<p>ಮೈಸೂರು: ಮೈನವಿರೇಳಿಸಿದ ವೀರಗಾಸೆ ಕುಣಿತ.. ನೋಡುಗರ ಕೇಂದ್ರಬಿಂದುವಾದ ಮರಗಾಲು ಕಲಾವಿದರು.. ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳ ಬ್ಯಾಂಡ್ ಸೆಟ್.. ಗಮನ ಸೆಳೆದ ಸ್ತಬ್ಧ ಚಿತ್ರಗಳು.. ಕುಣಿದು ಕುಪ್ಪಳಿಸಿದ ಯುವ ಜನತೆ..<br /> <br /> ಈ ಸಾಲಿನ ದಸರಾ ಪ್ರಯುಕ್ತ ನಂಜನಗೂಡಿನಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾಮೀಣ ದಸರಾ ಅಕ್ಷರಶಃ ಮಿನಿ ದಸರಾದಂತೆ ಭಾಸವಾಯಿತು.<br /> <br /> ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆನೆಯ ಮೇಲೆ ಕೂರಿಸಿದ್ದ ಚಾಮುಂಡಿದೇವಿ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಪುಷ್ಪಾರ್ಚನೆ ಮಾಡುವ ಮೂಲಕ ಗ್ರಾಮೀಣ ದಸರೆಗೆ ವಿಧ್ಯುಕ್ತ ಚಾಲನೆ ನೀಡಿದರು.<br /> <br /> ಗೊರವರ ಕುಣಿತ, ವೀರಗಾಸೆ ಕಲಾವಿದರು, ಹೆಮ್ಮರಗಾಲು ಗ್ರಾಮದ ನಂದಿ ಧ್ವಜ ಯುವಕ ಸಂಘದ ನಂದಿ ಧ್ವಜ ಕುಣಿತ, ಮರಗಾಲು, ಬೊಂಬೆ ಕಲಾವಿದರು, ಶಾಲಾ ಮಕ್ಕಳು, ಪೂರ್ಣಕುಂಭ ಹೊತ್ತ ಮಹಿಳೆಯರು, ಹಳದಿ, ಕೆಂಪು ಬಣ್ಣ ಧರಿಸಿದ ಜಾನಪದ ಕಲಾವಿದರು ~ದಸರಾ ಮೆರವಣಿಗೆ~ಗೆ ರಂಗು ತಂದರು. ಮರಗಾಲು ಕಲಾವಿದರ ~ಬೀಸು ಕಂಸಾಳೆ~ ನೋಡುಗರನ್ನು ಮೋಡಿಮಾಡಿತು.<br /> <br /> ಪದವಿಪೂರ್ವ ಕಾಲೇಜಿನಿಂದ ಹೊರಟ ಮೆರವಣಿಗೆಯು ಗುಂಡ್ಲುಪೇಟೆ ವೃತ್ತ, ಆರ್ಪಿ ರಸ್ತೆ ಮೂಲಕ ಸಾಗಿ ನಂಜುಂಡೇಶ್ವರ ದೇವಸ್ಥಾನವನ್ನು ತಲುಪಿತು. ದಾರಿಯುದ್ದಕ್ಕೂ ಯುವಕರು ಕಲಾವಿದರೊಂದಿಗೆ ಕುಣಿದು ಸಂಭ್ರಮಿಸಿದರು.<br /> <br /> ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ~ಬಾಲ್ಯ ವಿಹಾವ~ ತಡೆಗಟ್ಟುವ ಸ್ತಬ್ಧಚಿತ್ರ, ಕರ್ನಾಟಕ ರಕ್ಷಣಾ ವೇದಿಕೆಯ ~ಗರಡಿ ಮನೆ~, ಕೃಷಿ ಇಲಾಖೆಯ ~ಬನ್ನೂರು ತಳಿ ಕುರಿ~, ಸಾರ್ವಜನಿಕ ಶಿಕ್ಷಣ ಇಲಾಖೆಯ ~ನಲಿ-ಕಲಿ~ ಸ್ತಬ್ಧಚಿತ್ರ ಹಾಗೂ ಶ್ರೀಕಂಠೇಶ್ವರ ದೇವಸ್ಥಾನ ಮಂಡಳಿಯ ~ನಂಜುಂಡೇಶ್ವರ~ ಸ್ತಬ್ಧ ಚಿತ್ರಗಳು ನೋಡುಗರ ಗಮನ ಸೆಳೆದವು. <br /> <br /> `ಆಗಲಿ ಬಿಡಿ ಹೆಣ್ಣಿಗೆ ಹದಿನೆಂಟು.. ಈಗಲೇ ಏಕೆ ತಾಳಿಯ ನಂಟು~..ಶೀರ್ಷಿಕೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಮೈನವಿರೇಳಿಸಿದ ವೀರಗಾಸೆ ಕುಣಿತ.. ನೋಡುಗರ ಕೇಂದ್ರಬಿಂದುವಾದ ಮರಗಾಲು ಕಲಾವಿದರು.. ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳ ಬ್ಯಾಂಡ್ ಸೆಟ್.. ಗಮನ ಸೆಳೆದ ಸ್ತಬ್ಧ ಚಿತ್ರಗಳು.. ಕುಣಿದು ಕುಪ್ಪಳಿಸಿದ ಯುವ ಜನತೆ..<br /> <br /> ಈ ಸಾಲಿನ ದಸರಾ ಪ್ರಯುಕ್ತ ನಂಜನಗೂಡಿನಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾಮೀಣ ದಸರಾ ಅಕ್ಷರಶಃ ಮಿನಿ ದಸರಾದಂತೆ ಭಾಸವಾಯಿತು.<br /> <br /> ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆನೆಯ ಮೇಲೆ ಕೂರಿಸಿದ್ದ ಚಾಮುಂಡಿದೇವಿ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಪುಷ್ಪಾರ್ಚನೆ ಮಾಡುವ ಮೂಲಕ ಗ್ರಾಮೀಣ ದಸರೆಗೆ ವಿಧ್ಯುಕ್ತ ಚಾಲನೆ ನೀಡಿದರು.<br /> <br /> ಗೊರವರ ಕುಣಿತ, ವೀರಗಾಸೆ ಕಲಾವಿದರು, ಹೆಮ್ಮರಗಾಲು ಗ್ರಾಮದ ನಂದಿ ಧ್ವಜ ಯುವಕ ಸಂಘದ ನಂದಿ ಧ್ವಜ ಕುಣಿತ, ಮರಗಾಲು, ಬೊಂಬೆ ಕಲಾವಿದರು, ಶಾಲಾ ಮಕ್ಕಳು, ಪೂರ್ಣಕುಂಭ ಹೊತ್ತ ಮಹಿಳೆಯರು, ಹಳದಿ, ಕೆಂಪು ಬಣ್ಣ ಧರಿಸಿದ ಜಾನಪದ ಕಲಾವಿದರು ~ದಸರಾ ಮೆರವಣಿಗೆ~ಗೆ ರಂಗು ತಂದರು. ಮರಗಾಲು ಕಲಾವಿದರ ~ಬೀಸು ಕಂಸಾಳೆ~ ನೋಡುಗರನ್ನು ಮೋಡಿಮಾಡಿತು.<br /> <br /> ಪದವಿಪೂರ್ವ ಕಾಲೇಜಿನಿಂದ ಹೊರಟ ಮೆರವಣಿಗೆಯು ಗುಂಡ್ಲುಪೇಟೆ ವೃತ್ತ, ಆರ್ಪಿ ರಸ್ತೆ ಮೂಲಕ ಸಾಗಿ ನಂಜುಂಡೇಶ್ವರ ದೇವಸ್ಥಾನವನ್ನು ತಲುಪಿತು. ದಾರಿಯುದ್ದಕ್ಕೂ ಯುವಕರು ಕಲಾವಿದರೊಂದಿಗೆ ಕುಣಿದು ಸಂಭ್ರಮಿಸಿದರು.<br /> <br /> ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ~ಬಾಲ್ಯ ವಿಹಾವ~ ತಡೆಗಟ್ಟುವ ಸ್ತಬ್ಧಚಿತ್ರ, ಕರ್ನಾಟಕ ರಕ್ಷಣಾ ವೇದಿಕೆಯ ~ಗರಡಿ ಮನೆ~, ಕೃಷಿ ಇಲಾಖೆಯ ~ಬನ್ನೂರು ತಳಿ ಕುರಿ~, ಸಾರ್ವಜನಿಕ ಶಿಕ್ಷಣ ಇಲಾಖೆಯ ~ನಲಿ-ಕಲಿ~ ಸ್ತಬ್ಧಚಿತ್ರ ಹಾಗೂ ಶ್ರೀಕಂಠೇಶ್ವರ ದೇವಸ್ಥಾನ ಮಂಡಳಿಯ ~ನಂಜುಂಡೇಶ್ವರ~ ಸ್ತಬ್ಧ ಚಿತ್ರಗಳು ನೋಡುಗರ ಗಮನ ಸೆಳೆದವು. <br /> <br /> `ಆಗಲಿ ಬಿಡಿ ಹೆಣ್ಣಿಗೆ ಹದಿನೆಂಟು.. ಈಗಲೇ ಏಕೆ ತಾಳಿಯ ನಂಟು~..ಶೀರ್ಷಿಕೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>