<p><strong>ಬೆಂಗಳೂರು: </strong>`ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ತಾತ್ವಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.</p>.<p>ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರಹಗಳ ಮೊದಲ ಐದು ಸಂಪುಟ~ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> `ಮುಂದಿನ ಐವತ್ತು ವರ್ಷಗಳಲ್ಲಿ ಅವಕಾಶವಾದಿ ರಾಜಕಾರಣ ಬರುತ್ತದೆ ಎಂದು ದೀನ್ದಯಾಳ್ ಅವರು ಹಿಂದೆಯೇ ಭವಿಷ್ಯ ನುಡಿದಿದ್ದರು. ಅವರ ಆ ಮಾತು ಇಂದಿಗೆ ಸತ್ಯವಾಗಿದೆ. ಇಂದು ರಾಜಕೀಯವು ಯಾವ ಕಡೆ ಸಾಗುತ್ತಿದೆ ಎಂಬುದನ್ನು ಚಿಂತನೆ ನಡೆಸಬೇಕಾಗಿದೆ~ ಎಂದರು.<br /> <br /> `ಅವರ ಆದರ್ಶಗಳು ಅನುಸರಣೀಯವಾಗಿವೆ. ಈಗಾಗಲೇ ಯಶವಂತಪುರ ಮೇಲ್ಸೇತುವೆಗೆ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಹೆಸರನ್ನಿಡಲಾಗಿದೆ~ ಎಂದರು.<br /> <br /> ಲೇಖಕ ತರುಣ್ ವಿಜಯ್ ಮಾತನಾಡಿ, `ದೀನ್ದಯಾಳ್ರ ಬರಹಗಳನ್ನು ಕನ್ನಡಾನುವಾದ ಮಾಡಿ ಸಂಪುಟ ರೂಪದಲ್ಲಿ ತಂದಿರುವ ಹೆಗ್ಗಳಿಕೆ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ. ಅವರ ಕ್ರಾಂತಿಕಾರಕ ವಿಚಾರಗಳು ಇಂದಿನ ಯುವಕರಿಗೆ ಆದರ್ಶಪ್ರಾಯವಾಗಿವೆ. ಅವುಗಳನ್ನು ಅನುಸರಿಸಬೇಕಾಗಿದ್ದು ಎಲ್ಲರ ಕರ್ತವ್ಯವಾಗಿದೆ~ ಎಂದು ಹೇಳಿದರು.<br /> <br /> `ನಗರಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ತಿಳಿದಿದ್ದೇವೆ. ಆದರೆ, ಇಂದು ರೈತನ ಮಗ ರೈತನಾಗಲು ಬಯಸುವುದಿಲ್ಲ. ಅಂದರೆ ನಮ್ಮತನವನ್ನು ಕಳೆದುಕೊಂಡು ನಾವು ಅಭಿವೃದ್ಧಿಯನ್ನು ಸಾಧಿಸುತ್ತಿದ್ದೇವೆ~ ಎಂದು ವಿಷಾದಿಸಿದರು.<br /> <br /> ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದೀನ್ದಯಾಳ್ ಉಪಾಧ್ಯಾಯ ಸಂಶೋಧನಾ ಸಂಸ್ಥೆಯ ಡಾ.ಮಹೇಶ್ ಚಂದ್ರ ಶರ್ಮಾ, ಉಪ ಮುಖ್ಯಮಂತ್ರಿ ಆರ್.ಅಶೋಕ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ, ಶಾಸಕ ಡಾ.ಡಿ.ಹೇಮಚಂದ್ರಸಾಗರ್ ಭಾಗವಹಿಸಿದ್ದರು.<br /> <br /> <strong>5 ಸಂಪುಟಗಳ ಕನ್ನಡಾನುವಾದ ಬಿಡುಗಡೆ</strong><br /> ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರಹಗಳನ್ನು ಸುಮಾರು 10 ಸಂಪುಟಗಳಲ್ಲಿ ಹೊರತರುವ ಯೋಜನೆಯಾಗಿದೆ. ಪ್ರಥಮ ಹಂತದಲ್ಲಿ ಐದು ಸಂಪುಟಗಳ ಕನ್ನಡಾನುವಾದ ಬಿಡುಗಡೆಯಾಗಿದೆ. <br /> <br /> ರಾಜ್ಯ ಸರ್ಕಾರ ಒಟ್ಟು 40 ಲಕ್ಷ ರೂಪಾಯಿಗಳನ್ನು ಈ 10 ಸಂಪುಟಕ್ಕೆ ನಿಗದಿಗೊಳಿಸಿದ್ದು, 5 ಸಂಪುಟಗಳ ಪ್ರಕಟಣೆಗಾಗಿ ರೂ 20 ಲಕ್ಷ ಬಿಡುಗಡೆ ಮಾಡಿದೆ. ಸಂಪುಟಗಳ ಬೆಲೆ ರೂ 625.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ತಾತ್ವಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.</p>.<p>ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರಹಗಳ ಮೊದಲ ಐದು ಸಂಪುಟ~ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> `ಮುಂದಿನ ಐವತ್ತು ವರ್ಷಗಳಲ್ಲಿ ಅವಕಾಶವಾದಿ ರಾಜಕಾರಣ ಬರುತ್ತದೆ ಎಂದು ದೀನ್ದಯಾಳ್ ಅವರು ಹಿಂದೆಯೇ ಭವಿಷ್ಯ ನುಡಿದಿದ್ದರು. ಅವರ ಆ ಮಾತು ಇಂದಿಗೆ ಸತ್ಯವಾಗಿದೆ. ಇಂದು ರಾಜಕೀಯವು ಯಾವ ಕಡೆ ಸಾಗುತ್ತಿದೆ ಎಂಬುದನ್ನು ಚಿಂತನೆ ನಡೆಸಬೇಕಾಗಿದೆ~ ಎಂದರು.<br /> <br /> `ಅವರ ಆದರ್ಶಗಳು ಅನುಸರಣೀಯವಾಗಿವೆ. ಈಗಾಗಲೇ ಯಶವಂತಪುರ ಮೇಲ್ಸೇತುವೆಗೆ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಹೆಸರನ್ನಿಡಲಾಗಿದೆ~ ಎಂದರು.<br /> <br /> ಲೇಖಕ ತರುಣ್ ವಿಜಯ್ ಮಾತನಾಡಿ, `ದೀನ್ದಯಾಳ್ರ ಬರಹಗಳನ್ನು ಕನ್ನಡಾನುವಾದ ಮಾಡಿ ಸಂಪುಟ ರೂಪದಲ್ಲಿ ತಂದಿರುವ ಹೆಗ್ಗಳಿಕೆ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ. ಅವರ ಕ್ರಾಂತಿಕಾರಕ ವಿಚಾರಗಳು ಇಂದಿನ ಯುವಕರಿಗೆ ಆದರ್ಶಪ್ರಾಯವಾಗಿವೆ. ಅವುಗಳನ್ನು ಅನುಸರಿಸಬೇಕಾಗಿದ್ದು ಎಲ್ಲರ ಕರ್ತವ್ಯವಾಗಿದೆ~ ಎಂದು ಹೇಳಿದರು.<br /> <br /> `ನಗರಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ತಿಳಿದಿದ್ದೇವೆ. ಆದರೆ, ಇಂದು ರೈತನ ಮಗ ರೈತನಾಗಲು ಬಯಸುವುದಿಲ್ಲ. ಅಂದರೆ ನಮ್ಮತನವನ್ನು ಕಳೆದುಕೊಂಡು ನಾವು ಅಭಿವೃದ್ಧಿಯನ್ನು ಸಾಧಿಸುತ್ತಿದ್ದೇವೆ~ ಎಂದು ವಿಷಾದಿಸಿದರು.<br /> <br /> ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದೀನ್ದಯಾಳ್ ಉಪಾಧ್ಯಾಯ ಸಂಶೋಧನಾ ಸಂಸ್ಥೆಯ ಡಾ.ಮಹೇಶ್ ಚಂದ್ರ ಶರ್ಮಾ, ಉಪ ಮುಖ್ಯಮಂತ್ರಿ ಆರ್.ಅಶೋಕ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ, ಶಾಸಕ ಡಾ.ಡಿ.ಹೇಮಚಂದ್ರಸಾಗರ್ ಭಾಗವಹಿಸಿದ್ದರು.<br /> <br /> <strong>5 ಸಂಪುಟಗಳ ಕನ್ನಡಾನುವಾದ ಬಿಡುಗಡೆ</strong><br /> ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಸಮಗ್ರ ಬರಹಗಳನ್ನು ಸುಮಾರು 10 ಸಂಪುಟಗಳಲ್ಲಿ ಹೊರತರುವ ಯೋಜನೆಯಾಗಿದೆ. ಪ್ರಥಮ ಹಂತದಲ್ಲಿ ಐದು ಸಂಪುಟಗಳ ಕನ್ನಡಾನುವಾದ ಬಿಡುಗಡೆಯಾಗಿದೆ. <br /> <br /> ರಾಜ್ಯ ಸರ್ಕಾರ ಒಟ್ಟು 40 ಲಕ್ಷ ರೂಪಾಯಿಗಳನ್ನು ಈ 10 ಸಂಪುಟಕ್ಕೆ ನಿಗದಿಗೊಳಿಸಿದ್ದು, 5 ಸಂಪುಟಗಳ ಪ್ರಕಟಣೆಗಾಗಿ ರೂ 20 ಲಕ್ಷ ಬಿಡುಗಡೆ ಮಾಡಿದೆ. ಸಂಪುಟಗಳ ಬೆಲೆ ರೂ 625.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>