ನವದೆಹಲಿ (ಪಿಟಿಐ): ಇಕ್ಲಾಖ್ ಹತ್ಯೆ ಪ್ರಕರಣ ಒಂದು ದುರಾದೃಷ್ಟಕರ ಇದಕ್ಕೆ ರಾಜಕೀಯ ಅಥವಾ ಕೋಮುವಾದಿ ಬಣ್ಣ ಬಳಿಯುವುದು ಬೇಡ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಮನವಿ ಮಾಡಿದ್ದಾರೆ.
ಈ ಹತ್ಯೆ ಪ್ರಕರಣ ದುರಾದೃಷ್ಟಕರವಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರಾಜಕೀಯ ಪಕ್ಷಗಳು ಈ ಪ್ರಕರಣವನ್ನು ಮತ ಬ್ಯಾಂಕ್ಗಾಗಿ ಬಳಸಿಕೊಳ್ಳುವುದು ಬೇಡ ಎಂದು ರಾಜನಾಥ್ ಸಿಂಗ್ ಮನವಿ ಮಾಡಿದ್ದಾರೆ. ನಾವು ಎರಡು ಸಮುದಾಯಗಳ ನಡುವೆ ಸಹಬಾಳ್ವೆ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಘಟನೆಯನ್ನು ಖಂಡಿಸಿರುವ ರಾಜನಾಥ್ ಸಿಂಗ್ ಈಗಾಗಲೇ 8 ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜನಾಥ್ ಸಿಂಗ್ ಪುನರುಚ್ಚರಿಸಿದರು.