<p><span style="font-size: 26px;"><strong>ಹನುಮಸಾಗರ</strong>: ಹನುಮಸಾಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೆರೆದ ಕೊಳವೆಬಾವಿಗಳು ಇರುವುದರಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.</span><br /> ಹನುಮಸಾಗರದಿಂದ ಮಾವಿನಇಟಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ತೆರೆದ ಕೊಳವೆಬಾವಿ ಬಹು ದಿನಗಳಿಂದ ಹಾಗೆಯೇ ಇದೆ.<br /> <br /> ಈ ಹಿಂದೆ ಮಾವಿನಇಟಗಿ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಕಿರುನೀರು ಸರಬುರಾಜಿನ ಈ ಕೊಳವೆಬಾವಿಯಲ್ಲಿ ನೀರು ಕಡಿಮೆಯಾದ ಪ್ರಯುಕ್ತ ಅದರಲ್ಲಿನ ಕೊಳವೆಗಳನ್ನು ಹಾಗೂ ಮೋಟರ್ ಎತ್ತಲಾಗಿದ್ದರೂ ಅಲ್ಲಿನ ಗ್ರಾಮ ಪಂಚಾಯಿತಿ ಬಹು ದಿನಗಳಿಂದ ಕೊಳವೆಬಾವಿಯನ್ನು ಮುಚ್ಚದೆ ಹಾಗೆ ತೆರೆದು ಬಿಡಲಾಗಿದೆ.<br /> <br /> ಅಲ್ಲದೆ ಸಮೀಪದ ಬಾದಿಮನಾಳ ಗ್ರಾಮದಿಂದ ಜಹಗೀರಗೂಡದೂರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ್ಲ್ಲಲೂ ಒಂದು ತೆರೆದ ಕೊಳವೆಬಾವಿ ಇದ್ದು ಅದರಿಂದ ಪಾದಚಾರಿಗಳಿಗೆ ಆತಂಕಕ್ಕೆ ಕಾರಣವಾಗಿದೆ.<br /> <br /> ವಿವಿಧೆಡೆ ತೆರೆದ ಕೊಳವೆ ಬಾವಿಗಳು ಸಾಕಷ್ಟು ತೊಂದರೆ ಉಂಟು ಮಾಡಿದ್ದರೂ ಈ ಭಾಗದಲ್ಲಿ ಮಾತ್ರ ಈ ವರೆಗೂ ಅಲ್ಲಲ್ಲಿ ಇಂತಹ ತೆರೆದ ಕೊಳವೆಬಾವಿಗಳು ಕಂಡು ಬರುತ್ತಿವೆ ಎಂದು ಜನ ದೂರುತ್ತಾರೆ.<br /> <br /> ಈ ಮಾರ್ಗವಾಗಿ ಶಾಲಾ ಮಕ್ಕಳು ನಡೆದಾಡುತ್ತಾರೆ, ಜಾನುವಾರುಗಳು, ದ್ವಿಚಕ್ರವಾಹನ ಸವಾರರಿಗೂ ತುಂಬಾ ಕಿರಿಕಿರಿಯಾಗಿದೆ ಸಂಬಂಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೊಳವೆಬಾವಿ ಮುಚ್ಚುವುದಕ್ಕೆ ಯಾರೂ ಮುಂದಾಗಿಲ್ಲ ಎಂದು ಜನರು ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಹನುಮಸಾಗರ</strong>: ಹನುಮಸಾಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೆರೆದ ಕೊಳವೆಬಾವಿಗಳು ಇರುವುದರಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.</span><br /> ಹನುಮಸಾಗರದಿಂದ ಮಾವಿನಇಟಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ತೆರೆದ ಕೊಳವೆಬಾವಿ ಬಹು ದಿನಗಳಿಂದ ಹಾಗೆಯೇ ಇದೆ.<br /> <br /> ಈ ಹಿಂದೆ ಮಾವಿನಇಟಗಿ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಕಿರುನೀರು ಸರಬುರಾಜಿನ ಈ ಕೊಳವೆಬಾವಿಯಲ್ಲಿ ನೀರು ಕಡಿಮೆಯಾದ ಪ್ರಯುಕ್ತ ಅದರಲ್ಲಿನ ಕೊಳವೆಗಳನ್ನು ಹಾಗೂ ಮೋಟರ್ ಎತ್ತಲಾಗಿದ್ದರೂ ಅಲ್ಲಿನ ಗ್ರಾಮ ಪಂಚಾಯಿತಿ ಬಹು ದಿನಗಳಿಂದ ಕೊಳವೆಬಾವಿಯನ್ನು ಮುಚ್ಚದೆ ಹಾಗೆ ತೆರೆದು ಬಿಡಲಾಗಿದೆ.<br /> <br /> ಅಲ್ಲದೆ ಸಮೀಪದ ಬಾದಿಮನಾಳ ಗ್ರಾಮದಿಂದ ಜಹಗೀರಗೂಡದೂರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ್ಲ್ಲಲೂ ಒಂದು ತೆರೆದ ಕೊಳವೆಬಾವಿ ಇದ್ದು ಅದರಿಂದ ಪಾದಚಾರಿಗಳಿಗೆ ಆತಂಕಕ್ಕೆ ಕಾರಣವಾಗಿದೆ.<br /> <br /> ವಿವಿಧೆಡೆ ತೆರೆದ ಕೊಳವೆ ಬಾವಿಗಳು ಸಾಕಷ್ಟು ತೊಂದರೆ ಉಂಟು ಮಾಡಿದ್ದರೂ ಈ ಭಾಗದಲ್ಲಿ ಮಾತ್ರ ಈ ವರೆಗೂ ಅಲ್ಲಲ್ಲಿ ಇಂತಹ ತೆರೆದ ಕೊಳವೆಬಾವಿಗಳು ಕಂಡು ಬರುತ್ತಿವೆ ಎಂದು ಜನ ದೂರುತ್ತಾರೆ.<br /> <br /> ಈ ಮಾರ್ಗವಾಗಿ ಶಾಲಾ ಮಕ್ಕಳು ನಡೆದಾಡುತ್ತಾರೆ, ಜಾನುವಾರುಗಳು, ದ್ವಿಚಕ್ರವಾಹನ ಸವಾರರಿಗೂ ತುಂಬಾ ಕಿರಿಕಿರಿಯಾಗಿದೆ ಸಂಬಂಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೊಳವೆಬಾವಿ ಮುಚ್ಚುವುದಕ್ಕೆ ಯಾರೂ ಮುಂದಾಗಿಲ್ಲ ಎಂದು ಜನರು ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>