<p><strong>ಅಥಣಿ:</strong> ತಾಲ್ಲೂಕಿನ ಅಥಣಿ ಪಟ್ಟಣ ಪ್ರದೇಶ, ಎಲ್ಲಮ್ಮನವಾಡಿ, ಕೊಕಟ ನೂರ, ಮುರಗುಂಡಿ, ಝುಂಜುವಾಡ, ಸುಟ್ಟಟ್ಟಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಯಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಇಳೆ ಸ್ವಲ್ಪ ಮಟ್ಟಿಗೆ ತಂಪು ಕಂಡಿದೆ. <br /> <br /> ಈ ಅಕಾಲಿಕ ಮಳೆಯಿಂದ ಬೇಸಿಗೆ ಯ ಬಿಸಿಲಿನ ಕಾವು ಕಮ್ಮಿ ಯಾಗಿದ್ದರೂ ಕೂಡ ಕಟಾವಿಗೆ ಬಂದ ದ್ರಾಕ್ಷಿ ಮತ್ತು ಒಣ ದ್ರಾಕ್ಷಿ ಬೆಳೆಗೆ ಕೊಂಚ ಮಟ್ಟಿಗೆ ಹಾನಿಯಾಗಿದೆ. <br /> <br /> ಕೆಲವು ಕಡೆ ಬೀಸಿದ ಜೊರು ಗಾಳಿಗೆ ಸಿಲುಕಿ ಮಿಡಿ ಮಾವಿನ ಕಾಯಿ ಧರೆಗೆ ಉರುಳಿವೆ. ಸಂಕೋನಹಟ್ಟಿ, ಚಿಕ್ಕಟ್ಟಿ ಮತ್ತಿತರ ಕಡೆ ಆಲಿಕಲ್ಲು ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.<br /> <br /> <strong>ರಾಮದುರ್ಗ ವರದಿ</strong><br /> ರಾಮದುರ್ಗ: ತಾಲ್ಲೂಕಿನ ವಿವಿಧೆಡೆ ಬುಧವಾರ ಸಂಜೆ ಸುರಿದ ಮಳೆ ಮತ್ತು ಬಿರುಗಾಳಿಗೆ ಸಾಕಷ್ಟು ಹಾನಿ ಉಂಟಾಗಿ ರುವ ಬಗ್ಗೆ ವರದಿಯಾಗಿದೆ.<br /> <br /> ತಾಲ್ಲೂಕಿನ ಬಟಕುರ್ಕಿ ಸುತ್ತಮುತ್ತ ಆಲಿಕಲ್ಲಿನ ಮಳೆಯಾಗಿದೆ. ಆಲಿಕಲ್ಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ವಾಹನ ಚಾಲಕರು ರಸ್ತೆ ಪಕ್ಕದ ಮರಗಳ ಆಶ್ರಯ ಪಡೆದು ಹರಸಾಹಸ ಪಟ್ಟರು.<br /> <br /> ತಾಲ್ಲೂಕಿನ ಮಾಗನೂರು ಮಲ್ಲಾಪೂರ ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಮನೆಯ ಛಾವಣಿಗಳು ಹಾರಿ ಹೋಗಿವೆ ಎಂದು ಹೇಳಲಾಗಿದೆ. ಸಾಕಷ್ಟು ಪ್ರಮಾಣದ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.<br /> <br /> ರಾಮದುರ್ಗ ಪಟ್ಟಣದಲ್ಲಿಯೂ ಭಾರಿ ಬಿರುಗಾಳಿ ಬೀಸಿ ಸಾರ್ವಜನಿಕರನ್ನು ತಬ್ಬಿಬ್ಬುಗೊಳಿಸಿತು. ಪಟ್ಟಣದಲ್ಲಿ ಅಷ್ಟೊಂದು ಪ್ರಮಾಣದ ಹಾನಿ ಸಂಭವಿಸಿಲ್ಲ. ತುಂತುರ ಮಳೆ ಮಾತ್ರ ಬಿದ್ದಿದೆ.<br /> <br /> <strong>ಖಾನಾಪುರ ವರದಿ</strong><br /> ಖಾನಾಪುರ: ಮಳೆನಾಡಿನ ಮುಕುಟ ವಾಗಿರುವ ತಾಲ್ಲೂಕಿನಲ್ಲಿ ಈ ವರ್ಷದ ಬೇಸಿಗೆ ಬಿಜಾಪುರ, ಗುಲ್ಬರ್ಗ ಹಾಗೂ ಬಳ್ಳಾರಿ ಬಿಸಿಲನ್ನೂ ಮೀರಿಸು ವಂತಿಂತ್ತು. ಬಿಸಿಲಿನ ಝಳದಿಂದ ಬೆಂದಿದ್ದ ಜನರ ಮನಕ್ಕೆ ಮಂಗಳವಾರ ಹಾಗೂ ಬುಧವಾರ ಸುರಿದ ಮಳೆ ತಂಪನ್ನು ನೀಡಿತು. <br /> <br /> ತಾಲ್ಲೂಕಿನಾದ್ಯಂತ ಮಂಗಳವಾರ ಆಲಿಕಲ್ಲಿನ ಮಳೆ ಹಾಗೂ ಬುಧವಾರ ಗುಡುಗುಸಹಿತ ಭರ್ಜರಿ ಮಳೆ ಬಿದ್ದಿದೆ. ಮಳೆರಾಯನ ಆಗಮನದಿಂದ ರೈತಾಪಿ ಜನರಿಗೆ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಪ್ಪಣೆ ಬಂದಂತಾಗಿದೆ. <br /> <br /> ಇಟ್ಟಿಗೆ ತಯಾರಕರಿಗೆ ಕೊಂಚ ಬಿಸಿ ಮುಟ್ಟಿಸಿರುವ ಈ ಮಳೆ ಪರೀಕ್ಷೆ ಮುಗಿಸಿ ನಿರಾಳವಾಗಿರುವ ವಿದ್ಯಾರ್ಥಿಗಳಿಗೆ ಹೊಸ ಹುರುಪನ್ನು ನೀಡಿದೆ.<br /> <br /> ಒಟ್ಟಾರೆಯಾಗಿ ಮಳೆರಾಯನ ಆಗಮನದಿಂದ ತಾಲ್ಲೂಕಿನ ಜನರಿಗೆ ತೀವ್ರ ಸಂತೋಷವಾಗಿದೆ. ಮುಂಜಾ ನೆಯ ಸಮಯದಲ್ಲಿ ಬೀಳುತ್ತಿರುವ ಮಂಜಿನಿಂದ ತಂಪಿನ ಅನುಭವವಾದರೂ ಮಧ್ಯಾಹ್ನದ ಬಿಸಿಗಿಗೆ ಬೆವರು ಬರುತ್ತಿದ್ದು, ಸಂಜೆ ಮಳೆಯಾದ ಕಾರಣ ಮೂರು ಅನುಭವಗಳು ಒಂದೇ ದಿನದಲ್ಲಿ ಆಗಿರುವುದು ಅಪರೂಪ ವಾದಂತಾಗಿದೆ.<br /> ಅಲ್ಲದೆ, ಚೆನ್ನಮ್ಮನ ಕಿತ್ತೂರು ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ:</strong> ತಾಲ್ಲೂಕಿನ ಅಥಣಿ ಪಟ್ಟಣ ಪ್ರದೇಶ, ಎಲ್ಲಮ್ಮನವಾಡಿ, ಕೊಕಟ ನೂರ, ಮುರಗುಂಡಿ, ಝುಂಜುವಾಡ, ಸುಟ್ಟಟ್ಟಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಯಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಇಳೆ ಸ್ವಲ್ಪ ಮಟ್ಟಿಗೆ ತಂಪು ಕಂಡಿದೆ. <br /> <br /> ಈ ಅಕಾಲಿಕ ಮಳೆಯಿಂದ ಬೇಸಿಗೆ ಯ ಬಿಸಿಲಿನ ಕಾವು ಕಮ್ಮಿ ಯಾಗಿದ್ದರೂ ಕೂಡ ಕಟಾವಿಗೆ ಬಂದ ದ್ರಾಕ್ಷಿ ಮತ್ತು ಒಣ ದ್ರಾಕ್ಷಿ ಬೆಳೆಗೆ ಕೊಂಚ ಮಟ್ಟಿಗೆ ಹಾನಿಯಾಗಿದೆ. <br /> <br /> ಕೆಲವು ಕಡೆ ಬೀಸಿದ ಜೊರು ಗಾಳಿಗೆ ಸಿಲುಕಿ ಮಿಡಿ ಮಾವಿನ ಕಾಯಿ ಧರೆಗೆ ಉರುಳಿವೆ. ಸಂಕೋನಹಟ್ಟಿ, ಚಿಕ್ಕಟ್ಟಿ ಮತ್ತಿತರ ಕಡೆ ಆಲಿಕಲ್ಲು ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.<br /> <br /> <strong>ರಾಮದುರ್ಗ ವರದಿ</strong><br /> ರಾಮದುರ್ಗ: ತಾಲ್ಲೂಕಿನ ವಿವಿಧೆಡೆ ಬುಧವಾರ ಸಂಜೆ ಸುರಿದ ಮಳೆ ಮತ್ತು ಬಿರುಗಾಳಿಗೆ ಸಾಕಷ್ಟು ಹಾನಿ ಉಂಟಾಗಿ ರುವ ಬಗ್ಗೆ ವರದಿಯಾಗಿದೆ.<br /> <br /> ತಾಲ್ಲೂಕಿನ ಬಟಕುರ್ಕಿ ಸುತ್ತಮುತ್ತ ಆಲಿಕಲ್ಲಿನ ಮಳೆಯಾಗಿದೆ. ಆಲಿಕಲ್ಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ವಾಹನ ಚಾಲಕರು ರಸ್ತೆ ಪಕ್ಕದ ಮರಗಳ ಆಶ್ರಯ ಪಡೆದು ಹರಸಾಹಸ ಪಟ್ಟರು.<br /> <br /> ತಾಲ್ಲೂಕಿನ ಮಾಗನೂರು ಮಲ್ಲಾಪೂರ ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಮನೆಯ ಛಾವಣಿಗಳು ಹಾರಿ ಹೋಗಿವೆ ಎಂದು ಹೇಳಲಾಗಿದೆ. ಸಾಕಷ್ಟು ಪ್ರಮಾಣದ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.<br /> <br /> ರಾಮದುರ್ಗ ಪಟ್ಟಣದಲ್ಲಿಯೂ ಭಾರಿ ಬಿರುಗಾಳಿ ಬೀಸಿ ಸಾರ್ವಜನಿಕರನ್ನು ತಬ್ಬಿಬ್ಬುಗೊಳಿಸಿತು. ಪಟ್ಟಣದಲ್ಲಿ ಅಷ್ಟೊಂದು ಪ್ರಮಾಣದ ಹಾನಿ ಸಂಭವಿಸಿಲ್ಲ. ತುಂತುರ ಮಳೆ ಮಾತ್ರ ಬಿದ್ದಿದೆ.<br /> <br /> <strong>ಖಾನಾಪುರ ವರದಿ</strong><br /> ಖಾನಾಪುರ: ಮಳೆನಾಡಿನ ಮುಕುಟ ವಾಗಿರುವ ತಾಲ್ಲೂಕಿನಲ್ಲಿ ಈ ವರ್ಷದ ಬೇಸಿಗೆ ಬಿಜಾಪುರ, ಗುಲ್ಬರ್ಗ ಹಾಗೂ ಬಳ್ಳಾರಿ ಬಿಸಿಲನ್ನೂ ಮೀರಿಸು ವಂತಿಂತ್ತು. ಬಿಸಿಲಿನ ಝಳದಿಂದ ಬೆಂದಿದ್ದ ಜನರ ಮನಕ್ಕೆ ಮಂಗಳವಾರ ಹಾಗೂ ಬುಧವಾರ ಸುರಿದ ಮಳೆ ತಂಪನ್ನು ನೀಡಿತು. <br /> <br /> ತಾಲ್ಲೂಕಿನಾದ್ಯಂತ ಮಂಗಳವಾರ ಆಲಿಕಲ್ಲಿನ ಮಳೆ ಹಾಗೂ ಬುಧವಾರ ಗುಡುಗುಸಹಿತ ಭರ್ಜರಿ ಮಳೆ ಬಿದ್ದಿದೆ. ಮಳೆರಾಯನ ಆಗಮನದಿಂದ ರೈತಾಪಿ ಜನರಿಗೆ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಪ್ಪಣೆ ಬಂದಂತಾಗಿದೆ. <br /> <br /> ಇಟ್ಟಿಗೆ ತಯಾರಕರಿಗೆ ಕೊಂಚ ಬಿಸಿ ಮುಟ್ಟಿಸಿರುವ ಈ ಮಳೆ ಪರೀಕ್ಷೆ ಮುಗಿಸಿ ನಿರಾಳವಾಗಿರುವ ವಿದ್ಯಾರ್ಥಿಗಳಿಗೆ ಹೊಸ ಹುರುಪನ್ನು ನೀಡಿದೆ.<br /> <br /> ಒಟ್ಟಾರೆಯಾಗಿ ಮಳೆರಾಯನ ಆಗಮನದಿಂದ ತಾಲ್ಲೂಕಿನ ಜನರಿಗೆ ತೀವ್ರ ಸಂತೋಷವಾಗಿದೆ. ಮುಂಜಾ ನೆಯ ಸಮಯದಲ್ಲಿ ಬೀಳುತ್ತಿರುವ ಮಂಜಿನಿಂದ ತಂಪಿನ ಅನುಭವವಾದರೂ ಮಧ್ಯಾಹ್ನದ ಬಿಸಿಗಿಗೆ ಬೆವರು ಬರುತ್ತಿದ್ದು, ಸಂಜೆ ಮಳೆಯಾದ ಕಾರಣ ಮೂರು ಅನುಭವಗಳು ಒಂದೇ ದಿನದಲ್ಲಿ ಆಗಿರುವುದು ಅಪರೂಪ ವಾದಂತಾಗಿದೆ.<br /> ಅಲ್ಲದೆ, ಚೆನ್ನಮ್ಮನ ಕಿತ್ತೂರು ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>