<p>ಶಿವಮೊಗ್ಗ: ಪಠ್ಯಪುಸ್ತಕಗಳಲ್ಲಿ ಕೇಸರೀಕರಣ ವಿಷಯಕ್ಕೆ ಸಂಬಂಧಿಸಿದಂತೆ ಈಚೆಗೆ ನೀಡಿದ ಹೇಳಿಕೆಗೆ ತಾವು ಬದ್ಧ. ಧರ್ಮ, ಸಂಸ್ಕೃತಿ ಸಂರಕ್ಷಣೆ ವಿಷಯದಲ್ಲಿ ತಾವು ಜೈಲಿಗೆ ಹೋಗಲೂ ಸಿದ್ಧ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಘೋಷಿಸಿದರು. <br /> <br /> ರಾಷ್ಟ್ರಭಕ್ತಿ ಪದಕ್ಕೆ, ಕೇಸರೀಕರಣ ಪದ ಹೆಚ್ಚಿನ ಒತ್ತು ನೀಡುತ್ತದೆ. ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ರಾಷ್ಟ್ರಭಕ್ತಿಯ ವಿಷಯದ ಕುರಿತಾಗಿ ಹೆಚ್ಚು ಹೇಳಬೇಕು ಎಂಬುವುದನ್ನು ಈಗಲೂ ಕೂಡ ತಾವು ಸಮರ್ಥಿಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.<br /> <br /> ಕೇಸರೀಕರಣ ಎಂದರೆ ಬೇರೆ ಧರ್ಮವನ್ನು ವಿರೋಧಿಸುವುದಲ್ಲ; ಹಾಗೆಯೇ, ಯಾವುದೇ ಧರ್ಮಕ್ಕೂ ಸೀಮಿತವಾದ ಪದವೂ ಅಲ್ಲ. ನಮ್ಮ ಧರ್ಮ, ಸಂಸ್ಕೃತಿ ತಿಳಿದು ಸಂರಕ್ಷಣೆ ಮಾಡುವುದಾಗಿದೆ. ಭಗವದ್ಗೀತೆಯ ಜತೆಗೆ ಕುರಾನ್, ಬೈಬಲ್ ಹೇಳುವುದು ತಪ್ಪಲ್ಲ. ಜಾತ್ಯತೀತ ಎನ್ನುವ ವ್ಯಕ್ತಿಗಳಿಗೆ ಧರ್ಮ, ಕೇಸರೀಕರಣ ಎಂದರೇ ಸಿಟ್ಟು ಏಕೆ ಬರುತ್ತದೆಯೋ ಗೊತ್ತಿಲ್ಲ ದು ಕುಟುಕಿದರು.<br /> <br /> ಕಾಂಗ್ರೆಸ್-ಜೆಡಿಎಸ್ ಮುಖಂಡರೇ ಜಾತಿಯ ವಿಷಯ ಕುರಿತು ಕಿತ್ತಾಡುತ್ತಿದ್ದಾರೆ. ತಮ್ಮ ವಿರುದ್ಧ ಚುನಾವಣಾ ಆಯೋಗಕ್ಕೆ ಯಾರು ಎಷ್ಟು ಬೇಕಾದರೂ ದೂರು ನೀಡಲಿ. ಅದಕ್ಕೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. <br /> <br /> ಬಿಜೆಪಿಯಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ. ರಾಷ್ಟ್ರೀಯ ಮುಖಂಡರು ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವರು ಎಂದು ಈಶ್ವರಪ್ಪ, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.<br /> <br /> ಮುಖ್ಯಮಂತ್ರಿ ವಿರುದ್ಧ ಸಚಿವ ರೇಣುಕಾಚಾರ್ಯ, ಶಾಸಕ ಬಿ.ಪಿ. ಹರೀಶ್ ಅವರು ಹೇಳಿಕೆ ನೀಡಿದ್ದು ತಪ್ಪು. ಅಲ್ಲದೆ ಸಚಿವ ಬಾಲಚಂದ್ರ ಜಾರಕಿಹೋಳಿ ಅವರು ಪ್ರತಿಯಾಗಿ ನೀಡಿದ ಹೇಳಿಕೆಯೂ ಸರಿಯಲ್ಲ. ಈ ವಿಷಯದ ಕುರಿತು ಅವರೊಂದಿಗೆ ಚರ್ಚಿಸುವುದಾಗಿ ಈಶ್ವರಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ಪಠ್ಯಪುಸ್ತಕಗಳಲ್ಲಿ ಕೇಸರೀಕರಣ ವಿಷಯಕ್ಕೆ ಸಂಬಂಧಿಸಿದಂತೆ ಈಚೆಗೆ ನೀಡಿದ ಹೇಳಿಕೆಗೆ ತಾವು ಬದ್ಧ. ಧರ್ಮ, ಸಂಸ್ಕೃತಿ ಸಂರಕ್ಷಣೆ ವಿಷಯದಲ್ಲಿ ತಾವು ಜೈಲಿಗೆ ಹೋಗಲೂ ಸಿದ್ಧ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಘೋಷಿಸಿದರು. <br /> <br /> ರಾಷ್ಟ್ರಭಕ್ತಿ ಪದಕ್ಕೆ, ಕೇಸರೀಕರಣ ಪದ ಹೆಚ್ಚಿನ ಒತ್ತು ನೀಡುತ್ತದೆ. ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ರಾಷ್ಟ್ರಭಕ್ತಿಯ ವಿಷಯದ ಕುರಿತಾಗಿ ಹೆಚ್ಚು ಹೇಳಬೇಕು ಎಂಬುವುದನ್ನು ಈಗಲೂ ಕೂಡ ತಾವು ಸಮರ್ಥಿಸುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.<br /> <br /> ಕೇಸರೀಕರಣ ಎಂದರೆ ಬೇರೆ ಧರ್ಮವನ್ನು ವಿರೋಧಿಸುವುದಲ್ಲ; ಹಾಗೆಯೇ, ಯಾವುದೇ ಧರ್ಮಕ್ಕೂ ಸೀಮಿತವಾದ ಪದವೂ ಅಲ್ಲ. ನಮ್ಮ ಧರ್ಮ, ಸಂಸ್ಕೃತಿ ತಿಳಿದು ಸಂರಕ್ಷಣೆ ಮಾಡುವುದಾಗಿದೆ. ಭಗವದ್ಗೀತೆಯ ಜತೆಗೆ ಕುರಾನ್, ಬೈಬಲ್ ಹೇಳುವುದು ತಪ್ಪಲ್ಲ. ಜಾತ್ಯತೀತ ಎನ್ನುವ ವ್ಯಕ್ತಿಗಳಿಗೆ ಧರ್ಮ, ಕೇಸರೀಕರಣ ಎಂದರೇ ಸಿಟ್ಟು ಏಕೆ ಬರುತ್ತದೆಯೋ ಗೊತ್ತಿಲ್ಲ ದು ಕುಟುಕಿದರು.<br /> <br /> ಕಾಂಗ್ರೆಸ್-ಜೆಡಿಎಸ್ ಮುಖಂಡರೇ ಜಾತಿಯ ವಿಷಯ ಕುರಿತು ಕಿತ್ತಾಡುತ್ತಿದ್ದಾರೆ. ತಮ್ಮ ವಿರುದ್ಧ ಚುನಾವಣಾ ಆಯೋಗಕ್ಕೆ ಯಾರು ಎಷ್ಟು ಬೇಕಾದರೂ ದೂರು ನೀಡಲಿ. ಅದಕ್ಕೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. <br /> <br /> ಬಿಜೆಪಿಯಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ. ರಾಷ್ಟ್ರೀಯ ಮುಖಂಡರು ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವರು ಎಂದು ಈಶ್ವರಪ್ಪ, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.<br /> <br /> ಮುಖ್ಯಮಂತ್ರಿ ವಿರುದ್ಧ ಸಚಿವ ರೇಣುಕಾಚಾರ್ಯ, ಶಾಸಕ ಬಿ.ಪಿ. ಹರೀಶ್ ಅವರು ಹೇಳಿಕೆ ನೀಡಿದ್ದು ತಪ್ಪು. ಅಲ್ಲದೆ ಸಚಿವ ಬಾಲಚಂದ್ರ ಜಾರಕಿಹೋಳಿ ಅವರು ಪ್ರತಿಯಾಗಿ ನೀಡಿದ ಹೇಳಿಕೆಯೂ ಸರಿಯಲ್ಲ. ಈ ವಿಷಯದ ಕುರಿತು ಅವರೊಂದಿಗೆ ಚರ್ಚಿಸುವುದಾಗಿ ಈಶ್ವರಪ್ಪ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>