<p><strong>ನವದೆಹಲಿ (ಪಿಟಿಐ): </strong>ಪ್ರಜೆಗಳಿಗೆ ಏಕರೂಪದ ಗುರುತಿನ ಸಂಖ್ಯೆ ನೀಡುವ `ಆಧಾರ್~ಯೋಜನೆಯು ತಾರತಮ್ಯಕ್ಕೆ ಕಾರಣವಾಗಬಹುದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಆತಂಕ ವ್ಯಕ್ತಪಡಿಸಿದೆ.<br /> <br /> ಕಳೆದ ಡಿಸೆಂಬರ್ನಲ್ಲಿ ಮಂಡನೆಯಾದ `ರಾಷ್ಟ್ರೀಯ ಗುರುತಿನ ಪ್ರಾಧಿಕಾರ~ ಮಸೂದೆ ಕುರಿತಂತೆ ಯಶವಂತ್ ಸಿನ್ಹ ನೇತೃತ್ವದ, ಹಣಕಾಸಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಎನ್ಎಚ್ಆರ್ಸಿ ಅಭಿಪ್ರಾಯ ಕೇಳಿತ್ತು.<br /> <br /> ಸೌಲಭ್ಯ ಹಾಗೂ ಸೇವೆಗಳನ್ನು ಬಳಸಿಕೊಳ್ಳಲು ಭಾರತೀಯ ಪ್ರಜೆಗಳಿಗೆ ಏಕರೂಪದ ಗುರುತಿನ ಸಂಖ್ಯೆ ನೀಡಲು ರಾಷ್ಟ್ರೀಯ ಗುರುತಿನ ಪ್ರಾಧಿಕಾರ ರಚನೆ ಪ್ರಸ್ತಾವನೆಯನ್ನು ಈ ಮಸೂದೆಯು ಒಳಗೊಂಡಿದೆ.<br /> ಮಸೂದೆಯಲ್ಲಿ ಪ್ರಸ್ತಾಪಿಸಿರುವ ನಿಯಮಗಳು, `ತಾರತಮ್ಯಕ್ಕೆ ಎಡೆಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ~ ಎಂದು ಎನ್ಎಚ್ಆರ್ಸಿ ಹೇಳಿದೆ.<br /> <br /> ಮಸೂದೆ ಪ್ರಕಾರ ಆಧಾರ್ ನೋಂದಣಿಯು ಕಡ್ಡಾವಲ್ಲ. ಹಾಗಾಗಿ ನೋಂದಣಿ ಮಾಡಿಕೊಳ್ಳದವರು ವಿವಿಧ ಸೌಲಭ್ಯ ಹಾಗೂಹಾಗೂ ಸೇವೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎನ್ನುವುದು ಆಯೋಗದ ತರ್ಕ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಪ್ರಜೆಗಳಿಗೆ ಏಕರೂಪದ ಗುರುತಿನ ಸಂಖ್ಯೆ ನೀಡುವ `ಆಧಾರ್~ಯೋಜನೆಯು ತಾರತಮ್ಯಕ್ಕೆ ಕಾರಣವಾಗಬಹುದು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಆತಂಕ ವ್ಯಕ್ತಪಡಿಸಿದೆ.<br /> <br /> ಕಳೆದ ಡಿಸೆಂಬರ್ನಲ್ಲಿ ಮಂಡನೆಯಾದ `ರಾಷ್ಟ್ರೀಯ ಗುರುತಿನ ಪ್ರಾಧಿಕಾರ~ ಮಸೂದೆ ಕುರಿತಂತೆ ಯಶವಂತ್ ಸಿನ್ಹ ನೇತೃತ್ವದ, ಹಣಕಾಸಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಎನ್ಎಚ್ಆರ್ಸಿ ಅಭಿಪ್ರಾಯ ಕೇಳಿತ್ತು.<br /> <br /> ಸೌಲಭ್ಯ ಹಾಗೂ ಸೇವೆಗಳನ್ನು ಬಳಸಿಕೊಳ್ಳಲು ಭಾರತೀಯ ಪ್ರಜೆಗಳಿಗೆ ಏಕರೂಪದ ಗುರುತಿನ ಸಂಖ್ಯೆ ನೀಡಲು ರಾಷ್ಟ್ರೀಯ ಗುರುತಿನ ಪ್ರಾಧಿಕಾರ ರಚನೆ ಪ್ರಸ್ತಾವನೆಯನ್ನು ಈ ಮಸೂದೆಯು ಒಳಗೊಂಡಿದೆ.<br /> ಮಸೂದೆಯಲ್ಲಿ ಪ್ರಸ್ತಾಪಿಸಿರುವ ನಿಯಮಗಳು, `ತಾರತಮ್ಯಕ್ಕೆ ಎಡೆಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ~ ಎಂದು ಎನ್ಎಚ್ಆರ್ಸಿ ಹೇಳಿದೆ.<br /> <br /> ಮಸೂದೆ ಪ್ರಕಾರ ಆಧಾರ್ ನೋಂದಣಿಯು ಕಡ್ಡಾವಲ್ಲ. ಹಾಗಾಗಿ ನೋಂದಣಿ ಮಾಡಿಕೊಳ್ಳದವರು ವಿವಿಧ ಸೌಲಭ್ಯ ಹಾಗೂಹಾಗೂ ಸೇವೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎನ್ನುವುದು ಆಯೋಗದ ತರ್ಕ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>