<p><strong>ತಿಪಟೂರು:</strong> ಈಗಿನ ಕಾಲೇಜು ಹುಡುಗರಿಗೆ ಸಾಮಾಜಿಕ ಕಾಳಜಿ ಇಲ್ಲ ಎಂಬ ಆರೋಪ ಸುಳ್ಳು ಮಾಡುವಂತೆ ಗೆಳೆಯನ ಚಿಕಿತ್ಸೆಗಾಗಿ ಕೆಲ ಸ್ನೇಹಿತರು ಬೀದಿ ಅಲೆದು ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಾರೆ.<br /> <br /> ನಗರದ ಪಲ್ಲಾಗಟ್ಟಿ ಅಡವಪ್ಪ ಪದವಿ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಪುಟ್ಟರಂಗ ಫೆ.24ರಂದು ಕಾಲೇಜು ಮುಂದೆ ರಸ್ತೆ ದಾಟುವಾಗ ಟಾಟಾ ಮ್ಯೋಜಿಕ್ ವಾಹನ ಡಿಕ್ಕಿ ಹೊಡೆದಿತ್ತು. ತಲೆ, ಕೈಕಾಲುಗಳಿಗೆ ತೀವ್ರ ಗಾಯಗೊಂಡಿದ್ದ ಪುಟ್ಟರಂಗ ಸಾವು-ಬದುಕಿನ ನಡುವೆ ಒದ್ದಾಡುತ್ತಿದ್ದರು. ಇಲ್ಲಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು.<br /> <br /> ಅರಸೀಕೆರೆ ತಾಲ್ಲೂಕು ಜೆ.ಸಿ.ಪುರ ಸಮೀಪದ ಚಿಕ್ಕಹಲ್ಕೂರು ಗ್ರಾಮದ ಪುಟ್ಟರಂಗ ಅವರ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ. ತಂದೆ ಕೃಷ್ಣಪ್ಪ ಬೆಂಗಳೂರಿನಲ್ಲಿ ಅಷ್ಟಿಷ್ಟು ದುಡಿಮೆ ಮಾಡಿ ಇದ್ದೊಬ್ಬ ಮಗನನ್ನು (ಮೂವರು ಪುತ್ರಿಯರು) ಓದಿಸುತ್ತಿದ್ದರು.<br /> <br /> ಅಪಘಾತದಲ್ಲಿ ಅಸ್ವಸ್ಥಗೊಂಡ ಮಗನನ್ನು ನೋಡಲು ಬಂದಿದ್ದ ತಂದೆ ಕುಸಿದು ಬಿದ್ದಿದ್ದರು. ಮಾನಸಿಕವಾಗಿ ಆಘಾತಗೊಂಡಿದ್ದ ಅವರು ಇಂದಿಗೂ ಚೇತರಿಸಿಕೊಂಡಿಲ್ಲ. ತಾಯಿ ಅಸಹಾಯಕರಾಗಿ ದುಃಖದಲ್ಲಿ ಮುಳುಗಿದ್ದಾರೆ.<br /> <br /> ಪುಟ್ಟರಂಗ ಆಸ್ಪತ್ರೆ ಖರ್ಚು ಭರಿಸಲು ಸಂಬಂಧಿಕರಿಗೆ ಸಾಧ್ಯವಾಗುತ್ತಿಲ್ಲ. ಅಪಘಾತ ಮಾಡಿದ ವಾಹನವನ್ನು ನಗರ ಠಾಣೆಗೆ ತಂದು ನಿಲ್ಲಿಸಲಾಗಿದೆ ಹೊರತು ಮಾಲೀಕರಿಂದ ಬೇರ್ಯಾವುದೇ ನೆರವು ಸಿಕ್ಕಿಲ್ಲ.<br /> <br /> ಸ್ನೇಹಿತನ ಪರಿಸ್ಥಿತಿ ಅರಿತ ಗೆಳೆಯರು ನಗರದಲ್ಲಿ ಬೀದಿ ಬೀದಿ ಅಲೆದು ಸ್ನೇಹಿತನ ಸ್ಥಿತಿ ವಿವರಿಸಿ ಹಣ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ರೂ.30ಸಾವಿರ ಸಂಗ್ರಹಿಸಿದ್ದಾರೆ. <br /> <br /> ಚಿಕಿತ್ಸೆಗೆ ಅಷ್ಟು ಹಣ ಸಾಕಾಗದ್ದರಿಂದ ಸಂಗ್ರಹಣೆ ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳಾದ ವಿನಯ್, ರಾಜಶ್ರೀ, ಸಿಂಧು, ಮಂಜುನಾಥ್ ಮತ್ತಿತರರು ಈ ತಂಡದಲ್ಲಿದ್ದಾರೆ. ನೆರವು ನೀಡಲು ಇಚ್ಚಿಸುವರು 9900327817 ದೂರವಾಣಿ ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು:</strong> ಈಗಿನ ಕಾಲೇಜು ಹುಡುಗರಿಗೆ ಸಾಮಾಜಿಕ ಕಾಳಜಿ ಇಲ್ಲ ಎಂಬ ಆರೋಪ ಸುಳ್ಳು ಮಾಡುವಂತೆ ಗೆಳೆಯನ ಚಿಕಿತ್ಸೆಗಾಗಿ ಕೆಲ ಸ್ನೇಹಿತರು ಬೀದಿ ಅಲೆದು ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದಾರೆ.<br /> <br /> ನಗರದ ಪಲ್ಲಾಗಟ್ಟಿ ಅಡವಪ್ಪ ಪದವಿ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಪುಟ್ಟರಂಗ ಫೆ.24ರಂದು ಕಾಲೇಜು ಮುಂದೆ ರಸ್ತೆ ದಾಟುವಾಗ ಟಾಟಾ ಮ್ಯೋಜಿಕ್ ವಾಹನ ಡಿಕ್ಕಿ ಹೊಡೆದಿತ್ತು. ತಲೆ, ಕೈಕಾಲುಗಳಿಗೆ ತೀವ್ರ ಗಾಯಗೊಂಡಿದ್ದ ಪುಟ್ಟರಂಗ ಸಾವು-ಬದುಕಿನ ನಡುವೆ ಒದ್ದಾಡುತ್ತಿದ್ದರು. ಇಲ್ಲಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು.<br /> <br /> ಅರಸೀಕೆರೆ ತಾಲ್ಲೂಕು ಜೆ.ಸಿ.ಪುರ ಸಮೀಪದ ಚಿಕ್ಕಹಲ್ಕೂರು ಗ್ರಾಮದ ಪುಟ್ಟರಂಗ ಅವರ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನ. ತಂದೆ ಕೃಷ್ಣಪ್ಪ ಬೆಂಗಳೂರಿನಲ್ಲಿ ಅಷ್ಟಿಷ್ಟು ದುಡಿಮೆ ಮಾಡಿ ಇದ್ದೊಬ್ಬ ಮಗನನ್ನು (ಮೂವರು ಪುತ್ರಿಯರು) ಓದಿಸುತ್ತಿದ್ದರು.<br /> <br /> ಅಪಘಾತದಲ್ಲಿ ಅಸ್ವಸ್ಥಗೊಂಡ ಮಗನನ್ನು ನೋಡಲು ಬಂದಿದ್ದ ತಂದೆ ಕುಸಿದು ಬಿದ್ದಿದ್ದರು. ಮಾನಸಿಕವಾಗಿ ಆಘಾತಗೊಂಡಿದ್ದ ಅವರು ಇಂದಿಗೂ ಚೇತರಿಸಿಕೊಂಡಿಲ್ಲ. ತಾಯಿ ಅಸಹಾಯಕರಾಗಿ ದುಃಖದಲ್ಲಿ ಮುಳುಗಿದ್ದಾರೆ.<br /> <br /> ಪುಟ್ಟರಂಗ ಆಸ್ಪತ್ರೆ ಖರ್ಚು ಭರಿಸಲು ಸಂಬಂಧಿಕರಿಗೆ ಸಾಧ್ಯವಾಗುತ್ತಿಲ್ಲ. ಅಪಘಾತ ಮಾಡಿದ ವಾಹನವನ್ನು ನಗರ ಠಾಣೆಗೆ ತಂದು ನಿಲ್ಲಿಸಲಾಗಿದೆ ಹೊರತು ಮಾಲೀಕರಿಂದ ಬೇರ್ಯಾವುದೇ ನೆರವು ಸಿಕ್ಕಿಲ್ಲ.<br /> <br /> ಸ್ನೇಹಿತನ ಪರಿಸ್ಥಿತಿ ಅರಿತ ಗೆಳೆಯರು ನಗರದಲ್ಲಿ ಬೀದಿ ಬೀದಿ ಅಲೆದು ಸ್ನೇಹಿತನ ಸ್ಥಿತಿ ವಿವರಿಸಿ ಹಣ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ರೂ.30ಸಾವಿರ ಸಂಗ್ರಹಿಸಿದ್ದಾರೆ. <br /> <br /> ಚಿಕಿತ್ಸೆಗೆ ಅಷ್ಟು ಹಣ ಸಾಕಾಗದ್ದರಿಂದ ಸಂಗ್ರಹಣೆ ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳಾದ ವಿನಯ್, ರಾಜಶ್ರೀ, ಸಿಂಧು, ಮಂಜುನಾಥ್ ಮತ್ತಿತರರು ಈ ತಂಡದಲ್ಲಿದ್ದಾರೆ. ನೆರವು ನೀಡಲು ಇಚ್ಚಿಸುವರು 9900327817 ದೂರವಾಣಿ ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>