<p>`ಜಾದೂಗೂಡದಿಂದ ಬಂದೀತು ಗೋಗಿಯ ಪಾಶ~ ಎಂಬ ನಾಗೇಶ್ ಹೆಗಡೆ (ವಿಜ್ಞಾನ ವಿಶೇಷ ಸೆ. 8) ಗೋಗಿ ಗ್ರಾಮದ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಜಾಗೃತಿಯ ಸಂಕೇತವಾಗಿದೆ.<br /> <br /> ಯುರೇನಿಯಂ ಗಣಿಗಾರಿಕೆಯು ಯಾವ ರೀತಿ ನಡೆದಿದೆ. ಅದರ ಪರಿಣಾಮ ಏನು? ವಿಕಿರಣ ಸೋರಿಕೆಯಿಂದ ಆಗುವ ದುರಂತಗಳು ಹೇಗಿರುತ್ತೆ ಎನ್ನುವುದು ಇಲ್ಲಿನ ಜನಸಾಮಾನ್ಯರಿಗೆ ತಿಳಿದಿರುವುದ್ಲ್ಲಿಲ.<br /> <br /> ಗಣಿಗಾರಿಕೆಗೆ ಸಂಬಂಧಿಸಿದ ಯಾವ ಕಾರ್ಯಕ್ರಮವಾಗಲಿ, ಯೂ.ಸಿ.ಎಲ್. ಕಂಪೆನಿಯವರು ಹೇಳಿದ್ದೇ ಸರಿ ಎನ್ನುವಂತಾಗಿತ್ತು. ಇತ್ತ ಜನ ಸಾಮಾನ್ಯರಿಗೆ ಸಾಮಾಜಿಕ ಕಾರ್ಯಕ್ರಮವನ್ನು ಹೇಳಿ ಜನರ ಬಾಯಿ ಮುಚ್ಚಿಸುವಂತಾಗಿತ್ತು.<br /> <br /> ಆದರೆ ಸೆ. 10 ರಂದು ನಡೆದ ಸಭೆ ಅಸಿಸ್ಟೆಂಟ್ ಕಮೀಷನರ್ ಹಾಗೂ ಅನಂತ ಹೆಗಡೆಯವರು ಬಂದಾಗ `ಜಾದೂಗೂಡದಿಂದ ಬಂದೀತು ಗೋಗಿಯ ಪಾಶ~ ಎಂಬ ಲೇಖನ ಪ್ರತಿಯನ್ನು ಸುಮಾರು ಸಹಸ್ರ ಝರಾಕ್ಸ್ ಪ್ರತಿಗಳು ಹಿಡಿದು ಅವರ ಮುಂದೆ ಧ್ವನಿ ಎತ್ತಲು ಈ ಲೇಖನ ತುಂಬಾ ಸಹಕಾರಿಯಾಯಿತು.<br /> <br /> ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯುರೆನಿಯಂ ನಿಕ್ಷೇಪದ ಗಣಿಗಾರಿಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು ಮತ್ತು ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು. <br /> <br /> ಒಂದು ವೇಳೆ ದೇಶಕ್ಕೆ ಯುರೇನಿಯಂ ಉಪಯೋಗ ಇದ್ದು ಯಾವುದೇ ಕಾರಣಕ್ಕೆ ಈ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಆಗದೆ ಇದ್ದರೆ ನಮ್ಮ ಜೀವ ವೈವಿಧ್ಯಮಯ ದೃಷ್ಟಿಯಿಂದ ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ನಮ್ಮ ಊರು ಬೇರೊಂದು ಕಡೆ ಸ್ಥಳಾಂತರಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಜಾದೂಗೂಡದಿಂದ ಬಂದೀತು ಗೋಗಿಯ ಪಾಶ~ ಎಂಬ ನಾಗೇಶ್ ಹೆಗಡೆ (ವಿಜ್ಞಾನ ವಿಶೇಷ ಸೆ. 8) ಗೋಗಿ ಗ್ರಾಮದ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಜಾಗೃತಿಯ ಸಂಕೇತವಾಗಿದೆ.<br /> <br /> ಯುರೇನಿಯಂ ಗಣಿಗಾರಿಕೆಯು ಯಾವ ರೀತಿ ನಡೆದಿದೆ. ಅದರ ಪರಿಣಾಮ ಏನು? ವಿಕಿರಣ ಸೋರಿಕೆಯಿಂದ ಆಗುವ ದುರಂತಗಳು ಹೇಗಿರುತ್ತೆ ಎನ್ನುವುದು ಇಲ್ಲಿನ ಜನಸಾಮಾನ್ಯರಿಗೆ ತಿಳಿದಿರುವುದ್ಲ್ಲಿಲ.<br /> <br /> ಗಣಿಗಾರಿಕೆಗೆ ಸಂಬಂಧಿಸಿದ ಯಾವ ಕಾರ್ಯಕ್ರಮವಾಗಲಿ, ಯೂ.ಸಿ.ಎಲ್. ಕಂಪೆನಿಯವರು ಹೇಳಿದ್ದೇ ಸರಿ ಎನ್ನುವಂತಾಗಿತ್ತು. ಇತ್ತ ಜನ ಸಾಮಾನ್ಯರಿಗೆ ಸಾಮಾಜಿಕ ಕಾರ್ಯಕ್ರಮವನ್ನು ಹೇಳಿ ಜನರ ಬಾಯಿ ಮುಚ್ಚಿಸುವಂತಾಗಿತ್ತು.<br /> <br /> ಆದರೆ ಸೆ. 10 ರಂದು ನಡೆದ ಸಭೆ ಅಸಿಸ್ಟೆಂಟ್ ಕಮೀಷನರ್ ಹಾಗೂ ಅನಂತ ಹೆಗಡೆಯವರು ಬಂದಾಗ `ಜಾದೂಗೂಡದಿಂದ ಬಂದೀತು ಗೋಗಿಯ ಪಾಶ~ ಎಂಬ ಲೇಖನ ಪ್ರತಿಯನ್ನು ಸುಮಾರು ಸಹಸ್ರ ಝರಾಕ್ಸ್ ಪ್ರತಿಗಳು ಹಿಡಿದು ಅವರ ಮುಂದೆ ಧ್ವನಿ ಎತ್ತಲು ಈ ಲೇಖನ ತುಂಬಾ ಸಹಕಾರಿಯಾಯಿತು.<br /> <br /> ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಯುರೆನಿಯಂ ನಿಕ್ಷೇಪದ ಗಣಿಗಾರಿಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು ಮತ್ತು ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು. <br /> <br /> ಒಂದು ವೇಳೆ ದೇಶಕ್ಕೆ ಯುರೇನಿಯಂ ಉಪಯೋಗ ಇದ್ದು ಯಾವುದೇ ಕಾರಣಕ್ಕೆ ಈ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಆಗದೆ ಇದ್ದರೆ ನಮ್ಮ ಜೀವ ವೈವಿಧ್ಯಮಯ ದೃಷ್ಟಿಯಿಂದ ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ನಮ್ಮ ಊರು ಬೇರೊಂದು ಕಡೆ ಸ್ಥಳಾಂತರಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>