<p><strong>ಬೆಂಗಳೂರು: </strong>ಅನುರಾ ರೋಹನ ಮತ್ತು ಎಸ್ಎಸ್ಪಿ ಚೌರಾಸಿಯ ತೋರಿದ ಉತ್ತಮ ಪ್ರದರ್ಶನದ ನೆರವಿನಿಂದ ಚೆನ್ನೈ ತಂಡ ಇಲ್ಲಿ ಆರಂಭವಾದ ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್ಷಿಪ್ನ ಮೊದಲ ದಿನ ಮುನ್ನಡೆ ಪಡೆದಿದೆ.<br /> <br /> ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್ನಲ್ಲಿ ಬುಧವಾರ ಅನುರಾ (68) ನಿಖರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಚೌರಾಸಿಯ ಸ್ಪರ್ಧೆ ಕೊನೆಗೊಳಿಸಲು 70 ಅವಕಾಶಗಳನ್ನು ಬಳಸಿಕೊಂಡರು. ಇದರಿಂದ ಚೆನ್ನೈ ತಂಡ (138) ಮುನ್ನಡೆಯನ್ನು ತನ್ನದಾಗಿಸಿಕೊಂಡಿತು.<br /> <br /> ಪುರವಂಕರ ಬೆಂಗಳೂರು, ಚಂಡೀಗಡ ಮತ್ತು ದೆಹಲಿ (139) ತಂಡಗಳು ಬಳಿಕದ ಸ್ಥಾನಗಳಲ್ಲಿವೆ. ಅನಿರ್ಬನ್ ಲಾಹಿರಿ (69) ಹಾಗೂ ಮಾನವ್ ಜೈನ್ (70) ಬೆಂಗಳೂರು ಪರ ಮಿಂಚಿನ ಪ್ರದರ್ಶನ ನೀಡಿದರು. <br /> ಚಂಡೀಗಡ ತಂಡದ ಪ್ರಭಾವಿ ಪ್ರದರ್ಶನಕ್ಕೆ ಕಾರಣರಾದದ್ದು ಹರೇಂದ್ರ ಪಿ ಗುಪ್ತಾ. ಅವರು ಸ್ಪರ್ಧೆ ಕೊನೆಗೊಳಿಸಲು 68 ಸ್ಟ್ರೋಕ್ಗಳನ್ನು ಬಳಸಿಕೊಂಡರು. ಈ ತಂಡದ ಇನ್ನೊಬ್ಬ ಸ್ಪರ್ಧಿ ಗಗನ್ಜೀತ್ ಭುಲ್ಲರ್ 71 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು.<br /> <br /> ಜೀವ್ ಮಿಲ್ಖಾ ಸಿಂಗ್ ಪ್ರತಿನಿಧಿಸುತ್ತಿರುವ ಶುಭ್ಕಾಮನ್ ನೋಯ್ಡಾ ತಂಡ (144) ಕೊನೆಯ ಸ್ಥಾನದಲ್ಲಿದೆ. ಜೀವ್ (71) ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಬೇಕಾದರೆ ನೋಯ್ಡಾ ತಂಡಕ್ಕೆ ಗುರುವಾರ ಕಠಿಣ ಪ್ರಯತ್ನ ನಡೆಸುವುದು ಅಗತ್ಯ. <br /> <br /> ಡಿಎಲ್ಎಫ್ ಗುಡಗಾಂವ್ ತಂಡ (142) ಕೂಡಾ ನಿರೀಕ್ಷಿತ ಹೋರಾಟ ತೋರಲಿಲ್ಲ. ಜ್ಯೋತಿ ರಾಂಧವ (70) ಹಾಗೂ ಹಿಮ್ಮತ್ ಸಿಂಗ್ ರಾಯ್ (72) ಲಯ ಕಂಡುಕೊಳ್ಳುವಲ್ಲಿ ವಿಫಲರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅನುರಾ ರೋಹನ ಮತ್ತು ಎಸ್ಎಸ್ಪಿ ಚೌರಾಸಿಯ ತೋರಿದ ಉತ್ತಮ ಪ್ರದರ್ಶನದ ನೆರವಿನಿಂದ ಚೆನ್ನೈ ತಂಡ ಇಲ್ಲಿ ಆರಂಭವಾದ ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್ಷಿಪ್ನ ಮೊದಲ ದಿನ ಮುನ್ನಡೆ ಪಡೆದಿದೆ.<br /> <br /> ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್ನಲ್ಲಿ ಬುಧವಾರ ಅನುರಾ (68) ನಿಖರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಚೌರಾಸಿಯ ಸ್ಪರ್ಧೆ ಕೊನೆಗೊಳಿಸಲು 70 ಅವಕಾಶಗಳನ್ನು ಬಳಸಿಕೊಂಡರು. ಇದರಿಂದ ಚೆನ್ನೈ ತಂಡ (138) ಮುನ್ನಡೆಯನ್ನು ತನ್ನದಾಗಿಸಿಕೊಂಡಿತು.<br /> <br /> ಪುರವಂಕರ ಬೆಂಗಳೂರು, ಚಂಡೀಗಡ ಮತ್ತು ದೆಹಲಿ (139) ತಂಡಗಳು ಬಳಿಕದ ಸ್ಥಾನಗಳಲ್ಲಿವೆ. ಅನಿರ್ಬನ್ ಲಾಹಿರಿ (69) ಹಾಗೂ ಮಾನವ್ ಜೈನ್ (70) ಬೆಂಗಳೂರು ಪರ ಮಿಂಚಿನ ಪ್ರದರ್ಶನ ನೀಡಿದರು. <br /> ಚಂಡೀಗಡ ತಂಡದ ಪ್ರಭಾವಿ ಪ್ರದರ್ಶನಕ್ಕೆ ಕಾರಣರಾದದ್ದು ಹರೇಂದ್ರ ಪಿ ಗುಪ್ತಾ. ಅವರು ಸ್ಪರ್ಧೆ ಕೊನೆಗೊಳಿಸಲು 68 ಸ್ಟ್ರೋಕ್ಗಳನ್ನು ಬಳಸಿಕೊಂಡರು. ಈ ತಂಡದ ಇನ್ನೊಬ್ಬ ಸ್ಪರ್ಧಿ ಗಗನ್ಜೀತ್ ಭುಲ್ಲರ್ 71 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು.<br /> <br /> ಜೀವ್ ಮಿಲ್ಖಾ ಸಿಂಗ್ ಪ್ರತಿನಿಧಿಸುತ್ತಿರುವ ಶುಭ್ಕಾಮನ್ ನೋಯ್ಡಾ ತಂಡ (144) ಕೊನೆಯ ಸ್ಥಾನದಲ್ಲಿದೆ. ಜೀವ್ (71) ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಬೇಕಾದರೆ ನೋಯ್ಡಾ ತಂಡಕ್ಕೆ ಗುರುವಾರ ಕಠಿಣ ಪ್ರಯತ್ನ ನಡೆಸುವುದು ಅಗತ್ಯ. <br /> <br /> ಡಿಎಲ್ಎಫ್ ಗುಡಗಾಂವ್ ತಂಡ (142) ಕೂಡಾ ನಿರೀಕ್ಷಿತ ಹೋರಾಟ ತೋರಲಿಲ್ಲ. ಜ್ಯೋತಿ ರಾಂಧವ (70) ಹಾಗೂ ಹಿಮ್ಮತ್ ಸಿಂಗ್ ರಾಯ್ (72) ಲಯ ಕಂಡುಕೊಳ್ಳುವಲ್ಲಿ ವಿಫಲರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>