<p>ಹಗರಿಬೊಮ್ಮನಹಳ್ಳಿ: ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ತಾಲ್ಲೂಕಿನ ಮಹತ್ವದ ಚಿಲವಾರ ಬಂಡಿ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಶಾಸಕ ನೇಮರಾಜನಾಯ್ಕ ಪ್ರಕಟಿಸಿದರು.<br /> <br /> ತಾಲ್ಲೂಕಿನ ಬ್ಯಾಸಿಗದೇರಿ ಗ್ರಾಮದ ಸರಕಾರಿ ಶಾಲೆಗಳ ಸಮುಚ್ಚಯದ ಪ್ರಾಂಗಣದಲ್ಲಿ ಗುರುವಾರ ತಾಲ್ಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲೆಗಾಗಿ ನಾವು ನೀವು ಸಮಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.<br /> <br /> ಈಗಾಗಲೆ ಯೋಜನೆಗೆ ಸರಕಾರದ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಹೆಚ್ಚಾಗಿ ದಲಿತ ರೈತರು ಫಲಾನುಭವಿಗಳಾಗಿರುವ 8 ಸಾವಿರ ಎಕರೆ ಪ್ರದೇಶ ನೀರಾವರಿಗೊಳಪಡುವ ಈ ಬೃಹತ್ ಯೋಜನೆಯ ಚಾಲನೆಗೆ ಒಟ್ಟು ರೂ20.68ಕೋಟಿ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.<br /> <br /> ತಾಲ್ಲೂಕಿನ ಬರಡು ಪ್ರದೇಶಗಳಾದ ಬ್ಯಾಸಿಗದೇರಿ, ಮುಟುಗನಹಳ್ಳಿ, ನಂದೀಪುರ, ಸೊಬಟಿ, ಕೋಡಿಹಳ್ಳಿ ಗ್ರಾಮಗಳ ಸುಮಾರು 2000 ಎಕರೆ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನೂತನ ಏತ ನೀರಾವರಿ ಯೋಜನೆಯ ಜಾರಿಗೆ ಚಿಂತನೆ ನಡೆದಿದೆ ಎಂದರು.<br /> <br /> ವಸತಿ ಯೋಜನೆಯಡಿ, ಕ್ಷೇತ್ರ ವ್ಯಾಪ್ತಿಯ ಮೊದಲ ಹಂತದ 8000 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ವಸತಿ ನಿಗಮದಿಂದ ಅನುಮೋದನೆ ಪಡೆಯಲಾಗಿರುವ ಎರಡನೆ ಹಂತದ 12000 ಮನೆಗಳ ಕಾಮಗಾರಿಗೆ ಅತಿ ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸುವ ವಿಶ್ವಾಸ ವ್ಯಕ್ತಪಡಿಸಿದರು.<br /> <br /> ಕಡ್ಲಬಾಳು, ಹಂಪಾಪಟ್ಟಣ, ಬ್ಯಾಸಿಗ ದೇರಿ ಮತ್ತು ಹನಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಗುಡಿಸಲು ವಾಸಿಗಳ ಸಮೀಕ್ಷೆ ನಡೆಸಲಾಗಿದೆ. ಎರಡನೆ ಹಂತದಲ್ಲಿ ಈ ನಾಲ್ಕು ಗ್ರಾಮಗಳ ವಸತಿ ರಹಿತರಿಗೆ ಆದ್ಯತೆ ಮೇರೆಗೆ ಮನೆಗಳನ್ನು ನಿರ್ಮಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. <br /> <br /> ಪಟ್ಟಣದ ಹೊರ ವಲಯದ ರಾಮರಹೀಮ್ ನಗರದ ಬಳಿ ಸರಕಾರಿ ನಿವೇಶನದಲ್ಲಿ ಕೆಲವು ಪಟ್ಟಭದ್ರರು ಅಕ್ರಮವಾಗಿ ಮನೆಗಳನ್ನು ನಿರ್ಮಿಸುತ್ತಿ ರುವುದು ತಮ್ಮ ಗಮನಕ್ಕೆ ಬಂದಿದೆ. ಅಕ್ರಮ ಮನೆಗಳನ್ನು ತೆರವುಗೊಳಿಸ ಲಾಗುತ್ತದೆ ಎಂದು ಹೇಳಿದರು.<br /> <br /> ನಂದೀಪುರ ಮಹೇಶ್ವರ ಸ್ವಾಮೀಜಿ, ತಾ.ಪಂ.ಮಾಜಿ ಅಧ್ಯಕ್ಷ ಪಿ.ಸೂರ್ಯ ಬಾಬು, ಎಪಿಎಂಸಿ ಅಧ್ಯಕ್ಷ ಕೆ.ರೋಹಿತ್, ಬಿಜೆಪಿ ಮುಖಂಡರಾದ ಬೇವಿನಹಳ್ಳಿ ಶ್ರೀನಿವಾಸ್, ಇರ್ಫಾನ್, ಸಿ.ಎಚ್. ಸಿದ್ಧರಾಜ್, ಖಲೀಲ್ಸಾಬ್, ಮಂಜುಗೌಡ, ಅಡವಿಆನಂದದೇವನ ಹಳ್ಳಿ ಕೊಟ್ರೇಶ್, ಗ್ರಾ.ಪಂ.ಸದಸ್ಯ ಕನಕಪ್ಪ, ಕಡ್ಲಬಾಳು ಮಲ್ಲೇಶ್ ಹಾಗೂ ಗಫೂರ್ಖಾನ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಗರಿಬೊಮ್ಮನಹಳ್ಳಿ: ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ತಾಲ್ಲೂಕಿನ ಮಹತ್ವದ ಚಿಲವಾರ ಬಂಡಿ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಶಾಸಕ ನೇಮರಾಜನಾಯ್ಕ ಪ್ರಕಟಿಸಿದರು.<br /> <br /> ತಾಲ್ಲೂಕಿನ ಬ್ಯಾಸಿಗದೇರಿ ಗ್ರಾಮದ ಸರಕಾರಿ ಶಾಲೆಗಳ ಸಮುಚ್ಚಯದ ಪ್ರಾಂಗಣದಲ್ಲಿ ಗುರುವಾರ ತಾಲ್ಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲೆಗಾಗಿ ನಾವು ನೀವು ಸಮಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.<br /> <br /> ಈಗಾಗಲೆ ಯೋಜನೆಗೆ ಸರಕಾರದ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಹೆಚ್ಚಾಗಿ ದಲಿತ ರೈತರು ಫಲಾನುಭವಿಗಳಾಗಿರುವ 8 ಸಾವಿರ ಎಕರೆ ಪ್ರದೇಶ ನೀರಾವರಿಗೊಳಪಡುವ ಈ ಬೃಹತ್ ಯೋಜನೆಯ ಚಾಲನೆಗೆ ಒಟ್ಟು ರೂ20.68ಕೋಟಿ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.<br /> <br /> ತಾಲ್ಲೂಕಿನ ಬರಡು ಪ್ರದೇಶಗಳಾದ ಬ್ಯಾಸಿಗದೇರಿ, ಮುಟುಗನಹಳ್ಳಿ, ನಂದೀಪುರ, ಸೊಬಟಿ, ಕೋಡಿಹಳ್ಳಿ ಗ್ರಾಮಗಳ ಸುಮಾರು 2000 ಎಕರೆ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನೂತನ ಏತ ನೀರಾವರಿ ಯೋಜನೆಯ ಜಾರಿಗೆ ಚಿಂತನೆ ನಡೆದಿದೆ ಎಂದರು.<br /> <br /> ವಸತಿ ಯೋಜನೆಯಡಿ, ಕ್ಷೇತ್ರ ವ್ಯಾಪ್ತಿಯ ಮೊದಲ ಹಂತದ 8000 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ವಸತಿ ನಿಗಮದಿಂದ ಅನುಮೋದನೆ ಪಡೆಯಲಾಗಿರುವ ಎರಡನೆ ಹಂತದ 12000 ಮನೆಗಳ ಕಾಮಗಾರಿಗೆ ಅತಿ ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸುವ ವಿಶ್ವಾಸ ವ್ಯಕ್ತಪಡಿಸಿದರು.<br /> <br /> ಕಡ್ಲಬಾಳು, ಹಂಪಾಪಟ್ಟಣ, ಬ್ಯಾಸಿಗ ದೇರಿ ಮತ್ತು ಹನಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಗುಡಿಸಲು ವಾಸಿಗಳ ಸಮೀಕ್ಷೆ ನಡೆಸಲಾಗಿದೆ. ಎರಡನೆ ಹಂತದಲ್ಲಿ ಈ ನಾಲ್ಕು ಗ್ರಾಮಗಳ ವಸತಿ ರಹಿತರಿಗೆ ಆದ್ಯತೆ ಮೇರೆಗೆ ಮನೆಗಳನ್ನು ನಿರ್ಮಿಸಿ ಕೊಡಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. <br /> <br /> ಪಟ್ಟಣದ ಹೊರ ವಲಯದ ರಾಮರಹೀಮ್ ನಗರದ ಬಳಿ ಸರಕಾರಿ ನಿವೇಶನದಲ್ಲಿ ಕೆಲವು ಪಟ್ಟಭದ್ರರು ಅಕ್ರಮವಾಗಿ ಮನೆಗಳನ್ನು ನಿರ್ಮಿಸುತ್ತಿ ರುವುದು ತಮ್ಮ ಗಮನಕ್ಕೆ ಬಂದಿದೆ. ಅಕ್ರಮ ಮನೆಗಳನ್ನು ತೆರವುಗೊಳಿಸ ಲಾಗುತ್ತದೆ ಎಂದು ಹೇಳಿದರು.<br /> <br /> ನಂದೀಪುರ ಮಹೇಶ್ವರ ಸ್ವಾಮೀಜಿ, ತಾ.ಪಂ.ಮಾಜಿ ಅಧ್ಯಕ್ಷ ಪಿ.ಸೂರ್ಯ ಬಾಬು, ಎಪಿಎಂಸಿ ಅಧ್ಯಕ್ಷ ಕೆ.ರೋಹಿತ್, ಬಿಜೆಪಿ ಮುಖಂಡರಾದ ಬೇವಿನಹಳ್ಳಿ ಶ್ರೀನಿವಾಸ್, ಇರ್ಫಾನ್, ಸಿ.ಎಚ್. ಸಿದ್ಧರಾಜ್, ಖಲೀಲ್ಸಾಬ್, ಮಂಜುಗೌಡ, ಅಡವಿಆನಂದದೇವನ ಹಳ್ಳಿ ಕೊಟ್ರೇಶ್, ಗ್ರಾ.ಪಂ.ಸದಸ್ಯ ಕನಕಪ್ಪ, ಕಡ್ಲಬಾಳು ಮಲ್ಲೇಶ್ ಹಾಗೂ ಗಫೂರ್ಖಾನ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>