<p>ಹೈದರಾಬಾದ್ (ಐಎಎನ್ಎಸ್): ಆಂಧ್ರ ಪ್ರದೇಶ ಪೊಲೀಸರು ಶನಿವಾರ ಬಂಧಿತ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಕಾರು ಚಾಲಕನ ಮನೆಯಿಂದ 4 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.<br /> ಪೊಲೀಸರು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸರ್ಕಾರಿ ಅಧಿಕಾರಿಯೊಬ್ಬರ ಬಂಧುಗಳ ಮನೆ ಶೋಧನೆಯನ್ನೂ ನಡೆಸಿದ್ದಾರೆ.<br /> <br /> ಅನಂತಪುರ ಪಟ್ಟಣದಲ್ಲಿ ಪೊಲೀಸರು ಕರ್ನಾಟಕದ ಮಾಜಿ ಸಚಿವರ ಮನೆಯ ಕಾರು ಚಾಲಕ ಬಾಷಾ ಮನೆಯಲ್ಲಿ ಶೋಧ ನಡೆಸಿ 4 ಲಕ್ಷ ರೂಪಾಯಿ ನಗದು ಹಣ, 2 ಕಿಲೋ ಗ್ರಾಂ ಬೆಳ್ಳಿ ವಸ್ತುಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡರು.<br /> <br /> ಚಾಲಕನ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ ಎಂದು ಮೂಲಗಳು ಹೇಳಿವೆ.<br /> <br /> ಗಣಿಗಾರಿಕಾ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಅವರ ಮನೆಗಳಲ್ಲೂ ಪೊಲೀಸರು ಶೋಧ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಈ ನಡುವೆ ಅನಂತಪುರ ಜಿಲ್ಲಾ ನ್ಯಾಯಾಲಯವು ಇನ್ನೊಬ್ಬ ಕಾರು ಚಾಲಕ ವೆಂಕಟರಾಮಿ ರೆಡ್ಡಿ ಮತ್ತು ಸಹಾಯಕ ಈಶ್ವರ ರೆಡ್ಡಿಯನ್ನು ಶನಿವಾರ ಪೊಲೀಸ್ ವಶಕ್ಕೆ ಒಪ್ಪಿಸಿತು. ಇವರಿಬ್ಬರ ಬಳಿ ಇದ್ದ ವಾಹನದಿಂದ 5.9 ಕೋಟಿ ರೂಪಾಯಿಗಳ ನೋಟುಗಳ ಕಂತೆಯನ್ನು ವಶ ಪಡಿಸಿಕೊಳ್ಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೈದರಾಬಾದ್ (ಐಎಎನ್ಎಸ್): ಆಂಧ್ರ ಪ್ರದೇಶ ಪೊಲೀಸರು ಶನಿವಾರ ಬಂಧಿತ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಕಾರು ಚಾಲಕನ ಮನೆಯಿಂದ 4 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.<br /> ಪೊಲೀಸರು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸರ್ಕಾರಿ ಅಧಿಕಾರಿಯೊಬ್ಬರ ಬಂಧುಗಳ ಮನೆ ಶೋಧನೆಯನ್ನೂ ನಡೆಸಿದ್ದಾರೆ.<br /> <br /> ಅನಂತಪುರ ಪಟ್ಟಣದಲ್ಲಿ ಪೊಲೀಸರು ಕರ್ನಾಟಕದ ಮಾಜಿ ಸಚಿವರ ಮನೆಯ ಕಾರು ಚಾಲಕ ಬಾಷಾ ಮನೆಯಲ್ಲಿ ಶೋಧ ನಡೆಸಿ 4 ಲಕ್ಷ ರೂಪಾಯಿ ನಗದು ಹಣ, 2 ಕಿಲೋ ಗ್ರಾಂ ಬೆಳ್ಳಿ ವಸ್ತುಗಳು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡರು.<br /> <br /> ಚಾಲಕನ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ ಎಂದು ಮೂಲಗಳು ಹೇಳಿವೆ.<br /> <br /> ಗಣಿಗಾರಿಕಾ ಇಲಾಖೆಯ ಮಾಜಿ ನಿರ್ದೇಶಕ ವಿ.ಡಿ. ರಾಜಗೋಪಾಲ್ ಅವರ ಮನೆಗಳಲ್ಲೂ ಪೊಲೀಸರು ಶೋಧ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಈ ನಡುವೆ ಅನಂತಪುರ ಜಿಲ್ಲಾ ನ್ಯಾಯಾಲಯವು ಇನ್ನೊಬ್ಬ ಕಾರು ಚಾಲಕ ವೆಂಕಟರಾಮಿ ರೆಡ್ಡಿ ಮತ್ತು ಸಹಾಯಕ ಈಶ್ವರ ರೆಡ್ಡಿಯನ್ನು ಶನಿವಾರ ಪೊಲೀಸ್ ವಶಕ್ಕೆ ಒಪ್ಪಿಸಿತು. ಇವರಿಬ್ಬರ ಬಳಿ ಇದ್ದ ವಾಹನದಿಂದ 5.9 ಕೋಟಿ ರೂಪಾಯಿಗಳ ನೋಟುಗಳ ಕಂತೆಯನ್ನು ವಶ ಪಡಿಸಿಕೊಳ್ಳಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>