<p><strong>ದಾವಣಗೆರೆ: </strong>ಸ್ವಾರ್ಥ ತುಂಬಿದ ಸಮಾಜವನ್ನು ತಿದ್ದುವಲ್ಲಿ ಸದ್ಯೋಜಾತ ಶ್ರೀಗಳ ಸೇವೆ ಅವಿಸ್ಮರಣೀಯ ಎಂದು ಹಾಸ್ಯ ಉಪನ್ಯಾಸಕಿ ಇಂದುಮತಿ ಸಾಲಿಮಠ ಹೇಳಿದರು.ನಗರದಲ್ಲಿ ಗುರುವಾರ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ 3ನೇ ಸಂಸ್ಮರಣೋತ್ಸವದಲ್ಲಿ ‘ಅಧ್ಯಾತ್ಮದಲ್ಲಿ ಹಾಸ್ಯ’ ಕುರಿತು ಅವರು ಮಾತನಾಡಿದರು.<br /> <br /> ಮನುಷ್ಯನ ಆಸೆಗೆ ಮಿತಿಯಿಲ್ಲ. ಒಳ್ಳೆಯದು ಎಲ್ಲವೂ ಬೇಕು ಎನ್ನುವ ಲಾಲಸೆ ಅವನಲ್ಲಿದೆ. ಇಂಥ ಸ್ವಾರ್ಥ ತುಂಬಿದ ಸಮಾಜವನ್ನು ತಿದ್ದುವಲ್ಲಿ ಅನುಭಾವಿಗಳು, ಮಹಾತ್ಮರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಬದುಕಿನ ಸಾರ್ಥಕತೆಗೆ ತ್ಯಾಗ ಸೇವಾ ಮನೋಭಾವ ಮುಖ್ಯ ಎಂದರು.ಸಾಲಿಮಠ ಅವರ ಹಾಸ್ಯ ಸ್ಯಾಂಪಲ್: ಯುವಕನ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದಾಗ ಆತ ಹೊಡೆಯಲು ಮುಂದಾದನಂತೆ. ದೇವರು ಯಾಕೆ ಹೊಡೆಯುತ್ತಿ ಎಂದು ಕೇಳಿದ. <br /> <br /> ಅರೆ! ತಪಸ್ಸು ಮಾಡಿದಾಕ್ಷಣ ನೀನೇ ಬಂದೆಯಾ? ರಂಭೆ ಊರ್ವಶಿಯವರನ್ನು ಕಳುಹಿಸಿಲ್ಲ ಯಾಕೆ? ಎಂದು ಕೇಳಿದನಂತೆ ‘ತಪಸ್ವಿ’.<br /> ಹಿಂದೆ ಹೆಣ್ಣುಮಕ್ಕಳು ಸರದಾರ ನನಗಂಡ... ಎಂದು ಹಾಡುತ್ತಿದ್ದರೆ ಇಂದಿನವರು ಬಹದ್ದೂರು ನನಗಂಡ ಕ್ಲಬ್ಬಿಗೆ ಹೋಗ್ಯಾನ... ಅನ್ನುತ್ತಾರಂತೆ.<br /> ಆಹಾರ ಪದ್ಧತಿ ಬದಲಾವಣೆ ಬಗ್ಗೆ ಮಾತನಾಡಿ, ‘ನನಹೆಂಡ್ತಿ ಮಾಡ್ತಾಳ ಇಡ್ಲಿ ಸಾಂಬಾರು ವಡ... ಅದ ತಿಂದು ನಾನಾಗೀನಿ ಹಳೇ ಪ್ಲಾಸ್ಟಿಕ್ ಕೊಡ...’<br /> <br /> ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಎಂ.ಎನ್.ಜೆ.ಬಿ. ಆರಾಧ್ಯ, ಮಲ್ಲೋಕಾರಾಧ್ಯ ಉಪಸ್ಥಿತರಿದ್ದರು. ಪುಟ್ಟಮ್ಮ ಮಹಾರುದ್ರಯ್ಯ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಸ್ವಾರ್ಥ ತುಂಬಿದ ಸಮಾಜವನ್ನು ತಿದ್ದುವಲ್ಲಿ ಸದ್ಯೋಜಾತ ಶ್ರೀಗಳ ಸೇವೆ ಅವಿಸ್ಮರಣೀಯ ಎಂದು ಹಾಸ್ಯ ಉಪನ್ಯಾಸಕಿ ಇಂದುಮತಿ ಸಾಲಿಮಠ ಹೇಳಿದರು.ನಗರದಲ್ಲಿ ಗುರುವಾರ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ 3ನೇ ಸಂಸ್ಮರಣೋತ್ಸವದಲ್ಲಿ ‘ಅಧ್ಯಾತ್ಮದಲ್ಲಿ ಹಾಸ್ಯ’ ಕುರಿತು ಅವರು ಮಾತನಾಡಿದರು.<br /> <br /> ಮನುಷ್ಯನ ಆಸೆಗೆ ಮಿತಿಯಿಲ್ಲ. ಒಳ್ಳೆಯದು ಎಲ್ಲವೂ ಬೇಕು ಎನ್ನುವ ಲಾಲಸೆ ಅವನಲ್ಲಿದೆ. ಇಂಥ ಸ್ವಾರ್ಥ ತುಂಬಿದ ಸಮಾಜವನ್ನು ತಿದ್ದುವಲ್ಲಿ ಅನುಭಾವಿಗಳು, ಮಹಾತ್ಮರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಬದುಕಿನ ಸಾರ್ಥಕತೆಗೆ ತ್ಯಾಗ ಸೇವಾ ಮನೋಭಾವ ಮುಖ್ಯ ಎಂದರು.ಸಾಲಿಮಠ ಅವರ ಹಾಸ್ಯ ಸ್ಯಾಂಪಲ್: ಯುವಕನ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದಾಗ ಆತ ಹೊಡೆಯಲು ಮುಂದಾದನಂತೆ. ದೇವರು ಯಾಕೆ ಹೊಡೆಯುತ್ತಿ ಎಂದು ಕೇಳಿದ. <br /> <br /> ಅರೆ! ತಪಸ್ಸು ಮಾಡಿದಾಕ್ಷಣ ನೀನೇ ಬಂದೆಯಾ? ರಂಭೆ ಊರ್ವಶಿಯವರನ್ನು ಕಳುಹಿಸಿಲ್ಲ ಯಾಕೆ? ಎಂದು ಕೇಳಿದನಂತೆ ‘ತಪಸ್ವಿ’.<br /> ಹಿಂದೆ ಹೆಣ್ಣುಮಕ್ಕಳು ಸರದಾರ ನನಗಂಡ... ಎಂದು ಹಾಡುತ್ತಿದ್ದರೆ ಇಂದಿನವರು ಬಹದ್ದೂರು ನನಗಂಡ ಕ್ಲಬ್ಬಿಗೆ ಹೋಗ್ಯಾನ... ಅನ್ನುತ್ತಾರಂತೆ.<br /> ಆಹಾರ ಪದ್ಧತಿ ಬದಲಾವಣೆ ಬಗ್ಗೆ ಮಾತನಾಡಿ, ‘ನನಹೆಂಡ್ತಿ ಮಾಡ್ತಾಳ ಇಡ್ಲಿ ಸಾಂಬಾರು ವಡ... ಅದ ತಿಂದು ನಾನಾಗೀನಿ ಹಳೇ ಪ್ಲಾಸ್ಟಿಕ್ ಕೊಡ...’<br /> <br /> ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಎಂ.ಎನ್.ಜೆ.ಬಿ. ಆರಾಧ್ಯ, ಮಲ್ಲೋಕಾರಾಧ್ಯ ಉಪಸ್ಥಿತರಿದ್ದರು. ಪುಟ್ಟಮ್ಮ ಮಹಾರುದ್ರಯ್ಯ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>