<p><strong>ತುಮಕೂರು: </strong>ಜಾಗತೀಕರಣ ಯುಗದಲ್ಲಿ ಅನೇಕ ವೈಚಾರಿಕ, ತಂತ್ರಜ್ಞಾನ ಬೆಳವಣಿಗೆಯಾದರೂ ಬಡವರ ಸಂಖ್ಯೆ ಇಳಿಮುಖವಾಗಿಲ್ಲ ಎಂದು ಮುಂಬೈ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ನಿರ್ದೇಶಕ ಪ್ರೊ.ಪರಶುರಾಮನ್ ಹೇಳಿದರು.<br /> <br /> ತುಮಕೂರು ವಿಶ್ವವಿದ್ಯಾನಿಲಯವು ಮುಂಬೈ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸಹಯೋಗದಲ್ಲಿ ಶುಕ್ರವಾರ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ `ಸೋಶಿಯಲ್ ವರ್ಕ್ ಪ್ರಾಕ್ಟೀಸ್ ಇನ್ ಮಲ್ಟಿ ಕಲ್ಚರಲ್ ಕಾಂಟೆಕ್ಸ್ಟ್~ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಮಾಜ ಕಾರ್ಯವು ಉದಾರತಾವಾದದ ಸಮಸ್ಯೆಗಳಿಂದಾಗಿ ಹುಟ್ಟಿರುವ ಕೂಸು. <br /> <br /> ಜಾಗತೀಕರಣದ ಈ ಕಾಲ ಘಟ್ಟದಲ್ಲಿ ತನ್ನನ್ನು ತಾನೇ ಪುನರ್ ನಿರ್ಮಾಣ ಮಾಡಿಕೊಳ್ಳಬೇಕಿದೆ. ಇಂಥ ಸಂದರ್ಭದಲ್ಲಿ ಇತರ ಸಾಮಾಜಿಕ ವಿಜ್ಞಾನಗಳಿಗಿಂತ ಹೆಚ್ಚಿನ ಜವಾಬ್ದಾರಿ ಸಮಾಜ ಕಾರ್ಯದ ಮೇಲಿದೆ ಎಂದರು.<br /> <br /> ಡರ್ಬಾನ್ ಯೂನಿವರ್ಸಿಟಿ ಆಫ್ ಕ್ವಾಜುಲು-ನಟಾಲ್ನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಅಂಡ್ ಕಮ್ಯೂನಿಟಿ ಡೆವೆಲಪ್ಮೆಂಟ್ನ ಪ್ರೊ.ವಿಶಾಂತಿ ಸೀಪೌಲ್, ಮೂಲೆಗುಂಪಾದ ಸಮುದಾಯಗಳನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಳಗೂಡಿಸುವ ಜವಾಬ್ದಾರಿ ಪ್ರತಿಯೊಂದು ನಾಗರಿಕ ಸಂಘ-ಸಂಸ್ಥೆಗೂ ಇದೆ ಎಂದರು.<br /> <br /> ವಿ.ವಿ. ಕುಲಪತಿ ಡಾ.ಎಸ್.ಸಿ.ಶರ್ಮಾ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ವಾಷಿಂಗ್ಟನ್ ವಿ.ವಿ. ಪ್ರೊ.ಶಾಂತಿ ಕೆ.ಕಿಂಡೂಕಾ, ಕರ್ನಾಟಕ ರಾಜ್ಯ ಸಂಸ್ಕೃತ ವಿ.ವಿ.ಕುಲಸಚಿವ ಪ್ರೊ.ವೈ.ಎಸ್.ಸಿದ್ದೇಗೌಡ, ಪ್ರಾಧ್ಯಾಪಕಿ ವಿಮಲಾ ನಾಡಕರ್ಣಿ ಭಾಗವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಜಾಗತೀಕರಣ ಯುಗದಲ್ಲಿ ಅನೇಕ ವೈಚಾರಿಕ, ತಂತ್ರಜ್ಞಾನ ಬೆಳವಣಿಗೆಯಾದರೂ ಬಡವರ ಸಂಖ್ಯೆ ಇಳಿಮುಖವಾಗಿಲ್ಲ ಎಂದು ಮುಂಬೈ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ನಿರ್ದೇಶಕ ಪ್ರೊ.ಪರಶುರಾಮನ್ ಹೇಳಿದರು.<br /> <br /> ತುಮಕೂರು ವಿಶ್ವವಿದ್ಯಾನಿಲಯವು ಮುಂಬೈ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸಹಯೋಗದಲ್ಲಿ ಶುಕ್ರವಾರ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ `ಸೋಶಿಯಲ್ ವರ್ಕ್ ಪ್ರಾಕ್ಟೀಸ್ ಇನ್ ಮಲ್ಟಿ ಕಲ್ಚರಲ್ ಕಾಂಟೆಕ್ಸ್ಟ್~ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಮಾಜ ಕಾರ್ಯವು ಉದಾರತಾವಾದದ ಸಮಸ್ಯೆಗಳಿಂದಾಗಿ ಹುಟ್ಟಿರುವ ಕೂಸು. <br /> <br /> ಜಾಗತೀಕರಣದ ಈ ಕಾಲ ಘಟ್ಟದಲ್ಲಿ ತನ್ನನ್ನು ತಾನೇ ಪುನರ್ ನಿರ್ಮಾಣ ಮಾಡಿಕೊಳ್ಳಬೇಕಿದೆ. ಇಂಥ ಸಂದರ್ಭದಲ್ಲಿ ಇತರ ಸಾಮಾಜಿಕ ವಿಜ್ಞಾನಗಳಿಗಿಂತ ಹೆಚ್ಚಿನ ಜವಾಬ್ದಾರಿ ಸಮಾಜ ಕಾರ್ಯದ ಮೇಲಿದೆ ಎಂದರು.<br /> <br /> ಡರ್ಬಾನ್ ಯೂನಿವರ್ಸಿಟಿ ಆಫ್ ಕ್ವಾಜುಲು-ನಟಾಲ್ನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಅಂಡ್ ಕಮ್ಯೂನಿಟಿ ಡೆವೆಲಪ್ಮೆಂಟ್ನ ಪ್ರೊ.ವಿಶಾಂತಿ ಸೀಪೌಲ್, ಮೂಲೆಗುಂಪಾದ ಸಮುದಾಯಗಳನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಳಗೂಡಿಸುವ ಜವಾಬ್ದಾರಿ ಪ್ರತಿಯೊಂದು ನಾಗರಿಕ ಸಂಘ-ಸಂಸ್ಥೆಗೂ ಇದೆ ಎಂದರು.<br /> <br /> ವಿ.ವಿ. ಕುಲಪತಿ ಡಾ.ಎಸ್.ಸಿ.ಶರ್ಮಾ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ವಾಷಿಂಗ್ಟನ್ ವಿ.ವಿ. ಪ್ರೊ.ಶಾಂತಿ ಕೆ.ಕಿಂಡೂಕಾ, ಕರ್ನಾಟಕ ರಾಜ್ಯ ಸಂಸ್ಕೃತ ವಿ.ವಿ.ಕುಲಸಚಿವ ಪ್ರೊ.ವೈ.ಎಸ್.ಸಿದ್ದೇಗೌಡ, ಪ್ರಾಧ್ಯಾಪಕಿ ವಿಮಲಾ ನಾಡಕರ್ಣಿ ಭಾಗವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>