<p>‘ನಮ್ಮ ಈ ನಡೆಗೆ ವಿಷ್ಣುವರ್ಧನ್ ಅವರೇ ಪ್ರೇರಣೆ’. ‘ನಾಗರಹಾವು’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ವಿಷ್ಣುವರ್ಧನ್ ಅವರನ್ನು ನಿರ್ಮಾಪಕ ಸಾಜಿದ್ ಖುರೇಷಿ ನೆನೆಪಿಸಿಕೊಂಡಿದ್ದು ಹೀಗೆ. ಸರಳವಾದ ಕಾರ್ಯಕ್ರಮದಲ್ಲಿ, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ 10 ರೋಗಿಗಳಿಗೆ ‘ಸಿಂಹ ಹಸ್ತ’ ಟ್ರಸ್ಟ್ ಮೂಲಕ ತಲಾ ₹ 1 ಲಕ್ಷದ ನೆರವಿನ ಚೆಕ್ ಅನ್ನು ಅವರು ವಿತರಿಸಿದರು.<br /> <br /> ‘ರೋಗಿಗಳಿಗೆ ನೆರವು ನೀಡುವ ವಿಷಯವನ್ನು ಸುದ್ದಿ ಮಾಡುವುದು ನನಗಿಷ್ಟವಿರಲಿಲ್ಲ. ಅದೊಂದು ರೀತಿಯ ಅವಮಾನ ಎಂದು ಭಾವಿಸಿದ್ದೆ. ಇದನ್ನು ನಮ್ಮ ತಾಯಿಗೆ ತಿಳಿಸಿದಾಗ, ನೀನು ಸಹಾಯ ಮಾಡಿರುವುದು ಎಲ್ಲರಿಗೂ ಗೊತ್ತಾದರೆ, ಆ ಪೈಕಿ ಕೆಲವರಾದರೂ ಇದೇ ರೀತಿ ನೆರವು ನೀಡಲು ಮುಂದೆ ಬರಬಹುದು. ನೀನು ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ಬೆನ್ನುತಟ್ಟಿದರು.<br /> <br /> ಅವರ ಮಾತಿನಂತೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವೆ’ ಎಂದು ಹೇಳಿದ ಸಾಜಿದ್, ಸದ್ಯದಲ್ಲೇ ನಡೆಯಲಿರುವ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಂದರ್ಭದಲ್ಲಿ ಮತ್ತಷ್ಟು ಜನರಿಗೆ ನೆರವು ನೀಡುವೆ ಎಂದರು.<br /> <br /> ಸಾಜಿದ್ ಅವರ ಕಾರ್ಯಕ್ಕೆ ಬೆಂಬಲವಾಗಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ₹ 50 ಸಾವಿರ ಕಳುಹಿಸಿದ್ದಾರೆ. ಅಲ್ಲದೆ, ವಿಷ್ಣುಸೇನೆಯವರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ನೆರವಿನ ಚೆಕ್ ಪಡೆದ ರೋಗಿಗಳ ಕುರಿತ ವಿಡಿಯೋ ಕ್ಲಿಪ್ ಪ್ರದರ್ಶನ ಅಲ್ಲಿದ್ದವರ ಮನ ಕಲಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಮ್ಮ ಈ ನಡೆಗೆ ವಿಷ್ಣುವರ್ಧನ್ ಅವರೇ ಪ್ರೇರಣೆ’. ‘ನಾಗರಹಾವು’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ವಿಷ್ಣುವರ್ಧನ್ ಅವರನ್ನು ನಿರ್ಮಾಪಕ ಸಾಜಿದ್ ಖುರೇಷಿ ನೆನೆಪಿಸಿಕೊಂಡಿದ್ದು ಹೀಗೆ. ಸರಳವಾದ ಕಾರ್ಯಕ್ರಮದಲ್ಲಿ, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದ 10 ರೋಗಿಗಳಿಗೆ ‘ಸಿಂಹ ಹಸ್ತ’ ಟ್ರಸ್ಟ್ ಮೂಲಕ ತಲಾ ₹ 1 ಲಕ್ಷದ ನೆರವಿನ ಚೆಕ್ ಅನ್ನು ಅವರು ವಿತರಿಸಿದರು.<br /> <br /> ‘ರೋಗಿಗಳಿಗೆ ನೆರವು ನೀಡುವ ವಿಷಯವನ್ನು ಸುದ್ದಿ ಮಾಡುವುದು ನನಗಿಷ್ಟವಿರಲಿಲ್ಲ. ಅದೊಂದು ರೀತಿಯ ಅವಮಾನ ಎಂದು ಭಾವಿಸಿದ್ದೆ. ಇದನ್ನು ನಮ್ಮ ತಾಯಿಗೆ ತಿಳಿಸಿದಾಗ, ನೀನು ಸಹಾಯ ಮಾಡಿರುವುದು ಎಲ್ಲರಿಗೂ ಗೊತ್ತಾದರೆ, ಆ ಪೈಕಿ ಕೆಲವರಾದರೂ ಇದೇ ರೀತಿ ನೆರವು ನೀಡಲು ಮುಂದೆ ಬರಬಹುದು. ನೀನು ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ಬೆನ್ನುತಟ್ಟಿದರು.<br /> <br /> ಅವರ ಮಾತಿನಂತೆ ಈ ಕಾರ್ಯಕ್ರಮ ಹಮ್ಮಿಕೊಂಡಿರುವೆ’ ಎಂದು ಹೇಳಿದ ಸಾಜಿದ್, ಸದ್ಯದಲ್ಲೇ ನಡೆಯಲಿರುವ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಂದರ್ಭದಲ್ಲಿ ಮತ್ತಷ್ಟು ಜನರಿಗೆ ನೆರವು ನೀಡುವೆ ಎಂದರು.<br /> <br /> ಸಾಜಿದ್ ಅವರ ಕಾರ್ಯಕ್ಕೆ ಬೆಂಬಲವಾಗಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ₹ 50 ಸಾವಿರ ಕಳುಹಿಸಿದ್ದಾರೆ. ಅಲ್ಲದೆ, ವಿಷ್ಣುಸೇನೆಯವರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ನೆರವಿನ ಚೆಕ್ ಪಡೆದ ರೋಗಿಗಳ ಕುರಿತ ವಿಡಿಯೋ ಕ್ಲಿಪ್ ಪ್ರದರ್ಶನ ಅಲ್ಲಿದ್ದವರ ಮನ ಕಲಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>