<p><strong>ನವದೆಹಲಿ (ಪಿಟಿಐ</strong>): ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಯಬಾ ಜೊತೆ ಇಶ್ರತ್ ಜಹಾನ್ ಸಂರ್ಪಕ ಹೊಂದಿದ್ದರೆ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಗೃಹ ಸಚಿವಾಲಯವನ್ನು ಕೇಳಿದ್ದಾರೆ.<br /> <br /> `ಇಶ್ರತ್ ಜಹಾನ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರು ಎಂದು 26/11ರ ಮುಂಬೈ ಭಯೋತ್ಪಾದಕ ದಾಳಿ ಆರೋಪಿ ಡೇವಿಡ್ ಹೆಡ್ಲಿ ಹೇಳಿದ್ದಾನೆ. ಆದ್ದರಿಂದ ಈ ವಿಷಯವನ್ನು ಸ್ಪಷ್ಟಪಡಿಸಲು ಕೇಳಿರುವುದಾಗಿ' ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಭೇಟಿ ಬಳಿಕ ದಿಗ್ವಿಜಯ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಗುಪ್ತಚರ ಇಲಾಖೆ (ಐ.ಬಿ) ಮತ್ತು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ವಿಭಿನ್ನ ಹೇಳಿಕೆಗಳನ್ನು ನೀಡಿವೆ ಎಂದಿದ್ದಾರೆ.<br /> <br /> `ಎನ್ಐಎ ಒಂದು ತೆರನಾಗಿ ಹೇಳುತ್ತದೆ. ಐ.ಬಿ. ಮತ್ತೊಂದು ತೆರನಾಗಿ ಹೇಳುತ್ತದೆ. ಸಿಬಿಐ ಮಗದೊಂದು ಹೇಳುತ್ತದೆ.<br /> <br /> ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಸಂಸ್ಥೆಗಳ ನಡುವೆ ಸ್ಪಷ್ಟತೆ ಇರಬೇಕು. ಈ ಕುರಿತು ಮಾಧ್ಯಮ ಮೂಲಗಳು ತನಿಖೆ ನಡೆಸುತ್ತಿವೆ. ಅವುಗಳು ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ' ಎಂದು ಸಿಂಗ್ ಹೇಳಿದ್ದಾರೆ.<br /> <br /> `ದಾಳಿಯ ಹೊಣೆ ವಹಿಸಿಕೊಂಡಿದ್ದ ಇಶ್ರತ್ ಜಹಾನ್ ಮತ್ತು ಇತರರು ಎನ್ಕೌಂಟರ್ನಲ್ಲಿ ಸಾವನ್ನಪ್ಪಿರುವ ಕಾರಣ 2005ರಲ್ಲಿ ನಡೆಸಲು ಉದ್ದೇಶಿಸಿದ್ದ ಭಯೋತ್ಪಾದಕ ದಾಳಿ ವಿಫಲವಾಗಿರುವುದಾಗಿ ಲಷ್ಕರ್-ಎ-ತೈಯಬಾ ಕಮಾಂಡರ್ ಜಕಿ-ಉರ್-ರೆಹಮಾನ್ ತನಗೆ ತಿಳಿಸಿದ್ದ ಎಂದು 2010ರಲ್ಲಿ ಅಮೆರಿಕದ ವಶದಲ್ಲಿದ್ದ ಡೇವಿಡ್ ಹೆಡ್ಲಿ ಎನ್ಐಎಗೆ ತಿಳಿಸಿದ್ದ. ಈ ವಿಷಯ ಐ.ಬಿ ನೀಡಿದ್ದ ವರದಿಯಲ್ಲಿಯೂ ಇತ್ತು. ಈ ಕುರಿತ ದಾಖಲೆಗಳು ಕೆಲ ಮಾಧ್ಯಮಗಳಿಗೂ ಲಭ್ಯವಾಗಿದ್ದವು. ಆದರೆ, ಎನ್ಐಎ ನೀಡಿದ ವರದಿಯಲ್ಲಿ ಇಶ್ರತ್ಗೆ ಸಂಬಂಧಿಸಿದ ಎರಡು ಪ್ಯಾರಾಗಳು ನಾಪತ್ತೆಯಾಗಿದ್ದವು' ಎಂದು ದಿಗ್ವಿಜಯ್ ತಿಳಿಸಿದ್ದಾರೆ.<br /> <br /> `26/11 ಮುಂಬೈ ದಾಳಿ ಹೊರತುಪಡಿಸಿದರೆ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಡ್ಲಿ ನೀಡಿರುವ ಹೇಳಿಕೆ ಕಾನೂನು ದೃಷ್ಟಿಯಿಂದ ಒಪ್ಪುವಂತಹದ್ದಲ್ಲ. ಎರಡನೇ ವ್ಯಕ್ತಿಯಿಂದ ಪಡೆದ ಮಾಹಿತಿಯನ್ನು ಆಧರಿಸಿ ಸಾಕ್ಷಿಯು ನೀಡಿದ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಲಾಗುವುದು' ಎಂದು ಎನ್ಐಎ ಮೂಲಗಳು ತಿಳಿಸಿವೆ.<br /> <br /> `ಎಲ್ಇಟಿ ಹಾಗೂ ಇಶ್ರತ್ ನಡುವೆ ಸಂಪರ್ಕವಿತ್ತು ಎಂದು ಹೆಡ್ಲಿ ಎನ್ಐಎಗೆ ತಿಳಿಸಿದ್ದ ಎಂಬ ವರದಿಯನ್ನು ಪರಿಶೀಲಿಸುವಂತೆ ದಿಗ್ವಿಜಯ್ ಸಿಂಗ್ ಕೋರಿದ್ದಾರೆ. ಅದನ್ನು ಪರಿಶೀಲಿಸಲಾಗುವುದು' ಎಂದು ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.<br /> <br /> ಗುಜರಾತ್ನ ಅಹಮದಾಬಾದ್ನಲ್ಲಿ ಇಶ್ರತ್ ಜಹಾನ್ ಮತ್ತು ಇತರರನ್ನು ನಕಲಿ ಎನ್ಕೌಂಟರ್ನಲ್ಲಿ ಸಾಯಿಸಲಾಗಿತ್ತು ಎಂದು ಈಚೆಗೆ ಸಿಬಿಐ ಕೋರ್ಟ್ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ</strong>): ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಯಬಾ ಜೊತೆ ಇಶ್ರತ್ ಜಹಾನ್ ಸಂರ್ಪಕ ಹೊಂದಿದ್ದರೆ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಗೃಹ ಸಚಿವಾಲಯವನ್ನು ಕೇಳಿದ್ದಾರೆ.<br /> <br /> `ಇಶ್ರತ್ ಜಹಾನ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರು ಎಂದು 26/11ರ ಮುಂಬೈ ಭಯೋತ್ಪಾದಕ ದಾಳಿ ಆರೋಪಿ ಡೇವಿಡ್ ಹೆಡ್ಲಿ ಹೇಳಿದ್ದಾನೆ. ಆದ್ದರಿಂದ ಈ ವಿಷಯವನ್ನು ಸ್ಪಷ್ಟಪಡಿಸಲು ಕೇಳಿರುವುದಾಗಿ' ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಭೇಟಿ ಬಳಿಕ ದಿಗ್ವಿಜಯ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಗುಪ್ತಚರ ಇಲಾಖೆ (ಐ.ಬಿ) ಮತ್ತು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ವಿಭಿನ್ನ ಹೇಳಿಕೆಗಳನ್ನು ನೀಡಿವೆ ಎಂದಿದ್ದಾರೆ.<br /> <br /> `ಎನ್ಐಎ ಒಂದು ತೆರನಾಗಿ ಹೇಳುತ್ತದೆ. ಐ.ಬಿ. ಮತ್ತೊಂದು ತೆರನಾಗಿ ಹೇಳುತ್ತದೆ. ಸಿಬಿಐ ಮಗದೊಂದು ಹೇಳುತ್ತದೆ.<br /> <br /> ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಸಂಸ್ಥೆಗಳ ನಡುವೆ ಸ್ಪಷ್ಟತೆ ಇರಬೇಕು. ಈ ಕುರಿತು ಮಾಧ್ಯಮ ಮೂಲಗಳು ತನಿಖೆ ನಡೆಸುತ್ತಿವೆ. ಅವುಗಳು ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ' ಎಂದು ಸಿಂಗ್ ಹೇಳಿದ್ದಾರೆ.<br /> <br /> `ದಾಳಿಯ ಹೊಣೆ ವಹಿಸಿಕೊಂಡಿದ್ದ ಇಶ್ರತ್ ಜಹಾನ್ ಮತ್ತು ಇತರರು ಎನ್ಕೌಂಟರ್ನಲ್ಲಿ ಸಾವನ್ನಪ್ಪಿರುವ ಕಾರಣ 2005ರಲ್ಲಿ ನಡೆಸಲು ಉದ್ದೇಶಿಸಿದ್ದ ಭಯೋತ್ಪಾದಕ ದಾಳಿ ವಿಫಲವಾಗಿರುವುದಾಗಿ ಲಷ್ಕರ್-ಎ-ತೈಯಬಾ ಕಮಾಂಡರ್ ಜಕಿ-ಉರ್-ರೆಹಮಾನ್ ತನಗೆ ತಿಳಿಸಿದ್ದ ಎಂದು 2010ರಲ್ಲಿ ಅಮೆರಿಕದ ವಶದಲ್ಲಿದ್ದ ಡೇವಿಡ್ ಹೆಡ್ಲಿ ಎನ್ಐಎಗೆ ತಿಳಿಸಿದ್ದ. ಈ ವಿಷಯ ಐ.ಬಿ ನೀಡಿದ್ದ ವರದಿಯಲ್ಲಿಯೂ ಇತ್ತು. ಈ ಕುರಿತ ದಾಖಲೆಗಳು ಕೆಲ ಮಾಧ್ಯಮಗಳಿಗೂ ಲಭ್ಯವಾಗಿದ್ದವು. ಆದರೆ, ಎನ್ಐಎ ನೀಡಿದ ವರದಿಯಲ್ಲಿ ಇಶ್ರತ್ಗೆ ಸಂಬಂಧಿಸಿದ ಎರಡು ಪ್ಯಾರಾಗಳು ನಾಪತ್ತೆಯಾಗಿದ್ದವು' ಎಂದು ದಿಗ್ವಿಜಯ್ ತಿಳಿಸಿದ್ದಾರೆ.<br /> <br /> `26/11 ಮುಂಬೈ ದಾಳಿ ಹೊರತುಪಡಿಸಿದರೆ ಇತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಡ್ಲಿ ನೀಡಿರುವ ಹೇಳಿಕೆ ಕಾನೂನು ದೃಷ್ಟಿಯಿಂದ ಒಪ್ಪುವಂತಹದ್ದಲ್ಲ. ಎರಡನೇ ವ್ಯಕ್ತಿಯಿಂದ ಪಡೆದ ಮಾಹಿತಿಯನ್ನು ಆಧರಿಸಿ ಸಾಕ್ಷಿಯು ನೀಡಿದ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಲಾಗುವುದು' ಎಂದು ಎನ್ಐಎ ಮೂಲಗಳು ತಿಳಿಸಿವೆ.<br /> <br /> `ಎಲ್ಇಟಿ ಹಾಗೂ ಇಶ್ರತ್ ನಡುವೆ ಸಂಪರ್ಕವಿತ್ತು ಎಂದು ಹೆಡ್ಲಿ ಎನ್ಐಎಗೆ ತಿಳಿಸಿದ್ದ ಎಂಬ ವರದಿಯನ್ನು ಪರಿಶೀಲಿಸುವಂತೆ ದಿಗ್ವಿಜಯ್ ಸಿಂಗ್ ಕೋರಿದ್ದಾರೆ. ಅದನ್ನು ಪರಿಶೀಲಿಸಲಾಗುವುದು' ಎಂದು ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.<br /> <br /> ಗುಜರಾತ್ನ ಅಹಮದಾಬಾದ್ನಲ್ಲಿ ಇಶ್ರತ್ ಜಹಾನ್ ಮತ್ತು ಇತರರನ್ನು ನಕಲಿ ಎನ್ಕೌಂಟರ್ನಲ್ಲಿ ಸಾಯಿಸಲಾಗಿತ್ತು ಎಂದು ಈಚೆಗೆ ಸಿಬಿಐ ಕೋರ್ಟ್ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>