<p><strong>ಭಟ್ಕಳ:</strong> `ನವಾಯತ್ ಭಾಷೆಯನ್ನು ಉಳಿಸಲು ನವಾಯತ್ ಸಮುದಾಯ ಶ್ರಮಿಸಬೇಕು~ ಎಂದು ನವಾಯತ್ ಮೆಹಫಿಲ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಬ್ದುಲ್ಲಾ ಲಂಕಾ ಹೇಳಿದರು.</p>.<p>ಇಲ್ಲಿನ ತಂಜೀಮ್ ಸಭಾಭವನದಲ್ಲಿ ಇತ್ತೀಚೆಗೆ ಜರುಗಿದ ನವಾಯತ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.</p>.<p>ನವಾಯತರು ಪರಸ್ಪರ ವ್ಯವಹರಿಸುವಾಗ ನವಾಯತ ಭಾಷೆಯನ್ನೇ ಬಳಸಬೇಕು. ನಮ್ಮ ಎಲ್ಲಾ ಸಭೆ ಸಮಾರಂಭಗಳು ನವಾಯತ ಭಾಷೆಯಲ್ಲೇ ಜರುಗಬೇಕು. ದೇಶವಿದೇಶಗಳಲ್ಲಿರುವ ಮುಸ್ಲಿಮ್ ಜಮಾತ್ನ ಸಭೆಯ ನಡಾವಳಿಗಳನ್ನು ನವಾಯತ್ ಭಾಷೆಯಲ್ಲೇ ದಾಖಲಿಸಬೇಕು ಎಂದರು.</p>.<p>ನವಾಯತ್ ಸಾಹಿತಿ ಅಬ್ದುಲ್ಲಾ ರಫೀಖ್ ಮಾತನಾಡಿ, ನವಾಯತ್ ಭಾಷೆಯು ಜೀವಂತ ಭಾಷೆಯಾಗಿದ್ದು ಅದರ ಅಳಿವು ಸಾಧ್ಯವಿಲ್ಲ. ನವಾಯತ್ ಸಮುದಾಯ ಎಲ್ಲಿವರೆಗೆ ಜೀವಂತವಿರುತ್ತದೆಯೋ ಅಲ್ಲಿವರೆಗೆ ನವಾಯತ್ ಭಾಷೆಯೂ ಜೀವಂತವಾಗಿರುತ್ತದೆ ಎಂದರು.</p>.<p>ನವಾಯತ್ ಮೆಹಫಿಲ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ದಾಮುದಿ ಅಧ್ಯಕ್ಷತೆ ವಹಿಸಿದ್ದರು. ಮರ್ಕಝಿ ಖಲಿಫಾ ಜಮಾತ್ನ ಖ್ವಾಜಿ ಮೊಯಿನುದ್ದೀನ್ ಅಕ್ರಮಿ ಮದನಿ ನದ್ವಿ, ಅಬ್ದುಲ್ ರೆಹ್ಮಾನ್ ಬಾತಿನ್, ಮೌಲಾನಾ ಐಮನ್ ಫರ್ದೋಸಿ ಮಾತನಾಡಿದರು.</p>.<p>ವಲ್ಕಿ ಜಮಾತ್ನ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ದಾವಲ್ಜಿ, ನವಾಯಿತಿ ಕವಿ ಸೈಯದ್ ಸಮೀವುಲ್ಲಾ ಬರ್ಮಾವರ್ ಮುಂತಾದವರು ಉಪಸ್ಥಿತರಿದ್ದರು. ಮಹ್ಮದ್ ಮುಸ್ತಫಾ ತಾಬಿಷ್ ವರದಿ ವಾಚಿಸಿದರು. ಆತಿಕುರ್ ರೆಹಮಾನ್ ಶಾಬಂದ್ರಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ:</strong> `ನವಾಯತ್ ಭಾಷೆಯನ್ನು ಉಳಿಸಲು ನವಾಯತ್ ಸಮುದಾಯ ಶ್ರಮಿಸಬೇಕು~ ಎಂದು ನವಾಯತ್ ಮೆಹಫಿಲ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಬ್ದುಲ್ಲಾ ಲಂಕಾ ಹೇಳಿದರು.</p>.<p>ಇಲ್ಲಿನ ತಂಜೀಮ್ ಸಭಾಭವನದಲ್ಲಿ ಇತ್ತೀಚೆಗೆ ಜರುಗಿದ ನವಾಯತ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.</p>.<p>ನವಾಯತರು ಪರಸ್ಪರ ವ್ಯವಹರಿಸುವಾಗ ನವಾಯತ ಭಾಷೆಯನ್ನೇ ಬಳಸಬೇಕು. ನಮ್ಮ ಎಲ್ಲಾ ಸಭೆ ಸಮಾರಂಭಗಳು ನವಾಯತ ಭಾಷೆಯಲ್ಲೇ ಜರುಗಬೇಕು. ದೇಶವಿದೇಶಗಳಲ್ಲಿರುವ ಮುಸ್ಲಿಮ್ ಜಮಾತ್ನ ಸಭೆಯ ನಡಾವಳಿಗಳನ್ನು ನವಾಯತ್ ಭಾಷೆಯಲ್ಲೇ ದಾಖಲಿಸಬೇಕು ಎಂದರು.</p>.<p>ನವಾಯತ್ ಸಾಹಿತಿ ಅಬ್ದುಲ್ಲಾ ರಫೀಖ್ ಮಾತನಾಡಿ, ನವಾಯತ್ ಭಾಷೆಯು ಜೀವಂತ ಭಾಷೆಯಾಗಿದ್ದು ಅದರ ಅಳಿವು ಸಾಧ್ಯವಿಲ್ಲ. ನವಾಯತ್ ಸಮುದಾಯ ಎಲ್ಲಿವರೆಗೆ ಜೀವಂತವಿರುತ್ತದೆಯೋ ಅಲ್ಲಿವರೆಗೆ ನವಾಯತ್ ಭಾಷೆಯೂ ಜೀವಂತವಾಗಿರುತ್ತದೆ ಎಂದರು.</p>.<p>ನವಾಯತ್ ಮೆಹಫಿಲ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ದಾಮುದಿ ಅಧ್ಯಕ್ಷತೆ ವಹಿಸಿದ್ದರು. ಮರ್ಕಝಿ ಖಲಿಫಾ ಜಮಾತ್ನ ಖ್ವಾಜಿ ಮೊಯಿನುದ್ದೀನ್ ಅಕ್ರಮಿ ಮದನಿ ನದ್ವಿ, ಅಬ್ದುಲ್ ರೆಹ್ಮಾನ್ ಬಾತಿನ್, ಮೌಲಾನಾ ಐಮನ್ ಫರ್ದೋಸಿ ಮಾತನಾಡಿದರು.</p>.<p>ವಲ್ಕಿ ಜಮಾತ್ನ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ದಾವಲ್ಜಿ, ನವಾಯಿತಿ ಕವಿ ಸೈಯದ್ ಸಮೀವುಲ್ಲಾ ಬರ್ಮಾವರ್ ಮುಂತಾದವರು ಉಪಸ್ಥಿತರಿದ್ದರು. ಮಹ್ಮದ್ ಮುಸ್ತಫಾ ತಾಬಿಷ್ ವರದಿ ವಾಚಿಸಿದರು. ಆತಿಕುರ್ ರೆಹಮಾನ್ ಶಾಬಂದ್ರಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>