<p>ನವದೆಹಲಿ (ಪಿಟಿಐ): ನ್ಯಾಯಮೂರ್ತಿಗಳಾದ (ನಿವೃತ್ತ) ಪಿ.ಡಿ. ದಿನಕರನ್ ಮತ್ತು ಸೌಮಿತ್ರ ಸೆನ್ ಅವರು ತಮ್ಮ ವಿರುದ್ಧದ ದೋಷಾರೋಪಣೆ ಪ್ರಕ್ರಿಯೆಗೆ ಮೊದಲೇ ರಾಜೀನಾಮೆ ನೀಡಿದ್ದರು ಕೂಡ ನಿವೃತ್ತಿ ನಂತರದ ಲಾಭಗಳನ್ನು ಪಡೆಯಲಿದ್ದಾರೆ.<br /> <br /> ನ್ಯಾಯಾಧೀಶರು ಇಂತಹ ಪರಿಸ್ಥಿತಿಗಳಲ್ಲಿ ವೇತನ ಮತ್ತು ಭತ್ಯೆಯಂತಹ ಹಕ್ಕುಗಳನ್ನು ಮತ್ತು ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಸಂವಿಧಾನದ 221ನೇ ಪರಿಚ್ಛೇದ ಇದಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ಆರ್ಟಿಯ ಅರ್ಜಿಗೆ ಉತ್ತರಿಸಿರುವ ನ್ಯಾಯಾಂಗ ಇಲಾಖೆ ಹೇಳಿದೆ.<br /> <br /> `ನ್ಯಾಯಾಧೀಶರು ನಿಂದನೆ ವಿಚಾರಣೆಗಳನ್ನು ತಪ್ಪಿಸಿಕೊಳ್ಳಲು ಅವಧಿಗೆ ಮೊದಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಪ್ರಕರಣಗಳಲ್ಲಿ ಕೂಡ ಅವರು ನಿವೃತ್ತಿ ನಂತರದ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. <br /> ಇದನ್ನು ತಡೆಯಲು ಸಾಂವಿಧಾನಾತ್ಮಕ ಅಥವಾ ಶಾಸನಬದ್ಧ ಅವಕಾಶಗಳು ಇಲ್ಲ~ ಎಂದು ಇಲಾಖೆ ತಿಳಿಸಿದೆ.<br /> ಈ ಕುರಿತಂತೆ ಕಾರ್ಯಕರ್ತ ಸುಭಾಷ್ ಅಗರ್ವಾಲ್ ಎಂಬುವರು ಇಲಾಖೆಗೆ ಅರ್ಜಿ ಸಲ್ಲಿಸಿ ಮಾಹಿತಿ ತಿಳಿಯಬಯಸಿದ್ದರು.<br /> <br /> ಕೋಲ್ಕತ್ತ ಹೈಕೋರ್ಟ್ನ ನ್ಯಾಯಮೂರ್ತಿ ಸೌಮಿತ್ರ ಸೆನ್ ಅವರು ಲೋಕಸಭೆಯಲ್ಲಿ ತಮ್ಮ ವಿರುದ್ಧ ದೋಷಾರೋಪಣ ನಿರ್ಣಯ ವಿಷಯ ಚರ್ಚೆಗೆ ಬರುವ ಐದು ದಿನಗಳ ಮೊದಲೇ ಕಳೆದ ಸೆ. 1ರಂದು ರಾಜೀನಾಮೆ ನೀಡಿದ್ದರು.<br /> <br /> ಭೂಗಹಗರಣ ಕುರಿತು ಮೂವರು ಸದಸ್ಯರ ತನಿಖಾ ಸಮಿತಿಯು ವಿಚಾರಣೆ ಆರಂಭಿಸುವ ಹಿಂದಿನ ದಿನ ಸಿಕ್ಕಿಂ ಹೈಕೋರ್ಟ್ನ ಆಗಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಕಳೆದ ಜುಲೈ 29ರಂದು ರಾಜೀನಾಮೆ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ನ್ಯಾಯಮೂರ್ತಿಗಳಾದ (ನಿವೃತ್ತ) ಪಿ.ಡಿ. ದಿನಕರನ್ ಮತ್ತು ಸೌಮಿತ್ರ ಸೆನ್ ಅವರು ತಮ್ಮ ವಿರುದ್ಧದ ದೋಷಾರೋಪಣೆ ಪ್ರಕ್ರಿಯೆಗೆ ಮೊದಲೇ ರಾಜೀನಾಮೆ ನೀಡಿದ್ದರು ಕೂಡ ನಿವೃತ್ತಿ ನಂತರದ ಲಾಭಗಳನ್ನು ಪಡೆಯಲಿದ್ದಾರೆ.<br /> <br /> ನ್ಯಾಯಾಧೀಶರು ಇಂತಹ ಪರಿಸ್ಥಿತಿಗಳಲ್ಲಿ ವೇತನ ಮತ್ತು ಭತ್ಯೆಯಂತಹ ಹಕ್ಕುಗಳನ್ನು ಮತ್ತು ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಸಂವಿಧಾನದ 221ನೇ ಪರಿಚ್ಛೇದ ಇದಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ಆರ್ಟಿಯ ಅರ್ಜಿಗೆ ಉತ್ತರಿಸಿರುವ ನ್ಯಾಯಾಂಗ ಇಲಾಖೆ ಹೇಳಿದೆ.<br /> <br /> `ನ್ಯಾಯಾಧೀಶರು ನಿಂದನೆ ವಿಚಾರಣೆಗಳನ್ನು ತಪ್ಪಿಸಿಕೊಳ್ಳಲು ಅವಧಿಗೆ ಮೊದಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಪ್ರಕರಣಗಳಲ್ಲಿ ಕೂಡ ಅವರು ನಿವೃತ್ತಿ ನಂತರದ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. <br /> ಇದನ್ನು ತಡೆಯಲು ಸಾಂವಿಧಾನಾತ್ಮಕ ಅಥವಾ ಶಾಸನಬದ್ಧ ಅವಕಾಶಗಳು ಇಲ್ಲ~ ಎಂದು ಇಲಾಖೆ ತಿಳಿಸಿದೆ.<br /> ಈ ಕುರಿತಂತೆ ಕಾರ್ಯಕರ್ತ ಸುಭಾಷ್ ಅಗರ್ವಾಲ್ ಎಂಬುವರು ಇಲಾಖೆಗೆ ಅರ್ಜಿ ಸಲ್ಲಿಸಿ ಮಾಹಿತಿ ತಿಳಿಯಬಯಸಿದ್ದರು.<br /> <br /> ಕೋಲ್ಕತ್ತ ಹೈಕೋರ್ಟ್ನ ನ್ಯಾಯಮೂರ್ತಿ ಸೌಮಿತ್ರ ಸೆನ್ ಅವರು ಲೋಕಸಭೆಯಲ್ಲಿ ತಮ್ಮ ವಿರುದ್ಧ ದೋಷಾರೋಪಣ ನಿರ್ಣಯ ವಿಷಯ ಚರ್ಚೆಗೆ ಬರುವ ಐದು ದಿನಗಳ ಮೊದಲೇ ಕಳೆದ ಸೆ. 1ರಂದು ರಾಜೀನಾಮೆ ನೀಡಿದ್ದರು.<br /> <br /> ಭೂಗಹಗರಣ ಕುರಿತು ಮೂವರು ಸದಸ್ಯರ ತನಿಖಾ ಸಮಿತಿಯು ವಿಚಾರಣೆ ಆರಂಭಿಸುವ ಹಿಂದಿನ ದಿನ ಸಿಕ್ಕಿಂ ಹೈಕೋರ್ಟ್ನ ಆಗಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಕಳೆದ ಜುಲೈ 29ರಂದು ರಾಜೀನಾಮೆ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>