<p>ಹೈದರಾಬಾದ್: ತೆಲಂಗಾಣವು 2014ರ ಜೂನ್್ ಒಂದರ ಮಧ್ಯರಾತ್ರಿ ದೇಶದ 29ನೇ ರಾಜ್ಯವಾಗಿ ಉದಯಿಸಲಿದೆ. ಈ ಸಂಬಂಧ ಅಧಿಕೃತ ಘೋಷಣೆ ಹೊರಬಿದ್ದಿದೆ. ‘ಹೊಸ ರಾಜ್ಯವು ನಿಗದಿತ ದಿನಾಂಕದಂದೇ ಅಸ್ತಿತ್ವಕ್ಕೆ ಬರಬೇಕು. ಗಡುವು ವಿಸ್ತರಿಸಲು ಸಾಧ್ಯವಿಲ್ಲ’ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್್ ಗೋಸ್ವಾಮಿ ನೇತೃತ್ವದ ಕಾರ್ಯಪಡೆ ರಾಜ್ಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.<br /> <br /> ರಾಜ್ಯ ವಿಭಜನೆ ಪ್ರಕ್ರಿಯೆಗೆ ಸಂಬಂಧಿಸಿ ಮುಖ್ಯಕಾರ್ಯದರ್ಶಿ ಡಾ. ಪಿ.ಕೆ. ಮೊಹಂತಿ ಜತೆ ಇಲ್ಲಿ ಕೊನೆಯ ಸುತ್ತಿನ ಸಮಾಲೋಚನೆ ನಡೆಸಿದ ಗೋಸ್ವಾಮಿ, ‘ಬೇರೆ ಕೆಲಸ ಬದಿಗಿಡಿ.<br /> <br /> ರಾಜ್ಯ ವಿಭಜನೆ ಪ್ರಕ್ರಿಯೆಗೆ ಅಗತ್ಯವಿದ್ದರೆ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಿ’ ಎಂದು ಕಟ್ಟುನಿಟ್ಟಾಗಿ ಹೇಳಿದರು.<br /> ಕಡತ ವರ್ಗಾವಣೆ, ಆಸ್ತಿ, ಕಟ್ಟಡಗಳು, ಭೂಮಿ, ಗಡಿ, ಬೊಕ್ಕಸ ಹಾಗೂ ಉದ್ಯೋಗಿಗಳಿಗೆ ಸಂಬಂಧಿಸಿದ ಸಮಿತಿಗಳ ಕಾರ್ಯವೈಖರಿಯನ್ನು ಅವರು ಪುನರ್ ಪರಿಶೀಲಿಸಿದರು.<br /> <br /> ‘ಶಿಕ್ಷಣ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ರಾಜ್ಯ ವಿಭಜನೆಯ ನಂತರವೂ ಅವುಗಳನ್ನು ಪ್ರತ್ಯೇಕಿಸಬಹುದು.<br /> <br /> ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ಸಂಸತ್ನಲ್ಲಿ ಅಂಗೀಕಾರಗೊಂಡ ಆಂಧ್ರಪ್ರದೇಶ ಪುನರ್ರಚನೆ ಮಸೂದೆ ಹಾಗೂ<br /> ನಿಯಮಾವಳಿಗೆ ಅನುಸಾರವಾಗಿ ವಿಭಜನೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು’ ಎಂದು ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸಲಹೆ ನೀಡಿದರು.<br /> <br /> ಗೋಸ್ವಾಮಿ ಸಹಾಯಕರಾದ ರಾಜೀವ್್ ಶರ್ಮ ಮತ್ತು ಸುರೇಶ್್ ಕುಮಾರ್, ವಿಭಜನೆಗೆ ಸಂಬಂಧಿಸಿದ ಎಲ್ಲ 15 ಉಪಸಮಿತಿಗಳ ಪ್ರಗತಿ ಹಾಗೂ ಕಾರ್ಯವೈಖರಿಯನ್ನು ಪುನರ್ ಪರಿಶೀಲಿಸುತ್ತಿದ್ದಾರೆ. ಅಲ್ಲದೇ ಈ ಸಮಿತಿಗಳು ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುತ್ತಿವೆಯೇ ಎನ್ನುವುದನ್ನೂ ಗಮನಿಸುತ್ತಿದ್ದಾರೆ.<br /> <br /> ಉಭಯ ರಾಜ್ಯಗಳ ನಡುವಣ ಐಎಫ್ಎಸ್, ಐಎಎಸ್ ಹಾಗೂ ಐಪಿಎಸ್ ಸೇವೆಗಳನ್ನು ಪ್ರತ್ಯೇಕಿಸಲು ಜಾಗೃತ ದಳದ ಮಾಜಿ ಆಯುಕ್ತ ಪ್ರತ್ಯುಷ್್ ಸಿನ್ಹ ನೇತೃತ್ವದಲ್ಲಿ ಕೇಂದ್ರವು ಸಮಿತಿ ರಚಿಸಿದೆ. ನಿವೃತ್ತ ಐಎಎಸ್್ ಅಧಿಕಾರಿ ಕಮಲನಾಥನ್್ ಅವರೊಂದಿಗೆ ಸಮಾಲೋಚಿಸಿ ಈ ಸಮಿತಿ ಕಾರ್ಯನಿರ್ವಹಿಸಲಿದೆ.<br /> <br /> ಪ್ರಮುಖ ಪಾತ್ರ: 2000ದಲ್ಲಿ ಬಿಹಾರ ವಿಭಜಿಸಿ ಜಾರ್ಖಂಡ್ ರಾಜ್ಯ ರಚಿಸುವಲ್ಲಿ ಸಿನ್ಹ ಪ್ರಮುಖ ಪಾತ್ರ ವಹಿಸಿದ್ದರು. ಜಾಗೃತ ದಳದ ಆಯುಕ್ತರಾಗಿ ಇವರು ಮಾಡಿದ ಸಾಧನೆಯು 2ಜಿ ತರಂಗಾಂತರ ಹಂಚಿಕೆ ಹಗರಣ ಬಯಲಿಗೆ ಕಾರಣವಾಯಿತು ಎನ್ನುವುದು ಗಮನಾರ್ಹ ವಿಷಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೈದರಾಬಾದ್: ತೆಲಂಗಾಣವು 2014ರ ಜೂನ್್ ಒಂದರ ಮಧ್ಯರಾತ್ರಿ ದೇಶದ 29ನೇ ರಾಜ್ಯವಾಗಿ ಉದಯಿಸಲಿದೆ. ಈ ಸಂಬಂಧ ಅಧಿಕೃತ ಘೋಷಣೆ ಹೊರಬಿದ್ದಿದೆ. ‘ಹೊಸ ರಾಜ್ಯವು ನಿಗದಿತ ದಿನಾಂಕದಂದೇ ಅಸ್ತಿತ್ವಕ್ಕೆ ಬರಬೇಕು. ಗಡುವು ವಿಸ್ತರಿಸಲು ಸಾಧ್ಯವಿಲ್ಲ’ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್್ ಗೋಸ್ವಾಮಿ ನೇತೃತ್ವದ ಕಾರ್ಯಪಡೆ ರಾಜ್ಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.<br /> <br /> ರಾಜ್ಯ ವಿಭಜನೆ ಪ್ರಕ್ರಿಯೆಗೆ ಸಂಬಂಧಿಸಿ ಮುಖ್ಯಕಾರ್ಯದರ್ಶಿ ಡಾ. ಪಿ.ಕೆ. ಮೊಹಂತಿ ಜತೆ ಇಲ್ಲಿ ಕೊನೆಯ ಸುತ್ತಿನ ಸಮಾಲೋಚನೆ ನಡೆಸಿದ ಗೋಸ್ವಾಮಿ, ‘ಬೇರೆ ಕೆಲಸ ಬದಿಗಿಡಿ.<br /> <br /> ರಾಜ್ಯ ವಿಭಜನೆ ಪ್ರಕ್ರಿಯೆಗೆ ಅಗತ್ಯವಿದ್ದರೆ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಿ’ ಎಂದು ಕಟ್ಟುನಿಟ್ಟಾಗಿ ಹೇಳಿದರು.<br /> ಕಡತ ವರ್ಗಾವಣೆ, ಆಸ್ತಿ, ಕಟ್ಟಡಗಳು, ಭೂಮಿ, ಗಡಿ, ಬೊಕ್ಕಸ ಹಾಗೂ ಉದ್ಯೋಗಿಗಳಿಗೆ ಸಂಬಂಧಿಸಿದ ಸಮಿತಿಗಳ ಕಾರ್ಯವೈಖರಿಯನ್ನು ಅವರು ಪುನರ್ ಪರಿಶೀಲಿಸಿದರು.<br /> <br /> ‘ಶಿಕ್ಷಣ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ರಾಜ್ಯ ವಿಭಜನೆಯ ನಂತರವೂ ಅವುಗಳನ್ನು ಪ್ರತ್ಯೇಕಿಸಬಹುದು.<br /> <br /> ಯಾವುದೇ ಬದಲಾವಣೆಗೆ ಅವಕಾಶವಿಲ್ಲ. ಸಂಸತ್ನಲ್ಲಿ ಅಂಗೀಕಾರಗೊಂಡ ಆಂಧ್ರಪ್ರದೇಶ ಪುನರ್ರಚನೆ ಮಸೂದೆ ಹಾಗೂ<br /> ನಿಯಮಾವಳಿಗೆ ಅನುಸಾರವಾಗಿ ವಿಭಜನೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು’ ಎಂದು ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸಲಹೆ ನೀಡಿದರು.<br /> <br /> ಗೋಸ್ವಾಮಿ ಸಹಾಯಕರಾದ ರಾಜೀವ್್ ಶರ್ಮ ಮತ್ತು ಸುರೇಶ್್ ಕುಮಾರ್, ವಿಭಜನೆಗೆ ಸಂಬಂಧಿಸಿದ ಎಲ್ಲ 15 ಉಪಸಮಿತಿಗಳ ಪ್ರಗತಿ ಹಾಗೂ ಕಾರ್ಯವೈಖರಿಯನ್ನು ಪುನರ್ ಪರಿಶೀಲಿಸುತ್ತಿದ್ದಾರೆ. ಅಲ್ಲದೇ ಈ ಸಮಿತಿಗಳು ಚುನಾವಣಾ ನೀತಿ ಸಂಹಿತೆಯನ್ನು ಪಾಲಿಸುತ್ತಿವೆಯೇ ಎನ್ನುವುದನ್ನೂ ಗಮನಿಸುತ್ತಿದ್ದಾರೆ.<br /> <br /> ಉಭಯ ರಾಜ್ಯಗಳ ನಡುವಣ ಐಎಫ್ಎಸ್, ಐಎಎಸ್ ಹಾಗೂ ಐಪಿಎಸ್ ಸೇವೆಗಳನ್ನು ಪ್ರತ್ಯೇಕಿಸಲು ಜಾಗೃತ ದಳದ ಮಾಜಿ ಆಯುಕ್ತ ಪ್ರತ್ಯುಷ್್ ಸಿನ್ಹ ನೇತೃತ್ವದಲ್ಲಿ ಕೇಂದ್ರವು ಸಮಿತಿ ರಚಿಸಿದೆ. ನಿವೃತ್ತ ಐಎಎಸ್್ ಅಧಿಕಾರಿ ಕಮಲನಾಥನ್್ ಅವರೊಂದಿಗೆ ಸಮಾಲೋಚಿಸಿ ಈ ಸಮಿತಿ ಕಾರ್ಯನಿರ್ವಹಿಸಲಿದೆ.<br /> <br /> ಪ್ರಮುಖ ಪಾತ್ರ: 2000ದಲ್ಲಿ ಬಿಹಾರ ವಿಭಜಿಸಿ ಜಾರ್ಖಂಡ್ ರಾಜ್ಯ ರಚಿಸುವಲ್ಲಿ ಸಿನ್ಹ ಪ್ರಮುಖ ಪಾತ್ರ ವಹಿಸಿದ್ದರು. ಜಾಗೃತ ದಳದ ಆಯುಕ್ತರಾಗಿ ಇವರು ಮಾಡಿದ ಸಾಧನೆಯು 2ಜಿ ತರಂಗಾಂತರ ಹಂಚಿಕೆ ಹಗರಣ ಬಯಲಿಗೆ ಕಾರಣವಾಯಿತು ಎನ್ನುವುದು ಗಮನಾರ್ಹ ವಿಷಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>