<p>ಟಾಟಾ ಸಮೂಹ ನಡೆಸುವ ಪ್ರತಿಷ್ಠಿತ ಬಿಸಿನೆಸ್ ಸ್ಪರ್ಧೆ ಟಾಟಾ ಕ್ರುಸಿಬಲ್ `ಕ್ಯಾಂಪಸ್ ಕ್ವಿಜ್~ನಲ್ಲಿ ಐಐಎಂ ಬೆಂಗಳೂರು ತಂಡ ಗೆಲುವು ಸಾಧಿಸಿತು. ಹೊಸೂರು ರಸ್ತೆಯ ನಿಮ್ಹೋನ್ಸ್ನಲ್ಲಿ ನಡೆದ ಸ್ಪರ್ಧೆ ಅತ್ಯಂತ ರೋಚಕವಾಗಿತ್ತು. ಪ್ರಬಲ ಪೈಪೋಟಿ ನಡುವೆ ಅಂತಿಮವಾಗಿ ಐಐಎಂ ಬೆಂಗಳೂರಿನ ನಿಶಾಂತ್ ಮತ್ತು ಕಲೈ ಸೆಲ್ವಂ ಗೆಲುವು ಸಾಧಿಸಿದರು. <br /> <br /> ಆರ್.ವಿ.ಎಂಜಿನಿಯರಿಂಗ್ ಕಾಲೇಜ್ನ ವರುಣ್ ಮತ್ತು ಅರುಣ್ ರನ್ನರ್ಅಪ್ ಆಗಿ ಹೊರಹೊಮ್ಮಿದರು. ಟಾಟಾ ಕ್ರುಸಿಬಲ್ ಸ್ಪರ್ಧೆಯ ಸ್ಥಳೀಯ ಸುತ್ತಿನಲ್ಲಿ ವಿಜೇತರಾರ ಈ ಎರಡು ತಂಡಗಳು ಏಪ್ರಿಲ್ 8ರಂದು ಮುಂಬಯಿಯಲ್ಲಿ ನಡೆಯುವ ಫೈನಲ್ಸ್ಗೆ ಪ್ರವೇಶ ಪಡೆದವು. <br /> <br /> ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟಾಟಾ ಬಿಪಿ ಸೋಲಾರ್ ಸಂಸ್ಥೆಯ ಸಿಇಒ ಕೆ.ಸುಬ್ರಹ್ಮಣ್ಯ ವಿಜೇತರಿಗೆ ಬಹುಮಾನ ವಿತರಿಸಿದರು. <br /> <br /> ಮೊದಲ ಸ್ಥಾನ ಗಳಿಸಿದ ತಂಡ ರೂ.75 ಸಾವಿರ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡ ರೂ.35 ಸಾವಿರ ನಗದು ಬಹುಮಾನ ಪಡೆದುಕೊಂಡವು. ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಮಣ್ಯಂ ಕಾರ್ಯಕ್ರಮ ನಡೆಸಿಕೊಟ್ಟರು.<br /> <br /> ಸ್ಥಳೀಯ ಸುತ್ತಿನಲ್ಲಿ 200ಕ್ಕೂ ಹೆಚ್ಚು ಉತ್ಸಾಹಿ ತಂಡಗಳು ಭಾಗವಹಿಸಿದ್ದವು. ರಾಷ್ಟ್ರೀಯ ಸುತ್ತಿನಲ್ಲಿ ವಿಜೇತವಾಗುವ ಪ್ರಥಮ ಹಾಗೂ ರನ್ನರ್ ಅಪ್ ತಂಡಗಳು ಯುಕೆ, ಸಿಂಗಪುರ ಸುತ್ತಿನಲ್ಲಿ ಗೆದ್ದ ತಂಡಗಳೊಂದಿಗೆ ಸೆಣಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಟಾಟಾ ಸಮೂಹ ನಡೆಸುವ ಪ್ರತಿಷ್ಠಿತ ಬಿಸಿನೆಸ್ ಸ್ಪರ್ಧೆ ಟಾಟಾ ಕ್ರುಸಿಬಲ್ `ಕ್ಯಾಂಪಸ್ ಕ್ವಿಜ್~ನಲ್ಲಿ ಐಐಎಂ ಬೆಂಗಳೂರು ತಂಡ ಗೆಲುವು ಸಾಧಿಸಿತು. ಹೊಸೂರು ರಸ್ತೆಯ ನಿಮ್ಹೋನ್ಸ್ನಲ್ಲಿ ನಡೆದ ಸ್ಪರ್ಧೆ ಅತ್ಯಂತ ರೋಚಕವಾಗಿತ್ತು. ಪ್ರಬಲ ಪೈಪೋಟಿ ನಡುವೆ ಅಂತಿಮವಾಗಿ ಐಐಎಂ ಬೆಂಗಳೂರಿನ ನಿಶಾಂತ್ ಮತ್ತು ಕಲೈ ಸೆಲ್ವಂ ಗೆಲುವು ಸಾಧಿಸಿದರು. <br /> <br /> ಆರ್.ವಿ.ಎಂಜಿನಿಯರಿಂಗ್ ಕಾಲೇಜ್ನ ವರುಣ್ ಮತ್ತು ಅರುಣ್ ರನ್ನರ್ಅಪ್ ಆಗಿ ಹೊರಹೊಮ್ಮಿದರು. ಟಾಟಾ ಕ್ರುಸಿಬಲ್ ಸ್ಪರ್ಧೆಯ ಸ್ಥಳೀಯ ಸುತ್ತಿನಲ್ಲಿ ವಿಜೇತರಾರ ಈ ಎರಡು ತಂಡಗಳು ಏಪ್ರಿಲ್ 8ರಂದು ಮುಂಬಯಿಯಲ್ಲಿ ನಡೆಯುವ ಫೈನಲ್ಸ್ಗೆ ಪ್ರವೇಶ ಪಡೆದವು. <br /> <br /> ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಟಾಟಾ ಬಿಪಿ ಸೋಲಾರ್ ಸಂಸ್ಥೆಯ ಸಿಇಒ ಕೆ.ಸುಬ್ರಹ್ಮಣ್ಯ ವಿಜೇತರಿಗೆ ಬಹುಮಾನ ವಿತರಿಸಿದರು. <br /> <br /> ಮೊದಲ ಸ್ಥಾನ ಗಳಿಸಿದ ತಂಡ ರೂ.75 ಸಾವಿರ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡ ರೂ.35 ಸಾವಿರ ನಗದು ಬಹುಮಾನ ಪಡೆದುಕೊಂಡವು. ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಮಣ್ಯಂ ಕಾರ್ಯಕ್ರಮ ನಡೆಸಿಕೊಟ್ಟರು.<br /> <br /> ಸ್ಥಳೀಯ ಸುತ್ತಿನಲ್ಲಿ 200ಕ್ಕೂ ಹೆಚ್ಚು ಉತ್ಸಾಹಿ ತಂಡಗಳು ಭಾಗವಹಿಸಿದ್ದವು. ರಾಷ್ಟ್ರೀಯ ಸುತ್ತಿನಲ್ಲಿ ವಿಜೇತವಾಗುವ ಪ್ರಥಮ ಹಾಗೂ ರನ್ನರ್ ಅಪ್ ತಂಡಗಳು ಯುಕೆ, ಸಿಂಗಪುರ ಸುತ್ತಿನಲ್ಲಿ ಗೆದ್ದ ತಂಡಗಳೊಂದಿಗೆ ಸೆಣಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>