<p><strong>ಕಾರವಾರ:</strong> ಹವಾಮಾನ ವೈಪರೀತ್ಯದಿಂದಾಗಿ ದೇಶದ ಪಶ್ಚಿಮ ಹಾಗೂ ಪೂರ್ವ ಕರಾವಳಿಯಲ್ಲಿ ಮೀನು ಸಂತತಿ ಹಂಚಿಕೆ ಮೇಲೆ ವಿಪರೀತ ಪರಿಣಾಮವುಂಟಾಗಿದೆ. <br /> <br /> ಕರ್ನಾಟಕ ಹಾಗೂ ಕೇರಳದಲ್ಲಿ ಮಾತ್ರ ಕಂಡು ಬರುತ್ತಿದ್ದ ಸಾರ್ಡೈನ್ (ತಾರ್ಲೆ ಮೀನು) ಹಾಗೂ ಮ್ಯಾಕರೆಲ್ (ಬಂಗಡೆ ಮೀನು) ಮೀನು ಸಂತತಿ ಈಗ ಗುಜರಾತ್ ಹಾಗೂ ಪಾಕಿಸ್ತಾನದವರೆಗೂ ಹಂಚಿಹೋಗಿದೆ ಎಂದು ಅಂತರರಾಷ್ಟ್ರೀಯ ಖ್ಯಾತ ಕಡಲು ತಜ್ಞ ಡಾ.ವಿವೇಕಾನಂದ ಅಭಿಪ್ರಾಯಪಟ್ಟಿದ್ದಾರೆ.<br /> <br /> ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ಪಂಜರದಲ್ಲಿ ಮೀನು ಕೃಷಿ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಅವರು, ಉಷ್ಣಾಂಶ ಹೆಚ್ಚಳ ಹಾಗೂ ಗಾಳಿ ದಿಕ್ಕು ಬದಲಾವಣೆಯಿಂದಾಗಿ ಈ ವ್ಯತ್ಯಾಸ ಕಂಡು ಬರುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನುಳಿದ ಜಾತಿಯ ಮೀನುಗಳೂ ಬೇರೆಡೆ ಪಸರಿಸಬಹುದಾಗಿದೆ ಎನ್ನುವ ಆತಂಕ ವ್ಯಕ್ತಪಡಿಸಿದರು. <br /> <br /> ಈ ಮೊದಲು ವಿರಳವಾಗಿದ್ದ ವಿಷಯುಕ್ತ ’ಪಫರ್’ ಮೀನು ಸಂತತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಮೀನಿನ ಕರುಳು ಬೇರ್ಪಡಿಸಿ ತಿನ್ನಲು ರುಚಿಯಾಗಿರುವುದರಿಂದ ಜಪಾನ್ ದೇಶಕ್ಕೆ ರಫ್ತಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಮೀನುಮರಿ ಉತ್ಪಾದನೆ ಹಾಗೂ ತತ್ತಿಯಿಡುವ ಸಮಯದಲ್ಲಿ ತೀರ ಬದಲಾವಣೆಗಳಾಗುತ್ತಿದ್ದು ಮುಂದಿನ ದಿನಗಳಲ್ಲಿ ಮೀನು ಉತ್ಪಾದನೆಯ ಮೇಲೆ ಪರಿಣಾಮ ಕಂಡುಬರಬಹುದಾಗಿದೆ ಎಂದು ವಿವೇಕಾನಂದ ತಿಳಿಸಿದರು. <br /> <br /> ಹವಳದ ಬಂಡೆಗೆ ಹಾನಿ: ಸಮುದ್ರದ ಉಷ್ಣತೆ ಹೆಚ್ಚುತ್ತಿರುವುದರಿಂದ ಅನೇಕ ಕಡೆ ಹವಳದ ಬಂಡೆಗಳಿಗೆ (coral reefs) ಹಾನಿ ಕಂಡು ಬಂದಿದೆ ಎಂದು ವಿವೇಕಾನಂದ ತಿಳಿಸಿದ್ದಾರೆ. ಅನೇಕ ವಿರಳ ಮೀನು ಜಾತಿ ಹಾಗೂ ಸಸ್ತನಿಗಳಿಗೆ ಆಧಾರವಾಗಿರುವ ಹವಳ ಬಂಡೆಗಳು ಹವಾಮಾನ ವೈಪರೀತ್ಯದಿಂದಾಗಿ ಸವೆದುಹೋಗುವ (bleec- hing) ಸ್ಥಿತಿಯಲ್ಲಿವೆ. ಇನ್ನು ಒಂದು ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಾದಲ್ಲಿ ಸಮುದ್ರದ ಹವಳ ಬಂಡೆಗಳು ನಾಶಗೊಳ್ಳುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.<br /> <br /> ರಾಜ್ಯದಲ್ಲಿ ನೇತ್ರಾಣಿಯ ಹವಳ ಬಂಡೆಯನ್ನು ಬೆಳಕಿಗೆ ತಂದ ಸಿ.ಎಂ.ಎಫ್.ಆರ್.ಐ ಈ ಕುರಿತು ಕಾಳಜಿ ವಹಿಸಿದೆ. ನೇತ್ರಾಣಿಯ ಸುತ್ತಮುತ್ತ ಮೀನುಗಾರಿಕೆಯಿಂದಲೂ ಹವಳದ ಬಂಡೆಗೆ ಧಕ್ಕೆಯಾಗಬಹುದೆಂದು ವಿವೇಕಾನಂದ ತಿಳಿಸಿದ್ದಾರೆ.<br /> ಸಮುದ್ರ ಸಸ್ತನಿಗಳ ವಿತರಣೆ ಹಾಗೂ ಸಮೀಕ್ಷೆ ನಡೆಸಿರುವ ಡಾ. ರಾಜಗೋಪಾಲ ಅವರು ತಿಮಿಂಗಲ, ಡಾಲ್ಫಿನ್ ಹಾಗೂ ಕಡಲು ಆಕಳುಗಳ ಮೇಲೆ ಅಧ್ಯಯನ ನಡೆಸಲಾಗುತ್ತಿದೆ. ಈ ಅಧ್ಯಯನದಿಂದಾಗಿ ನೂತನ ಮೂರು ಹೊಸ ತಳಿಗಳನ್ನು ಭಾರತೀಯ ಸಮುದ್ರದಲ್ಲಿ ಕಂಡು ಹಿಡಿಯಲಾಗಿದೆ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಹವಾಮಾನ ವೈಪರೀತ್ಯದಿಂದಾಗಿ ದೇಶದ ಪಶ್ಚಿಮ ಹಾಗೂ ಪೂರ್ವ ಕರಾವಳಿಯಲ್ಲಿ ಮೀನು ಸಂತತಿ ಹಂಚಿಕೆ ಮೇಲೆ ವಿಪರೀತ ಪರಿಣಾಮವುಂಟಾಗಿದೆ. <br /> <br /> ಕರ್ನಾಟಕ ಹಾಗೂ ಕೇರಳದಲ್ಲಿ ಮಾತ್ರ ಕಂಡು ಬರುತ್ತಿದ್ದ ಸಾರ್ಡೈನ್ (ತಾರ್ಲೆ ಮೀನು) ಹಾಗೂ ಮ್ಯಾಕರೆಲ್ (ಬಂಗಡೆ ಮೀನು) ಮೀನು ಸಂತತಿ ಈಗ ಗುಜರಾತ್ ಹಾಗೂ ಪಾಕಿಸ್ತಾನದವರೆಗೂ ಹಂಚಿಹೋಗಿದೆ ಎಂದು ಅಂತರರಾಷ್ಟ್ರೀಯ ಖ್ಯಾತ ಕಡಲು ತಜ್ಞ ಡಾ.ವಿವೇಕಾನಂದ ಅಭಿಪ್ರಾಯಪಟ್ಟಿದ್ದಾರೆ.<br /> <br /> ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ಪಂಜರದಲ್ಲಿ ಮೀನು ಕೃಷಿ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಅವರು, ಉಷ್ಣಾಂಶ ಹೆಚ್ಚಳ ಹಾಗೂ ಗಾಳಿ ದಿಕ್ಕು ಬದಲಾವಣೆಯಿಂದಾಗಿ ಈ ವ್ಯತ್ಯಾಸ ಕಂಡು ಬರುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನುಳಿದ ಜಾತಿಯ ಮೀನುಗಳೂ ಬೇರೆಡೆ ಪಸರಿಸಬಹುದಾಗಿದೆ ಎನ್ನುವ ಆತಂಕ ವ್ಯಕ್ತಪಡಿಸಿದರು. <br /> <br /> ಈ ಮೊದಲು ವಿರಳವಾಗಿದ್ದ ವಿಷಯುಕ್ತ ’ಪಫರ್’ ಮೀನು ಸಂತತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಮೀನಿನ ಕರುಳು ಬೇರ್ಪಡಿಸಿ ತಿನ್ನಲು ರುಚಿಯಾಗಿರುವುದರಿಂದ ಜಪಾನ್ ದೇಶಕ್ಕೆ ರಫ್ತಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಮೀನುಮರಿ ಉತ್ಪಾದನೆ ಹಾಗೂ ತತ್ತಿಯಿಡುವ ಸಮಯದಲ್ಲಿ ತೀರ ಬದಲಾವಣೆಗಳಾಗುತ್ತಿದ್ದು ಮುಂದಿನ ದಿನಗಳಲ್ಲಿ ಮೀನು ಉತ್ಪಾದನೆಯ ಮೇಲೆ ಪರಿಣಾಮ ಕಂಡುಬರಬಹುದಾಗಿದೆ ಎಂದು ವಿವೇಕಾನಂದ ತಿಳಿಸಿದರು. <br /> <br /> ಹವಳದ ಬಂಡೆಗೆ ಹಾನಿ: ಸಮುದ್ರದ ಉಷ್ಣತೆ ಹೆಚ್ಚುತ್ತಿರುವುದರಿಂದ ಅನೇಕ ಕಡೆ ಹವಳದ ಬಂಡೆಗಳಿಗೆ (coral reefs) ಹಾನಿ ಕಂಡು ಬಂದಿದೆ ಎಂದು ವಿವೇಕಾನಂದ ತಿಳಿಸಿದ್ದಾರೆ. ಅನೇಕ ವಿರಳ ಮೀನು ಜಾತಿ ಹಾಗೂ ಸಸ್ತನಿಗಳಿಗೆ ಆಧಾರವಾಗಿರುವ ಹವಳ ಬಂಡೆಗಳು ಹವಾಮಾನ ವೈಪರೀತ್ಯದಿಂದಾಗಿ ಸವೆದುಹೋಗುವ (bleec- hing) ಸ್ಥಿತಿಯಲ್ಲಿವೆ. ಇನ್ನು ಒಂದು ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಾದಲ್ಲಿ ಸಮುದ್ರದ ಹವಳ ಬಂಡೆಗಳು ನಾಶಗೊಳ್ಳುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.<br /> <br /> ರಾಜ್ಯದಲ್ಲಿ ನೇತ್ರಾಣಿಯ ಹವಳ ಬಂಡೆಯನ್ನು ಬೆಳಕಿಗೆ ತಂದ ಸಿ.ಎಂ.ಎಫ್.ಆರ್.ಐ ಈ ಕುರಿತು ಕಾಳಜಿ ವಹಿಸಿದೆ. ನೇತ್ರಾಣಿಯ ಸುತ್ತಮುತ್ತ ಮೀನುಗಾರಿಕೆಯಿಂದಲೂ ಹವಳದ ಬಂಡೆಗೆ ಧಕ್ಕೆಯಾಗಬಹುದೆಂದು ವಿವೇಕಾನಂದ ತಿಳಿಸಿದ್ದಾರೆ.<br /> ಸಮುದ್ರ ಸಸ್ತನಿಗಳ ವಿತರಣೆ ಹಾಗೂ ಸಮೀಕ್ಷೆ ನಡೆಸಿರುವ ಡಾ. ರಾಜಗೋಪಾಲ ಅವರು ತಿಮಿಂಗಲ, ಡಾಲ್ಫಿನ್ ಹಾಗೂ ಕಡಲು ಆಕಳುಗಳ ಮೇಲೆ ಅಧ್ಯಯನ ನಡೆಸಲಾಗುತ್ತಿದೆ. ಈ ಅಧ್ಯಯನದಿಂದಾಗಿ ನೂತನ ಮೂರು ಹೊಸ ತಳಿಗಳನ್ನು ಭಾರತೀಯ ಸಮುದ್ರದಲ್ಲಿ ಕಂಡು ಹಿಡಿಯಲಾಗಿದೆ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>