<p><strong>ಬೆಂಗಳೂರು:</strong> `ಕೌಶಲಪೂರ್ಣವಾಗಿ ಆಡಿ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಇದನ್ನು ರಾಹುಲ್ ದ್ರಾವಿಡ್ ಯಶಸ್ವಿಯಾಗಿ ಮಾಡಿದ್ದಾರೆ. ಇದರಿಂದ ಕ್ರಿಕೆಟ್ನ ಗೌರವವನ್ನೂ ಹೆಚ್ಚಿಸಿದ್ದಾರೆ~ ಎಂದು ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಶ್ಲಾಘಿಸಿದರು.<br /> <br /> `ವೆಸ್ಟ್ ಇಂಡೀಸ್, ಇಂಗ್ಲೆಂಡ್ ಪ್ರವಾಸದಲ್ಲಿ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಆದರೆ, ಆಸ್ಟ್ರೇಲಿಯಾದಲ್ಲಿ ವಿಫಲರಾಗಿದ್ದರು. ಏನೇ ಆಗಲಿ ಕರ್ನಾಟಕದ ಆಟಗಾರ ಇನ್ನೂ ಕೆಲ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇರಬೇಕಿತ್ತು~ ಎಂದು ಅವರು ಅಭಿಪ್ರಾಯ ಪಟ್ಟರು. <br /> <br /> ಈ ವಿಷಯವಾಗಿ ದ್ರಾವಿಡ್ ಬಳಿ ಮಾತನಾಡಿದ್ದೆ. ಆದರೆ, `ನಿವೃತ್ತಿ ನಿರ್ಧಾರವನ್ನು ನಾನು ಈಗಾಗಲೇ ತಗೆದುಕೊಂಡಿದ್ದೇನೆ. ಯುವ ಆಟಗಾರರಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ನನ್ನ ಬಯಕೆ~ ಎಂದು ಅವರು ಹೇಳಿದ್ದರು ಎನ್ನುವ ವಿಷಯವನ್ನು ವಿಶ್ವನಾಥ್ ತಿಳಿಸಿದರು.<br /> <br /> ಕ್ರಿಕೆಟ್ ಜಗತ್ತು ರಾಹುಲ್ ಆವರ ಆಟವನ್ನು `ಮಿಸ್~ ಮಾಡಿಕೊಳ್ಳುತ್ತಿದೆ. ದೀರ್ಘ ಅವಧಿ ದೇಶಕ್ಕಾಗಿ ಆಡಿದ್ದಾರೆ. ಆದರೂ ದೈಹಿಕವಾಗಿ ಫಿಟ್ ಆಗಿದ್ದಾರೆ. ಆಸೀಸ್ನಲ್ಲಿ ಪ್ರಬಲ ಬೌಲರ್ಗಳ ಸವಾಲನ್ನು ಎದುರಿಸಿದ ಕಾರಣ ಅಲ್ಲಿ ವೈಫಲ್ಯ ಅನುಭವಿಸಿದರು ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಕೌಶಲಪೂರ್ಣವಾಗಿ ಆಡಿ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಇದನ್ನು ರಾಹುಲ್ ದ್ರಾವಿಡ್ ಯಶಸ್ವಿಯಾಗಿ ಮಾಡಿದ್ದಾರೆ. ಇದರಿಂದ ಕ್ರಿಕೆಟ್ನ ಗೌರವವನ್ನೂ ಹೆಚ್ಚಿಸಿದ್ದಾರೆ~ ಎಂದು ಮಾಜಿ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಶ್ಲಾಘಿಸಿದರು.<br /> <br /> `ವೆಸ್ಟ್ ಇಂಡೀಸ್, ಇಂಗ್ಲೆಂಡ್ ಪ್ರವಾಸದಲ್ಲಿ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಆದರೆ, ಆಸ್ಟ್ರೇಲಿಯಾದಲ್ಲಿ ವಿಫಲರಾಗಿದ್ದರು. ಏನೇ ಆಗಲಿ ಕರ್ನಾಟಕದ ಆಟಗಾರ ಇನ್ನೂ ಕೆಲ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇರಬೇಕಿತ್ತು~ ಎಂದು ಅವರು ಅಭಿಪ್ರಾಯ ಪಟ್ಟರು. <br /> <br /> ಈ ವಿಷಯವಾಗಿ ದ್ರಾವಿಡ್ ಬಳಿ ಮಾತನಾಡಿದ್ದೆ. ಆದರೆ, `ನಿವೃತ್ತಿ ನಿರ್ಧಾರವನ್ನು ನಾನು ಈಗಾಗಲೇ ತಗೆದುಕೊಂಡಿದ್ದೇನೆ. ಯುವ ಆಟಗಾರರಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ನನ್ನ ಬಯಕೆ~ ಎಂದು ಅವರು ಹೇಳಿದ್ದರು ಎನ್ನುವ ವಿಷಯವನ್ನು ವಿಶ್ವನಾಥ್ ತಿಳಿಸಿದರು.<br /> <br /> ಕ್ರಿಕೆಟ್ ಜಗತ್ತು ರಾಹುಲ್ ಆವರ ಆಟವನ್ನು `ಮಿಸ್~ ಮಾಡಿಕೊಳ್ಳುತ್ತಿದೆ. ದೀರ್ಘ ಅವಧಿ ದೇಶಕ್ಕಾಗಿ ಆಡಿದ್ದಾರೆ. ಆದರೂ ದೈಹಿಕವಾಗಿ ಫಿಟ್ ಆಗಿದ್ದಾರೆ. ಆಸೀಸ್ನಲ್ಲಿ ಪ್ರಬಲ ಬೌಲರ್ಗಳ ಸವಾಲನ್ನು ಎದುರಿಸಿದ ಕಾರಣ ಅಲ್ಲಿ ವೈಫಲ್ಯ ಅನುಭವಿಸಿದರು ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>