<p><strong>ಬೆಂಗಳೂರು:</strong> ಆರ್ಥಿಕ ತೊಂದರೆ ಕಾರಣ ಮಗಳಿಗೆ ಉತ್ತಮ ಶ್ರವಣ ಸಾಧನ ಕೊಡಿಸಲು ಸಾಧ್ಯವಾಗದೆ ಕೊರಗುತ್ತಿದ್ದ ಜಯನಗರ ನಿವಾಸಿ ಎಸ್.ವಿ. ಆಂಜನೇಯುಲು ದಂಪತಿಯ ಮುಖದಲ್ಲಿ ಮಂಗಳವಾರ ಮಂದಹಾಸ ಮೂಡಿತ್ತು.<br /> <br /> ಮಗಳು ದೀಪ್ತಿಗೆ ಉತ್ತಮ ಶ್ರವಣ ಸಾಧನ ಮತ್ತು ಅವಳ ಚಿಕಿತ್ಸೆಯ ವೆಚ್ಚ ಭರಿಸಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು `ಜನತಾ ದರ್ಶನ~ದ ವೇಳೆ 1.12 ಲಕ್ಷ ರೂಪಾಯಿ ನೀಡುವ ಘೋಷಣೆ ಮಾಡಿದ್ದು ದಂಪತಿಯ ಆನಂದಕ್ಕೆ ಕಾರಣವಾಗಿತ್ತು.<br /> <br /> ಜಯನಗರದ 4 `ಟಿ~ ಬ್ಲಾಕ್ನಲ್ಲಿ ಸಂಬಾರ ಪದಾರ್ಥಗಳ ಅಂಗಡಿ ಇಟ್ಟುಕೊಂಡಿರುವ ಆಂಜನೇಯುಲು ಅವರ ಪುತ್ರಿ ದೀಪ್ತಿ ಶ್ರವಣ ಸಮಸ್ಯೆ ಎದುರಿಸುತ್ತಿದ್ದಾಳೆ. ಅವಳ ಚಿಕಿತ್ಸೆಗೆ ಮುಖ್ಯಮಂತ್ರಿಗಳಿಂದ ಸಹಾಯ ಕೋರಲು ಮಂಗಳವಾರದ `ಜನತಾ ದರ್ಶನ~ ಕಾರ್ಯಕ್ರಮಕ್ಕೆ ಆಂಜನೇಯುಲು ಬಂದಿದ್ದರು.<br /> <br /> ದೀಪ್ತಿಯ ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು ಅವಳಿಗೆ ಆಧುನಿಕ ಶ್ರವಣ ಸಾಧನ ಕೊಳ್ಳಲು ಮತ್ತು ಚಿಕಿತ್ಸೆಯ ವೆಚ್ಚ ಭರಿಸಲು 1.12 ಲಕ್ಷ ರೂಪಾಯಿ ನೀಡುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.<br /> <br /> `ಮುಖ್ಯಮಂತ್ರಿಗಳು ಜನತಾ ದರ್ಶನದ ವೇಳೆ ಸಾಮಾನ್ಯವಾಗಿ ರೂ 75 ಸಾವಿರಗಿಂತ ಹೆಚ್ಚು ಮೊತ್ತದ ಧನ ಸಹಾಯ ಬಿಡುಗಡೆ ಮಾಡುವುದಿಲ್ಲ. ಆದರೆ ದೀಪ್ತಿಯ ಸಮಸ್ಯೆಯನ್ನು ನೋಡಿದ ಅವರು ಇದೇ ಮೊದಲ ಬಾರಿ ಇಷ್ಟು ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡಿದ್ದಾರೆ~ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆರ್ಥಿಕ ತೊಂದರೆ ಕಾರಣ ಮಗಳಿಗೆ ಉತ್ತಮ ಶ್ರವಣ ಸಾಧನ ಕೊಡಿಸಲು ಸಾಧ್ಯವಾಗದೆ ಕೊರಗುತ್ತಿದ್ದ ಜಯನಗರ ನಿವಾಸಿ ಎಸ್.ವಿ. ಆಂಜನೇಯುಲು ದಂಪತಿಯ ಮುಖದಲ್ಲಿ ಮಂಗಳವಾರ ಮಂದಹಾಸ ಮೂಡಿತ್ತು.<br /> <br /> ಮಗಳು ದೀಪ್ತಿಗೆ ಉತ್ತಮ ಶ್ರವಣ ಸಾಧನ ಮತ್ತು ಅವಳ ಚಿಕಿತ್ಸೆಯ ವೆಚ್ಚ ಭರಿಸಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು `ಜನತಾ ದರ್ಶನ~ದ ವೇಳೆ 1.12 ಲಕ್ಷ ರೂಪಾಯಿ ನೀಡುವ ಘೋಷಣೆ ಮಾಡಿದ್ದು ದಂಪತಿಯ ಆನಂದಕ್ಕೆ ಕಾರಣವಾಗಿತ್ತು.<br /> <br /> ಜಯನಗರದ 4 `ಟಿ~ ಬ್ಲಾಕ್ನಲ್ಲಿ ಸಂಬಾರ ಪದಾರ್ಥಗಳ ಅಂಗಡಿ ಇಟ್ಟುಕೊಂಡಿರುವ ಆಂಜನೇಯುಲು ಅವರ ಪುತ್ರಿ ದೀಪ್ತಿ ಶ್ರವಣ ಸಮಸ್ಯೆ ಎದುರಿಸುತ್ತಿದ್ದಾಳೆ. ಅವಳ ಚಿಕಿತ್ಸೆಗೆ ಮುಖ್ಯಮಂತ್ರಿಗಳಿಂದ ಸಹಾಯ ಕೋರಲು ಮಂಗಳವಾರದ `ಜನತಾ ದರ್ಶನ~ ಕಾರ್ಯಕ್ರಮಕ್ಕೆ ಆಂಜನೇಯುಲು ಬಂದಿದ್ದರು.<br /> <br /> ದೀಪ್ತಿಯ ಸಮಸ್ಯೆ ಆಲಿಸಿದ ಮುಖ್ಯಮಂತ್ರಿಗಳು ಅವಳಿಗೆ ಆಧುನಿಕ ಶ್ರವಣ ಸಾಧನ ಕೊಳ್ಳಲು ಮತ್ತು ಚಿಕಿತ್ಸೆಯ ವೆಚ್ಚ ಭರಿಸಲು 1.12 ಲಕ್ಷ ರೂಪಾಯಿ ನೀಡುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.<br /> <br /> `ಮುಖ್ಯಮಂತ್ರಿಗಳು ಜನತಾ ದರ್ಶನದ ವೇಳೆ ಸಾಮಾನ್ಯವಾಗಿ ರೂ 75 ಸಾವಿರಗಿಂತ ಹೆಚ್ಚು ಮೊತ್ತದ ಧನ ಸಹಾಯ ಬಿಡುಗಡೆ ಮಾಡುವುದಿಲ್ಲ. ಆದರೆ ದೀಪ್ತಿಯ ಸಮಸ್ಯೆಯನ್ನು ನೋಡಿದ ಅವರು ಇದೇ ಮೊದಲ ಬಾರಿ ಇಷ್ಟು ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡಿದ್ದಾರೆ~ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>