<p><strong>ಗಂಗಾವತಿ: </strong>ನಗರದ ನೆಹರು ಸಾರ್ವಜನಿಕ ಉದ್ಯಾನವನದ ಹಿಂದೆ ಇರುವ ತಾಲ್ಲೂಕು ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ ತಳೆದಿದ್ದು, ಸುಮಾರು ರೂ. 6 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ತಲೆ ಎತ್ತಲಿದೆ ಎಂದು ತಾ.ಪಂ. ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇಳಿದರು.</p>.<p>ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಿನಿ ವಿಧಾನಸೌಧದಂತೆ ತಾಲ್ಲೂಕು ಪಂಚಾಯಿತಿಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಈಗಾಗಲೆ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.</p>.<p>ಇದಕ್ಕೆ ಸುಮಾರು ರೂ, 5.5ರಿಂದ 6 ಕೋಟಿ ಮೊತ್ತದ ಗುರಿ ಹೊಂದಲಾಗಿದೆ. ಈಗಾಗಲೆ ತಾಲ್ಲೂಕು ಪಂಚಾಯಿತಿಯ ಅನುದಾನದಲ್ಲಿ ರೂ, 30 ಲಕ್ಷ ಮೀಸಲಿಡಲಾಗಿದೆ. ಇನ್ನುಳಿದ ಹಣ ಸಂಸದ, ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳ ಬಳಿ ಕೇಳಲಾಗುವುದು ಎಂದರು.</p>.<p><strong>ಮೂರು ಅಂತಸ್ತು:</strong> ಮೂರು ಅಂತಸ್ತಿನ ಕಟ್ಟಡ ನಿರ್ಮಿಸುವ ಉದ್ದೇಶವಿದೆ. ಅದಕ್ಕೆ ವಿದ್ಯುತ್ ಚಾಲಿತ ಲಿಫ್ಟ್ ಅಳವಡಿಸುವ ಯೋಚನೆ ಇದೆ. ಮೊದಲ ಮಹಡಿಯಲ್ಲಿನ ಕೋಣೆಗಳಲ್ಲಿ ಇಓ, ಎಡಿ, ಕಂಪ್ಯೂಟರ್ ವಿಭಾಗ, ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. </p>.<p>ಎರಡನೇ ಮಹಡಿಯಲ್ಲಿ ಕನಕಗಿರಿ, ಗಂಗಾವತಿ ಕ್ಷೇತ್ರದ ಶಾಸಕರಿಗೆ ತಲಾ ಒಂದು ಕೊಠಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ತಲಾ ಒಂದು ಕೊಠಡಿ ಹಾಗೂ ಸಭೆಗಳಿಗೆ ಪ್ರತ್ಯೇಕ ವಿಶಾಲ ಸಭಾಂಗಣದ ವ್ಯವಸ್ಥೆಯಾಗಲಿದೆ.</p>.<p>ಮೂರನೇ ಅಂತಸ್ತಿನಲ್ಲಿ ಸಂಸದ, ಸಚಿವರು ಬಂದರೆ ವಿಶ್ರಾಂತಿಗೆ ಹವಾನಿಯಂತ್ರಿತ ಒಂದು ಸುಸಜ್ಜಿತ ಕೊಠಡಿ, ಅಡುಗೆ ಮನೆ, ಊಟದ ಕೋಣೆ, ಡೈನಿಂಗ್ ಟೇಬಲ್ ಮೊದಲಾದ ವ್ಯವಸ್ಥೆ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಹಿರೇಹನುಮವ್ವ ಮತ್ತು ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ನಗರದ ನೆಹರು ಸಾರ್ವಜನಿಕ ಉದ್ಯಾನವನದ ಹಿಂದೆ ಇರುವ ತಾಲ್ಲೂಕು ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ನಿರ್ಧಾರ ತಳೆದಿದ್ದು, ಸುಮಾರು ರೂ. 6 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ತಲೆ ಎತ್ತಲಿದೆ ಎಂದು ತಾ.ಪಂ. ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇಳಿದರು.</p>.<p>ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಿನಿ ವಿಧಾನಸೌಧದಂತೆ ತಾಲ್ಲೂಕು ಪಂಚಾಯಿತಿಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಈಗಾಗಲೆ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.</p>.<p>ಇದಕ್ಕೆ ಸುಮಾರು ರೂ, 5.5ರಿಂದ 6 ಕೋಟಿ ಮೊತ್ತದ ಗುರಿ ಹೊಂದಲಾಗಿದೆ. ಈಗಾಗಲೆ ತಾಲ್ಲೂಕು ಪಂಚಾಯಿತಿಯ ಅನುದಾನದಲ್ಲಿ ರೂ, 30 ಲಕ್ಷ ಮೀಸಲಿಡಲಾಗಿದೆ. ಇನ್ನುಳಿದ ಹಣ ಸಂಸದ, ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳ ಬಳಿ ಕೇಳಲಾಗುವುದು ಎಂದರು.</p>.<p><strong>ಮೂರು ಅಂತಸ್ತು:</strong> ಮೂರು ಅಂತಸ್ತಿನ ಕಟ್ಟಡ ನಿರ್ಮಿಸುವ ಉದ್ದೇಶವಿದೆ. ಅದಕ್ಕೆ ವಿದ್ಯುತ್ ಚಾಲಿತ ಲಿಫ್ಟ್ ಅಳವಡಿಸುವ ಯೋಚನೆ ಇದೆ. ಮೊದಲ ಮಹಡಿಯಲ್ಲಿನ ಕೋಣೆಗಳಲ್ಲಿ ಇಓ, ಎಡಿ, ಕಂಪ್ಯೂಟರ್ ವಿಭಾಗ, ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. </p>.<p>ಎರಡನೇ ಮಹಡಿಯಲ್ಲಿ ಕನಕಗಿರಿ, ಗಂಗಾವತಿ ಕ್ಷೇತ್ರದ ಶಾಸಕರಿಗೆ ತಲಾ ಒಂದು ಕೊಠಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ತಲಾ ಒಂದು ಕೊಠಡಿ ಹಾಗೂ ಸಭೆಗಳಿಗೆ ಪ್ರತ್ಯೇಕ ವಿಶಾಲ ಸಭಾಂಗಣದ ವ್ಯವಸ್ಥೆಯಾಗಲಿದೆ.</p>.<p>ಮೂರನೇ ಅಂತಸ್ತಿನಲ್ಲಿ ಸಂಸದ, ಸಚಿವರು ಬಂದರೆ ವಿಶ್ರಾಂತಿಗೆ ಹವಾನಿಯಂತ್ರಿತ ಒಂದು ಸುಸಜ್ಜಿತ ಕೊಠಡಿ, ಅಡುಗೆ ಮನೆ, ಊಟದ ಕೋಣೆ, ಡೈನಿಂಗ್ ಟೇಬಲ್ ಮೊದಲಾದ ವ್ಯವಸ್ಥೆ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಹಿರೇಹನುಮವ್ವ ಮತ್ತು ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>