<p>ವಿಜಾಪುರ: ತಾಲ್ಲೂಕಿನ ಕತಕನಹಳ್ಳಿಯಲ್ಲಿ ಬುಧವಾರ ಮದುವೆಯ ಸಂಭ್ರಮ. ಶ್ರೀಗುರು ಚಕ್ರವರ್ತಿ ಸದಾಶಿವ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 72 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.<br /> <br /> ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿದ್ದ ಸೊನ್ನ ದಾಸೋಹ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು, ‘ವ್ಯಕ್ತಿಯ ಜೀವನದಲ್ಲಿ ಗೃಹಸ್ಥಾಶ್ರಮ ಮಹತ್ವವಾದುದು. ನೂತನ ದಂಪತಿ ಧರ್ಮವಂತರಾಗಬೇಕು. ಸತಿಯಿಂದಲೇ ಸದ್ಗತಿ. ಗಂಡ-ಹೆಂಡತಿ ಸದಾಕಾಲ ಹೊಂದಾಣಿಕೆಯ ಜೀವನ ನಡೆಸುವುದು ಭಾರತೀಯ ಸಂಸ್ಕೃತಿ’ ಎಂದರು.<br /> <br /> ಅತ್ತೆ- ಮಾವಂದಿರನ್ನು ಗೌರವದಿಂದ ಕಾಣಬೇಕು. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು. ಕಾಯಕವೇ ಕೈಲಾಸ. ಅದಕ್ಕಾಗಿ ಎಲ್ಲರೂ ಶ್ರಮಜೀವಿಗಳಾಗಬೇಕು. ಪೂಜ್ಯನೀಯರಾಗಲು ಜಾತಿಯ ನಿರ್ಬಂಧವಿಲ್ಲ, ನಡತೆ ಮುಖ್ಯವಾದುದು ಎಂದು ಹೇಳಿದರು.<br /> <br /> ಕತಕನಹಳ್ಳಿ-ಚಮಕೇರಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠದ ಶ್ರೀ ಶಿವಯ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ವೇದಮೂರ್ತಿ ಬಸಯ್ಯ ಗಚ್ಚಿನಮಠ ಸಾಮೂಹಿಕ ವಿವಾಹ ನೆರವೇರಿಸಿದರು. <br /> <br /> ಶಾಸಕರಾದ ವಿಠ್ಠಲ ಕಟಕಧೋಂಡ, ಅಪ್ಪು ಪಟ್ಟಣಶೆಟ್ಟಿ, ಪ್ರಮುಖರಾದ ಬಾಬುಗೌಡ ಬಿರಾದಾರ, ಎಸ್.ಎಂ. ಪಾಟೀಲ ಗಣಿಹಾರ, ವಾಸ್ತುತಜ್ಞ ಗಿರಿಧರ ರಾಜು, ನಗರಸಭೆ ಸದಸ್ಯರು, ಎ.ಪಿ.ಗ್ರೂಪ್ನ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಾಪುರ: ತಾಲ್ಲೂಕಿನ ಕತಕನಹಳ್ಳಿಯಲ್ಲಿ ಬುಧವಾರ ಮದುವೆಯ ಸಂಭ್ರಮ. ಶ್ರೀಗುರು ಚಕ್ರವರ್ತಿ ಸದಾಶಿವ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 72 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.<br /> <br /> ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿದ್ದ ಸೊನ್ನ ದಾಸೋಹ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು, ‘ವ್ಯಕ್ತಿಯ ಜೀವನದಲ್ಲಿ ಗೃಹಸ್ಥಾಶ್ರಮ ಮಹತ್ವವಾದುದು. ನೂತನ ದಂಪತಿ ಧರ್ಮವಂತರಾಗಬೇಕು. ಸತಿಯಿಂದಲೇ ಸದ್ಗತಿ. ಗಂಡ-ಹೆಂಡತಿ ಸದಾಕಾಲ ಹೊಂದಾಣಿಕೆಯ ಜೀವನ ನಡೆಸುವುದು ಭಾರತೀಯ ಸಂಸ್ಕೃತಿ’ ಎಂದರು.<br /> <br /> ಅತ್ತೆ- ಮಾವಂದಿರನ್ನು ಗೌರವದಿಂದ ಕಾಣಬೇಕು. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು. ಕಾಯಕವೇ ಕೈಲಾಸ. ಅದಕ್ಕಾಗಿ ಎಲ್ಲರೂ ಶ್ರಮಜೀವಿಗಳಾಗಬೇಕು. ಪೂಜ್ಯನೀಯರಾಗಲು ಜಾತಿಯ ನಿರ್ಬಂಧವಿಲ್ಲ, ನಡತೆ ಮುಖ್ಯವಾದುದು ಎಂದು ಹೇಳಿದರು.<br /> <br /> ಕತಕನಹಳ್ಳಿ-ಚಮಕೇರಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠದ ಶ್ರೀ ಶಿವಯ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ವೇದಮೂರ್ತಿ ಬಸಯ್ಯ ಗಚ್ಚಿನಮಠ ಸಾಮೂಹಿಕ ವಿವಾಹ ನೆರವೇರಿಸಿದರು. <br /> <br /> ಶಾಸಕರಾದ ವಿಠ್ಠಲ ಕಟಕಧೋಂಡ, ಅಪ್ಪು ಪಟ್ಟಣಶೆಟ್ಟಿ, ಪ್ರಮುಖರಾದ ಬಾಬುಗೌಡ ಬಿರಾದಾರ, ಎಸ್.ಎಂ. ಪಾಟೀಲ ಗಣಿಹಾರ, ವಾಸ್ತುತಜ್ಞ ಗಿರಿಧರ ರಾಜು, ನಗರಸಭೆ ಸದಸ್ಯರು, ಎ.ಪಿ.ಗ್ರೂಪ್ನ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>