<p><strong>ನಾಪೋಕ್ಲು: </strong>ಸಮೀಪದ ದೊಡ್ಡ ಪುಲಿಕೋಟು, ಸಣ್ಣಪುಲಿಕೋಟು, ಅಯ್ಯಂಗೇರಿ ಹಾಗೂ ಕೋರಂಗಾಲ ಗ್ರಾಮಗಳು ಮಳೆಗಾಲದಲ್ಲಿ ಬರುವ ಪ್ರವಾಹದಿಂದಾಗಿ ಸಂಕಷ್ಟ ಎದುರಿಸಬೇಕಾಗಿದೆ. ಬಲ್ಲಮಾವಟಿ ಹಾಗೂ ಪುಲಿಕೋಟು ಗ್ರಾಮಗಳ ನಡುವೆ ಹರಿಯುವ ತಂಡ್ರ ಹೊಳೆ ಸೇತುವೆ ಶಿಥಿಲಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.<br /> <br /> ತಂಡ್ರ ಹೊಳೆ ಸಮೀಪದಲ್ಲಿಯೇ ಕಾವೇರಿ ನದಿ ಹರಿಯುತ್ತಿದ್ದು, ಕಾವೇರಿಯಲ್ಲಿ ಪ್ರವಾಹ ಹೆಚ್ಚಾದಂತೆ ತಂಡ್ರ ಹೊಳೆಯ ನೀರಿನ ಮಟ್ಟವೂ ಹೆಚ್ಚಾಗಿ ಸೇತುವೆ ಮೇಲೆ ನೀರು ಹರಿಯುತ್ತದೆ. <br /> <br /> ಇದರಿಂದಾಗಿ ನಾಪೋಕ್ಲು-ಭಾಗಮಂಡಲ ನಡುವಿನ ಸಂಚಾರ ಕಡಿತಗೊಳ್ಳುತ್ತದೆ. ಭಾಗಮಂಡಲದ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ಅಲ್ಲಿಯೂ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ.<br /> <br /> ತಂಡ್ರ ಹೊಳೆಗೆ ನಿರ್ಮಿಸಲಾದ ಸೇತುವೆ ಸ್ವಾತಂತ್ರ್ಯಪೂರ್ವ ಕಾಲದ್ದಾಗಿದ್ದು, ಇದೀಗ ಶಿಥಿಲಾವಸ್ಥೆ ತಲುಪಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಪ್ರಸ್ತುತ ಹುಣಸೂರಿನಿಂದ ತಲಕಾವೇರಿಗೆ ಹೆದ್ದಾರಿ ನಿರ್ಮಿಸುವ ಯೋಜನೆ ಚಾಲನೆಯಲ್ಲಿದ್ದು, ಈಗಲಾದರೂ ಹೊಸ ಸೇತುವೆ ನಿರ್ಮಾಣಗೊಳ್ಳಬಹುದು ಎಂಬುದು ಗ್ರಾಮಸ್ಥರ ಆಶಯ.<br /> <br /> ನಾಪೋಕ್ಲು-ಭಾಗಮಂಡಲ ನಡುವಿನ ರಸ್ತೆಯು ವಿರಾಜಪೇಟೆಯಿಂದ ಕಕ್ಕಬ್ಬೆ, ನಾಪೋಕ್ಲು, ನೆಲಜಿ ಮೂಲಕ ತಲಕಾವೇರಿಗೆ ಸಾಗುವ ಮುಖ್ಯರಸ್ತೆ ಆಗಿದ್ದರೂ ಸರ್ಕಾರದ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು. <br /> <br /> ಈಗಾಗಲೇ ತಂಡ್ರ ಹೊಳೆಗೆ ನೂತನ ಸೇತುವೆ ನಿರ್ಮಿಸುವ ಬಗ್ಗೆ ಜಿ.ಪಂ. ಅಧ್ಯಕ್ಷ ಶಾಂತೇಯಂಡ ರವಿಕುಶಾಲಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಗಮನಕ್ಕೆ ತರಲಾಗಿದೆ ಎಂದು ಬಲ್ಲಮಾವಟಿ ಗ್ರಾ.ಪಂ. ಸದಸ್ಯರಾದ ಕರವಂಡ ಲವನಾಣಯ್ಯ, ಚೋಕಿರ ಭೀಮಯ್ಯ, ಎಪಿಎಂಸಿ ಸದಸ್ಯ ದಯಾಕುಟ್ಟಪ್ಪ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಪೋಕ್ಲು: </strong>ಸಮೀಪದ ದೊಡ್ಡ ಪುಲಿಕೋಟು, ಸಣ್ಣಪುಲಿಕೋಟು, ಅಯ್ಯಂಗೇರಿ ಹಾಗೂ ಕೋರಂಗಾಲ ಗ್ರಾಮಗಳು ಮಳೆಗಾಲದಲ್ಲಿ ಬರುವ ಪ್ರವಾಹದಿಂದಾಗಿ ಸಂಕಷ್ಟ ಎದುರಿಸಬೇಕಾಗಿದೆ. ಬಲ್ಲಮಾವಟಿ ಹಾಗೂ ಪುಲಿಕೋಟು ಗ್ರಾಮಗಳ ನಡುವೆ ಹರಿಯುವ ತಂಡ್ರ ಹೊಳೆ ಸೇತುವೆ ಶಿಥಿಲಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.<br /> <br /> ತಂಡ್ರ ಹೊಳೆ ಸಮೀಪದಲ್ಲಿಯೇ ಕಾವೇರಿ ನದಿ ಹರಿಯುತ್ತಿದ್ದು, ಕಾವೇರಿಯಲ್ಲಿ ಪ್ರವಾಹ ಹೆಚ್ಚಾದಂತೆ ತಂಡ್ರ ಹೊಳೆಯ ನೀರಿನ ಮಟ್ಟವೂ ಹೆಚ್ಚಾಗಿ ಸೇತುವೆ ಮೇಲೆ ನೀರು ಹರಿಯುತ್ತದೆ. <br /> <br /> ಇದರಿಂದಾಗಿ ನಾಪೋಕ್ಲು-ಭಾಗಮಂಡಲ ನಡುವಿನ ಸಂಚಾರ ಕಡಿತಗೊಳ್ಳುತ್ತದೆ. ಭಾಗಮಂಡಲದ ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿ ಅಲ್ಲಿಯೂ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ.<br /> <br /> ತಂಡ್ರ ಹೊಳೆಗೆ ನಿರ್ಮಿಸಲಾದ ಸೇತುವೆ ಸ್ವಾತಂತ್ರ್ಯಪೂರ್ವ ಕಾಲದ್ದಾಗಿದ್ದು, ಇದೀಗ ಶಿಥಿಲಾವಸ್ಥೆ ತಲುಪಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಪ್ರಸ್ತುತ ಹುಣಸೂರಿನಿಂದ ತಲಕಾವೇರಿಗೆ ಹೆದ್ದಾರಿ ನಿರ್ಮಿಸುವ ಯೋಜನೆ ಚಾಲನೆಯಲ್ಲಿದ್ದು, ಈಗಲಾದರೂ ಹೊಸ ಸೇತುವೆ ನಿರ್ಮಾಣಗೊಳ್ಳಬಹುದು ಎಂಬುದು ಗ್ರಾಮಸ್ಥರ ಆಶಯ.<br /> <br /> ನಾಪೋಕ್ಲು-ಭಾಗಮಂಡಲ ನಡುವಿನ ರಸ್ತೆಯು ವಿರಾಜಪೇಟೆಯಿಂದ ಕಕ್ಕಬ್ಬೆ, ನಾಪೋಕ್ಲು, ನೆಲಜಿ ಮೂಲಕ ತಲಕಾವೇರಿಗೆ ಸಾಗುವ ಮುಖ್ಯರಸ್ತೆ ಆಗಿದ್ದರೂ ಸರ್ಕಾರದ ನಿರ್ಲಕ್ಷ್ಯದಿಂದ ಅಭಿವೃದ್ಧಿಯಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು. <br /> <br /> ಈಗಾಗಲೇ ತಂಡ್ರ ಹೊಳೆಗೆ ನೂತನ ಸೇತುವೆ ನಿರ್ಮಿಸುವ ಬಗ್ಗೆ ಜಿ.ಪಂ. ಅಧ್ಯಕ್ಷ ಶಾಂತೇಯಂಡ ರವಿಕುಶಾಲಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಗಮನಕ್ಕೆ ತರಲಾಗಿದೆ ಎಂದು ಬಲ್ಲಮಾವಟಿ ಗ್ರಾ.ಪಂ. ಸದಸ್ಯರಾದ ಕರವಂಡ ಲವನಾಣಯ್ಯ, ಚೋಕಿರ ಭೀಮಯ್ಯ, ಎಪಿಎಂಸಿ ಸದಸ್ಯ ದಯಾಕುಟ್ಟಪ್ಪ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>