<p>ನವದೆಹಲಿ ( ಪಿಟಿಐ): ವೈದ್ಯಕೀಯ ಕಾರಣ ಹೊರತುಪಡಿಸಿ ನಾಯಿಗಳ ಬಾಲ ಹಾಗೂ ಕಿವಿ ಕತ್ತರಿಸುವುದು ಕ್ರೌರ್ಯವಾಗಿದ್ದು, ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಪ್ರಾಣಿ ದಯಾ ಸಂಘ (ಎಡಬ್ಲುಬಿಐ) ಹೇಳಿದೆ.</p>.<p>ಈ ಕ್ರೂರ ಪದ್ಧತಿಯನ್ನು ಶೀಘ್ರವೇ ನಿಲ್ಲಿಸುವಂತೆ ಮಂಡಳಿಯು ಪಶುವೈದ್ಯ ಮಂಡಳಿಗೆ ಸಲಹೆ ನೀಡಿದೆ. ಅಲ್ಲದೆ ಶ್ವಾನ ಪ್ರದರ್ಶನಗಳಿಗೆ ಬಾಲ ಹಾಗೂ ಕಿವಿಗಳನ್ನು ಕತ್ತರಿಸಿದ ನಾಯಿಗಳನ್ನು ತೆಗೆದುಕೊಂಡು ಹೋಗದಿರುವಂತೆ ಶ್ವಾನಗೃಹಗಳಿಗೆ ಅದು ಸೂಚನೆ ನೀಡಿದೆ.<br /> `ನಾಯಿಗಳ ಬಾಲ ಹಾಗೂ ಕಿವಿಗಳನ್ನು ಕತ್ತರಿಸುವುದು 1960ರ ಪ್ರಾಣಿ ಹಿಂಸೆ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ~ ಎಂದು ಎಡಬ್ಲುಬಿಐ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಡಾ. ಆರ್.ಎಂ.ಖರ್ಬ್ ಹೇಳಿದ್ದಾರೆ.<br /> ಹುಟ್ಟಿ ಎರಡು-ಮೂರು ದಿನಗಳಾದ ನಾಯಿಮರಿಗಳ (ಬಾಕ್ಸರ್, ಡಾಬರ್ಮನ್, ಗ್ರೇಟ್ ಡೇನ್ಸ್ ಮತ್ತಿತರ ತಳಿಗಳ ನಾಯಿಗಳು) ಬಾಲ ಹಾಗೂ ಕಿವಿ ಕತ್ತರಿಸುವುದನ್ನು ವಿರೋಧಿಸಿ ಭಾರತೀಯ ಪ್ರಾಣಿ ರಕ್ಷಣಾ ಸಂಸ್ಥೆ (ಎಫ್ಐಎಪಿಒ) ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ಖರ್ಬ್ ಈ ಮೇಲಿನ ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ ( ಪಿಟಿಐ): ವೈದ್ಯಕೀಯ ಕಾರಣ ಹೊರತುಪಡಿಸಿ ನಾಯಿಗಳ ಬಾಲ ಹಾಗೂ ಕಿವಿ ಕತ್ತರಿಸುವುದು ಕ್ರೌರ್ಯವಾಗಿದ್ದು, ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಪ್ರಾಣಿ ದಯಾ ಸಂಘ (ಎಡಬ್ಲುಬಿಐ) ಹೇಳಿದೆ.</p>.<p>ಈ ಕ್ರೂರ ಪದ್ಧತಿಯನ್ನು ಶೀಘ್ರವೇ ನಿಲ್ಲಿಸುವಂತೆ ಮಂಡಳಿಯು ಪಶುವೈದ್ಯ ಮಂಡಳಿಗೆ ಸಲಹೆ ನೀಡಿದೆ. ಅಲ್ಲದೆ ಶ್ವಾನ ಪ್ರದರ್ಶನಗಳಿಗೆ ಬಾಲ ಹಾಗೂ ಕಿವಿಗಳನ್ನು ಕತ್ತರಿಸಿದ ನಾಯಿಗಳನ್ನು ತೆಗೆದುಕೊಂಡು ಹೋಗದಿರುವಂತೆ ಶ್ವಾನಗೃಹಗಳಿಗೆ ಅದು ಸೂಚನೆ ನೀಡಿದೆ.<br /> `ನಾಯಿಗಳ ಬಾಲ ಹಾಗೂ ಕಿವಿಗಳನ್ನು ಕತ್ತರಿಸುವುದು 1960ರ ಪ್ರಾಣಿ ಹಿಂಸೆ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ~ ಎಂದು ಎಡಬ್ಲುಬಿಐ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಡಾ. ಆರ್.ಎಂ.ಖರ್ಬ್ ಹೇಳಿದ್ದಾರೆ.<br /> ಹುಟ್ಟಿ ಎರಡು-ಮೂರು ದಿನಗಳಾದ ನಾಯಿಮರಿಗಳ (ಬಾಕ್ಸರ್, ಡಾಬರ್ಮನ್, ಗ್ರೇಟ್ ಡೇನ್ಸ್ ಮತ್ತಿತರ ತಳಿಗಳ ನಾಯಿಗಳು) ಬಾಲ ಹಾಗೂ ಕಿವಿ ಕತ್ತರಿಸುವುದನ್ನು ವಿರೋಧಿಸಿ ಭಾರತೀಯ ಪ್ರಾಣಿ ರಕ್ಷಣಾ ಸಂಸ್ಥೆ (ಎಫ್ಐಎಪಿಒ) ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ಖರ್ಬ್ ಈ ಮೇಲಿನ ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>