<p>ಹುಮನಾಬಾದ್: ನಗರದ ಹೊರವಲಯದ ಆರ್.ಟಿ.ಒ ಚೆಕ್ಪೋಸ್ಟ್ ಪಕ್ಕದ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಂದ ಪ್ರತಿನಿತ್ಯ ಹರಿಯುವ ವಿಷಪೂರಿತ ರಾಸಾಯನಿಕ ತ್ಯಾಜ್ಯ ಹೆದ್ದಾರಿ ಪಕ್ಕದ ಹಲವು ಚೆಕ್ಡ್ಯಾಂ ಸೇರುತ್ತಿರುವುದು ಆ ಭಾಗದ ರೈತರು ಮತ್ತು ಪರಿಸರಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.<br /> <br /> ಗುಲ್ಬರ್ಗ ಮಾರ್ಗದಲ್ಲಿನ ಕೆಲವು ಕಾರ್ಖಾನೆಗಳು ಹಲವು ವರ್ಷಗಳಿಂದ ಕಾರ್ಖಾನೆಯಿಂದ ಹೊರಬರುತ್ತಿರುವ ವಿಷಪೂರಿತ ರಾಸಾಯನಿಕ ತಾಜ್ಯ ಪಕ್ಕದ ಚೆಕ್ಡ್ಯಾಂ ಮಾತ್ರವಲ್ಲದೇ ಸುತ್ತಮುತ್ತಲಿನ ಹೊಲಗಳಲ್ಲಿನ ಬಾವಿಗಳಿಗೂ ಸೇರಿ ನೀರು ಸಂಪೂರ್ಣ ಮಲಿನಗೊಂಡು ಬಳಕೆಗೆ ಬಾರದ ಸ್ಥತಿಗೆ ತಲುಪಿದೆ ಎಂದು ಸಾರ್ವಜನಿಕರು ದೂರಿದರು. <br /> <br /> ಆ ನೀರು ಸೇವಿಸಿ ದನಕರುಗಳು ಸಾವನ್ನಪ್ಪಿವೆ. ಈ ನೀರಲ್ಲಿ ಸ್ನಾನ ಮಾಡಿದವರಿಗೆ ಚರ್ಮರೋದ ತಗಲಿದ ನಿದರ್ಶನಗಳಿವೆ. ಬೆಳೆಗೆ ಈ ನೀರು ಬಿಡುವುದಕ್ಕೂ ಭಯ ಆಗುತ್ತಿದೆ ಎಂದು ಹೊಲದ ವಾರಸುದಾರ ಗಡವಂತಿ ಗ್ರಾಮದ ಹೆಮ್ಮಣ್ಣಿ ಪರಿವಾರ ಸದಸ್ಯರು ಆತಂಕ ವ್ಯಕ್ತಪಡಿಸಿದರು.<br /> <br /> ಕಾರ್ಖಾನೆಗಳಿಂದ ದುರ್ನಾತ ಹರಡುತ್ತಿದ್ದು, ಜನರಿಗೆ ಜೀವದ ಭಯ ಮೂಡಿಸಿದೆ ಎಂದು ಹುಮನಾಬಾದ್ನ ಪರಿಸರಪ್ರೇಮಿ ಶಿವಶಂಕರ ತರನಳ್ಳಿ ಮೊಬೈಲ್ ಮೂಲಕ `ಪ್ರಜಾವಾಣಿ~ಗೆ ಸಂಪರ್ಕಿಸಿ ಆತಂಕ ತೋಡಿಕೊಂಡರು. <br /> <br /> ಅನೇಕ ಹೋರಾಟ: ವಿಷಪೂರಿತ ದುರ್ನಾತ ತಡೆಗಟ್ಟುವಂತೆ ಒತ್ತಾಯಿಸಿ, ಗಡವಂತಿ, ಮೋಳಕೇರಾ, ಮಾಣಿಕನಗರ, ಬಸಂತಪುರ, ವಾಂಜ್ರಿ ಮೊದಲಾದ ಗ್ರಾಮಗಳ ನೂರಾರು ಮಂದಿ ಕಳೆದ ಹಲವು ವರ್ಷಗಳಿಂದ ರಸ್ತೆತಡೆ ಪ್ರತಿಭಟನೆ ನಡೆಸಿರುವುದು ಈಗ ಇತಿಹಾಸ. ಈ ಕಾರ್ಖಾನೆಗಳಿಂದ ಬರುವ ದುರ್ನಾತ ಸಹಿಸದೆ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಸ್ಥಳಾಂತರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. <br /> <br /> ಸಣ್ಣಪುಟ್ಟ ಸಮಸ್ಯೆ ಎತ್ತಿಕೊಂಡು ಧರಣಿ, ಪ್ರತಿಭಟನೆ, ಸತ್ಯಾಗ್ರಹ ಮತ್ತು ರಸ್ತೆತಡೆ ನಡೆಸುವ ವಿವಿಧ ಸಂಘಟನೆಗಳ ಮುಖಂಡರು ಸಾಮಾಜಿಕ ಜವಾಬ್ದಾರಿ ನಿಭಾಯಿಸಿ ಉತ್ತಮ ಪರಿಸರ ನಿರ್ಮಾಣಕ್ಕಾಗಿ ಮುಂದಾಗಬೇಕು ಎನ್ನುವುದು ಪರಿಸರ ಪ್ರೇಮಿಗಳ ಸಲಹೆ.<br /> <br /> ಹೆದ್ದಾರಿ ಉನ್ನತೀಕರಣದಿಂದ ಪರಿಸರ ಹಾಳುಗುವ ಕುರಿತು ಸಲಹೆ ನೀಡುವಂತೆ ಹೆದ್ದಾರಿ ಅಕ್ಕಪಕ್ಕದ ರೈತರು ಮತ್ತು ಉದ್ಯಮಿಗಳ ಸಲಹೆ ಪಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಆಗಸ್ಟ್ 1ರಂದು ಹುಮನಾಬಾದ್ಗೆ ಆಗಮಿಸಿ ಕಾರ್ಖಾನೆಗಳ ವಿಷಪೂರಿತ ರ್ಯಾಜ್ಯದ ವಿಲೆವಾರಿ ಕುರಿತು ಪರಿಶೀಲಿಸಿ ಕ್ರಮ ಜರುಗಿಸುವುದಾಗಿ `ಪ್ರಜಾವಾಣಿ~ಗೆ ತಿಳಿಸಿದ್ದರು. ವಾಸ್ತವ ಸ್ಥಿತಿ ಕುರಿತು ಅವಲೋಕನ ಮಾಡಿದ ನಂತರವಾದರೂ ಅಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿ ಎನ್ನುವುದು ಸಾರ್ವಜನಿಕರ ಒತ್ತಾಸೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಮನಾಬಾದ್: ನಗರದ ಹೊರವಲಯದ ಆರ್.ಟಿ.ಒ ಚೆಕ್ಪೋಸ್ಟ್ ಪಕ್ಕದ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಂದ ಪ್ರತಿನಿತ್ಯ ಹರಿಯುವ ವಿಷಪೂರಿತ ರಾಸಾಯನಿಕ ತ್ಯಾಜ್ಯ ಹೆದ್ದಾರಿ ಪಕ್ಕದ ಹಲವು ಚೆಕ್ಡ್ಯಾಂ ಸೇರುತ್ತಿರುವುದು ಆ ಭಾಗದ ರೈತರು ಮತ್ತು ಪರಿಸರಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.<br /> <br /> ಗುಲ್ಬರ್ಗ ಮಾರ್ಗದಲ್ಲಿನ ಕೆಲವು ಕಾರ್ಖಾನೆಗಳು ಹಲವು ವರ್ಷಗಳಿಂದ ಕಾರ್ಖಾನೆಯಿಂದ ಹೊರಬರುತ್ತಿರುವ ವಿಷಪೂರಿತ ರಾಸಾಯನಿಕ ತಾಜ್ಯ ಪಕ್ಕದ ಚೆಕ್ಡ್ಯಾಂ ಮಾತ್ರವಲ್ಲದೇ ಸುತ್ತಮುತ್ತಲಿನ ಹೊಲಗಳಲ್ಲಿನ ಬಾವಿಗಳಿಗೂ ಸೇರಿ ನೀರು ಸಂಪೂರ್ಣ ಮಲಿನಗೊಂಡು ಬಳಕೆಗೆ ಬಾರದ ಸ್ಥತಿಗೆ ತಲುಪಿದೆ ಎಂದು ಸಾರ್ವಜನಿಕರು ದೂರಿದರು. <br /> <br /> ಆ ನೀರು ಸೇವಿಸಿ ದನಕರುಗಳು ಸಾವನ್ನಪ್ಪಿವೆ. ಈ ನೀರಲ್ಲಿ ಸ್ನಾನ ಮಾಡಿದವರಿಗೆ ಚರ್ಮರೋದ ತಗಲಿದ ನಿದರ್ಶನಗಳಿವೆ. ಬೆಳೆಗೆ ಈ ನೀರು ಬಿಡುವುದಕ್ಕೂ ಭಯ ಆಗುತ್ತಿದೆ ಎಂದು ಹೊಲದ ವಾರಸುದಾರ ಗಡವಂತಿ ಗ್ರಾಮದ ಹೆಮ್ಮಣ್ಣಿ ಪರಿವಾರ ಸದಸ್ಯರು ಆತಂಕ ವ್ಯಕ್ತಪಡಿಸಿದರು.<br /> <br /> ಕಾರ್ಖಾನೆಗಳಿಂದ ದುರ್ನಾತ ಹರಡುತ್ತಿದ್ದು, ಜನರಿಗೆ ಜೀವದ ಭಯ ಮೂಡಿಸಿದೆ ಎಂದು ಹುಮನಾಬಾದ್ನ ಪರಿಸರಪ್ರೇಮಿ ಶಿವಶಂಕರ ತರನಳ್ಳಿ ಮೊಬೈಲ್ ಮೂಲಕ `ಪ್ರಜಾವಾಣಿ~ಗೆ ಸಂಪರ್ಕಿಸಿ ಆತಂಕ ತೋಡಿಕೊಂಡರು. <br /> <br /> ಅನೇಕ ಹೋರಾಟ: ವಿಷಪೂರಿತ ದುರ್ನಾತ ತಡೆಗಟ್ಟುವಂತೆ ಒತ್ತಾಯಿಸಿ, ಗಡವಂತಿ, ಮೋಳಕೇರಾ, ಮಾಣಿಕನಗರ, ಬಸಂತಪುರ, ವಾಂಜ್ರಿ ಮೊದಲಾದ ಗ್ರಾಮಗಳ ನೂರಾರು ಮಂದಿ ಕಳೆದ ಹಲವು ವರ್ಷಗಳಿಂದ ರಸ್ತೆತಡೆ ಪ್ರತಿಭಟನೆ ನಡೆಸಿರುವುದು ಈಗ ಇತಿಹಾಸ. ಈ ಕಾರ್ಖಾನೆಗಳಿಂದ ಬರುವ ದುರ್ನಾತ ಸಹಿಸದೆ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಸ್ಥಳಾಂತರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. <br /> <br /> ಸಣ್ಣಪುಟ್ಟ ಸಮಸ್ಯೆ ಎತ್ತಿಕೊಂಡು ಧರಣಿ, ಪ್ರತಿಭಟನೆ, ಸತ್ಯಾಗ್ರಹ ಮತ್ತು ರಸ್ತೆತಡೆ ನಡೆಸುವ ವಿವಿಧ ಸಂಘಟನೆಗಳ ಮುಖಂಡರು ಸಾಮಾಜಿಕ ಜವಾಬ್ದಾರಿ ನಿಭಾಯಿಸಿ ಉತ್ತಮ ಪರಿಸರ ನಿರ್ಮಾಣಕ್ಕಾಗಿ ಮುಂದಾಗಬೇಕು ಎನ್ನುವುದು ಪರಿಸರ ಪ್ರೇಮಿಗಳ ಸಲಹೆ.<br /> <br /> ಹೆದ್ದಾರಿ ಉನ್ನತೀಕರಣದಿಂದ ಪರಿಸರ ಹಾಳುಗುವ ಕುರಿತು ಸಲಹೆ ನೀಡುವಂತೆ ಹೆದ್ದಾರಿ ಅಕ್ಕಪಕ್ಕದ ರೈತರು ಮತ್ತು ಉದ್ಯಮಿಗಳ ಸಲಹೆ ಪಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಆಗಸ್ಟ್ 1ರಂದು ಹುಮನಾಬಾದ್ಗೆ ಆಗಮಿಸಿ ಕಾರ್ಖಾನೆಗಳ ವಿಷಪೂರಿತ ರ್ಯಾಜ್ಯದ ವಿಲೆವಾರಿ ಕುರಿತು ಪರಿಶೀಲಿಸಿ ಕ್ರಮ ಜರುಗಿಸುವುದಾಗಿ `ಪ್ರಜಾವಾಣಿ~ಗೆ ತಿಳಿಸಿದ್ದರು. ವಾಸ್ತವ ಸ್ಥಿತಿ ಕುರಿತು ಅವಲೋಕನ ಮಾಡಿದ ನಂತರವಾದರೂ ಅಧಿಕಾರಿಗಳು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿ ಎನ್ನುವುದು ಸಾರ್ವಜನಿಕರ ಒತ್ತಾಸೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>