<p><strong>ಹಾಸನ: </strong>ನ್ಯಾಯಾಧೀಶರ ವರ್ತನೆ ವಿರೋಧಿಸಿ ವಕೀಲರು ಕಲಾಪ ಬಹಿಷ್ಕರಿಸಿರುವ ಘಟನೆ ನಡೆದಿದ್ದು, ಇಲ್ಲಿನ ಒಂದು ನ್ಯಾಯಾಲಯದಲ್ಲಿ ಎರಡು ದಿನಗಳಿಂದ ಕಲಾಪ ನಡೆಯದೇ ಕಕ್ಷಿದಾರರು ತೊಂದರೆ ಅನುಭವಿಸುವಂತಾಗಿದೆ.<br /> <br /> ಹಾಸನದ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ವಿರುದ್ಧ ವಕೀಲರು ಪ್ರತಿಭಟನಾ ರೂಪದಲ್ಲಿ ಕಲಾಪ ಬಹಿಷ್ಕರಿಸಿದ್ದಾರೆ.<br /> 'ಅಪಘಾತದ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಇಡೀ ದೇಶಕ್ಕೆ ಒಂದು ಸ್ಪಷ್ಟ ರೂಪರೇಷೆ ಇದೆ. ಈ ನ್ಯಾಯಾಧೀಶರು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ' ಎಂದು ಕೆಲವು ವಕೀಲರು ಆರೋಪಿಸಿದ್ದಾರೆ.<br /> <br /> 'ನ್ಯಾಯಾಧೀಶರ ತೀರ್ಪುಗಳ ಬಗ್ಗೆ ನಮಗೆ ಆಕ್ಷೇಪಗಳಿಲ್ಲ. ನಿಷ್ಪಕ್ಷಪಾತ, ಸ್ಪಷ್ಟ ಹಾಗೂ ನ್ಯಾಯಸಮ್ಮತ ತೀರ್ಪುಗಳನ್ನು ಅವರು ನೀಡುತ್ತ ಬಂದಿದ್ದಾರೆ. ಆದರೆ, ಕಕ್ಷಿದಾರರ ಕಷ್ಟಗಳನ್ನೂ ಅರಿತುಕೊಂಡು ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು ಎಂದು ನಾವು ಬಯಸುತ್ತೇವೆ. ಅದನ್ನೇ ಸಂಬಂಧಪಟ್ಟ ನ್ಯಾಯಾಧೀಶರಿಗೆ ಮನವರಿಕೆ ಮಾಡಿದ್ದೇವೆ' ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ನ್ಯಾಯಾಧೀಶರ ವರ್ತನೆ ವಿರೋಧಿಸಿ ವಕೀಲರು ಕಲಾಪ ಬಹಿಷ್ಕರಿಸಿರುವ ಘಟನೆ ನಡೆದಿದ್ದು, ಇಲ್ಲಿನ ಒಂದು ನ್ಯಾಯಾಲಯದಲ್ಲಿ ಎರಡು ದಿನಗಳಿಂದ ಕಲಾಪ ನಡೆಯದೇ ಕಕ್ಷಿದಾರರು ತೊಂದರೆ ಅನುಭವಿಸುವಂತಾಗಿದೆ.<br /> <br /> ಹಾಸನದ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ವಿರುದ್ಧ ವಕೀಲರು ಪ್ರತಿಭಟನಾ ರೂಪದಲ್ಲಿ ಕಲಾಪ ಬಹಿಷ್ಕರಿಸಿದ್ದಾರೆ.<br /> 'ಅಪಘಾತದ ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಇಡೀ ದೇಶಕ್ಕೆ ಒಂದು ಸ್ಪಷ್ಟ ರೂಪರೇಷೆ ಇದೆ. ಈ ನ್ಯಾಯಾಧೀಶರು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ' ಎಂದು ಕೆಲವು ವಕೀಲರು ಆರೋಪಿಸಿದ್ದಾರೆ.<br /> <br /> 'ನ್ಯಾಯಾಧೀಶರ ತೀರ್ಪುಗಳ ಬಗ್ಗೆ ನಮಗೆ ಆಕ್ಷೇಪಗಳಿಲ್ಲ. ನಿಷ್ಪಕ್ಷಪಾತ, ಸ್ಪಷ್ಟ ಹಾಗೂ ನ್ಯಾಯಸಮ್ಮತ ತೀರ್ಪುಗಳನ್ನು ಅವರು ನೀಡುತ್ತ ಬಂದಿದ್ದಾರೆ. ಆದರೆ, ಕಕ್ಷಿದಾರರ ಕಷ್ಟಗಳನ್ನೂ ಅರಿತುಕೊಂಡು ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು ಎಂದು ನಾವು ಬಯಸುತ್ತೇವೆ. ಅದನ್ನೇ ಸಂಬಂಧಪಟ್ಟ ನ್ಯಾಯಾಧೀಶರಿಗೆ ಮನವರಿಕೆ ಮಾಡಿದ್ದೇವೆ' ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>