<p>ಚಿಕ್ಕಮಗಳೂರು: ಬಹುಜನರು ಚುನಾವಣೆಯನ್ನು ಯುದ್ಧೋಪಾದಿಯಲ್ಲಿ ಸ್ವೀಕರಿಸಬೇಕೆಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಪಿ.ವೇಲಾಯುಧನ್ ಕರೆ ನೀಡಿದರು.<br /> <br /> ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಬಿ.ಕೃಷ್ಣಪ್ಪ ಅವರ 74ನೇ ಜನ್ಮದಿನೋತ್ಸವದಲ್ಲಿ ಅವರು ಮಾತನಾಡಿ, ದಲಿತರು ದೇಶ ಮತ್ತು ರಾಜ್ಯ ಆಳುವ ಸಮಾಜವಾಗಿ ಮಾರ್ಪಾಡಾಗಬೇಕೆಂದು ಸಲಹೆ ನೀಡಿದರು.<br /> <br /> ದಲಿತ ಜನಾಂಗದ ಯುವಕರು ದಾರಿ ತಪ್ಪುತ್ತಿರುವುದನ್ನು ನಿಯಂತ್ರಿಸಬೇಕು. ದಲಿತರು ಶೋಷಣೆಯಿಂದ ಮುಕ್ತರನ್ನಾಗಿಸುವತ್ತ ಹೆಜ್ಜೆ ಹಾಕುವಂತೆ ನೋಡಿಕೊಳ್ಳಬೇಕು. ಕೃಷ್ಣಪ್ಪ ಅವರು ದಲಿತರ ವಿಮೋಚನೆಗೆ ಚಿಂತಿಸಿ, ದಲಿತ ಚಳವಳಿಯನ್ನು ರಾಜ್ಯದಲ್ಲಿ ಮುನ್ನಡೆಸಿದರು ಎಂದು ಹೇಳಿದರು.<br /> <br /> ಪಕ್ಷದ ಜಿಲ್ಲಾ ಉಪಾಧ್ಯಕ್ಷ ಗೋಪಾಲ್ ಮಾತನಾಡಿ, ದಲಿತ ಚಳವಳಿಯನ್ನು ರಾಜ್ಯದಲ್ಲಿ ಹಬ್ಬಿಸಿದ ಕೀರ್ತಿ ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ. ಶೋಷಣೆಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕೆಂದು ತಿಳಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ ಮಾತನಾಡಿದರು.<br /> <br /> ಜೆಡಿಎಸ್ ಮುಖಂಡ ಹಂಪಯ್ಯ, ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರಾಜ್ಯ ಮುಖಂಡ ಜಿ.ಕೆ.ಬಸವರಾಜು, ಜಿಲ್ಲಾ ಮುಖಂಡರಾದ ಈಶ್ವರ, ಕೆ.ಆರ್.ಗಂಗಾಧರ, ಹರೀಶ್, ರೈತ ಸಂಘದ ಆರ್.ಆರ್.ಮಹೇಶ್ ಇದ್ದರು.<br /> <br /> ಸರಳ ವಿವಾಹ: ಇದೇ ಸಮಾರಂಭದಲ್ಲಿ ಕಬ್ಬಿಗೆರೆಯ ಮೋಹನ್ಕುಮಾರ್ ಮತ್ತು ಮಾಗಡಿ ಗ್ರಾಮದ ಭಾರತಿ ಅವರು ಹಾರ ಬದಲಾಯಿಸಿ ಕೊಳ್ಳುವ ಮೂಲಕ ಸರಳ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಬಹುಜನರು ಚುನಾವಣೆಯನ್ನು ಯುದ್ಧೋಪಾದಿಯಲ್ಲಿ ಸ್ವೀಕರಿಸಬೇಕೆಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಪಿ.ವೇಲಾಯುಧನ್ ಕರೆ ನೀಡಿದರು.<br /> <br /> ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಬಿ.ಕೃಷ್ಣಪ್ಪ ಅವರ 74ನೇ ಜನ್ಮದಿನೋತ್ಸವದಲ್ಲಿ ಅವರು ಮಾತನಾಡಿ, ದಲಿತರು ದೇಶ ಮತ್ತು ರಾಜ್ಯ ಆಳುವ ಸಮಾಜವಾಗಿ ಮಾರ್ಪಾಡಾಗಬೇಕೆಂದು ಸಲಹೆ ನೀಡಿದರು.<br /> <br /> ದಲಿತ ಜನಾಂಗದ ಯುವಕರು ದಾರಿ ತಪ್ಪುತ್ತಿರುವುದನ್ನು ನಿಯಂತ್ರಿಸಬೇಕು. ದಲಿತರು ಶೋಷಣೆಯಿಂದ ಮುಕ್ತರನ್ನಾಗಿಸುವತ್ತ ಹೆಜ್ಜೆ ಹಾಕುವಂತೆ ನೋಡಿಕೊಳ್ಳಬೇಕು. ಕೃಷ್ಣಪ್ಪ ಅವರು ದಲಿತರ ವಿಮೋಚನೆಗೆ ಚಿಂತಿಸಿ, ದಲಿತ ಚಳವಳಿಯನ್ನು ರಾಜ್ಯದಲ್ಲಿ ಮುನ್ನಡೆಸಿದರು ಎಂದು ಹೇಳಿದರು.<br /> <br /> ಪಕ್ಷದ ಜಿಲ್ಲಾ ಉಪಾಧ್ಯಕ್ಷ ಗೋಪಾಲ್ ಮಾತನಾಡಿ, ದಲಿತ ಚಳವಳಿಯನ್ನು ರಾಜ್ಯದಲ್ಲಿ ಹಬ್ಬಿಸಿದ ಕೀರ್ತಿ ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ. ಶೋಷಣೆಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕೆಂದು ತಿಳಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ ಮಾತನಾಡಿದರು.<br /> <br /> ಜೆಡಿಎಸ್ ಮುಖಂಡ ಹಂಪಯ್ಯ, ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರಾಜ್ಯ ಮುಖಂಡ ಜಿ.ಕೆ.ಬಸವರಾಜು, ಜಿಲ್ಲಾ ಮುಖಂಡರಾದ ಈಶ್ವರ, ಕೆ.ಆರ್.ಗಂಗಾಧರ, ಹರೀಶ್, ರೈತ ಸಂಘದ ಆರ್.ಆರ್.ಮಹೇಶ್ ಇದ್ದರು.<br /> <br /> ಸರಳ ವಿವಾಹ: ಇದೇ ಸಮಾರಂಭದಲ್ಲಿ ಕಬ್ಬಿಗೆರೆಯ ಮೋಹನ್ಕುಮಾರ್ ಮತ್ತು ಮಾಗಡಿ ಗ್ರಾಮದ ಭಾರತಿ ಅವರು ಹಾರ ಬದಲಾಯಿಸಿ ಕೊಳ್ಳುವ ಮೂಲಕ ಸರಳ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>