<p>ದೀಪಾ ಸನ್ನಿಧಿ ಖುಷಿಯಾಗಿದ್ದರು. ಪ್ರೀತಂ ಗುಬ್ಬಿ ನಿರ್ದೇಶನದ `ಜಾನೂ~ ಚಿತ್ರೀಕರಣ ಮುಗಿಸಿರುವ ದೀಪಾ ನಗುನಗುತ್ತಾ ಚಿತ್ರದ ಅನುಭವ ಹಂಚಿಕೊಂಡರು. `ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. <br /> <br /> ಒಂದು ಹಾಡು ಮಾತ್ರ ಬಾಕಿ ಉಳಿದಿದೆ~ ಎಂದರು. ಹಾಗೆಯೇ `ಪರಮಾತ್ಮ~ದ ನಿರ್ಮಾಪಕರಲ್ಲಿ ಒಬ್ಬರಾದ ಜಯಣ್ಣ ಅವರ ಬ್ಯಾನರ್ನಲ್ಲಿ ಮತ್ತೊಮ್ಮೆ ನಟಿಸಿದ್ದು ಪರಿಚಿತ ಕುಟುಂಬದಲ್ಲಿ ಇದ್ದು ಬಂದಂಥ ಅನುಭವ ನೀಡಿತು ಎನ್ನುತ್ತಾರೆ.<br /> <br /> ಕಳೆದ ವರ್ಷದ ಸೂಪರ್ಹಿಟ್ ಚಿತ್ರ `ಸಾರಥಿ~ಯ ಮೂಲಕ ಅಭಿನಯ ಕ್ಷೇತ್ರಕ್ಕೆ ಅಡಿಯಿಟ್ಟ ದೀಪಾ ಅದು ಬಿಡುಗಡೆಯಾಗುವುದಕ್ಕೆ ಮುಂಚೆಯೇ ಪುನೀತ್ ರಾಜ್ಕುಮಾರ್ ನಾಯಕರಾಗಿದ್ದ `ಪರಮಾತ್ಮ~ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದವರು.<br /> <br /> `ಪರಮಾತ್ಮ~ ಚಿತ್ರದ ನಟನೆಗೆ ಮೆಚ್ಚುಗೆ ಪಡೆದುಕೊಂಡ ದೀಪಾ, ಪ್ರೀತಂ ಗುಬ್ಬಿ ನಿರ್ದೇಶನದ `ಜಾನೂ~ ಚಿತ್ರಕ್ಕೆ ರುಜು ಮಾಡಿದರು. ಸದ್ಯಕ್ಕೆ `ಜಾನೂ~ ಚಿತ್ರೀಕರಣ ಮುಗಿಸಿ ಅದರ ಗುಂಗಿನಲ್ಲಿಯೇ ತೇಲುತ್ತಿರುವ ಅವರಿಗೆ ಅವಕಾಶಗಳ ಕೊರತೆಯೇನೂ ಇಲ್ಲ. ಬರುತ್ತಿರುವ ಅವಕಾಶಗಳನ್ನು ತೂಗಿ ಅಳೆದು ನೋಡುವ ಪ್ರವೃತ್ತಿ ಅವರದು. <br /> <br /> ಅದರಿಂದ ಸಾಕಷ್ಟು ಸಮಯಾವಕಾಶ ತೆಗೆದುಕೊಂಡು ಪಾತ್ರಗಳ ಆಯ್ಕೆಯಲ್ಲಿ ನಿರತರಾಗಿದ್ದಾರೆ.`ಇನ್ನು ಕೆಲವೇ ದಿನಗಳಲ್ಲಿ ಎರಡು ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ.<br /> <br /> ನನಗೆ ಕತೆಯ ಜೊತೆಗೆ ಇಡೀ ತಂಡ ಮುಖ್ಯ. ಅದರಿಂದ ಸಿನಿಮಾ ಒಪ್ಪಿಕೊಳ್ಳುವುದು ತಡವಾಗುತ್ತದೆ~ ಎನ್ನುವ ದೀಪಾ ಅವರದು ಒಂದೇ ಬಾರಿಗೆ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುವ ಜಾಯಮಾನ ಅಲ್ಲ. <br /> <br /> `ಜಾನೂ~ ಚಿತ್ರದಲ್ಲಿ ಹುಬ್ಬಳ್ಳಿ ಶೈಲಿಯ ಕನ್ನಡವನ್ನು ಮಾತನಾಡಿರುವ ದೀಪಾ ಅದರಿಂದ ಪುಳಕಿತ ಭಾವ ಅನುಭವಿಸುತ್ತಿದ್ದಾರೆ. `ಚಿತ್ರದಲ್ಲಿ ಹಳ್ಳಿಹುಡುಗಿಯೊಬ್ಬಳು ನಗರಕ್ಕೆ ಬಂದು, ನಾಯಕನನ್ನು ಭೇಟಿ ಮಾಡಿ ಪ್ರೀತಿ ಮಾಡುವುದು ಕತೆ. <br /> <br /> ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಬೀದರ್, ಬಾದಾಮಿ ಸುತ್ತಮುತ್ತ ಹೋಗಿದ್ದೆ. ಅಲ್ಲಿನ ಜನರ ದೇಹ ಭಾಷೆ, ಮಾತಿನ ಶೈಲಿ ಕಲಿತುಕೊಳ್ಳುವುದಕ್ಕೆ ಅಲ್ಲಿಯೇ ಚಿತ್ರೀಕರಣ ಮಾಡಿದ್ದು ನೆರವಾಯಿತು.<br /> <br /> ಯಶ್ ಯಾವತ್ತೂ ಅನುಭವಿ ನಟರಂತೆ ವರ್ತಿಸಲಿಲ್ಲ. `ನನಗೂ ಮೊದಲು ಹೀಗಾಗಿತ್ತು~ ಎಂದು ಹೇಳಿ ನನ್ನ ತಪ್ಪುಗಳನ್ನು ತಿದ್ದುತ್ತಿದ್ದರು~ ಎಂದು ನಮ್ರವಾಗಿ ಮಾತನಾಡುವ ದೀಪಾಗೆ ಒಟ್ಟಾರೆ ಚಿತ್ರತಂಡ ನೀಡಿದ ಸಹಕಾರ ಇಷ್ಟವಾಗಿದೆ.<br /> <br /> ಪ್ರೀತಂ ಗುಬ್ಬಿ ತಮ್ಮ ಪಾತ್ರ ನಿರ್ವಹಣೆಯಲ್ಲಿ ನೆರವಾದ ವಿಚಾರವನ್ನು ಮಾತನಾಡುತ್ತಾ, `ಉತ್ತರ ಕರ್ನಾಟಕದ ಹುಡುಗಿಯರು ತುಂಬಾ ಎತ್ತರದ ದನಿಯಲ್ಲಿ ಮಾತನಾಡುತ್ತಾರೆ ಅದನ್ನು ಕಲಿಯುವುದೇ ನನಗೊಂದು ಸವಾಲಾಗಿತ್ತು. <br /> <br /> ಅದೆಲ್ಲವನ್ನೂ ಮಕ್ಕಳಿಗೆ ಕಲಿಸುವಂತೆ ಕಲಿಸಿಕೊಟ್ಟವರು ಪ್ರೀತಂ~ ಎಂದು ದೀಪಾ ಮೆಚ್ಚುಗೆ ಸೂಸುತ್ತಾರೆ.`ಜಾನೂ~ ತಂಡದಲ್ಲಿ ಹೆಚ್ಚು ಯುವಕರೇ ಇದ್ದ ಕಾರಣ ಭಾವನೆಗಳ ಪರಸ್ಪರ ವಿನಿಮಯ ಸುಲಭವಾಯಿತು. ಮನರಂಜನೆಯ ಥೀಮ್ ಇರುವ ಲವ್ಸ್ಟೋರಿ ಚಿತ್ರದ್ದು.<br /> <br /> ಎಲ್ಲರೂ ಗಂಭೀರವಾಗಿ ತೊಡಗಿಸಿಕೊಂಡು ಚಿತ್ರ ಮುಗಿಸಿರುವುದಾಗಿ ಹೇಳಿದ ದೀಪಾ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೀಪಾ ಸನ್ನಿಧಿ ಖುಷಿಯಾಗಿದ್ದರು. ಪ್ರೀತಂ ಗುಬ್ಬಿ ನಿರ್ದೇಶನದ `ಜಾನೂ~ ಚಿತ್ರೀಕರಣ ಮುಗಿಸಿರುವ ದೀಪಾ ನಗುನಗುತ್ತಾ ಚಿತ್ರದ ಅನುಭವ ಹಂಚಿಕೊಂಡರು. `ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. <br /> <br /> ಒಂದು ಹಾಡು ಮಾತ್ರ ಬಾಕಿ ಉಳಿದಿದೆ~ ಎಂದರು. ಹಾಗೆಯೇ `ಪರಮಾತ್ಮ~ದ ನಿರ್ಮಾಪಕರಲ್ಲಿ ಒಬ್ಬರಾದ ಜಯಣ್ಣ ಅವರ ಬ್ಯಾನರ್ನಲ್ಲಿ ಮತ್ತೊಮ್ಮೆ ನಟಿಸಿದ್ದು ಪರಿಚಿತ ಕುಟುಂಬದಲ್ಲಿ ಇದ್ದು ಬಂದಂಥ ಅನುಭವ ನೀಡಿತು ಎನ್ನುತ್ತಾರೆ.<br /> <br /> ಕಳೆದ ವರ್ಷದ ಸೂಪರ್ಹಿಟ್ ಚಿತ್ರ `ಸಾರಥಿ~ಯ ಮೂಲಕ ಅಭಿನಯ ಕ್ಷೇತ್ರಕ್ಕೆ ಅಡಿಯಿಟ್ಟ ದೀಪಾ ಅದು ಬಿಡುಗಡೆಯಾಗುವುದಕ್ಕೆ ಮುಂಚೆಯೇ ಪುನೀತ್ ರಾಜ್ಕುಮಾರ್ ನಾಯಕರಾಗಿದ್ದ `ಪರಮಾತ್ಮ~ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದವರು.<br /> <br /> `ಪರಮಾತ್ಮ~ ಚಿತ್ರದ ನಟನೆಗೆ ಮೆಚ್ಚುಗೆ ಪಡೆದುಕೊಂಡ ದೀಪಾ, ಪ್ರೀತಂ ಗುಬ್ಬಿ ನಿರ್ದೇಶನದ `ಜಾನೂ~ ಚಿತ್ರಕ್ಕೆ ರುಜು ಮಾಡಿದರು. ಸದ್ಯಕ್ಕೆ `ಜಾನೂ~ ಚಿತ್ರೀಕರಣ ಮುಗಿಸಿ ಅದರ ಗುಂಗಿನಲ್ಲಿಯೇ ತೇಲುತ್ತಿರುವ ಅವರಿಗೆ ಅವಕಾಶಗಳ ಕೊರತೆಯೇನೂ ಇಲ್ಲ. ಬರುತ್ತಿರುವ ಅವಕಾಶಗಳನ್ನು ತೂಗಿ ಅಳೆದು ನೋಡುವ ಪ್ರವೃತ್ತಿ ಅವರದು. <br /> <br /> ಅದರಿಂದ ಸಾಕಷ್ಟು ಸಮಯಾವಕಾಶ ತೆಗೆದುಕೊಂಡು ಪಾತ್ರಗಳ ಆಯ್ಕೆಯಲ್ಲಿ ನಿರತರಾಗಿದ್ದಾರೆ.`ಇನ್ನು ಕೆಲವೇ ದಿನಗಳಲ್ಲಿ ಎರಡು ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ.<br /> <br /> ನನಗೆ ಕತೆಯ ಜೊತೆಗೆ ಇಡೀ ತಂಡ ಮುಖ್ಯ. ಅದರಿಂದ ಸಿನಿಮಾ ಒಪ್ಪಿಕೊಳ್ಳುವುದು ತಡವಾಗುತ್ತದೆ~ ಎನ್ನುವ ದೀಪಾ ಅವರದು ಒಂದೇ ಬಾರಿಗೆ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುವ ಜಾಯಮಾನ ಅಲ್ಲ. <br /> <br /> `ಜಾನೂ~ ಚಿತ್ರದಲ್ಲಿ ಹುಬ್ಬಳ್ಳಿ ಶೈಲಿಯ ಕನ್ನಡವನ್ನು ಮಾತನಾಡಿರುವ ದೀಪಾ ಅದರಿಂದ ಪುಳಕಿತ ಭಾವ ಅನುಭವಿಸುತ್ತಿದ್ದಾರೆ. `ಚಿತ್ರದಲ್ಲಿ ಹಳ್ಳಿಹುಡುಗಿಯೊಬ್ಬಳು ನಗರಕ್ಕೆ ಬಂದು, ನಾಯಕನನ್ನು ಭೇಟಿ ಮಾಡಿ ಪ್ರೀತಿ ಮಾಡುವುದು ಕತೆ. <br /> <br /> ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕದ ಬೀದರ್, ಬಾದಾಮಿ ಸುತ್ತಮುತ್ತ ಹೋಗಿದ್ದೆ. ಅಲ್ಲಿನ ಜನರ ದೇಹ ಭಾಷೆ, ಮಾತಿನ ಶೈಲಿ ಕಲಿತುಕೊಳ್ಳುವುದಕ್ಕೆ ಅಲ್ಲಿಯೇ ಚಿತ್ರೀಕರಣ ಮಾಡಿದ್ದು ನೆರವಾಯಿತು.<br /> <br /> ಯಶ್ ಯಾವತ್ತೂ ಅನುಭವಿ ನಟರಂತೆ ವರ್ತಿಸಲಿಲ್ಲ. `ನನಗೂ ಮೊದಲು ಹೀಗಾಗಿತ್ತು~ ಎಂದು ಹೇಳಿ ನನ್ನ ತಪ್ಪುಗಳನ್ನು ತಿದ್ದುತ್ತಿದ್ದರು~ ಎಂದು ನಮ್ರವಾಗಿ ಮಾತನಾಡುವ ದೀಪಾಗೆ ಒಟ್ಟಾರೆ ಚಿತ್ರತಂಡ ನೀಡಿದ ಸಹಕಾರ ಇಷ್ಟವಾಗಿದೆ.<br /> <br /> ಪ್ರೀತಂ ಗುಬ್ಬಿ ತಮ್ಮ ಪಾತ್ರ ನಿರ್ವಹಣೆಯಲ್ಲಿ ನೆರವಾದ ವಿಚಾರವನ್ನು ಮಾತನಾಡುತ್ತಾ, `ಉತ್ತರ ಕರ್ನಾಟಕದ ಹುಡುಗಿಯರು ತುಂಬಾ ಎತ್ತರದ ದನಿಯಲ್ಲಿ ಮಾತನಾಡುತ್ತಾರೆ ಅದನ್ನು ಕಲಿಯುವುದೇ ನನಗೊಂದು ಸವಾಲಾಗಿತ್ತು. <br /> <br /> ಅದೆಲ್ಲವನ್ನೂ ಮಕ್ಕಳಿಗೆ ಕಲಿಸುವಂತೆ ಕಲಿಸಿಕೊಟ್ಟವರು ಪ್ರೀತಂ~ ಎಂದು ದೀಪಾ ಮೆಚ್ಚುಗೆ ಸೂಸುತ್ತಾರೆ.`ಜಾನೂ~ ತಂಡದಲ್ಲಿ ಹೆಚ್ಚು ಯುವಕರೇ ಇದ್ದ ಕಾರಣ ಭಾವನೆಗಳ ಪರಸ್ಪರ ವಿನಿಮಯ ಸುಲಭವಾಯಿತು. ಮನರಂಜನೆಯ ಥೀಮ್ ಇರುವ ಲವ್ಸ್ಟೋರಿ ಚಿತ್ರದ್ದು.<br /> <br /> ಎಲ್ಲರೂ ಗಂಭೀರವಾಗಿ ತೊಡಗಿಸಿಕೊಂಡು ಚಿತ್ರ ಮುಗಿಸಿರುವುದಾಗಿ ಹೇಳಿದ ದೀಪಾ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>