರು.</p>.<p>ಇನ್ಹುಳಿದ ಏಳು ಅಂಬುಲೆನ್ಸ್ಗಳು ಹಾಗೂ ಎರಡು ಬಸ್ಗಳನ್ನು ನೇಪಾಳದ ಬಿರ್ಗುಂಜ್ನಲ್ಲಿರುವ ಭಾರತದ ರಾಜತಾಂತ್ರಿಕ ಅಧಿಕಾರಿ ವಿವಿಧ ಸಂಸ್ಥೆಗಳಿಗೆ ಹಸ್ತಾಂತರಿಸಿದರು.</p>.<p>ಪುಸ್ತಕ ವಿತರಣೆ: ಇದೇ ವೇಳೆ ನೇಪಾಳದ ಶಾಲೆ ಹಾಗೂ ತರಬೇತಿ ಸಂಸ್ಥೆಗಳ 52 ಗ್ರಂಥಾಲಯಗಳಿಗೆ ಪುಸಕ್ತಗಳ ವಿತರಣೆಯೂ ನಡೆಯಿತು.</p>.<p>ರಾಜತಾಂತ್ರಿಕ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮ ವಲಯ ಪ್ರಮುಖರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಸೇರಿದಂತೆ 2,500ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು (ಪಿಟಿಐ)</strong>: 67ನೇ ಗಣರಾಜ್ಯೋತ್ಸವದ ಅಂಗವಾಗಿ ಭಾರತವು ನೆರೆಯ ನೇಪಾಳಕ್ಕೆ 40 ಆಂಬುಲೆನ್ಸ್ಗಳು ಹಾಗೂ ಎಂಟು ಬಸ್ಗಳನ್ನು ಕೊಡುಗೆಯಾಗಿ ನೀಡಿದೆ.</p>.<p>ಇಲ್ಲಿನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಈ ವಾಹನಗಳನ್ನು ಹಸ್ತಾಂತರಿಸಿದರು.</p>.<p>ಭಾರತದ ರಾಯಭಾರಿ ರಂಜಿತ್ ರೇ, ಅವರು 33 ಅಂಬುಲೆನ್ಸ್ಗಳು ಹಾಗೂ ಆರು ಬಸ್ಗಳ ಕೀಲಿಕೈಗಳನ್ನು ವಿವಿಧ ದತ್ತಿ ಸಂಸ್ಥೆಗಳು ಹಾಗೂ ಶಾಲೆಗಳಿಗೆ ಹಸ್ತಾಂತರ ಮಾಡಿದರು.</p>.<p>ಇನ್ಹುಳಿದ ಏಳು ಅಂಬುಲೆನ್ಸ್ಗಳು ಹಾಗೂ ಎರಡು ಬಸ್ಗಳನ್ನು ನೇಪಾಳದ ಬಿರ್ಗುಂಜ್ನಲ್ಲಿರುವ ಭಾರತದ ರಾಜತಾಂತ್ರಿಕ ಅಧಿಕಾರಿ ವಿವಿಧ ಸಂಸ್ಥೆಗಳಿಗೆ ಹಸ್ತಾಂತರಿಸಿದರು.</p>.<p>ಪುಸ್ತಕ ವಿತರಣೆ: ಇದೇ ವೇಳೆ ನೇಪಾಳದ ಶಾಲೆ ಹಾಗೂ ತರಬೇತಿ ಸಂಸ್ಥೆಗಳ 52 ಗ್ರಂಥಾಲಯಗಳಿಗೆ ಪುಸಕ್ತಗಳ ವಿತರಣೆಯೂ ನಡೆಯಿತು.</p>.<p>ರಾಜತಾಂತ್ರಿಕ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮ ವಲಯ ಪ್ರಮುಖರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಸೇರಿದಂತೆ 2,500ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>