<p><strong>ಹುಬ್ಬಳ್ಳಿ:</strong> ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಈ ಬಾರಿ ಸೋಮವಾರ ಬೆಳಿಗ್ಗೆ 10 ಗಂಟೆಯವರೆಗೂ ಮುಂದುವರಿದು ದಾಖಲೆಯಾಗಿದೆ. ಪ್ರತಿ ವರ್ಷ ಬೆಳಿಗ್ಗೆ ಆರರಿಂದ ಏಳು ಗಂಟೆಯೊಳಗೆ ಗಣೇಶ ಮೂರ್ತಿಗಳ ವಿಸರ್ಜನೆ ಅಂತ್ಯಗೊಳ್ಳುತ್ತಿತ್ತು. <br /> <br /> ಆದರೆ ಈ ಬಾರಿ ಬೆಳಿಗ್ಗೆ 10 ಗಂಟೆಯವರೆಗೆ ವಿಸರ್ಜನೆ ಮುಂದುವರಿಯಿತು. `ಇದಕ್ಕೆ ಧ್ವನಿವರ್ಧಕದಲ್ಲಿಯ ಅಬ್ಬರದ ಹಾಡಿಗೆ ಮೆಲ್ಲಗೆ ಸಾಗುವ ಮೆರವಣಿಗೆಯೇ ಕಾರಣ. ಧ್ವನಿವರ್ಧಕದ ಹಾಡುಗಳಿಗೆ ಹುಚ್ಚೆದ್ದು ಕುಣಿಯವವರಿಗೆ ಲೆಕ್ಕವಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು. <br /> <br /> ಮುಖ್ಯವಾಗಿ ಹುಬ್ಬಳ್ಳಿಯ ಗಣೇಶೋತ್ಸವ ಇನ್ನಷ್ಟು ಸುಂದರವಾಗಿ, ವಿಶಿಷ್ಟವಾಗಿ ಆಚರಿಸಬೇಕೆಂದರೆ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡು, ಎಲ್ಲ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಗಳ ಪದಾಧಿಕಾರಿಗಳು ಸೇರಿ ಸಭೆ ನಡೆಸಬೇಕು. <br /> <br /> ಈ ಸಭೆ ನವೆಂಬರ್ ಅಥವಾ ಡಿಸೆಂಬರ್ನಲ್ಲಿಯೇ ನಡೆಯಬೇಕು. ಇದರಿಂದ ಇನ್ನಷ್ಟು ವ್ಯವಸ್ಥಿತವಾಗಿ ಗಣೇಶೋತ್ಸವ ನಡೆಸಲು ಸಾಧ್ಯವಾಗುತ್ತದೆ~ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಸಲಹೆ ನೀಡಿದರು. <br /> <br /> `ಗಣೇಶ ಮೂರ್ತಿಗಳ ಮೆರವಣಿಗೆಗೆ ಮುನ್ನ ನಡೆಯುವ ಕಾರ್ಯಕ್ರಮಗಳು ಸಂಕ್ಷಿಪ್ತವಾಗಬೇಕು. ಪ್ರತಿ ವರ್ಷ ತಡವಾಗುತ್ತದೆ. ಇದಕ್ಕಾಗಿ ಮೊದಲೇ ಯೋಜಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕು~ ಎನ್ನುವ ಕಿವಿಮಾತು ಹೇಳಿದರು ಮರಾಠಾಗಲ್ಲಿಯ ಎನ್.ಎಸ್. ಮೆಹರವಾಡೆ. <br /> <br /> <strong>ಕಳಚಿದ ಪೆಂಡಾಲ್:</strong> ಗಣೇಶೋತ್ಸವ ಮುಗಿದ ಪರಿಣಾಮ ನಗರದಲ್ಲಿ ಹಾಕಲಾಗಿದ್ದ ಪೆಂಡಾಲುಗಳನ್ನು ಬಿಚ್ಚುವ ಕಾರ್ಯ ಸೋಮವಾರ ನಡೆಯಿತು. ಸ್ತಬ್ಧಚಿತ್ರಗಳನ್ನು ವಾಹನಗಳಲ್ಲಿ ತುಂಬಿಸಿ ಕಳಿಸಲಾಯಿತು. ಈಮೂಲಕ ಪೆಂಡಾಲುಗಳನ್ನು ಆವರಿಸಿದ್ದ ಜಾಗ ತೆರವುಗೊಂಡಂತಾಯಿತು. <br /> <br /> ಸಾರ್ವಜನಿಕರನ್ನು ಹೆಚ್ಚು ಆಕರ್ಷಿಸಿದ್ದ ಶಿಂಪಿಗಲ್ಲಿಯ ಅನಂತ ಪದ್ಮನಾಭ ದೇವಸ್ಥಾನ ಮಾದರಿಯನ್ನು ಕೂಡಾ ಕಳಚಲಾಯಿತು. `ಒಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅನಂತ ಪದ್ಮನಾಭ ದೇವಸ್ಥಾನವನ್ನು, ಅದರೊಳಗೆ ವಜ್ರವೈಢರ್ಯ, ಚಿನ್ನಾಭರಣಗಳ ಮಾದರಿಯನ್ನು ರೂಪಿಸಲಾಗಿತ್ತು. <br /> <br /> ಜೊತೆಗೆ ಹಿನ್ನೆಲೆ ಸಂಗೀತ ಇದ್ದುದರಿಂದ ಪರಿಣಾಮಕಾರಿಯಾಗಿತ್ತು. ಇದನ್ನು ರಾಯಾಪುರದ ಇಸ್ಕಾನ್ನಲ್ಲಿ ಪ್ರತಿಷ್ಠಾಪಿಸಬೇಕೆಂದು ಕೇಳಿದ್ದಾರೆ. ಸದ್ಯದಲ್ಲೇ ಅಲ್ಲಿಗೆ ಇದನ್ನು ವರ್ಗಾಯಿಸಲಾಗುತ್ತದೆ~ ಎಂದು ವಿವರಿಸಿದರು ಅನಂತ ಪದ್ಮನಾಭ ದೇವಸ್ಥಾನದ ಮಾದರಿ ರೂಪಿಸಿದ ಕಲಾವಿದ ವಿಜಯ ದಾಂಡಗೆ.<br /> <br /> <strong>ಅವಶೇಷಗಳ ಹುಡುಕಾಟ: </strong>ಇಂದಿರಾ ಗಾಜಿನ ಮನೆಯ ಹಿಂದಿರುವ ಪಾಲಿಕೆ ಬಾವಿಯಲ್ಲಿ ವಿಸರ್ಜನೆಯಾದ ಗಣೇಶ ಮೂರ್ತಿಗಳ ಅವಶೇಷಗಳನ್ನು ಹುಡುಕುವ ಕೆಲಸ ಸೋಮವಾರ ನಡೆಯಿತು. ಇಬ್ಬರು ಬಾಲಕರು ಈಜಾಡುತ್ತಿದ್ದರೆ, ಉಳಿದವರು ಗಣೇಶ ಮೂರ್ತಿಗೆ ಬಳಸಿದ ಕಟ್ಟಿಗೆಯ ಪಳಿ ಮೊದಲಾದ ಉಪಯುಕ್ತ ವಸ್ತುಗಳಿಗಾಗಿ ಹುಡುಕಾಟ ನಡೆಸಿದರು. <br /> <br /> `ಗಣೇಶ ವಿಸರ್ಜನೆಯಾದ ನಂತರ ಪೊಲೀಸರ ಕಾವಲು ಇರುವುದಿಲ್ಲ. ಇದರಿಂದ ಬಾಲಕರು ಈಜಾಡುತ್ತಾರೆ. ಅಕಸ್ಮಾತ್ ಏನಾದರೂ ಅನಾಹುತ ಸಂಭವಿಸಿದರೆ ಹೊಣೆಗಾರರು ಯಾರು? ಇದನ್ನು ಪಾಲಿಕೆಯವರು ಗಮನಿಸಿ ವಿಸರ್ಜನೆಯ ಅವಶೇಷಗಳನ್ನು ಬೇರೆಡೆ ಸ್ಥಳಾಂತರಗೊಳ್ಳುವವರೆಗೆ ಗಮನ ವಹಿಸಬೇಕು. ಮುಖ್ಯವಾಗಿ ಬಾಲಕರು ಈಜುವುದನ್ನು ತಡೆಯಬೇಕು~ ಎಂದು ಬಾವಿ ಬಳಿ ಕುತೂಹಲಕ್ಕೆ ನಿಂತಿದ್ದ ಬಾಲಕೃಷ್ಣ ಹೊಸಮನಿ ಹೇಳಿದರು. <br /> <strong><br /> ರಾತ್ರಿ 10ರೊಳಗೆ ವಿಸರ್ಜನೆ: ಬಹುಮಾನ ವಿತರಣೆ</strong><br /> <strong>ಹುಬ್ಬಳ್ಳಿ:</strong> ಭಾನುವಾರ ರಾತ್ರಿ 10ರೊಳಗೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದ 9 ಸಾರ್ವಜನಿಕ ಗಜಾನನ ಉತ್ಸವ ಸಮಿತಿಗಳಿಗೆ ಹೂ-ಬಳ್ಳಿಯ ಗೆಳೆಯರ ಬಳಗದ ವತಿಯಿಂದ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು.<br /> <br /> ತೊರವಿಕಹಕ್ಕಲ, ವೀರಾಪುರ ಓಣಿ, ಕಂಚಗಾರ ಗಲ್ಲಿ, ಅರಳಿಕಟ್ಟಿ ಓಣಿ, ಹೊಸ ಮ್ಯಾದರ ಓಣಿ, ಸೊರಬತ್ ಮಠ ಗಲ್ಲಿ, ಬಾಬಾಸಾನ ಗಲ್ಲಿ, ಸರಾಫ ಗಟ್ಟಿ ಹಾಗೂ ಮೂರುಸಾವಿರಮಠ ಚೌಕ ಗಜಾನನ ಉತ್ಸವ ಸಮಿತಿಗಳಿಗೆ ಬಹುಮಾನಗಳನ್ನು ನೀಡಲಾಯಿತು. <br /> <br /> ಮುಖ್ಯ ಅತಿಥಿಗಳಾಗಿ ಎಸಿಪಿ ಎನ್.ಎಸ್. ಪಾಟೀಲ ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅಧ್ಯಕ್ಷತೆ ವಹಿಸಿದ್ದರು. ಹೂ-ಬಳ್ಳಿ ಗೆಳೆಯರ ಬಳಗದ ಅಧ್ಯಕ್ಷ ಭಾಸ್ಕರ ಎನ್. ಜಿತೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಯೋಜಕರಾದ ತಾಂಬಾರಾಮಜಿ ಪಟೇಲ್, ಆಂಜನಾ ಪಟೇಲ್, ಎಂ.ಎಸ್. ಪಾಟೀಲ, ಶರದ್ ಮಗಜಿ, ಗುರುನಾಥಸಾ ಬದ್ದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಈ ಬಾರಿ ಸೋಮವಾರ ಬೆಳಿಗ್ಗೆ 10 ಗಂಟೆಯವರೆಗೂ ಮುಂದುವರಿದು ದಾಖಲೆಯಾಗಿದೆ. ಪ್ರತಿ ವರ್ಷ ಬೆಳಿಗ್ಗೆ ಆರರಿಂದ ಏಳು ಗಂಟೆಯೊಳಗೆ ಗಣೇಶ ಮೂರ್ತಿಗಳ ವಿಸರ್ಜನೆ ಅಂತ್ಯಗೊಳ್ಳುತ್ತಿತ್ತು. <br /> <br /> ಆದರೆ ಈ ಬಾರಿ ಬೆಳಿಗ್ಗೆ 10 ಗಂಟೆಯವರೆಗೆ ವಿಸರ್ಜನೆ ಮುಂದುವರಿಯಿತು. `ಇದಕ್ಕೆ ಧ್ವನಿವರ್ಧಕದಲ್ಲಿಯ ಅಬ್ಬರದ ಹಾಡಿಗೆ ಮೆಲ್ಲಗೆ ಸಾಗುವ ಮೆರವಣಿಗೆಯೇ ಕಾರಣ. ಧ್ವನಿವರ್ಧಕದ ಹಾಡುಗಳಿಗೆ ಹುಚ್ಚೆದ್ದು ಕುಣಿಯವವರಿಗೆ ಲೆಕ್ಕವಿಲ್ಲ. ಇದಕ್ಕೆ ಕಡಿವಾಣ ಹಾಕಬೇಕು. <br /> <br /> ಮುಖ್ಯವಾಗಿ ಹುಬ್ಬಳ್ಳಿಯ ಗಣೇಶೋತ್ಸವ ಇನ್ನಷ್ಟು ಸುಂದರವಾಗಿ, ವಿಶಿಷ್ಟವಾಗಿ ಆಚರಿಸಬೇಕೆಂದರೆ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡು, ಎಲ್ಲ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಗಳ ಪದಾಧಿಕಾರಿಗಳು ಸೇರಿ ಸಭೆ ನಡೆಸಬೇಕು. <br /> <br /> ಈ ಸಭೆ ನವೆಂಬರ್ ಅಥವಾ ಡಿಸೆಂಬರ್ನಲ್ಲಿಯೇ ನಡೆಯಬೇಕು. ಇದರಿಂದ ಇನ್ನಷ್ಟು ವ್ಯವಸ್ಥಿತವಾಗಿ ಗಣೇಶೋತ್ಸವ ನಡೆಸಲು ಸಾಧ್ಯವಾಗುತ್ತದೆ~ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಗೌರವ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಸಲಹೆ ನೀಡಿದರು. <br /> <br /> `ಗಣೇಶ ಮೂರ್ತಿಗಳ ಮೆರವಣಿಗೆಗೆ ಮುನ್ನ ನಡೆಯುವ ಕಾರ್ಯಕ್ರಮಗಳು ಸಂಕ್ಷಿಪ್ತವಾಗಬೇಕು. ಪ್ರತಿ ವರ್ಷ ತಡವಾಗುತ್ತದೆ. ಇದಕ್ಕಾಗಿ ಮೊದಲೇ ಯೋಜಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕು~ ಎನ್ನುವ ಕಿವಿಮಾತು ಹೇಳಿದರು ಮರಾಠಾಗಲ್ಲಿಯ ಎನ್.ಎಸ್. ಮೆಹರವಾಡೆ. <br /> <br /> <strong>ಕಳಚಿದ ಪೆಂಡಾಲ್:</strong> ಗಣೇಶೋತ್ಸವ ಮುಗಿದ ಪರಿಣಾಮ ನಗರದಲ್ಲಿ ಹಾಕಲಾಗಿದ್ದ ಪೆಂಡಾಲುಗಳನ್ನು ಬಿಚ್ಚುವ ಕಾರ್ಯ ಸೋಮವಾರ ನಡೆಯಿತು. ಸ್ತಬ್ಧಚಿತ್ರಗಳನ್ನು ವಾಹನಗಳಲ್ಲಿ ತುಂಬಿಸಿ ಕಳಿಸಲಾಯಿತು. ಈಮೂಲಕ ಪೆಂಡಾಲುಗಳನ್ನು ಆವರಿಸಿದ್ದ ಜಾಗ ತೆರವುಗೊಂಡಂತಾಯಿತು. <br /> <br /> ಸಾರ್ವಜನಿಕರನ್ನು ಹೆಚ್ಚು ಆಕರ್ಷಿಸಿದ್ದ ಶಿಂಪಿಗಲ್ಲಿಯ ಅನಂತ ಪದ್ಮನಾಭ ದೇವಸ್ಥಾನ ಮಾದರಿಯನ್ನು ಕೂಡಾ ಕಳಚಲಾಯಿತು. `ಒಂಬತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಅನಂತ ಪದ್ಮನಾಭ ದೇವಸ್ಥಾನವನ್ನು, ಅದರೊಳಗೆ ವಜ್ರವೈಢರ್ಯ, ಚಿನ್ನಾಭರಣಗಳ ಮಾದರಿಯನ್ನು ರೂಪಿಸಲಾಗಿತ್ತು. <br /> <br /> ಜೊತೆಗೆ ಹಿನ್ನೆಲೆ ಸಂಗೀತ ಇದ್ದುದರಿಂದ ಪರಿಣಾಮಕಾರಿಯಾಗಿತ್ತು. ಇದನ್ನು ರಾಯಾಪುರದ ಇಸ್ಕಾನ್ನಲ್ಲಿ ಪ್ರತಿಷ್ಠಾಪಿಸಬೇಕೆಂದು ಕೇಳಿದ್ದಾರೆ. ಸದ್ಯದಲ್ಲೇ ಅಲ್ಲಿಗೆ ಇದನ್ನು ವರ್ಗಾಯಿಸಲಾಗುತ್ತದೆ~ ಎಂದು ವಿವರಿಸಿದರು ಅನಂತ ಪದ್ಮನಾಭ ದೇವಸ್ಥಾನದ ಮಾದರಿ ರೂಪಿಸಿದ ಕಲಾವಿದ ವಿಜಯ ದಾಂಡಗೆ.<br /> <br /> <strong>ಅವಶೇಷಗಳ ಹುಡುಕಾಟ: </strong>ಇಂದಿರಾ ಗಾಜಿನ ಮನೆಯ ಹಿಂದಿರುವ ಪಾಲಿಕೆ ಬಾವಿಯಲ್ಲಿ ವಿಸರ್ಜನೆಯಾದ ಗಣೇಶ ಮೂರ್ತಿಗಳ ಅವಶೇಷಗಳನ್ನು ಹುಡುಕುವ ಕೆಲಸ ಸೋಮವಾರ ನಡೆಯಿತು. ಇಬ್ಬರು ಬಾಲಕರು ಈಜಾಡುತ್ತಿದ್ದರೆ, ಉಳಿದವರು ಗಣೇಶ ಮೂರ್ತಿಗೆ ಬಳಸಿದ ಕಟ್ಟಿಗೆಯ ಪಳಿ ಮೊದಲಾದ ಉಪಯುಕ್ತ ವಸ್ತುಗಳಿಗಾಗಿ ಹುಡುಕಾಟ ನಡೆಸಿದರು. <br /> <br /> `ಗಣೇಶ ವಿಸರ್ಜನೆಯಾದ ನಂತರ ಪೊಲೀಸರ ಕಾವಲು ಇರುವುದಿಲ್ಲ. ಇದರಿಂದ ಬಾಲಕರು ಈಜಾಡುತ್ತಾರೆ. ಅಕಸ್ಮಾತ್ ಏನಾದರೂ ಅನಾಹುತ ಸಂಭವಿಸಿದರೆ ಹೊಣೆಗಾರರು ಯಾರು? ಇದನ್ನು ಪಾಲಿಕೆಯವರು ಗಮನಿಸಿ ವಿಸರ್ಜನೆಯ ಅವಶೇಷಗಳನ್ನು ಬೇರೆಡೆ ಸ್ಥಳಾಂತರಗೊಳ್ಳುವವರೆಗೆ ಗಮನ ವಹಿಸಬೇಕು. ಮುಖ್ಯವಾಗಿ ಬಾಲಕರು ಈಜುವುದನ್ನು ತಡೆಯಬೇಕು~ ಎಂದು ಬಾವಿ ಬಳಿ ಕುತೂಹಲಕ್ಕೆ ನಿಂತಿದ್ದ ಬಾಲಕೃಷ್ಣ ಹೊಸಮನಿ ಹೇಳಿದರು. <br /> <strong><br /> ರಾತ್ರಿ 10ರೊಳಗೆ ವಿಸರ್ಜನೆ: ಬಹುಮಾನ ವಿತರಣೆ</strong><br /> <strong>ಹುಬ್ಬಳ್ಳಿ:</strong> ಭಾನುವಾರ ರಾತ್ರಿ 10ರೊಳಗೆ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದ 9 ಸಾರ್ವಜನಿಕ ಗಜಾನನ ಉತ್ಸವ ಸಮಿತಿಗಳಿಗೆ ಹೂ-ಬಳ್ಳಿಯ ಗೆಳೆಯರ ಬಳಗದ ವತಿಯಿಂದ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು.<br /> <br /> ತೊರವಿಕಹಕ್ಕಲ, ವೀರಾಪುರ ಓಣಿ, ಕಂಚಗಾರ ಗಲ್ಲಿ, ಅರಳಿಕಟ್ಟಿ ಓಣಿ, ಹೊಸ ಮ್ಯಾದರ ಓಣಿ, ಸೊರಬತ್ ಮಠ ಗಲ್ಲಿ, ಬಾಬಾಸಾನ ಗಲ್ಲಿ, ಸರಾಫ ಗಟ್ಟಿ ಹಾಗೂ ಮೂರುಸಾವಿರಮಠ ಚೌಕ ಗಜಾನನ ಉತ್ಸವ ಸಮಿತಿಗಳಿಗೆ ಬಹುಮಾನಗಳನ್ನು ನೀಡಲಾಯಿತು. <br /> <br /> ಮುಖ್ಯ ಅತಿಥಿಗಳಾಗಿ ಎಸಿಪಿ ಎನ್.ಎಸ್. ಪಾಟೀಲ ಭಾಗವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಅಧ್ಯಕ್ಷತೆ ವಹಿಸಿದ್ದರು. ಹೂ-ಬಳ್ಳಿ ಗೆಳೆಯರ ಬಳಗದ ಅಧ್ಯಕ್ಷ ಭಾಸ್ಕರ ಎನ್. ಜಿತೂರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಯೋಜಕರಾದ ತಾಂಬಾರಾಮಜಿ ಪಟೇಲ್, ಆಂಜನಾ ಪಟೇಲ್, ಎಂ.ಎಸ್. ಪಾಟೀಲ, ಶರದ್ ಮಗಜಿ, ಗುರುನಾಥಸಾ ಬದ್ದಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>