<p>ಕೊಚ್ಚಿ (ಪಿಟಿಐ): ಇಸ್ರೋ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅರ್ಜಿಯನ್ನು ವಜಾಗೊಳಿಸುವಂತೆ ಶನಿವಾರ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ)ಯನ್ನು ಕೋರಿದ ಕೇಂದ್ರವು, ಅಂತರಿಕ್ಷ್-ದೇವಾಸ್ ಒಪ್ಪಂದದಲ್ಲಿನ ಲೋಪದೋಷ ಮತ್ತು ಅವ್ಯವಹಾರಗಳಲ್ಲಿ ಅವರ ಪಾತ್ರವಿದೆ ಎಂದು ಹೇಳಿದೆ. <br /> <br /> ಎರಡು ಉನ್ನತ ಮಟ್ಟದ ಸಮಿತಿ ಸಲ್ಲಿಸಿರುವ ಸತ್ಯಶೋಧನಾ ವರದಿಗಳ ಆಧಾರದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ಸರ್ಕಾರ ಸ್ಪಷ್ಟಪಡಿಸಿದೆ.<br /> <br /> ವಿವಾದಿತ ಅಂತರಿಕ್ಷ್-ದೇವಾಸ್ ಒಪ್ಪಂದಲ್ಲಿ ಪಾತ್ರವಿರುವುದಾಗಿ ಆರೋಪಿಸಿ ತಮ್ಮ ಮತ್ತು ಇತರ ಮೂವರು ವಿಜ್ಞಾನಿಗಳು ಯಾವುದೇ ಸರ್ಕಾರಿ ಹುದ್ದೆಗಳನ್ನು ಅಲಂಕರಿಸದಂತೆ ನಿರ್ಬಂಧಿಸಲು ಸರ್ಕಾರ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಮತ್ತು ಈ ನಿರ್ಧಾರವನ್ನು ರದ್ದುಪಡಿಸಲು ಕೋರಿ ನಾಯರ್ ಕಳೆದ ತಿಂಗಳು `ಕ್ಯಾಟ್~ ಮೊರೆ ಹೋಗಿದ್ದರು.<br /> <br /> `ನಾಯರ್ ತಮ್ಮ ವಿರುದ್ಧ ನಿಷೇಧ ಆದೇಶ ಹೊರಬಿದ್ದ ದಿನದಿಂದಲೂ ಸರ್ಕಾರ, ಬಾಹ್ಯಾಕಾಶ ಇಲಾಖೆ (ಡಿಓಎಸ್) ಹಾಗೂ ಅದರ ಕಾರ್ಯದರ್ಶಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸ್ವತಃ ಬೇಜವಾಬ್ದಾರಿತನದ ನಡವಳಿಕೆ ತೋರಿದ್ದಾರೆ~ ಎಂದೂ `ಕ್ಯಾಟ್~ ವಿಚಾರಣೆಗೆ ಹಾಜರಾಗಿದ್ದ ಬಾಹ್ಯಾಕಾಶ ಇಲಾಖೆಯ ಉಪಕಾರ್ಯದರ್ಶಿ ರಾಧಾ ಜೈಸಿಂಹ ದೂರಿದರು.<br /> <br /> `ನಾಯರ್ ನಡವಳಿಕೆಯು ಸರ್ಕಾರವು ಅವರ ಮೇಲಿಟ್ಟಿದ್ದ ವಿಶ್ವಾಸದ ಉಲ್ಲಂಘನೆಯಾಗಿದ್ದು, ಅವರ ತಪ್ಪಿನಿಂದಾಗಿಯೇ ವಿರುದ್ಧದ ಆದೇಶ ಹೊರಬಿದ್ದಿದೆ. <br /> <br /> ನಾಯರ್ ಬೇಡಿಕೆಯು ಕಾಲ್ಪನಿಕ, ಸುಳ್ಳಿನದು ಹಾಗೂ ಹಾದಿತಪ್ಪಿಸುವಂತಹದ್ದಾಗೊದೆ. ಈಗ ಅವರು ಸರ್ಕಾರಿ ಅಧಿಕಾರಿಯಲ್ಲದ ಕಾರಣ ಅವರ ಅರ್ಜಿಯನ್ನು ವಜಾಗೊಳಿಸಬೇಕು~ ಎಂದು ವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಚ್ಚಿ (ಪಿಟಿಐ): ಇಸ್ರೋ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅರ್ಜಿಯನ್ನು ವಜಾಗೊಳಿಸುವಂತೆ ಶನಿವಾರ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ)ಯನ್ನು ಕೋರಿದ ಕೇಂದ್ರವು, ಅಂತರಿಕ್ಷ್-ದೇವಾಸ್ ಒಪ್ಪಂದದಲ್ಲಿನ ಲೋಪದೋಷ ಮತ್ತು ಅವ್ಯವಹಾರಗಳಲ್ಲಿ ಅವರ ಪಾತ್ರವಿದೆ ಎಂದು ಹೇಳಿದೆ. <br /> <br /> ಎರಡು ಉನ್ನತ ಮಟ್ಟದ ಸಮಿತಿ ಸಲ್ಲಿಸಿರುವ ಸತ್ಯಶೋಧನಾ ವರದಿಗಳ ಆಧಾರದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ಸರ್ಕಾರ ಸ್ಪಷ್ಟಪಡಿಸಿದೆ.<br /> <br /> ವಿವಾದಿತ ಅಂತರಿಕ್ಷ್-ದೇವಾಸ್ ಒಪ್ಪಂದಲ್ಲಿ ಪಾತ್ರವಿರುವುದಾಗಿ ಆರೋಪಿಸಿ ತಮ್ಮ ಮತ್ತು ಇತರ ಮೂವರು ವಿಜ್ಞಾನಿಗಳು ಯಾವುದೇ ಸರ್ಕಾರಿ ಹುದ್ದೆಗಳನ್ನು ಅಲಂಕರಿಸದಂತೆ ನಿರ್ಬಂಧಿಸಲು ಸರ್ಕಾರ ಕೈಗೊಂಡ ಕ್ರಮವನ್ನು ಪ್ರಶ್ನಿಸಿ ಮತ್ತು ಈ ನಿರ್ಧಾರವನ್ನು ರದ್ದುಪಡಿಸಲು ಕೋರಿ ನಾಯರ್ ಕಳೆದ ತಿಂಗಳು `ಕ್ಯಾಟ್~ ಮೊರೆ ಹೋಗಿದ್ದರು.<br /> <br /> `ನಾಯರ್ ತಮ್ಮ ವಿರುದ್ಧ ನಿಷೇಧ ಆದೇಶ ಹೊರಬಿದ್ದ ದಿನದಿಂದಲೂ ಸರ್ಕಾರ, ಬಾಹ್ಯಾಕಾಶ ಇಲಾಖೆ (ಡಿಓಎಸ್) ಹಾಗೂ ಅದರ ಕಾರ್ಯದರ್ಶಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಸ್ವತಃ ಬೇಜವಾಬ್ದಾರಿತನದ ನಡವಳಿಕೆ ತೋರಿದ್ದಾರೆ~ ಎಂದೂ `ಕ್ಯಾಟ್~ ವಿಚಾರಣೆಗೆ ಹಾಜರಾಗಿದ್ದ ಬಾಹ್ಯಾಕಾಶ ಇಲಾಖೆಯ ಉಪಕಾರ್ಯದರ್ಶಿ ರಾಧಾ ಜೈಸಿಂಹ ದೂರಿದರು.<br /> <br /> `ನಾಯರ್ ನಡವಳಿಕೆಯು ಸರ್ಕಾರವು ಅವರ ಮೇಲಿಟ್ಟಿದ್ದ ವಿಶ್ವಾಸದ ಉಲ್ಲಂಘನೆಯಾಗಿದ್ದು, ಅವರ ತಪ್ಪಿನಿಂದಾಗಿಯೇ ವಿರುದ್ಧದ ಆದೇಶ ಹೊರಬಿದ್ದಿದೆ. <br /> <br /> ನಾಯರ್ ಬೇಡಿಕೆಯು ಕಾಲ್ಪನಿಕ, ಸುಳ್ಳಿನದು ಹಾಗೂ ಹಾದಿತಪ್ಪಿಸುವಂತಹದ್ದಾಗೊದೆ. ಈಗ ಅವರು ಸರ್ಕಾರಿ ಅಧಿಕಾರಿಯಲ್ಲದ ಕಾರಣ ಅವರ ಅರ್ಜಿಯನ್ನು ವಜಾಗೊಳಿಸಬೇಕು~ ಎಂದು ವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>