<p><strong>ಮಂಗಳೂರು:`</strong>ನಮಗೆ ಸ್ವಲ್ಪ ಹೊಲಾ ಐತ್ರಿ, ಆದ್ರ ಬರಗಾಲದಿಂದ ಬೆಳೆ ಅಷ್ಟಾಗಿ ಬರಾಂಗಿಲ್ರಿ, ನಾರಾಯಣ ನಾಲ್ಕು ತಿಂಗಳ ಹಿಂದಷ್ಟೇ ಲಗ್ನಾ ಆಗ್ಯಾನ್ರಿ, ಆದ್ರ ಇಂದ್ ಅವ್ನ ಪತ್ತೇನೇ ಇಲ್ಲ. ನನ್ ನಾದಿನಿ, ಮಾವಂಗೆ ಏನಂತ ಉತ್ತರ ಹೇಳ್ಲಿ...~<br /> <br /> ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಾರಾಯಣ ಅವರ ಅಣ್ಣ ಮಹಾಂತೇಶ ಗೌಡ ಕಾತರಕಿ ರೋದಿಸುತ್ತಿದ್ದರು. ಅವರ ಇತರ ಸಂಬಂಧಿಕರು ಮೌನಕ್ಕೆ ಶರಣಾಗಿದ್ದರು. ದೋಣಿ ದುರಂತದಲ್ಲಿ ಗಾಯಗೊಂಡಿರುವ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು `ಸುಳ್ಳು~ ಹೇಳಿ ಅವರೆಲ್ಲ ಕೊಪ್ಪಳದಿಂದ ಇಲ್ಲಿಗೆ ಬಂದಿದ್ದರು. <br /> <br /> ದೋಣಿ ಮುಳುಗಿ ಒಂದೂವರೆ ದಿನವಾದರೂ ನಾಪತ್ತೆಯಾದವರ ಬಗ್ಗೆ ಯಾವುದೇ ಸುಳಿವು ಸಿಗದೆ ಇದ್ದುದರಿಂದ ಅವರು ಕಂಗಾಲಾಗಿದ್ದರು.<br /> <br /> ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಇಲ್ಲಿನ ಅಳಿವೆ ಬಾಗಿಲಿನ ಸಮೀಪ ಪ್ರಕ್ಷುಬ್ಧಗೊಂಡಿದ್ದ ಸಮುದ್ರದಲ್ಲಿ ದೋಣಿ ಮುಳುಗಿತ್ತು. ಒಟ್ಟು ಏಳು ಮಂದಿ ಇದ್ದರು. ಈ ಪೈಕಿ ತಿರುವನಂತಪುರದ ವಿನ್ಸೆಂಟ್ ಎಂಬವರನ್ನು ರಕ್ಷಿಸಲಾಗಿತ್ತು. ಉಳಿದವರು ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ. <br /> <br /> ಶುಕ್ರವಾರ ಬೆಳಿಗ್ಗೆ ಮಳೆ ಸುರಿದುದು ಬಿಟ್ಟರೆ ಬಳಿಕ ಬಿಸಿಲಿನ ವಾತಾವರಣ ಇತ್ತು. ಹಲವು ಮೀನುಗಾರಿಕಾ ದೊಣಿಗಳು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ.<br /> <br /> ಕೊಪ್ಪಳ ಜಿಲ್ಲೆ ಹಿರೇಸಿಂದೋಳಿಗೆಯ ನಾರಾಯಣ (22) ಅವರು ಮೂರು ವರ್ಷಗಳಿಂದ ಮಂಗಳೂರಿನಲ್ಲಿ ಹಲವು ದೋಣಿಗಳಲ್ಲಿ ದುಡುಯುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೇ ಅವರು ಸೋದರ ಮಾವನ ಮಗಳನ್ನು ಮದುವೆಯಾಗಿದ್ದರು. ಪತ್ನಿಯನ್ನು ಇನ್ನೂ ಮನೆಗೆ ಕರೆತಂದಿರಲಿಲ್ಲ. ಈ ತಿಂಗಳು ಕರೆತರುವ ವಿಚಾರ ಮಾಡಿಕೊಂಡಿದ್ದರು. ಆಗಲೇ ಈ ದುರಂತ ಸಂಭವಿಸಿದೆ.<br /> <br /> ಬುಧವಾರ ರಾತ್ರಿ 11.04ಕ್ಕೆ ನಾರಾಯಣ ಅವರು ಕೊನೆಯದಾಗಿ ತಮ್ಮ ಮೊಬೈಲ್ನಿಂದ ಊರಿಗೆ ಮಾತನಾಡಿದ್ದರು. `ನಮ್ಮ ದೋಣಿ ಅಪಾಯದಲ್ಲಿ ಸಿಲುಕಿದೆ. ಕಡಲಿನ ಅಬ್ಬರ ಇಳಿಯುವ ವರೆಗೆ ಕಡಲ ಮಧ್ಯದಲ್ಲೇ ಇರಲು ಮಾಲೀಕರು ತಿಳಿಸಿದ್ದಾರೆ, ನನ್ನ ಮೊಬೈಲ್ನಲ್ಲಿ ಚಾರ್ಜ್ ಮುಗಿಯುತ್ತಿದೆ~ ಎಂದು ಅವರು ಹೇಳಿದ್ದರು. ಅದುವೇ ಅವರ ಕೊನೆಯ ಮಾತಾಗಿತ್ತು.<br /> <br /> ಕೊಪ್ಪಳದವರೇ ಆದ ವೆಂಕಟೇಶ್ ಎಂಬವರಿಂದ ಮಾಹಿತಿ ತಿಳಿದ ಅಣ್ಣ ಮಹಾಂತೇಶ ಗೌಡ ಅವರಲ್ಲದೆ, ದೊಡ್ಡಪ್ಪ ಆರ್.ಎಲ್.ಮಾಣಿಪಾಟೀಲ್, ಇತರ ಸಂಬಂಧಿಕರಾದ ಸಿ.ಎಸ್.ಮಾಣಿಪಾಟೀಲ್, ಶಂಕ್ರಪ್ಪ ಗೋವಿಂದ ರೆಡ್ಡಿ, ಮುತ್ತು ಗೋವಿಂದರೆಡ್ಡಿ ಅವರು ಮಂಗಳೂರಿಗೆ ಆಗಮಿಸಿದ್ದರು.<br /> <br /> ಎಲ್ಲಾದರೂ ನಾರಾಯಣ ಸಿಗುತ್ತಾನೋ ಎಂಬ ಆಶಾಭಾವನೆಯಿಂದ ತಂಡಗಳಾಗಿ ವಿಂಗಡಿಸಿಕೊಂಡು ಉಳ್ಳಾಲ ಕಡಲ ತೀರ, ಬೆಂಗ್ರೆ, ತಣ್ಣೀರುಬಾವಿಗಳಲ್ಲಿ ಶುಕ್ರವಾರ ಪೂರ್ತಿ ಹುಡುಕಾಡಿದರು. ಅವರ ಹುಡುಕಾಟದ ದೃಶ್ಯ ಮನಮಿಡಿಯುವಂತಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:`</strong>ನಮಗೆ ಸ್ವಲ್ಪ ಹೊಲಾ ಐತ್ರಿ, ಆದ್ರ ಬರಗಾಲದಿಂದ ಬೆಳೆ ಅಷ್ಟಾಗಿ ಬರಾಂಗಿಲ್ರಿ, ನಾರಾಯಣ ನಾಲ್ಕು ತಿಂಗಳ ಹಿಂದಷ್ಟೇ ಲಗ್ನಾ ಆಗ್ಯಾನ್ರಿ, ಆದ್ರ ಇಂದ್ ಅವ್ನ ಪತ್ತೇನೇ ಇಲ್ಲ. ನನ್ ನಾದಿನಿ, ಮಾವಂಗೆ ಏನಂತ ಉತ್ತರ ಹೇಳ್ಲಿ...~<br /> <br /> ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಾರಾಯಣ ಅವರ ಅಣ್ಣ ಮಹಾಂತೇಶ ಗೌಡ ಕಾತರಕಿ ರೋದಿಸುತ್ತಿದ್ದರು. ಅವರ ಇತರ ಸಂಬಂಧಿಕರು ಮೌನಕ್ಕೆ ಶರಣಾಗಿದ್ದರು. ದೋಣಿ ದುರಂತದಲ್ಲಿ ಗಾಯಗೊಂಡಿರುವ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು `ಸುಳ್ಳು~ ಹೇಳಿ ಅವರೆಲ್ಲ ಕೊಪ್ಪಳದಿಂದ ಇಲ್ಲಿಗೆ ಬಂದಿದ್ದರು. <br /> <br /> ದೋಣಿ ಮುಳುಗಿ ಒಂದೂವರೆ ದಿನವಾದರೂ ನಾಪತ್ತೆಯಾದವರ ಬಗ್ಗೆ ಯಾವುದೇ ಸುಳಿವು ಸಿಗದೆ ಇದ್ದುದರಿಂದ ಅವರು ಕಂಗಾಲಾಗಿದ್ದರು.<br /> <br /> ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಇಲ್ಲಿನ ಅಳಿವೆ ಬಾಗಿಲಿನ ಸಮೀಪ ಪ್ರಕ್ಷುಬ್ಧಗೊಂಡಿದ್ದ ಸಮುದ್ರದಲ್ಲಿ ದೋಣಿ ಮುಳುಗಿತ್ತು. ಒಟ್ಟು ಏಳು ಮಂದಿ ಇದ್ದರು. ಈ ಪೈಕಿ ತಿರುವನಂತಪುರದ ವಿನ್ಸೆಂಟ್ ಎಂಬವರನ್ನು ರಕ್ಷಿಸಲಾಗಿತ್ತು. ಉಳಿದವರು ಎಲ್ಲಿದ್ದಾರೆ ಎಂಬುದು ಗೊತ್ತಾಗಿಲ್ಲ. <br /> <br /> ಶುಕ್ರವಾರ ಬೆಳಿಗ್ಗೆ ಮಳೆ ಸುರಿದುದು ಬಿಟ್ಟರೆ ಬಳಿಕ ಬಿಸಿಲಿನ ವಾತಾವರಣ ಇತ್ತು. ಹಲವು ಮೀನುಗಾರಿಕಾ ದೊಣಿಗಳು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ.<br /> <br /> ಕೊಪ್ಪಳ ಜಿಲ್ಲೆ ಹಿರೇಸಿಂದೋಳಿಗೆಯ ನಾರಾಯಣ (22) ಅವರು ಮೂರು ವರ್ಷಗಳಿಂದ ಮಂಗಳೂರಿನಲ್ಲಿ ಹಲವು ದೋಣಿಗಳಲ್ಲಿ ದುಡುಯುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೇ ಅವರು ಸೋದರ ಮಾವನ ಮಗಳನ್ನು ಮದುವೆಯಾಗಿದ್ದರು. ಪತ್ನಿಯನ್ನು ಇನ್ನೂ ಮನೆಗೆ ಕರೆತಂದಿರಲಿಲ್ಲ. ಈ ತಿಂಗಳು ಕರೆತರುವ ವಿಚಾರ ಮಾಡಿಕೊಂಡಿದ್ದರು. ಆಗಲೇ ಈ ದುರಂತ ಸಂಭವಿಸಿದೆ.<br /> <br /> ಬುಧವಾರ ರಾತ್ರಿ 11.04ಕ್ಕೆ ನಾರಾಯಣ ಅವರು ಕೊನೆಯದಾಗಿ ತಮ್ಮ ಮೊಬೈಲ್ನಿಂದ ಊರಿಗೆ ಮಾತನಾಡಿದ್ದರು. `ನಮ್ಮ ದೋಣಿ ಅಪಾಯದಲ್ಲಿ ಸಿಲುಕಿದೆ. ಕಡಲಿನ ಅಬ್ಬರ ಇಳಿಯುವ ವರೆಗೆ ಕಡಲ ಮಧ್ಯದಲ್ಲೇ ಇರಲು ಮಾಲೀಕರು ತಿಳಿಸಿದ್ದಾರೆ, ನನ್ನ ಮೊಬೈಲ್ನಲ್ಲಿ ಚಾರ್ಜ್ ಮುಗಿಯುತ್ತಿದೆ~ ಎಂದು ಅವರು ಹೇಳಿದ್ದರು. ಅದುವೇ ಅವರ ಕೊನೆಯ ಮಾತಾಗಿತ್ತು.<br /> <br /> ಕೊಪ್ಪಳದವರೇ ಆದ ವೆಂಕಟೇಶ್ ಎಂಬವರಿಂದ ಮಾಹಿತಿ ತಿಳಿದ ಅಣ್ಣ ಮಹಾಂತೇಶ ಗೌಡ ಅವರಲ್ಲದೆ, ದೊಡ್ಡಪ್ಪ ಆರ್.ಎಲ್.ಮಾಣಿಪಾಟೀಲ್, ಇತರ ಸಂಬಂಧಿಕರಾದ ಸಿ.ಎಸ್.ಮಾಣಿಪಾಟೀಲ್, ಶಂಕ್ರಪ್ಪ ಗೋವಿಂದ ರೆಡ್ಡಿ, ಮುತ್ತು ಗೋವಿಂದರೆಡ್ಡಿ ಅವರು ಮಂಗಳೂರಿಗೆ ಆಗಮಿಸಿದ್ದರು.<br /> <br /> ಎಲ್ಲಾದರೂ ನಾರಾಯಣ ಸಿಗುತ್ತಾನೋ ಎಂಬ ಆಶಾಭಾವನೆಯಿಂದ ತಂಡಗಳಾಗಿ ವಿಂಗಡಿಸಿಕೊಂಡು ಉಳ್ಳಾಲ ಕಡಲ ತೀರ, ಬೆಂಗ್ರೆ, ತಣ್ಣೀರುಬಾವಿಗಳಲ್ಲಿ ಶುಕ್ರವಾರ ಪೂರ್ತಿ ಹುಡುಕಾಡಿದರು. ಅವರ ಹುಡುಕಾಟದ ದೃಶ್ಯ ಮನಮಿಡಿಯುವಂತಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>