<p><strong>ನವದೆಹಲಿ (ಪಿಟಿಐ</strong>): ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿ ಯಾದ ಬೆನ್ನಲ್ಲೇ, ಮಾಧ್ಯಮಗಳು ‘ಕಾಸಿಗಾಗಿ ಸುದ್ದಿ’ ಪ್ರಕಟಿಸುವುದನ್ನು ಚುನಾವಣಾ ಅಪರಾಧವಾಗಿ ಪರಿಗಣಿಸಬೇಕು ಎಂದು ಆಯೋಗ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.<br /> <br /> ಚುನಾವಣಾ ವೇಳಾಪಟ್ಟಿ ಘೋಷಣೆ ಗಾಗಿ ಬುಧವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್, ‘ಕಾಸಿಗಾಗಿ ಸುದ್ದಿ’ ಪ್ರಕಟಿಸುವುದನ್ನು ನಿಯಂತ್ರಿಸಲು ಯಾವುದೇ ಕಾನೂನು ಇಲ್ಲ. ಹಾಗಾಗಿ ಇದನ್ನು ಚುನಾವಣಾ ಅಪರಾಧ ಎಂದು ಪರಿಗಣಿಸಬೇಕು ಎಂದು ನಾವು ಕಾನೂನು ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದರು.<br /> <br /> ‘ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಹಾಗೂ ಅಭ್ಯರ್ಥಿಗಳ ವೆಚ್ಚ... ಈ ಮೂರು ಅಂಶಗಳನ್ನು ‘ಕಾಸಿಗಾಗಿ ಸುದ್ದಿ’ ಒಳಗೊಂಡಿದೆ’ ಎಂದು ಅವರು ವಿಶ್ಲೇಷಿಸಿದರು.<br /> <br /> ‘ನಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ನಿಯಂತ್ರಣಗಳನ್ನು ನಾವು ಕೈಗೊಳ್ಳುತ್ತಿದ್ದೇವೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಆಯೋಗ ಕಣ್ಣಿಟ್ಟಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಗಳ ಮೂಲಕ ಈ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ’ ಎಂದರು.<br /> <br /> ‘ಕಾಸಿಗಾಗಿ ಸುದ್ದಿ’ಗೆ ಸಂಬಂಧಿಸಿದ ದೂರುಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿ ಯಿಸಿದ ಸಂಪತ್, ‘ಮುದ್ರಣ ಮಾಧ್ಯಮದ ವಿರುದ್ಧ ಬಂದಿರುವ ದೂರುಗಳನ್ನು ‘ಭಾರತೀಯ ಪತ್ರಿಕಾ ಮಂಡಳಿ’ (ಪಿಸಿಐ) ಹಾಗೂ ವಿದ್ಯುನ್ಮಾನ ಮಾಧ್ಯಮದ ವಿರುದ್ಧದ ದೂರುಗಳನ್ನು ‘ರಾಷ್ಟ್ರೀಯ ಪ್ರಸಾರಕರ ಸಂಘ’ದ (ಎನ್ಬಿಎ) ಗಮನಕ್ಕೆ ತರಲಾಗಿದೆ’ ಎಂದರು.<br /> <br /> ಸಂಸತ್ ನಿರ್ಧಾರಕ್ಕೆ: ‘ಜನಾಭಿಪ್ರಾಯ ಸಮೀಕ್ಷೆ’ಗೆ ಸಂಬಂಧಿಸಿದ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಸಂಪತ್, ‘ನಮ್ಮ ಅಧಿಕಾರವನ್ನು ಬಳಸುವುದಕ್ಕೆ ನಾವು ಹಿಂಜರಿಯುವುದಿಲ್ಲ. ಆದರೆ, ಈ ಕುರಿತು ನಿರ್ಧಾರವನ್ನು ಸಂಸತ್ ಕೈಗೊಳ್ಳಬೇಕಿದೆ’ ಎಂದು ತಿಳಿಸಿದರು.<br /> ‘ಚುನಾವಣೆ ಸಂದರ್ಭದಲ್ಲಿ ಮತ ದಾರರ ಮೇಲೆ ಪ್ರಭಾವ ಬೀರುವಂತಹ ಇಂತಹ ಸಮೀಕ್ಷೆಗಳನ್ನು ನಿಷೇಧಿಸ ಬೇಕೆಂಬ ಒತ್ತಾಯ 2004ರಲ್ಲೇ ಕೇಳಿ ಬಂದಿತ್ತು. ಆದರೆ, ‘ಮತಗಟ್ಟೆ ಸಮೀಕ್ಷೆ’ ಯನ್ನು ಮಾತ್ರ ನಿಷೇಧಿಸಲಾಯಿತು’ ಎಂದು ಅವರು ಗಮನ ಸೆಳೆದರು.<br /> <br /> <strong>ಯಾರೂ ಬೇಕಾದರೂ ದೂರು ನೀಡಬಹುದು</strong><br /> ‘ಸುಳ್ಳು ಪ್ರಮಾಣ ಪತ್ರ ನೀಡುವ ಅಭ್ಯರ್ಥಿಗಳ ವಿರುದ್ಧ ಚುನಾವಣಾಧಿಕಾರಿ ಅಥವಾ ಸಾರ್ವಜನಿಕರು ಕ್ರಮ ಕೈಗೊಳ್ಳುವಂತೆ ದೂರು ನೀಡಬಹುದು‘ ಎಂದು ಸಂಪತ್ ಇದೇ ವೇಳೆ ತಿಳಿಸಿದರು.<br /> <br /> ‘ಸದ್ಯದ ಕಾನೂನಿನ ಪ್ರಕಾರ, ಸುಳ್ಳು ಪ್ರಮಾಣ ಪತ್ರ ನೀಡುವವರ ವಿರುದ್ಧದ ಆರೋಪ ಸಾಬೀತಾದಲ್ಲಿ ಅಂತಹವರು ಆರು ತಿಂಗಳು ಜೈಲು ಶಿಕ್ಷೆ ಮತ್ತು ದಂಡ ಪಾವತಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ</strong>): ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿ ಯಾದ ಬೆನ್ನಲ್ಲೇ, ಮಾಧ್ಯಮಗಳು ‘ಕಾಸಿಗಾಗಿ ಸುದ್ದಿ’ ಪ್ರಕಟಿಸುವುದನ್ನು ಚುನಾವಣಾ ಅಪರಾಧವಾಗಿ ಪರಿಗಣಿಸಬೇಕು ಎಂದು ಆಯೋಗ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.<br /> <br /> ಚುನಾವಣಾ ವೇಳಾಪಟ್ಟಿ ಘೋಷಣೆ ಗಾಗಿ ಬುಧವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್, ‘ಕಾಸಿಗಾಗಿ ಸುದ್ದಿ’ ಪ್ರಕಟಿಸುವುದನ್ನು ನಿಯಂತ್ರಿಸಲು ಯಾವುದೇ ಕಾನೂನು ಇಲ್ಲ. ಹಾಗಾಗಿ ಇದನ್ನು ಚುನಾವಣಾ ಅಪರಾಧ ಎಂದು ಪರಿಗಣಿಸಬೇಕು ಎಂದು ನಾವು ಕಾನೂನು ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದರು.<br /> <br /> ‘ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಹಾಗೂ ಅಭ್ಯರ್ಥಿಗಳ ವೆಚ್ಚ... ಈ ಮೂರು ಅಂಶಗಳನ್ನು ‘ಕಾಸಿಗಾಗಿ ಸುದ್ದಿ’ ಒಳಗೊಂಡಿದೆ’ ಎಂದು ಅವರು ವಿಶ್ಲೇಷಿಸಿದರು.<br /> <br /> ‘ನಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ನಿಯಂತ್ರಣಗಳನ್ನು ನಾವು ಕೈಗೊಳ್ಳುತ್ತಿದ್ದೇವೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಆಯೋಗ ಕಣ್ಣಿಟ್ಟಿದ್ದು, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಗಳ ಮೂಲಕ ಈ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ’ ಎಂದರು.<br /> <br /> ‘ಕಾಸಿಗಾಗಿ ಸುದ್ದಿ’ಗೆ ಸಂಬಂಧಿಸಿದ ದೂರುಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿ ಯಿಸಿದ ಸಂಪತ್, ‘ಮುದ್ರಣ ಮಾಧ್ಯಮದ ವಿರುದ್ಧ ಬಂದಿರುವ ದೂರುಗಳನ್ನು ‘ಭಾರತೀಯ ಪತ್ರಿಕಾ ಮಂಡಳಿ’ (ಪಿಸಿಐ) ಹಾಗೂ ವಿದ್ಯುನ್ಮಾನ ಮಾಧ್ಯಮದ ವಿರುದ್ಧದ ದೂರುಗಳನ್ನು ‘ರಾಷ್ಟ್ರೀಯ ಪ್ರಸಾರಕರ ಸಂಘ’ದ (ಎನ್ಬಿಎ) ಗಮನಕ್ಕೆ ತರಲಾಗಿದೆ’ ಎಂದರು.<br /> <br /> ಸಂಸತ್ ನಿರ್ಧಾರಕ್ಕೆ: ‘ಜನಾಭಿಪ್ರಾಯ ಸಮೀಕ್ಷೆ’ಗೆ ಸಂಬಂಧಿಸಿದ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಸಂಪತ್, ‘ನಮ್ಮ ಅಧಿಕಾರವನ್ನು ಬಳಸುವುದಕ್ಕೆ ನಾವು ಹಿಂಜರಿಯುವುದಿಲ್ಲ. ಆದರೆ, ಈ ಕುರಿತು ನಿರ್ಧಾರವನ್ನು ಸಂಸತ್ ಕೈಗೊಳ್ಳಬೇಕಿದೆ’ ಎಂದು ತಿಳಿಸಿದರು.<br /> ‘ಚುನಾವಣೆ ಸಂದರ್ಭದಲ್ಲಿ ಮತ ದಾರರ ಮೇಲೆ ಪ್ರಭಾವ ಬೀರುವಂತಹ ಇಂತಹ ಸಮೀಕ್ಷೆಗಳನ್ನು ನಿಷೇಧಿಸ ಬೇಕೆಂಬ ಒತ್ತಾಯ 2004ರಲ್ಲೇ ಕೇಳಿ ಬಂದಿತ್ತು. ಆದರೆ, ‘ಮತಗಟ್ಟೆ ಸಮೀಕ್ಷೆ’ ಯನ್ನು ಮಾತ್ರ ನಿಷೇಧಿಸಲಾಯಿತು’ ಎಂದು ಅವರು ಗಮನ ಸೆಳೆದರು.<br /> <br /> <strong>ಯಾರೂ ಬೇಕಾದರೂ ದೂರು ನೀಡಬಹುದು</strong><br /> ‘ಸುಳ್ಳು ಪ್ರಮಾಣ ಪತ್ರ ನೀಡುವ ಅಭ್ಯರ್ಥಿಗಳ ವಿರುದ್ಧ ಚುನಾವಣಾಧಿಕಾರಿ ಅಥವಾ ಸಾರ್ವಜನಿಕರು ಕ್ರಮ ಕೈಗೊಳ್ಳುವಂತೆ ದೂರು ನೀಡಬಹುದು‘ ಎಂದು ಸಂಪತ್ ಇದೇ ವೇಳೆ ತಿಳಿಸಿದರು.<br /> <br /> ‘ಸದ್ಯದ ಕಾನೂನಿನ ಪ್ರಕಾರ, ಸುಳ್ಳು ಪ್ರಮಾಣ ಪತ್ರ ನೀಡುವವರ ವಿರುದ್ಧದ ಆರೋಪ ಸಾಬೀತಾದಲ್ಲಿ ಅಂತಹವರು ಆರು ತಿಂಗಳು ಜೈಲು ಶಿಕ್ಷೆ ಮತ್ತು ದಂಡ ಪಾವತಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>