<p>ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಗ್ರಾಮ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಇನ್ನಿಲ್ಲದ ಮಹತ್ವ ಬಂದುಬಿಟ್ಟಿದೆ. ಪಂಚಾಯ್ತಿ ಸದಸ್ಯರು ಪಕ್ಷಾತೀತರಾಗಿ ಆಯ್ಕೆಯಾದವರು. ಆದರೆ ಅವರು ಒಂದಲ್ಲ ಒಂದು ರಾಜಕೀಯ ಪಕ್ಷದ ಸದಸ್ಯರು. ಬಹುತೇಕ ಸದಸ್ಯರು ಆ ಆಕ್ಷೇತ್ರದ ಶಾಸಕರ ಸಹಾಯಕರು. ಅವರ ಪರವಾಗಿ ದುಡಿಯುವ ಕಾರ್ಯಕರ್ತರು. ಸ್ಥಳೀಯವಾಗಿ ಅವರು `ಮಿನಿ ಶಾಸಕ~ರಿದ್ದಂತೆ. ಅನೇಕರಿಗೆ ಪಂಚಾಯ್ತಿ ಸದಸ್ಯತ್ವವೇ ಜೀವನೋಪಾಯ.<br /> <br /> ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸಕ್ಕೂ ಶಾಸಕರ ಶಿಫಾರಸು ಪತ್ರ ತರುವುದು ಕಡ್ಡಾಯ. ಶಾಸಕರಿಂದ ಪತ್ರ ಪಡೆಯಲು ಈ ಮಿನಿ ಶಾಸಕರ ಶಿಫಾರಸು ಬೇಕು. ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳದೆ ತಟಸ್ಥರಾಗಿರುವ ಮತದಾರರಿಗೆ ಇಂತಹ ಶಿಫಾರಸು ಪತ್ರ ಪಡೆಯುವುದು ನಿಜಕ್ಕೂ ಕಷ್ಟ. <br /> <br /> ಈಗಿನ ಬಹುತೇಕ ಶಾಸಕರಿಗೆ ತಾವು ಇಡೀ ಕ್ಷೇತ್ರದ ಜನರ ಪ್ರತಿನಿಧಿ ಎಂಬ ಮನೋಭಾವ ಕಡಿಮೆ ಆಗುತ್ತಿದೆ. ಅವರು ತಮ್ಮ ಪಕ್ಷದ ಘೋಷಿತ ಕಾರ್ಯಕರ್ತರು, ಅವರಿಗೆ ಮತ ಹಾಕಿದವರು, ಅವರ ಜಾತಿಯ ಜನರು, ಮಠ ಮಾನ್ಯಗಳ ಬೆಂಬಲಿಗರು ಮಾತ್ರವೇ ಮುಖ್ಯವಾಗುತ್ತಿದ್ದಾರೆ. <br /> <br /> ಯಾವುದೇ ರಾಜಕೀಯ ಪಕ್ಷ ಅಥವಾ ಸ್ಥಳೀಯ ಮುಖಂಡರ ಜತೆಗೆ ಗುರುತಿಸಿಕೊಳ್ಳದೆ ತಟಸ್ಥರಾಗಿರುವ ಮತದಾರರಿಗೆ ಯಾರೂ ಬೆಲೆ ಕೊಡುವುದಿಲ್ಲ. ಈ ಬೆಳವಣಿಗೆ ದುರದೃಷ್ಟಕರ. ಈ ಪರಿಸ್ಥಿತಿ ಬದಲಾಗುವುದು ಯಾವಾಗ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಗ್ರಾಮ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಇನ್ನಿಲ್ಲದ ಮಹತ್ವ ಬಂದುಬಿಟ್ಟಿದೆ. ಪಂಚಾಯ್ತಿ ಸದಸ್ಯರು ಪಕ್ಷಾತೀತರಾಗಿ ಆಯ್ಕೆಯಾದವರು. ಆದರೆ ಅವರು ಒಂದಲ್ಲ ಒಂದು ರಾಜಕೀಯ ಪಕ್ಷದ ಸದಸ್ಯರು. ಬಹುತೇಕ ಸದಸ್ಯರು ಆ ಆಕ್ಷೇತ್ರದ ಶಾಸಕರ ಸಹಾಯಕರು. ಅವರ ಪರವಾಗಿ ದುಡಿಯುವ ಕಾರ್ಯಕರ್ತರು. ಸ್ಥಳೀಯವಾಗಿ ಅವರು `ಮಿನಿ ಶಾಸಕ~ರಿದ್ದಂತೆ. ಅನೇಕರಿಗೆ ಪಂಚಾಯ್ತಿ ಸದಸ್ಯತ್ವವೇ ಜೀವನೋಪಾಯ.<br /> <br /> ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕೆಲಸಕ್ಕೂ ಶಾಸಕರ ಶಿಫಾರಸು ಪತ್ರ ತರುವುದು ಕಡ್ಡಾಯ. ಶಾಸಕರಿಂದ ಪತ್ರ ಪಡೆಯಲು ಈ ಮಿನಿ ಶಾಸಕರ ಶಿಫಾರಸು ಬೇಕು. ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳದೆ ತಟಸ್ಥರಾಗಿರುವ ಮತದಾರರಿಗೆ ಇಂತಹ ಶಿಫಾರಸು ಪತ್ರ ಪಡೆಯುವುದು ನಿಜಕ್ಕೂ ಕಷ್ಟ. <br /> <br /> ಈಗಿನ ಬಹುತೇಕ ಶಾಸಕರಿಗೆ ತಾವು ಇಡೀ ಕ್ಷೇತ್ರದ ಜನರ ಪ್ರತಿನಿಧಿ ಎಂಬ ಮನೋಭಾವ ಕಡಿಮೆ ಆಗುತ್ತಿದೆ. ಅವರು ತಮ್ಮ ಪಕ್ಷದ ಘೋಷಿತ ಕಾರ್ಯಕರ್ತರು, ಅವರಿಗೆ ಮತ ಹಾಕಿದವರು, ಅವರ ಜಾತಿಯ ಜನರು, ಮಠ ಮಾನ್ಯಗಳ ಬೆಂಬಲಿಗರು ಮಾತ್ರವೇ ಮುಖ್ಯವಾಗುತ್ತಿದ್ದಾರೆ. <br /> <br /> ಯಾವುದೇ ರಾಜಕೀಯ ಪಕ್ಷ ಅಥವಾ ಸ್ಥಳೀಯ ಮುಖಂಡರ ಜತೆಗೆ ಗುರುತಿಸಿಕೊಳ್ಳದೆ ತಟಸ್ಥರಾಗಿರುವ ಮತದಾರರಿಗೆ ಯಾರೂ ಬೆಲೆ ಕೊಡುವುದಿಲ್ಲ. ಈ ಬೆಳವಣಿಗೆ ದುರದೃಷ್ಟಕರ. ಈ ಪರಿಸ್ಥಿತಿ ಬದಲಾಗುವುದು ಯಾವಾಗ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>