<p> ಲಾಹೋರ್ (ಪಿಟಿಐ): ಅಮೆರಿಕವು ತನ್ನ ತಲೆಗೆ 10 ದಶಲಕ್ಷ ಡಾಲರ್ ಬಹುಮಾನ ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಮೊದಲು ತಲೆಮರೆಸಿಕೊಳ್ಳಬಹುದೆಂದು ಶಂಕಿಸಲಾಗಿದ್ದ ಪಾಕಿಸ್ತಾನದ ಜಮಾತ್- ಉದ್- ದವಾ (ಜೆಯುಡಿ) ಮುಖ್ಯಸ್ಥ ಹಾಗೂ 26/11ರ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಮೊಹಮ್ಮದ್ ಸಯೀದ್ ಇದೀಗ ಆ ನಿರ್ಧಾರ ಕೈಬಿಟ್ಟಿದ್ದಾನೆ.<br /> <br /> ಕೆಲ ಕಾಲ ಭೂಗತನಾಗಿರುವಂತೆ ಸ್ನೇಹಿತರು ಸಯೀದ್ಗೆ ಸಲಹೆ ನೀಡಿದ್ದರು. ಆದರೆ ಪಾಕಿಸ್ತಾನದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಹಾಗೂ ಧಾರ್ಮಿಕ ಮುಖಂಡರ ಒತ್ತಾಸೆಗೆ ಕಟ್ಟುಬಿದ್ದು ಸಯೀದ್ ಭೂಗತನಾಗದಿರಲು ನಿರ್ಧರಿಸಿದ್ದಾನೆ.<br /> <br /> ತಲೆಮರೆಸಿಕೊಂಡರೆ ಅದು ಸ್ವತಃ ಸಯೀದ್ಗೆ ಹಾಗೂ ಜೆಯುಡಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಘಟನೆ ಅಭಿಪ್ರಾಯ ಪಟ್ಟಿದ್ದಾಗಿ ಹೆಸರು ಹೇಳಲು ಇಚ್ಛಿಸದ ಜೆಯುಡಿ ನಾಯಕನೊಬ್ಬ ತಿಳಿಸಿದ್ದಾನೆ.<br /> `ಸಯೀದ್ಗೆ ಪಿಎಂಎಲ್-ಎನ್, ಪಿಎಂಎಲ್-ಕ್ಯು, ಪಾಕಿಸ್ತಾನ್ ತೆಹ್ರಿಕ್- ಎ-ಇನ್ಸಾಫ್ ಹಾಗೂ ಜಮಿಯತ್ ಉಲೇಮಾ-ಎ- ಇಸ್ಲಾಂನಂಥ ಪ್ರಮುಖ ಪಕ್ಷಗಳ ಬೆಂಬಲ ಕೂಡ ಇದೆ. <br /> <br /> ಡೆಫಾ- ಎ- ಪಾಕಿಸ್ತಾನ್ ಕೌನ್ಸಿಲ್ ಬ್ಯಾನರ್ ಅಡಿಯಲ್ಲಿ ಸುಮಾರು 40ಕ್ಕೂ ಹೆಚ್ಚಿನ ಪಕ್ಷಗಳು ಸಯೀದ್ ಬೆಂಬಲಕ್ಕೆ ನಿಂತಿದ್ದು, ಜನರನ್ನು ಅಮೆರಿಕ ಹಾಗೂ ಭಾರತದ ವಿರುದ್ಧ ಪ್ರಚೋದಿಸುವಂತೆ ಆತನಿಗೆ ಸೂಚನೆ ನೀಡಿವೆ~ ಎಂದು ಜೆಯುಡಿ ಮುಖಂಡ ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾನೆ.<br /> <br /> `ಪಿಎಂಎಲ್-ಎನ್ನ ಚೌಧರಿ ನಿಸಾರ್ ಅಲಿ ಖಾನ್, ಪಿಎಂಎಲ್-ಕ್ಯು ಪಕ್ಷದ ಚೌಧರಿ ಸುಜತ್ ಹುಸೇನ್, ಇಮ್ರಾನ್ ಖಾನ್ ಪಕ್ಷದ ಜಾವೇದ್ ಹಶ್ಮಿ, ಜೆಯುಐನ ಫಜ್ಲುರ್ ರೆಹಮಾನ್ ಅವರು ಸಯೀದ್ಗೆ ಕರೆ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ, ಹೀಗಿರುವಾಗ ಯಾರು ತಾನೇ ತಲೆಮರೆಸಿಕೊಳ್ಳಲು ಇಷ್ಟಪಡುತ್ತಾರೆ~ ಎಂದು ಆತ ಹೇಳಿದ್ದಾನೆ.<br /> <br /> 2008ರ ಮುಂಬೈ ದಾಳಿ ಬಳಿಕ 6 ತಿಂಗಳವರೆಗೆ ಗೃಹ ಬಂಧನದಲ್ಲಿದ್ದ ಸಯೀದ್ ಸದ್ಯ ಜೆಯುಡಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.<br /> <br /> `ಅಮೆರಿಕವು ತನ್ನ ತಲೆಗೆ ಬಹುಮಾನ ಘೋಷಿಸಿದ್ದೇ ತಡ ಸಯೀದ್ ಮತ್ತಷ್ಟು ಚುರುಕಾಗಿದ್ದಾನೆ. ಈ ವಿಷಯವನ್ನು ತನ್ನ ಬೆಂಬಲಿಗರ ಮುಂದೆ ಇಡಲು ಆತ, ಪಂಜಾಬ್ ಪ್ರಾಂತ್ಯದಲ್ಲಿ ಪ್ರವಾಸ ಮಾಡುತ್ತಿದ್ದಾನೆ. <br /> <br /> ಸೋಮವಾರ ಸಯೀದ್ ಲಾಹೋರ್ನಲ್ಲಿ ಇದ್ದ. ಇಂದು ಸಹಿವಾಲ್ ಜಿಲ್ಲೆಯಲ್ಲಿ ತನ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ, ಅಮೆರಿಕ ಹಾಗೂ ಭಾರತದ ವಿರುದ್ಧ ಅವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾನೆ~ ಎಂದು ಪಾಕಿಸ್ತಾನ ಪೀಪಲ್ಸ್ ಪಕ್ಷದ (ಪಿಪಿಪಿ) ಹಿರಿಯ ಮುಖಂಡರೊಬ್ಬರು ಮಂಗಳವಾರ ಹೇಳಿದ್ದಾರೆ.<br /> <br /> ಸರ್ಕಾರವು ಪಾಕಿಸ್ತಾನದಲ್ಲಿ ಉಗ್ರವಾದವನ್ನು ನಿಯಂತ್ರಿಸಲು ನಿಜವಾಗಿಯೂ ಆಸಕ್ತಿ ಹೊಂದಿದ್ದಲ್ಲಿ ಅದು ನಿಷೇಧಿತ ಸಂಘಟನೆಗಳಿಗೆ ಲಗಾಮು ಹಾಕಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.<br /> ಸಯೀದ್ ವಿಷಯದಲ್ಲಿ ಪಿಪಿಪಿ, ಇತರ ಪಕ್ಷಗಳ ಹಾದಿಯನ್ನು ತುಳಿದಿಲ್ಲ. ಅದು ಸಯೀದ್ಗಾಗಲೀ, ಜೆಯುಡಿಗಾಗಲೀ ತನ್ನ ಬೆಂಬಲ ಸೂಚಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ಲಾಹೋರ್ (ಪಿಟಿಐ): ಅಮೆರಿಕವು ತನ್ನ ತಲೆಗೆ 10 ದಶಲಕ್ಷ ಡಾಲರ್ ಬಹುಮಾನ ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಮೊದಲು ತಲೆಮರೆಸಿಕೊಳ್ಳಬಹುದೆಂದು ಶಂಕಿಸಲಾಗಿದ್ದ ಪಾಕಿಸ್ತಾನದ ಜಮಾತ್- ಉದ್- ದವಾ (ಜೆಯುಡಿ) ಮುಖ್ಯಸ್ಥ ಹಾಗೂ 26/11ರ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಮೊಹಮ್ಮದ್ ಸಯೀದ್ ಇದೀಗ ಆ ನಿರ್ಧಾರ ಕೈಬಿಟ್ಟಿದ್ದಾನೆ.<br /> <br /> ಕೆಲ ಕಾಲ ಭೂಗತನಾಗಿರುವಂತೆ ಸ್ನೇಹಿತರು ಸಯೀದ್ಗೆ ಸಲಹೆ ನೀಡಿದ್ದರು. ಆದರೆ ಪಾಕಿಸ್ತಾನದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಹಾಗೂ ಧಾರ್ಮಿಕ ಮುಖಂಡರ ಒತ್ತಾಸೆಗೆ ಕಟ್ಟುಬಿದ್ದು ಸಯೀದ್ ಭೂಗತನಾಗದಿರಲು ನಿರ್ಧರಿಸಿದ್ದಾನೆ.<br /> <br /> ತಲೆಮರೆಸಿಕೊಂಡರೆ ಅದು ಸ್ವತಃ ಸಯೀದ್ಗೆ ಹಾಗೂ ಜೆಯುಡಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಘಟನೆ ಅಭಿಪ್ರಾಯ ಪಟ್ಟಿದ್ದಾಗಿ ಹೆಸರು ಹೇಳಲು ಇಚ್ಛಿಸದ ಜೆಯುಡಿ ನಾಯಕನೊಬ್ಬ ತಿಳಿಸಿದ್ದಾನೆ.<br /> `ಸಯೀದ್ಗೆ ಪಿಎಂಎಲ್-ಎನ್, ಪಿಎಂಎಲ್-ಕ್ಯು, ಪಾಕಿಸ್ತಾನ್ ತೆಹ್ರಿಕ್- ಎ-ಇನ್ಸಾಫ್ ಹಾಗೂ ಜಮಿಯತ್ ಉಲೇಮಾ-ಎ- ಇಸ್ಲಾಂನಂಥ ಪ್ರಮುಖ ಪಕ್ಷಗಳ ಬೆಂಬಲ ಕೂಡ ಇದೆ. <br /> <br /> ಡೆಫಾ- ಎ- ಪಾಕಿಸ್ತಾನ್ ಕೌನ್ಸಿಲ್ ಬ್ಯಾನರ್ ಅಡಿಯಲ್ಲಿ ಸುಮಾರು 40ಕ್ಕೂ ಹೆಚ್ಚಿನ ಪಕ್ಷಗಳು ಸಯೀದ್ ಬೆಂಬಲಕ್ಕೆ ನಿಂತಿದ್ದು, ಜನರನ್ನು ಅಮೆರಿಕ ಹಾಗೂ ಭಾರತದ ವಿರುದ್ಧ ಪ್ರಚೋದಿಸುವಂತೆ ಆತನಿಗೆ ಸೂಚನೆ ನೀಡಿವೆ~ ಎಂದು ಜೆಯುಡಿ ಮುಖಂಡ ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾನೆ.<br /> <br /> `ಪಿಎಂಎಲ್-ಎನ್ನ ಚೌಧರಿ ನಿಸಾರ್ ಅಲಿ ಖಾನ್, ಪಿಎಂಎಲ್-ಕ್ಯು ಪಕ್ಷದ ಚೌಧರಿ ಸುಜತ್ ಹುಸೇನ್, ಇಮ್ರಾನ್ ಖಾನ್ ಪಕ್ಷದ ಜಾವೇದ್ ಹಶ್ಮಿ, ಜೆಯುಐನ ಫಜ್ಲುರ್ ರೆಹಮಾನ್ ಅವರು ಸಯೀದ್ಗೆ ಕರೆ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ, ಹೀಗಿರುವಾಗ ಯಾರು ತಾನೇ ತಲೆಮರೆಸಿಕೊಳ್ಳಲು ಇಷ್ಟಪಡುತ್ತಾರೆ~ ಎಂದು ಆತ ಹೇಳಿದ್ದಾನೆ.<br /> <br /> 2008ರ ಮುಂಬೈ ದಾಳಿ ಬಳಿಕ 6 ತಿಂಗಳವರೆಗೆ ಗೃಹ ಬಂಧನದಲ್ಲಿದ್ದ ಸಯೀದ್ ಸದ್ಯ ಜೆಯುಡಿ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.<br /> <br /> `ಅಮೆರಿಕವು ತನ್ನ ತಲೆಗೆ ಬಹುಮಾನ ಘೋಷಿಸಿದ್ದೇ ತಡ ಸಯೀದ್ ಮತ್ತಷ್ಟು ಚುರುಕಾಗಿದ್ದಾನೆ. ಈ ವಿಷಯವನ್ನು ತನ್ನ ಬೆಂಬಲಿಗರ ಮುಂದೆ ಇಡಲು ಆತ, ಪಂಜಾಬ್ ಪ್ರಾಂತ್ಯದಲ್ಲಿ ಪ್ರವಾಸ ಮಾಡುತ್ತಿದ್ದಾನೆ. <br /> <br /> ಸೋಮವಾರ ಸಯೀದ್ ಲಾಹೋರ್ನಲ್ಲಿ ಇದ್ದ. ಇಂದು ಸಹಿವಾಲ್ ಜಿಲ್ಲೆಯಲ್ಲಿ ತನ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ, ಅಮೆರಿಕ ಹಾಗೂ ಭಾರತದ ವಿರುದ್ಧ ಅವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾನೆ~ ಎಂದು ಪಾಕಿಸ್ತಾನ ಪೀಪಲ್ಸ್ ಪಕ್ಷದ (ಪಿಪಿಪಿ) ಹಿರಿಯ ಮುಖಂಡರೊಬ್ಬರು ಮಂಗಳವಾರ ಹೇಳಿದ್ದಾರೆ.<br /> <br /> ಸರ್ಕಾರವು ಪಾಕಿಸ್ತಾನದಲ್ಲಿ ಉಗ್ರವಾದವನ್ನು ನಿಯಂತ್ರಿಸಲು ನಿಜವಾಗಿಯೂ ಆಸಕ್ತಿ ಹೊಂದಿದ್ದಲ್ಲಿ ಅದು ನಿಷೇಧಿತ ಸಂಘಟನೆಗಳಿಗೆ ಲಗಾಮು ಹಾಕಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.<br /> ಸಯೀದ್ ವಿಷಯದಲ್ಲಿ ಪಿಪಿಪಿ, ಇತರ ಪಕ್ಷಗಳ ಹಾದಿಯನ್ನು ತುಳಿದಿಲ್ಲ. ಅದು ಸಯೀದ್ಗಾಗಲೀ, ಜೆಯುಡಿಗಾಗಲೀ ತನ್ನ ಬೆಂಬಲ ಸೂಚಿಸಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>