<p><strong>ಹುಬ್ಬಳ್ಳಿ:</strong> ನೈರುತ್ಯ ರೈಲ್ವೆಯ ಸಗಾಯ್ರಾಜ್ ಹಾಗೂ ಬೆಳಗಾವಿಯ ಮೈತ್ರೇಯಿ ಬೇಲೂರು ಭಾನುವಾರ ಇಲ್ಲಿಯ ಡಾ.ಕೆ.ಎಸ್. ಶರ್ಮಾ ಸಭಾಗೃಹದಲ್ಲಿ ಮುಕ್ತಾಯವಾದ ಸಂಜಯ್ ಪೈ ಸ್ಮಾರಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು.<br /> <br /> ಶನಿವಾರ ಜೂನಿಯರ್ ಬಾಲಕಿಯರು ಹಾಗೂ ಯೂತ್ ವಿಭಾಗದ ಪ್ರಶಸ್ತಿಯನ್ನು ಗೆದ್ದಿದ್ದ ಮೈತ್ರೇಯಿ, ಮಹಿಳಾ ವಿಭಾಗದಲ್ಲೂ ಚಾಂಪಿಯನ್ ಆಗುವ ಮೂಲಕ ಪ್ರಶಸ್ತಿ `ಟ್ರಿಬಲ್~ ಸಾಧನೆ ಮಾಡಿದರು.<br /> <br /> ಹುಬ್ಬಳ್ಳಿ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಮಹಾರಾಷ್ಟ್ರ ಮಂಡಲ ಜಂಟಿಯಾಗಿ ಆಯೋಜಿಸಿದ್ದ ಟೂರ್ನಿಯ ಪುರುಷರ ವಿಭಾಗದ ಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ಸಗಾಯ್ರಾಜ್ 6-11, 11-9, 13-11, 12-14, 11-6, 7-11, 11-4ರಿಂದ ಪ್ರಯಾಸಕರವಾಗಿ ಮೂರನೇ ಶ್ರೇಯಾಂಕದ ಆಟಗಾರ ಕೆನರಾ ಬ್ಯಾಂಕಿನ ಅನಿರ್ಬಾನ್ ತರಫ್ದಾರ್ ವಿರುದ್ಧ ಜಯ ಸಾಧಿಸಿದರು. <br /> <br /> ಮಹಿಳೆಯರ ವಿಭಾಗದ ಫೈನಲ್ನಲ್ಲಿ ಮೈತ್ರೇಯಿ 11-9, 11-9, 11-5, 11-8ರಿಂದ ಜೆಟಿಟಿಎಯ ಆರ್. ರಕ್ಷಾ ವಿರುದ್ಧ ಜಯ ಸಾಧಿಸಿದರು. ಹಿರಿಯರ ವಿಭಾಗದಲ್ಲಿ ನೈರುತ್ಯ ರೈಲ್ವೆಯ ಪಿ.ಆರ್. ಅರುಣ್ 11-3, 11-3, 11-4ರಿಂದ ಬೆಂಗಳೂರಿನ ವೈ. ಗಂಗಾಧರ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು.<br /> <br /> ತಂಡ ವಿಭಾಗದ ಫೈನಲ್ನಲ್ಲಿ ನೈರುತ್ಯ ರೈಲ್ವೆ 3-1ರಿಂದ ಬೆಂಗಳೂರಿನ ಬಿಎನ್ಎಂ ತಂಡವನ್ನು ಸೋಲಿಸಿತು. ಸೆಮಿ ಫೈನಲ್ ಪಂದ್ಯಗಳಲ್ಲಿ ನೈರುತ್ಯ ರೈಲ್ವೆ 3-0ಯಿಂದ ಕೆನರಾ ಯುನಿಯನ್ ತಂಡದ ಮೇಲೂ; ಬಿಎನ್ಎಂ 3-0ಯಿಂದ ಹೊರೈಜಾನ್ ಕ್ಲಬ್ ತಂಡದ ವಿರುದ್ಧವೂ ಜಯ ಸಾಧಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ನೈರುತ್ಯ ರೈಲ್ವೆಯ ಸಗಾಯ್ರಾಜ್ ಹಾಗೂ ಬೆಳಗಾವಿಯ ಮೈತ್ರೇಯಿ ಬೇಲೂರು ಭಾನುವಾರ ಇಲ್ಲಿಯ ಡಾ.ಕೆ.ಎಸ್. ಶರ್ಮಾ ಸಭಾಗೃಹದಲ್ಲಿ ಮುಕ್ತಾಯವಾದ ಸಂಜಯ್ ಪೈ ಸ್ಮಾರಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು.<br /> <br /> ಶನಿವಾರ ಜೂನಿಯರ್ ಬಾಲಕಿಯರು ಹಾಗೂ ಯೂತ್ ವಿಭಾಗದ ಪ್ರಶಸ್ತಿಯನ್ನು ಗೆದ್ದಿದ್ದ ಮೈತ್ರೇಯಿ, ಮಹಿಳಾ ವಿಭಾಗದಲ್ಲೂ ಚಾಂಪಿಯನ್ ಆಗುವ ಮೂಲಕ ಪ್ರಶಸ್ತಿ `ಟ್ರಿಬಲ್~ ಸಾಧನೆ ಮಾಡಿದರು.<br /> <br /> ಹುಬ್ಬಳ್ಳಿ ಟೇಬಲ್ ಟೆನಿಸ್ ಸಂಸ್ಥೆ ಹಾಗೂ ಮಹಾರಾಷ್ಟ್ರ ಮಂಡಲ ಜಂಟಿಯಾಗಿ ಆಯೋಜಿಸಿದ್ದ ಟೂರ್ನಿಯ ಪುರುಷರ ವಿಭಾಗದ ಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ಸಗಾಯ್ರಾಜ್ 6-11, 11-9, 13-11, 12-14, 11-6, 7-11, 11-4ರಿಂದ ಪ್ರಯಾಸಕರವಾಗಿ ಮೂರನೇ ಶ್ರೇಯಾಂಕದ ಆಟಗಾರ ಕೆನರಾ ಬ್ಯಾಂಕಿನ ಅನಿರ್ಬಾನ್ ತರಫ್ದಾರ್ ವಿರುದ್ಧ ಜಯ ಸಾಧಿಸಿದರು. <br /> <br /> ಮಹಿಳೆಯರ ವಿಭಾಗದ ಫೈನಲ್ನಲ್ಲಿ ಮೈತ್ರೇಯಿ 11-9, 11-9, 11-5, 11-8ರಿಂದ ಜೆಟಿಟಿಎಯ ಆರ್. ರಕ್ಷಾ ವಿರುದ್ಧ ಜಯ ಸಾಧಿಸಿದರು. ಹಿರಿಯರ ವಿಭಾಗದಲ್ಲಿ ನೈರುತ್ಯ ರೈಲ್ವೆಯ ಪಿ.ಆರ್. ಅರುಣ್ 11-3, 11-3, 11-4ರಿಂದ ಬೆಂಗಳೂರಿನ ವೈ. ಗಂಗಾಧರ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು.<br /> <br /> ತಂಡ ವಿಭಾಗದ ಫೈನಲ್ನಲ್ಲಿ ನೈರುತ್ಯ ರೈಲ್ವೆ 3-1ರಿಂದ ಬೆಂಗಳೂರಿನ ಬಿಎನ್ಎಂ ತಂಡವನ್ನು ಸೋಲಿಸಿತು. ಸೆಮಿ ಫೈನಲ್ ಪಂದ್ಯಗಳಲ್ಲಿ ನೈರುತ್ಯ ರೈಲ್ವೆ 3-0ಯಿಂದ ಕೆನರಾ ಯುನಿಯನ್ ತಂಡದ ಮೇಲೂ; ಬಿಎನ್ಎಂ 3-0ಯಿಂದ ಹೊರೈಜಾನ್ ಕ್ಲಬ್ ತಂಡದ ವಿರುದ್ಧವೂ ಜಯ ಸಾಧಿಸಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>