<p>ಆದಾಯ ತೆರಿಗೆ ಅಧಿಕಾರಿಗಳು, ಕರ್ನಾಟಕದ ಹಲವಾರು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ಇದೊಂದು ಸಹಜ ಕ್ರಿಯೆಯಾಗಿದ್ದು, ಶಿಕ್ಷಣದ ವ್ಯಾಪಾರೀಕರಣದ ಈ ಸಂದರ್ಭಕ್ಕೆ ಈ ಬಗೆಯ ತಪಾಸಣೆ ಒಂದು ಎಚ್ಚರಿಕೆಯಾಗಿದೆ. ಆದರೆ ಇದನ್ನು ಉಗ್ರವಾಗಿ ಖಂಡಿಸುವ ಮೂಲಕ ನಮ್ಮ ಜನನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗತೊಡಗಿರುವುದು ಆತಂಕದ ಸಂಗತಿ.<br /> <br /> ಮಾಜಿ ಮುಖ್ಯಮಂತ್ರಿಗಳೂ ಈ ಬಗೆಯ ಸ್ವಜಾತಿ ಪ್ರಚೋದನೆಗೆ ಇಳಿದಿರುವುದು ಅತ್ಯಂತ ಶೋಚನೀಯ. ಜನಪ್ರತಿನಿಧಿಗಳಾಗಿ ಆಯ್ಕೆಯಾದವರು, ಸಂವಿಧಾನಬದ್ಧ ಒಂದು ಸಂಸ್ಥೆಯ ವಿರುದ್ಧ ಜಾತಿಯ ಪರವಾಗಿ ಅವಹೇಳನಕಾರಿಯಾಗಿ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ? ಪ್ರಬಲ ಜಾತಿಯವರು, ಏನೆಲ್ಲಾ ಅನಾಹುತ ಮಾಡಿದರೂ, ಯಾರೂ ಅವರನ್ನು ಪ್ರಶ್ನಿಸಬಾರದು. ಈ ನೆಲದ ಕಾಯ್ದೆ ಇರುವುದು ಬಡವರಿಗೆ, ದಲಿತರಿಗೆ ಎಂಬ ರೀತಿಯ ವರ್ತನೆ ದರ್ಪಿಷ್ಟತನದಿಂದ ಕೂಡಿದೆ. ಜಾತಿಯ ಹೆಸರಿನಲ್ಲಿ ಈ ರೀತಿಯ ಸಂಘಟನೆ, ಹೇಳಿಕೆ, ಪ್ರತಿಭಟನೆ ತಲೆ ತಗ್ಗಿಸುವ ಸಂಗತಿ. ಪ್ರತಿಯೊಬ್ಬ ನಾಗರಿಕನೂ ಖಂಡಿಸಬಹುದಾದ ನಡಾವಳಿ. ಪ್ರತಿನಿಧಿಗಳ ದಿವಾಳಿತನದ ಪ್ರತೀಕ ಹೌದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆದಾಯ ತೆರಿಗೆ ಅಧಿಕಾರಿಗಳು, ಕರ್ನಾಟಕದ ಹಲವಾರು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ಇದೊಂದು ಸಹಜ ಕ್ರಿಯೆಯಾಗಿದ್ದು, ಶಿಕ್ಷಣದ ವ್ಯಾಪಾರೀಕರಣದ ಈ ಸಂದರ್ಭಕ್ಕೆ ಈ ಬಗೆಯ ತಪಾಸಣೆ ಒಂದು ಎಚ್ಚರಿಕೆಯಾಗಿದೆ. ಆದರೆ ಇದನ್ನು ಉಗ್ರವಾಗಿ ಖಂಡಿಸುವ ಮೂಲಕ ನಮ್ಮ ಜನನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗತೊಡಗಿರುವುದು ಆತಂಕದ ಸಂಗತಿ.<br /> <br /> ಮಾಜಿ ಮುಖ್ಯಮಂತ್ರಿಗಳೂ ಈ ಬಗೆಯ ಸ್ವಜಾತಿ ಪ್ರಚೋದನೆಗೆ ಇಳಿದಿರುವುದು ಅತ್ಯಂತ ಶೋಚನೀಯ. ಜನಪ್ರತಿನಿಧಿಗಳಾಗಿ ಆಯ್ಕೆಯಾದವರು, ಸಂವಿಧಾನಬದ್ಧ ಒಂದು ಸಂಸ್ಥೆಯ ವಿರುದ್ಧ ಜಾತಿಯ ಪರವಾಗಿ ಅವಹೇಳನಕಾರಿಯಾಗಿ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ? ಪ್ರಬಲ ಜಾತಿಯವರು, ಏನೆಲ್ಲಾ ಅನಾಹುತ ಮಾಡಿದರೂ, ಯಾರೂ ಅವರನ್ನು ಪ್ರಶ್ನಿಸಬಾರದು. ಈ ನೆಲದ ಕಾಯ್ದೆ ಇರುವುದು ಬಡವರಿಗೆ, ದಲಿತರಿಗೆ ಎಂಬ ರೀತಿಯ ವರ್ತನೆ ದರ್ಪಿಷ್ಟತನದಿಂದ ಕೂಡಿದೆ. ಜಾತಿಯ ಹೆಸರಿನಲ್ಲಿ ಈ ರೀತಿಯ ಸಂಘಟನೆ, ಹೇಳಿಕೆ, ಪ್ರತಿಭಟನೆ ತಲೆ ತಗ್ಗಿಸುವ ಸಂಗತಿ. ಪ್ರತಿಯೊಬ್ಬ ನಾಗರಿಕನೂ ಖಂಡಿಸಬಹುದಾದ ನಡಾವಳಿ. ಪ್ರತಿನಿಧಿಗಳ ದಿವಾಳಿತನದ ಪ್ರತೀಕ ಹೌದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>